ಬಂಡೆ ಹತ್ತಿ, ಕಟ್ಟಡ ಏರಿ, ಸ್ಪೈಡರ್‌ಮ್ಯಾನ್‌ ಆಗಿ!


Team Udayavani, Apr 22, 2017, 4:30 PM IST

17.jpg

ಆ ಮೌಂಟ್‌ ಎವರೆಸ್ಟ್‌ ನೋಡಿದ್ರೆ ಆಸೆ ಹುಟ್ಟುತ್ತೆ. ಅಲ್ಲೆಲ್ಲೋ ಚಿತ್ರದುರ್ಗದಲ್ಲಿ ಕೋತಿರಾಮ ಅಲಿಯಾಸ್‌ ಜ್ಯೋತಿರಾಜ್‌, ಕೋಟೆ ಹತ್ತುವುದನ್ನು ಕಂಡು ಹೊಟ್ಟೆಕಿಚ್ಚಾಗುತ್ತೆ. ಟಿವಿಯಲ್ಲಿ ಬರುವ ಸ್ಪೈಡರ್‌ಮ್ಯಾನ್‌ ಅನ್ನು ನೋಡ್ತಾ ನೋಡ್ತಾ ಬರೀ ಥ್ರಿಲ್ಲಾಗೋದೇ ಆಗಿಹೋಯ್ತಾ ಲೈಫ‌ು? ಮರ ಹತ್ತುವ ಭಾಗ್ಯವಂತೂ ಈ ಬೆಂಗ್ಳೂರಲ್ಲಿ ಇಲ್ಲ. ಕಾಂಕ್ರಿಟ್‌ ಕಟ್ಟಡಗಳ ಅಕ್ಕಪಕ್ಕದಲ್ಲೆಲ್ಲೂ ಗುಡ್ಡ- ಬೆಟ್ಟಗಳು ಕಾಣಿಸುವುದಿಲ್ಲ. ಕಡೇಪಕ್ಷ ಇಲ್ಲಿ ಏರಲು ಗಟ್ಟಿ ಮರಗಳೇ ಇಲ್ಲ. ಇನ್ನು ಬೆಂಗಳೂರಿನ ಮಕ್ಕಳು ಪರ್ವತಾರೋಹಣ ಕಲಿಯೋದು ಹೇಗೆ?

ಇಂಥ ಯೋಚನೆಗಳ ಮಧ್ಯೆಯೂ ಮಕ್ಕಳನ್ನು ಎಡ್ಮಂಡ್‌ ಹಿಲರಿ ಮಾಡಿಸುವ ಕನಸು ಇಟ್ಕೊಂಡ ಪೋಷಕರಿಗೆ ಇದು ಸ್ವೀಟ್‌ ನ್ಯೂಸ್‌. ಪರ್ವತಾರೋಹಣ, ಟ್ರಕ್ಕಿಂಗ್‌ ಪಾಠ ಹೇಳಿಕೊಡಲೆಂದೇ “ಅರ್ಬನ್‌ ಕ್ಲೈಂಬರ್ಸ್‌’ ಕೆಲಸ ಮಾಡ್ತಿದೆ. ಇಲ್ಲಿ ಮಕ್ಕಳ ಸ್ಪೈಡರ್‌ ಮ್ಯಾನ್‌ ಆಗುವ ಕನಸನ್ನು ನನಸು ಮಾಡ್ತಾರೆ. ಕೆಲವೇ ದಿನಗಳ ತರಬೇತಿಯಲ್ಲಿ ಮಕ್ಕಳು ಚಕಚಕ ಅಂತ ಪರ್ವತ ಏರುವುದನ್ನು, ಗೋಡೆ ಹತ್ತುವುದನ್ನು ಕಲೀತಾರೆ!

ಏನೇನಿದೆ ಇಲ್ಲಿ?
– ಹಗ್ಗ ಹಿಡಿದು ಬಿಲ್ಡಿಂಗ್‌ ಏರುವುದನ್ನು ನೀವು ಟಿವಿ, ಜಾಹೀರಾತುಗಳಲ್ಲಿ ನೋಡಿದ್ದೀರಿ. ಇಲ್ಲೂ ಅಂಥ ಬಿಲ್ಡಿಂಗ್‌ನ ಗೋಡೆಗಳಿವೆ. ಅಲ್ಲಲ್ಲಿ ಉಕ್ಕಿನ ಕಿರು ಆಧಾರಗಳನ್ನು ಫಿಕ್ಸ್‌ ಮಾಡಿದ್ದಾರೆ. ಮೇಲೊಂದು ಹಗ್ಗ ಕಟ್ಟಿರುತ್ತಾರೆ. ಆ ಹಗ್ಗ ಹಿಡಿದು ಚಕಚಕನೆ ಕಟ್ಟಡವನ್ನು ಏರಬಹುದು. 24ರಿಂದ 48 ಅಡಿ ಎತ್ತರದ ಬಿಲ್ಡಿಂಗುಗಳನ್ನು ಹುಡುಗರು ಯಾವುದೇ ಭಯವಿಲ್ಲದೆ ಏರುವುದನ್ನು ಇಲ್ಲಿ ಕಣ್ಣಾರೆ ಕಾಣಬಹುದು. 

– ರಾಮನಗರದ ಬೆಟ್ಟದ ಮೇಲೆ ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ನೋಡಿರುತ್ತೀರಿ. ಅವನ್ನು ಏರಲಾರದೆ, ಉಸ್ಸಪ್ಪ ಎಂದಿರುತ್ತೀರಿ. ಇಲ್ಲೂ 8- 12 ಅಡಿ ಎತ್ತರದ ಕಲ್ಲುಬಂಡೆ ಇಟ್ಟಿರುತ್ತಾರೆ. ತಲೆಗೆ ಹೆಲ್ಮೆಟ್‌ ಧರಿಸಿ, ಬಂಡೆ ಏರುವುದನ್ನು ಇಲ್ಲಿ ಕಲಿಸಲಾಗುತ್ತೆ.

– ಮಕ್ಕಳಿಗಾಗಿಯೇ ಇಲ್ಲೊಂದು ಗೋಡೆ ಇದೆ. ಸುರಕ್ಷಾ ಉಡುಪುಗಳನ್ನು ಧರಿಸಿ, ಚಿಕ್ಕಚಿಕ್ಕ ಮೆಟ್ಟಿಲುಗಳನ್ನು ಹತ್ತಿ ಇದನ್ನು ಏರಬಹುದು. ಮಕ್ಕಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಈ ಗೋಡೆ ನಿರ್ಮಿಸಲಾಗಿದೆ.

ಮನೋಸ್ಥೈರ್ಯದ ಪಾಠ
ಇಲ್ಲಿಗೆ ಬರುವ ಅನೇಕ ಮಕ್ಕಳಿಗೆ ಆಸಕ್ತಿ, ಉತ್ಸಾಹ ಏನೋ ಇರುತ್ತೆ. ಆದ್ರೆ, ಇಷ್ಟೆತ್ತರ ಹತ್ತಬೇಕಲ್ಲ ಎಂದು ಮೇಲೆ ನೋಡುತ್ತಾ ಧೈರ್ಯಗೆಡುತ್ತಾರೆ. ಇದ್ದಕ್ಕಿದ್ದಂತೆ ಕೈಕಾಲು ಕಂಪಿಸಲೂಬಹುದು. ಇಂಥ ಮಕ್ಕಳ ಆತಂಕವನ್ನೂ ಇಲ್ಲಿ ದೂರ ಮಾಡ್ತಾರೆ. ಮನೋಸ್ಥೈರ್ಯದ ಪಾಠವನ್ನು ಇಲ್ಲಿ ಹೇಳಿಕೊಡ್ತಾರೆ. ಕೇವಲ ಮಕ್ಕಳಲ್ಲ, ಈ ಆರೋಹಣಾ ತರಬೇತಿ ಶಾಲೆಯಲ್ಲಿ ಯುವತಿಯರೂ ಕಾಣಿಸುತ್ತಾರೆ. ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅನೇಕ ಹೆಣ್ಮಕ್ಕಳು ಇಲ್ಲಿ ಆರೋಹಣ ಪಾಠ ಕಲಿಯುತ್ತಾರೆ. ಎಲ್ಲ ತರಬೇತುದಾರರಿಗೂ ಸುರಕ್ಷಾ ಸಾಧನಗಳನ್ನು ಅಳವಡಿಸಿಯೇ, ತರಬೇತಿ ನೀಡಲಾಗುತ್ತೆ.

ಎಲ್ಲಿದೆ?
ಸ್ಪ್ರಿಂಗ್‌ ಫೀಲ್ಡ್‌, ಸರ್ಜಾಪುರ ರಸ್ತೆ, ಬೆಂಗಳೂರು- 560102
ಏಕೆ ಹೋಗ್ಬೇಕು ಅಂದ್ರೆ…
– ಕಟ್ಟಡ, ಬಂಡೆ ಏರುವುದನ್ನು ಕಲಿಯಲು
– ಅಪಾಯಕಾರಿ ಸನ್ನಿವೇಶದಲ್ಲಿ ಸಾಹಸ ಪ್ರದರ್ಶಿಸುವುದನ್ನು ಅಭ್ಯಸಿಸಲು
– ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು
– ಪರ್ವತಾರೋಹಣಕ್ಕೆ ಇದೊಂದು ಇಂಟರ್ನ್ಶಿಪ್‌ ಇದ್ದಹಾಗೆ

ಸಂಪರ್ಕ
ಮೊ. 096633 67391

ವೆಬ್‌ಸೈಟ್‌ http://urbanclimbers.in/

ಫೇಸ್‌ಬುಕ್‌ @Urbanclimbers.in

ಟಾಪ್ ನ್ಯೂಸ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.