ಬಂಜೆತನ ನಿವಾರಣೆ ; ನಿಮ್ಮ ಸಮಸ್ಯೆಗೆ ತಜ್ಞರ ಪರಿಹಾರ


Team Udayavani, Oct 8, 2017, 6:45 AM IST

arogav.jpg

ಪ್ರಶ್ನೆ: ಎರಡು ತಿಂಗಳುಗಳ ಮೊದಲು ನಾನು ಐ.ವಿ.ಎಫ್ ಚಿಕಿತ್ಸೆಗೆ ಒಳಗಾಗಿದ್ದೆ, ಆದರೆ ಚಿಕಿತ್ಸೆ ಫ‌ಲಕಾರಿಯಾಗಲಿಲ್ಲ. ನಾನು ಇನ್ನೆಷ್ಟು ಬಾರಿ ಐ.ವಿ.ಎಫ್ ಚಿಕಿತ್ಸೆಗೆ ಪ್ರಯತ್ನಿಸಬಹುದು? ಈ ಚಿಕಿತ್ಸೆಯಲ್ಲಿ  ನೀಡಲಾಗುವ ಔಷಧಿಗಳಿಂದ ಮುಂದೆ ಏನಾದರೂ ತೊಂದರೆಯಾಗಬಹುದೇ?
 - ಸರಸ್ವತಿ, ಕುಂದಾಪುರ

ಒಂದಕ್ಕಿಂತ ಹೆಚ್ಚು ಬಾರಿಐ.ವಿ.ಎಫ್  (IVF) ಚಿಕಿತ್ಸೆಗೆ ಒಳಗಾಗುವುದರಿಂದ ನಿಮ್ಮದೇಹದ ಮೇಲೆ ಭವಿಷ್ಯದಲ್ಲಿ ಯಾವುದೇ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ತುಂಬಾ ಕಡಿಮೆಎಂದು ಸಂಶೋಧನೆಗಳಿಂದ ನಿರೂಪಿತವಾಗಿದೆ.  ಈ ಚಿಕಿತ್ಸೆಯ ಯಶಸ್ಸು ಶೇ 30-35 ಇರುವಾಗ, ಒಂದಕ್ಕಿಂತ ಹೆಚ್ಚಿನ ಬಾರಿ ಐ.ವಿ.ಎಫ್(IVF) ಪ್ರಕ್ರಿಯೆಗೆ ಒಳಗಾಗುವ ಅಗತ್ಯ ತುಂಬಾ ಮಂದಿಯಲ್ಲಿ ಇರುತ್ತದೆ.

ಪ್ರಶ್ನೆ: ನನ್ನ ಪತಿಯ ವೀರ್ಯ ಪರೀಕ್ಷೆಯ ರಿಪೋರ್ಟ್‌ನ್ನಲ್ಲಿ ಮೊಟಿಲಿಟಿ 0% ಎಂದಿದೆ. ಇದುಅಸಹಜವೇ?ನಮಗೆ ಮಕ್ಕಳಾಗದಿರಲು ಇದುಕಾರಣವಿರಬಹುದೇ?
-ಅಂಕಿತಾ, ಸುಳ್ಯ

ಮೊಟಿಲಿಟಿ 0%ಅಂದರೆ, ನಿಮ್ಮಪತಿಯವೀರ್ಯದಲ್ಲಿರುವ ವೀರ್ಯಾಣುಗಳು  ಚಲನಾ ಸಾಮರ್ಥ್ಯವನ್ನು ಹೊಂದಿಲ್ಲ, ಹಾಗಾಗಿ ಸಂಭೋಗದ ವೇಳೆಯಲ್ಲಿ, ಸ್ತ್ರೀ ಜನನಾಂಗದ ಒಳಗೆ ಸೇರಿದ ವೀರ್ಯದಲ್ಲಿರುವಂತಹ ವೀರ್ಯಾಣುಗಳು ಅಂಡಾಣುವಿನತ್ತ ಚಲಿಸಲಾಗದೆ ಅಂಡಾಣುವನ್ನು ಫ‌ಲೀಕರಿಸಲು ಆಗುವುದಿಲ್ಲ. ನೀವು ಗ್ರಹಿಸಿದಂತೆ ಇದು ನಿಮಗೆ ಮಕ್ಕಳಾಗದಿರಲು ಒಂದುಕಾರಣವಿರಬಹುದು. 

ವೀರ್ಯಾಣುವಿನ ರಚನೆಯ ವ್ಯತ್ಯಯದಿಂದ ಈ ದೋಷಕಂಡುಬರುತ್ತದೆ. ಪ್ರಣಾಳ ಶಿಶು ತಜ್ಞರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಪ್ರಶ್ನೆ : ಮಹಿಳೆಯರಲ್ಲಿ 35 ವಯಸ್ಸಿನ ನಂತರ ಪ್ರಜನನ ಶಕ್ತಿ ಕಡಿಮೆಯಾಗುವುದೆಂದು ಕೇಳಿದ್ದೇನೆ.  ಅದು ಗಂಡಸರಲ್ಲಿ ಕೂಡಾ ಆಗುತ್ತದೆಯೇ ?
-ಸುರೇಶ್‌, ಮಣಿಪಾಲ

ಮಹಿಳೆಯರಲ್ಲಿ ಆಂಡಾಣುಗಳು ಅವರು ತಾಯಿ ಗರ್ಭದಲ್ಲಿರುವಾಗಲೇ ಉತ್ಪಾದನೆಯಾಗಿ, ನಂತರ ಪ್ರಬುದ್ಧರಾದಾಗ, ಪ್ರತೀ ಋತುಚಕ್ರದ ವೇಳೆಯಲ್ಲಿ ಬೆಳೆದು ಬಿಡುಗಡೆಯಾಗುತ್ತವೆ ಹಾಗಾಗಿ 35 ವಯಸ್ಸಿನ ನಂತರ ಅಂಡಾಣುಗಳ ಸಂಖ್ಯೆ ಅಥವಾ ಗುಣಮಟ್ಟ ಕಡಿಮೆಯಾಗಬಹುದು. ಆದರೆ ಗಂಡಸರಲ್ಲಿ ಪ್ರಬುದ್ಧತೆಯ ನಂತರ ನಿತ್ಯವೂ ಹೊಸ ವೀರ್ಯಾಣುಗಳ ಉತ್ಪಾದನೆಯಾಗುತ್ತದೆ. ಮಧ್ಯ ವಯಸ್ಸಿನ ನಂತರ, ಈ ಸಂಖ್ಯೆಯಲ್ಲಿ ಸ್ವಲ್ಪಏರುಪೇರಾದರೂ ಆರೋಗ್ಯವಂತ ಪುರುಷರಲ್ಲಿ ಸಂತಾನ ಶಕ್ತಿಯು ತೀವ್ರವಾಗಿ ಕಡಿಮೆಯಾಗುವುದಿಲ್ಲ.

ಪ್ರಶ್ನೆ: ಪ್ರಾಯ 33 ವರ್ಷ. ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಸಮಸ್ಯೆ ಏನೆಂದರೆ ಸಂಭೋಗ ಅಥವಾ ಮುಷ್ಟಿ ಮೈಥುನದ ವೇಳೆಯಲ್ಲಿ ಸ್ಕಲನದ ಅನುಭವವಾದರೂ ನನ್ನ ಜನನಾಂಗದಿಂದ ವೀರ್ಯವು ಹೊರಬರುವುದಿಲ್ಲ. ಇದರಿಂದ ತೊಂದರೆಯಾಗಬಹುದೇ ?
-ಹಷೇìಂದ್ರ, ಬೆಳ್ತಂಗಡಿ

ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ರಿಟ್ರೋಗ್ರೇಡ್‌ ಇಜಾಕ್ಯುಲೇಷನ್‌ಎಂದು ಕರೆಯುತ್ತಾರೆ.ಅಂದರೆ ಸ್ಕಲನದ ವೇಳೆಯಲ್ಲಿ ವೀರ್ಯವು ಹೊರಚೆಲ್ಲದೆ, ಅದು ಮೂತ್ರಕೋಶದ ಒಳಗ್ಗೆ ಹಿಮ್ಮುಖವಾಗಿ ಚಲಿಸುತ್ತದೆ. ವೀರ್ಯಾಣುಗಳು ಮೂತ್ರದೊಂದಿಗೆ ಬೆರೆತು ತಮ್ಮ ಫ‌ಲೀಕರಣ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ನೀವು ಕೂಡಲೇ ಆಂಡ್ರೋಲೋಜಿಸ್ಟ್‌ (Andrologist) ಅಥವಾ ಯುರೋಲೋಜಿಸ್ಟ್‌  (Urologist)ಅವರನ್ನು ಕಾಣುವುದು ಉತ್ತಮ.

– ಡಾ| ಪ್ರತಾಪ್‌ ಕುಮಾರ್‌,
ಪ್ರೊಫೆಸರ್‌, MARC,
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

– ಡಾ| ಸತೀಶ್‌ ಅಡಿಗ,
ಪ್ರೊಫೆಸರ್‌, ಕ್ಲಿನಿಕಲ್‌ ಎಂಬ್ರಿಯೋಲಜಿ
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.