ಅಪ್ರತಿಮ ಕನ್ನಡ ಪ್ರೇಮಿ ಬೆ.ರ. ರಂಗರಾಜು


Team Udayavani, Feb 25, 2017, 4:46 PM IST

16.jpg

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಅಧ್ಯಕ್ಷ ಬೆ. ರ ರಂಗರಾಜು. ಇತ್ತೀಚೆಗೆ ನಮ್ಮನ್ನು ಅಗಲಿದ ರಂಗರಾಜು ಕನ್ನಡದ ಕಟ್ಟಾಳು. ಕನ್ನಡ ಪರವಾದ ಎಲ್ಲ ಹೋರಾಟಗಳಲ್ಲಿ ಪಾಲ್ಗೊಂಡಿದ್ದುದು, ಕನ್ನಡ ಹೋರಾಟಗಾರರು ಹಾಗೂ ಕಾರ್ಮಿಕರ ಹಿತರಕ್ಷಣೆಗೆ ಶ್ರಮಿಸಿದ್ದು ಇವರ ಹೆಚ್ಚುಗಾರಿಕೆ.

ಇಂಥ ಧೀಮಂತನ ಸ್ಮರಣೆಯ ನೆಪದಲ್ಲಿ ವಿಚಾರ ಸಂಕಿರಣ ಒಂದು ನಡೆಯುತ್ತಿದೆ.
ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್‌ನ ಪಂಪ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ. ಎಂ. ಚಿದಾನಂದ ಮೂರ್ತಿ, ಡಾ. ಸಿ. ವೀರಣ್ಣ, ಎಲ್‌. ಎನ್‌ ಮುಕುಂದರಾಜ್‌, ಎಸ್‌. ಜಿ. ಸಿದ್ದರಾಮಯ್ಯ, ಡಾ. ಪಿ.ವಿ ನಾರಾಯಣ, ಎಲ್‌. ಜಿ ಹಳ್ಳಿ ನಾಗರಾಜ್‌, ರಾ. ನಂ ಚಂದ್ರಶೇಖ, ಇಂದಿರಾ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸರೋಜಿನಿ ಮಹಿಷಿ ವರದಿ ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಅನ್ವಯ ಹಾಗೂ ಕನ್ನಡವನ್ನು ಅನ್ನದ ಭಾಷೆ ಮಾಡುವುದು ಹೇಗೆ ಎಂಬ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ. 

ಬಾಲಕನಾಗಿದ್ದಾಗಲೇ ಅ.ನ.ಕೃ., ಮ. ರಾಮಮೂರ್ತಿ ಅವರು ಆರಂಭಿಸಿದ ಚಳವಳಿಯಲ್ಲಿ ಪಾಲ್ಗೊಂಡಿದ್ದ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಬೆ.ರ. ರಂಗರಾಜು ಇತ್ತೀಚೆಗೆ(19-01-2017) ನಿಧನರಾದರು. ತಮ್ಮ 69ನೆಯ ವಯಸ್ಸಿನಲ್ಲಿ ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದರು. ರಂಗರಾಜು ತಮ್ಮ ದೇಹವನ್ನು, ಕಣ್ಣನ್ನು ದಾನ ಮಾಡುವಂತೆ ಬರೆದಿಟ್ಟಿದ್ದರು. ಕುಟುಂಬದವರು ಖಾಸಗಿ ಆಸ್ಪತ್ರೆಗೆ ಅವರ ದೇಹವನ್ನು ದಾನ ಮಾಡಿದರು.

ಶಾಲಾ ದಿನಗಳಿಂದಲೇ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ರಂಗರಾಜು ಬೆಂಗಳೂರಿನಲ್ಲಿ 1962ರಿಂದ ನಡೆದ‌ ಕನ್ನಡ ಹೋರಾಟಗಳ ಪ್ರತ್ಯಕ್ಷದರ್ಶಿ ಆಗಿದ್ದರು. ಕೈಗಾರಿಕೆಗಳಲ್ಲಿ ಕನ್ನಡಪರ ಚಟುವಟಿಕೆಗಳಿಗೆ ಸ್ಪಷ್ಟ ಹಾದಿ ನಿರ್ಮಿಸಿದ “ಬಿ.ಇ.ಎಲ್‌. ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಮಿತಿ’ಯ ಸ್ಥಾಪಕ ಸಂಘಟನಾ ಕಾರ್ಯದರ್ಶಿಯಾಗಿ, ನಂತರ ಎರಡು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಅಖೀಲ ಕರ್ನಾಟಕ ಕೈಗಾರಿಕಾ ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸ್ಥಾಪಕ ಉಪಾಧ್ಯಕ್ಷರಾಗಿ, 1986-89ರ ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ(ಪ್ರಥಮ), ಇತ್ತೀಚಿನ ವರ್ಷಗಳಲ್ಲಿ ಡಾ.ಸಿ. ವೀರಣ್ಣ ನೇತೃತ್ವದ “ಕರ್ನಾಟಕ ಸಾಹಿತ್ಯ ಪರಿಷತ್ತಿ’ನ ಪ್ರಧಾನ ಕಾರ್ಯದರ್ಶಿಯಾಗಿ ಕ್ರಿಯಾಶೀಲರಾಗಿದ್ದರು.

ಕನ್ನಡ ಚಳವಳಿಯ ನಾಯಕ, ದಿವಂಗತ ಜಿ. ನಾರಾಯಣಕುಮಾರ್‌ ಅವರ ಅಪ್ತರಾಗಿದ್ದ ರಂಗರಾಜು ಅವರು ದಶಕಗಳ ಕಾಲ ನಾರಾಯಣಕುಮಾರ್‌ ನಡೆಸಿದ ಎಲ್ಲ ಹೋರಾಟಗಳಲ್ಲೂ ಸಕ್ರಿಯರಾಗಿದ್ದರು. ಅರಳೆಪೇಟೆಯವರಾದ ರಂಗರಾಜು  ಹಿರಿಯ ಕನ್ನಡ ಹೋರಾಟಗಾರರ ಸಂಪರ್ಕ ಇಟ್ಟುಕೊಂಡಿದ್ದರು. ಕನ್ನಡ ಚಳವಳಿಯ ಆರಂಭದ ದಿನಗಳಿಂದ ಎಲ್ಲ ಹೋರಾಟಗಳ ವಿವರಗಳನ್ನು ಬಹಳ ಆಪ್ತವಾಗಿ ವಿಚಾರಿಸುತ್ತಿ¨ª‌ರು. 1960-70ರ ದಶಕದಲ್ಲಿ ಕನ್ನಡ ಕಾರ್ಯಕರ್ತರಿಗೆ, ವಿಶೇಷವಾಗಿ ಕನ್ನಡ ಕಾರ್ಮಿಕರಿಗೆ ಸೇರುದಾಣವಾಗಿದ್ದ ಕೆಂಪೇಗೌಡ ರಸ್ತೆಯ ಸ್ಟೇಟ್ಸ್‌ ಟಾಕೀಸಿನ(ಈಗಿನ ಭೂಮಿಕ) ಪಕ್ಕದ ವಸಂತ ವಿಹಾರದ ಕಾಯಂ ಸದಸ್ಯರಾಗಿ ಕನ್ನಡ ಹೋರಾಟದ ಎಲ್ಲ ಮಜಲುಗಳನ್ನು ಬಲ್ಲವರಾಗಿದ್ದರು(ವಸಂತ ವಿಹಾರದಲ್ಲಿ ಜ್ಯೂಕ್‌ ಬಾಕ್ಸ್‌ ಇತ್ತು. ನಾಲ್ಕಾಣೆ ಹಾಕಿದರೆ 1 ಹಾಡು ಬರುತ್ತಿತ್ತು. ಅಲ್ಲಿ ಕನ್ನಡ ಮತ್ತು ತಮಿಳರ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಕನ್ನಡ ಹೋರಾಟಗಾರರು ಸರದಿಯ ಸಾಲಿನಲ್ಲಿ ನಿಂತು ನಾಲ್ಕಾಣೆ ಹಾಕಿ ನಿರಂತರವಾಗಿ ಕನ್ನಡ ಹಾಡು ಬರುವಂತೆ ಮಾಡುತ್ತಿದ್ದರು. ಆ ದಿನಗಳಲ್ಲಿ ಅದೂ ಕೂಡ ಕನ್ನಡವನ್ನು ಮೆರೆಸುವ ಮಾರ್ಗವಾಗಿತ್ತು). ರಂಗರಾಜು ಅವರು ಕೆಲಸ ಮಾಡುತ್ತಲೇ ಕನ್ನಡ ಎಂ.ಎ. ಮಾಡಿದರು. ಕನ್ನಡ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದರು, ಬರೆಯುತ್ತಿದ್ದರು. “ಪರಸ್ಪರ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಒಂದೆರಡು ದಶಕಗಳಿಂದ ಕನ್ನಡ ಹೋರಾಟಕ್ಕಿಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದರು. ರಂಗರಾಜು ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗುವಂತಹ ಸಂಗತಿಯೊಂದನ್ನು ಇಲ್ಲಿ ಹೇಳಿಬಿಡಬೇಕು. ಕೆಲವು ವರ್ಷಗಳ ಹಿಂದೆ ಕನ್ನಡ ಬಾವುಟ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಬೆ.ನಿ. ಈಶ್ವರಪ್ಪ ಅವರು ತೀರಾ ಕಷ್ಟದಲ್ಲಿದ್ದಾರೆ ಎಂಬ ವಿಚಾರ ತಿಳಿಯಿತು. ಯಾರಿಗೂ ಅವರ ಮನೆ ತಿಳಿದಿರಲಿಲ್ಲ. ಕೊನೆಗೆ ರಂಗರಾಜು ಅವರನ್ನು ಸಂಪರ್ಕಿಸಿದಾಗ ಅವರ ಮನೆಗೆ ಕರೆದುಕೊಂಡು ಹೋದರು. ಈಶ್ವರಪ್ಪನವರ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಆಗ ಅವರಿಗೆ ಕನ್ನಡ ಗೆಳೆಯರ ಬಳಗ 51 ಸಾವಿರ ರು. ಸಂಗ್ರಹಿಸಿ ಕೊಟ್ಟಿತು. 

– ರಾ.ನಂ. ಚಂದ್ರಶೇಖರ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.