ಸಲಾಂ ಬೆಂಗಳೂರು- 69ರ ಬೆಳಗಿನಲ್ಲಿ ಕಂಡ ಸಜ್ಜನಿಕೆ  


Team Udayavani, Feb 25, 2017, 4:43 PM IST

15.jpg

ಬೆಂಗಳೂರಿನ ವಿಷಯವಾಗಿ ಹಸವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೇ ಬೆಳೆಯುತ್ತಲೇ ಹೋಗುತ್ತದೆ. ಒಪ್ಪಲೇಬೇಕಾದ ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ ಪ್ರಸಂಗಗಳೂ ಈ ಬೆರಗಿನ ಬೆಂಗಳೂರಲ್ಲಿ ನಡೆದು ಬಿಡುತ್ತವೆ. ಅಂತಹ ಹೃದ್ಯ ಪ್ರಸಂಗದ ಅನಾವರಣಕ್ಕೆ ಈ ಅಂಕಣ ಮೀಸಲು.ಖ್ಯಾತ ಲೇಖಕರಾದ ನಾಗೇಶ ಹೆಗಡೆಯವರ ಪುಟ್ಟ ಬರಹದೊಂದಿಗೆ “ಸಲಾಂ ಬೆಂಗಳೂರ್‌’ ಹೆಸರಿನ ಈ ಅಂಕಣ ಆರಂಭವಾಗುತ್ತಿದೆ.

ಇಂದು ಬೆಳಿಗ್ಗೆ ಬೆಂಗಳೂರು ತಲುಪಿ, ರೈಲಿನಿಂದಿಳಿದು ಅಲ್ಲೇ ಇನ್ನಷ್ಟು ಪಾತಾಳಕ್ಕಿಳಿದು ಮೆಟ್ರೊ ಪಯಣದ ಟೋಕನ್‌ ಪಡೆದು, ಮತ್ತಷ್ಟು ತಳಕ್ಕಿಳಿದು ಮೆಟ್ರೊ ರೈಲನ್ನು ಹೊಕ್ಕಾಗ ತುಂಬ ಜನಸಂದಣಿ ಇತ್ತು. ಹೇಗೋ ಹೆಗಲಚೀಲವನ್ನು ಸಾವರಿಸಿಕೊಳ್ಳುತ್ತ ತೂಗುಹಿಡಿಕೆ ಹಿಡಿದು ಜೋತು ನಿಂತಿದ್ದಾ ಗ ಒಂದು ಅಚ್ಚರಿ ಸಂಭವಿಸಿತು. ಎದುರು ಕೂತಿದ್ದ ಯುವತಿಯೊಬ್ಬಳು ತನ್ನ ಸೀಟ್ ಬಿಟ್ಟು ಎದ್ದು ನಿಂತು “ಕೂತ್ಕೊಳಿ’ ಎಂದು ನನಗೆ ಹೇಳಿದಳು. ನನಗೆ ವಯಸ್ಸಾಯಿತು ಎಂದು ಅವಳಿಗೂ ಗೊತ್ತಾಯಿತಲ್ಲ! ವಯಸ್ಸಿನ ಕಾರಣದಿಂದಾಗಿಯೇ ಮೆಟ್ರೊದಲ್ಲಿ ಕೂರಲು ಅವಕಾಶ ಸಿಕ್ಕಿದ್ದು ಇದೇ ಮೊದಲ ಬಾರಿ. ಕೂರುವ ಮೊದಲು ಆ ಯುವತಿಯ ಕಿವಿಯಲ್ಲಿ ‘this is the most appropriate gift for an old man on his birthday’ ಅಂದೆ. ಚುರುಕು ಹುಡುಗಿ. ಒಂದರೆಕ್ಷಣದಲ್ಲೇ ನಾನು ಹೇಳಿದ್ದನ್ನು ಗ್ರಹಿಸಿ “ಹ್ಯಾಪಿ ಬರ್ತ್‌ಡೇ’ ಎಂದಳು. 

ದಿನವಿಡೀ ವಾಟ್ಸಾಪ್‌, ಎಸ್ಸೆಮ್ಮೆಸ್‌, ಫೇಸ್‌ಬುಕ್‌, ಇಮೇಲ್‌, ಫೋನ್‌ಕಾಲ್‌ – ಹೀಗೆ ಎಲ್ಲ ಮೂಲಗಳಿಂದ ಜನ್ಮದಿನದ ಶುಭಾಶಯಗಳು ಬರುತ್ತಿವೆ. ಜ್ಞಾಪಕಶಕ್ತಿ ಮಸುಕಾಗುತ್ತ ಹೋದಂತೆಲ್ಲ ಶುಭ ಕೋರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ವ್ಯಕ್ತಿಗತ ಧನ್ಯವಾದ ಹೇಳಲು ಶಕ್ತಿ ಮೀರಿ ಪ್ರಯತ್ನಿಸಿದರೂ ಹೇಳಲಾಗದೆ ಉಳಿದ ನೂರಾರು ಜನರಿಗೆ ಇದೋ ಧನ್ಯವಾದಗಳು. ಬದುಕಿನಲ್ಲಿ ಎಂದೂ “ಸುಸ್ತಾಯಿತು’ “ಬೋರ್‌ ಆಯಿತು’ ಎಂಬೆರಡು ಪದ ನಿಮ್ಮತ್ತ ಎಂದೂ ಸುಳಿಯದಿರಲಿ. 

– ನಾಗೇಶ್‌ ಹೆಗಡೆ  

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.