ವಿಶ್ವ ಹೃದಯ ದಿನ 2017


Team Udayavani, Oct 1, 2017, 6:15 AM IST

Heart-day-2017.jpg

ನಾವು ವಿಶ್ವ ಹೃದಯ ದಿನವನ್ನು ಸೆಪ್ಟಂಬರ್‌ 29ರಂದು ಆಚರಿಸುತ್ತಿದ್ದೇವೆ. 2012ರಿಂದೀಚೆಗೆ ಪ್ರತಿವರ್ಷ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೃದ್ರೋಗ ಮತ್ತು ಲಕ್ವಾಗಳು ಜಾಗತಿಕ ಮಟ್ಟದಲ್ಲಿ ನಂಬರ್‌ 1 ಮಾರಣಾಂತಿಕ ರೋಗಗಳು ಎಂಬ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನಾಚರಣೆಯ ಪರಿಕಲ್ಪನೆಯನ್ನು ಸೃಷ್ಟಿಸಿದೆ. ವಿಶ್ವ ಹೃದಯ ದಿನದಂದು ಹೃದ್ರೋಗಗಳು ಮತ್ತು ಅವುಗಳಿಗೆ ಕಾರಣವಾಗುವ ಅಪಾಯಾಂಶಗಳ ಬಗ್ಗೆ ಜನರಿಗೆ ಶಿಕ್ಷಣ ಮತ್ತು ಅರಿವು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವ್ಯಕ್ತಿಗಳು, ಕುಟುಂಬಗಳು, ಸಂಘಟನೆಗಳು, ಸಮುದಾಯಗಳು ಮತ್ತು ಸರಕಾರಗಳ ಸಕ್ರಿಯ ಭಾಗವಹಿಸುವಿಕೆಯಿಂದ ವಿಶ್ವ ಹೃದಯ ದಿನವು ಒಂದು ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ. ಹೃದಯ ಅಥವಾ ಮಿದುಳಿನಂತಹ ದೇಹದ ವಿವಿಧ ಅಂಗಗಳ ರಕ್ತನಾಳಗಳ ಕಾಯಿಲೆಗಳು ಹೃದ್ರೋಗಗಳಡಿ ಸೇರಿಕೊಳ್ಳುತ್ತವೆ. ಕೊರೊನರಿ ಹಾರ್ಟ್‌ ಡಿಸೀಸ್‌ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಹೃದಯಾಘಾತ ಮತ್ತು ಸೆರೆಬೊÅ-ವಾಸ್ಕಾಲಾರ್‌ ಡಿಸೀಸ್‌ ಎಂದು ಕರೆಯಲ್ಪಡುವ ಲಕ್ವಾ ಇವುಗಳ ಪೈಕಿ ಅತ್ಯಂತ ಸಾಮಾನ್ಯವಾದುವು. ಇವುಗಳು ಉಂಟಾಗುವ ಅಪಾಯವನ್ನು ಆಹಾರಾಭ್ಯಾಸ ನಿಯಂತ್ರಣ, ವ್ಯಾಯಾಮ, ರಕ್ತದೊತ್ತಡದ ನಿಯಂತ್ರಣ ಮತ್ತು ತಂಬಾಕು ಉತ್ಪನ್ನಗಳ ಬಳಕೆ, ಸೇವನೆಯನ್ನು ತ್ಯಜಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿಶ್ವ ಹೃದಯ ದಿನದ ಈ ವರ್ಷದ ಘೋಷ ವಾಕ್ಯವು “”ಆರೋಗ್ಯದ ಹೃದಯದಲ್ಲಿ” ಎಂಬುದಕ್ಕೆ ಸಂಬಂಧಿಸಿದೆ. 

ನಿಮ್ಮ ಹೃದಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು
– ವ್ಯಾಯಾಮ:
ದಿನಕ್ಕೆ ಸುಮಾರು 30 ನಿಮಿಷಗಳ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಹೃದಯಾಘಾತ ಮತ್ತು ಲಕ್ವಾ ಉಂಟಾಗುವ ಅಪಾಯವನ್ನು ತಡೆಯಲು ಸಹಾಯವಾಗುತ್ತದೆ. ಲಿಫ್ಟ್ನ ಬದಲಾಗಿ ಏರಿಳಿಯಲು ಮೆಟ್ಟಿಲುಗಳನ್ನು ಉಪಯೋಗಿಸಿ, ಬಸ್‌ ಪ್ರಯಾಣದ ಸಂದರ್ಭದಲ್ಲಿ ಒಂದು ನಿಲ್ದಾಣ ಮುಂಚಿತವಾಗಿ ಇಳಿದು ನಡೆದು ಸಾಗಿರಿ – ಇವು ಕೆಲವು ಉದಾಹರಣೆಗಳು ಮಾತ್ರ. ವ್ಯಾಯಾಮವು ತೂಕ ನಿಯಂತ್ರಣಕ್ಕೆ ಮತ್ತು ಒತ್ತಡವನ್ನು ದೂರ ಮಾಡುವುದಕ್ಕೆ ಕೂಡ ನೆರವಾಗುತ್ತದೆ. 

-ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆ ನಿಲ್ಲಿಸಿ: ನಾವು ಧೂಮಪಾನವನ್ನು ತ್ಯಜಿಸಿದರೆ ಅಪಾಯವು ಒಂದು ವರ್ಷದಲ್ಲಿ ಅರ್ಧಕ್ಕೆ ಇಳಿಯುತ್ತದೆ ಮತ್ತು ಕೆಲವು ವರ್ಷಗಳ ಬಳಿಕ ಸಹಜ ಅಪಾಯ ಮಟ್ಟಕ್ಕೆ ಮರಳುತ್ತೇವೆ. ಇದರ ಜತೆಗೆ ಅನಾರೋಗ್ಯಕರ ಹೊಗೆ ತುಂಬಿದ ಕಾರ್ಖಾನೆಗಳಂತಹ ಹೊಗೆತುಂಬಿದ ಪರಿಸರವನ್ನೂ ಮುಖಕವಚ ಇಲ್ಲದೆ ಪ್ರವೇಶಿಸುವುದರಿಂದ ದೂರ ಇರಿ. 

– ಆರೋಗ್ಯಕರ ಆಹಾರಾಭ್ಯಾಸ: ಸಾಕಷ್ಟು ತಾಜಾ ಹಣ್ಣುಗಳು, ತರಕಾರಿಗಳು, ಮೀನು, ಬಟಾಣಿ, ಬೀನ್ಸ್‌ ಮತ್ತು ಕೊಬ್ಬು ಕಡಿಮೆ ಇರುವ ಆಹಾರವಸ್ತುಗಳನ್ನು ಸೇವಿಸಿ. ಸಂಸ್ಕರಿತ ಆಹಾರವಸ್ತುಗಳಲ್ಲಿ ಉಪ್ಪಿನಂಶ ಹೇರಳವಾಗಿರುವ ಕಾರಣ ಅವುಗಳನ್ನು ವರ್ಜಿಸಿ. ನೀರು ಕುಡಿಯಿರಿ, ಮದ್ಯವನ್ನಲ್ಲ.

– ತೂಕ ನಿಯಂತ್ರಣ: ನಿಮ್ಮ ದೇಹ ಪರಿಮಾಣ ಸೂಚಿ (ಬಾಡಿ ಮಾಸ್‌ ಇಂಡೆಕ್ಸ್‌-ಬಿಎಂಐ) ಲೆಕ್ಕ ಹಾಕಿ (ತೂಕ; ಕಿ.ಗ್ರಾಂಗಳಲ್ಲಿ/ ಎತ್ತರ ಮೀಟರ್‌ ಘಾತ 2). 18.5ರಿಂದ 24.9ರ ನಡುವಣ ಬಿಎಂಐ ಆರೋಗ್ಯಪೂರ್ಣವಾದುದು. ಇದು ರಕ್ತದ ಒತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ. 

40 ವರ್ಷ ವಯಸ್ಸಿನ ಬಳಿಕ, ನಿಮ್ಮ ರಕ್ತದೊತ್ತಡ, ಗುÉಕೋಸ್‌  ಮತ್ತು ಕೊಲೆಸ್ಟರಾಲ್‌ ಅನ್ನು ವರ್ಷಕ್ಕೊಮ್ಮೆ ತಪಾಸಿಸಿಕೊಳ್ಳಿ.ಹಠಾತ್‌ ಹೃದಯಾಘಾತವು ನಿಮ್ಮ ಸುತ್ತಮುತ್ತ ಯಾರಿಗೇ ಆದರೂ ಸಂಭವಿಸಬಹುದು. ಹಾಗಾಗಿ ಸಿಪಿಆರ್‌ (ಹೃದಯ ಪುನಶ್ಚೇತನ)/ಹೃದಯ ಮಸಾಜ್‌ ಬಗ್ಗೆ ಕಲಿತುಕೊಳ್ಳಿ; ಅದರಿಂದ ಸಂದರ್ಭವೊದಗಿದಲ್ಲಿ ಅಗತ್ಯವುಳ್ಳವರನ್ನು ರಕ್ಷಿಸುವುದು ನಿಮಗೆ ಸಾಧ್ಯವಾಗಬಲ್ಲುದು.

ವೈದ್ಯರು ಶಿಫಾರಸು ಮಾಡಿರುವ ಔಷಧಿಗಳನ್ನು ನೀವು ಮತ್ತು ನಿಮ್ಮ ಸ್ನೇಹಿತರು ಹಾಗೂ ಬಂಧುವರ್ಗದವರು ತಡೆಯಿಲ್ಲದೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಾತರಿ ಪಡಿಸಿಕೊಳ್ಳಿ.

ಹೃದಯಾಘಾತದ 
ಎಚ್ಚರಿಕೆ ಸಂಕೇತಗಳು

ದವಡೆಯಿಂದ ಕೆಳಭಾಗ ಮತ್ತು ಹೊಕ್ಕುಳಿಗಿಂತ ಮೇಲು ಭಾಗದ ಯಾವುದೇ ಸ್ಥಳದಲ್ಲಿ ಅಸ್ವಸ್ಥತೆಯು ಹೃದಯ ರೋಗದ ಕಾರಣವಾಗಿ ಉಂಟಾಗಿರಬಹುದು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಣಿತ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬೇಕು. ಹೃದಯಾಘಾತದ ಕೌಟುಂಬಿಕ ಚರಿತ್ರೆ ಇರುವವರು ಸಮಾನ ವಯಸ್ಸುಗಳಲ್ಲಿ ಹೃದಯರೋಗಗಳಿಗೆ ತುತ್ತಾಗುವ ಅಪಾಯ ಇರುವುದರಿಂದ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು.

– ಡಾ| ಟಾಮ್‌ ದೇವಸ್ಯ,   
ಪ್ರೊಫೆಸರ್‌ ಹಾಗೂ ಮುಖ್ಯಸ್ಥರು,
ಹೃದಯ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.

ಟಾಪ್ ನ್ಯೂಸ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.