ಫ್ಲೈಟಿನಲ್ಲಿ ಕನ್ನಡ ಪೇಪರ್‌ಗಾಗಿ ಫೈಟು!


Team Udayavani, May 27, 2017, 3:48 PM IST

48.jpg

ಬೆಂಗಳೂರಿನಲ್ಲಿ ಮಳೆ ಬಿದ್ದ ಮಾರನೆಯ ಆ ದಿನ ಚೆನ್ನಾಗಿ ನೆನಪಿದೆ. 1999ರ ಆಗಸ್ಟ್‌ 20ರ ಮುಂಜಾನೆ. ವೈಮಾಂತರಿಕ್ಷ ತಂತ್ರಜ್ಞಾನದಲ್ಲಿ ಗುಣಮಟ್ಟ  ಇಂಜಿನಿಯರಿಂಗ್‌ ಎಂಬ ಸಮ್ಮೇಳನದ ಉದ್ಘಾಟನೆಗೆಂದು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿದ್ದ ಅಬ್ದುಲ್‌ ಕಲಾಂ ಬೆಂಗಳೂರಿಗೆ ಬಂದಿದ್ದರು. ವೇದಿಕೆ  ಅಣಿಗೊಳಿಸುವ ಹೊಣೆ ನನ್ನ ಮೇಲಿತ್ತು. ಎಂದಿನ ಕೆದರಿದ ಉದ್ದನೆಯ ಕೂದಲು ಮತ್ತು ನಗುಮುಖದೊಂದಿಗೆ ಆಗಮಿಸಿದ ಸೂಟುಧಾರಿ ಕಲಾಂ ಅವರ ಕೋಟಿಗೆ  ಸಮ್ಮೇಳನದ ಬ್ಯಾಡ್‌ಜ್‌ ಚುಚ್ಚಲು ಹೋದೆ. ಈ ಗುರುತಿನ ಚೀಟಿ ಅಗತ್ಯವಿದೆಯೆ? ಎಂದು ಪ್ರಶ್ನಿಸಿದರು. ನೀವೂ ಸೇರಿದಂತೆ, ಗುರುತಿನ ಚೀಟಿಯಿಲ್ಲದ ಯಾರನ್ನೂ ನನ್ನ ಹುಡುಗರು “ವೇದಿಕೆ ಹತ್ತಲು ಬಿಡರು ಎಂದು ಚಟಾಕಿ ಹಾರಿಸಿದೆ. ವೇದಿಕೆ ಮೇಲೆ ಕೂರುವ ಹೊಣೆಯಿಂದ ತಪ್ಪಿಸಿಕೊಳ್ಳಲು ಇದಕ್ಕಿಂತ ಉತ್ತಮ ಮಾರ್ಗ ಮತ್ತೂಂದಿಲ್ಲ’ ಎಂದು ಜೋರಾಗಿಯೇ ಅವರು ನಗಲಾರಂಭಿಸಿದರು. ಟೈಮ್ಸ ಆಫ್ ಇಂಡಿಯಾದ ಛಾಯಾಗ್ರಾಹಕ  ಸೆರೆಹಿಡಿದ ಆ ಚಿತ್ರಕ್ಕೆ ಮರುದಿನದ ಸಂಚಿಕೆಯ ಮುಖಪುಟದಲ್ಲೇ ಸ್ಥಾನ.  

 ಅದು 1994ರ ಸಮಯ. ವಿಮಾನಗಳಲ್ಲಿ ಕನ್ನಡ ಪತ್ರಿಕೆಗಳು ಸಿಗುವುದಿರಲಿ, ಕನ್ನಡದ ಉಸಿರೂ ಅಷ್ಟಾಗಿ ಕೇಳುತ್ತಿರಲಿಲ್ಲ. ಹೀಗೊಂದು ದಿನ ದೆಹಲಿಯಿಂದ ಬೆಂಗಳೂರಿಗೆ ಬರುವಾಗ ವಿಮಾನದಲ್ಲಿ ಕಡೆಯ ಸೀಟು ಸಿಕ್ಕಿತು. ಇಳಿಯಲು ಹೆಚ್ಚು ಹೊತ್ತು ಕಾಯಬೇಕಲ್ಲ, ಎಂದು ಬೈದುಕೊಂಡೇ ಆಸೀನನಾಗಿದ್ದೆ. ತಲೆಯೆತ್ತಿದರೆ, ಕನ್ನಡ ಪತ್ರಿಕೆಯೊಂದು ಕಣ್ಣಿಗೆ ಬೀಳಬೇಕೆ? ಎಳೆದ ರಭಸಕ್ಕೆ ಮೊದಲ ಪುಟದ ತುದಿ ಹರಿದೇ ಬಿಟ್ಟಿತು. ಅರ್ಧ ಗಂಟೆ ಮನಸೋ ಇಚ್ಛೆ ಓದಿ ತೊಡೆಯ ಮೇಲಿರಿಸಿಕೊಂಡಿದ್ದೆ. “ಮೊದಲ ದರ್ಜೆಯ ಪಯಣಿಗರೊಬ್ಬರಿಗೆ ಕನ್ನಡ ಪತ್ರಿಕೆ ಬೇಕಂತೆ. ನೀವು ಓದಿ ಮುಗಿಸಿದ್ದರೆ ಕೊಡುತ್ತೀರಾ?’ ಎಂಬ ಕೋರಿಕೆಯೊಡನೆ ಗಗನಸಖೀಯಲ್ಲ, ಸಖ ಮುಗುಳ್ನಕ್ಕು ಕೇಳಿದ. ಪಯಣ ಮುಗಿಸುವತನಕ ಕನ್ನಡ ಪತ್ರಿಕೆ ಬೇಕು. ತಂದು ಕೊಡಿ ಎಂದು ಕೇಳಿದ, ನನ್ನಂಥ ಹಠಮಾರಿ ಅದ್ಯಾರು ಎಂಬ ಕುತೂಹಲ ಉಳಿದಿತ್ತು. ವಿಮಾನದ ಮೆಟ್ಟಿಲು ಇಳಿಯುವಾಗ ನೋಡುತ್ತೇನೆ: ರಾಜಕಾರಣಿ ಜೀವರಾಜ ಆಳ್ವರ ಕೈಯಲ್ಲಿದ್ದ ಆ ಕನ್ನಡ ಪತ್ರಿಕೆಯ ಮೊದಲ ಪುಟ ಹರಿದಿತ್ತು!  

ಡಿಸೆಂಬರ್‌ 1991ರ ಸಮಯವದು. ಕಚೇರಿ ಕೆಲಸಕ್ಕೆಂದು ದೆಹಲಿಗೆ ಹೋಗಿದ್ದವನು ಮದ್ರಾಸಿಗೆ ಬೆಳಗ್ಗೆ ಬಂದಿ¨ªೆ. ಬೆಂಗಳೂರು ಎಕ್ಸ್‌ಪ್ರೆಸ್‌ ಹೊರಡಲು ಸಾಕಷ್ಟು ಸಮಯವಿತ್ತು. ಇನ್ನೂ ಆರು ತಿಂಗಳ ಮಗುವಾಗಿದ್ದ ಮಗಳು ಮೇಘನಾಳಿಗೆಂದು ದೊಡ್ಡ ಟೆಡ್ಡಿಬೇರ್‌ ಕೊಂಡದ್ದರಿಂದ ಲಗೇಜ್‌ ಸಾಕಷ್ಟು ಭಾರವಿತ್ತು. ಮಧ್ಯಾಹ್ನ, ಲಗೇಜು ತುಂಬಿಸಿದ ಕೆಲಕ್ಷಣದಲ್ಲೇ  ರೈಲು ಹೊರಟಿತು. ಅಂತೂ ಇಂತೂ ಬಂಗಾರಪೇಟೆ ಸಮೀಪ ಬಂದಾಗ ರಾತ್ರಿ ಎಂಟೂವರೆ. ಇನ್ನೊಂದು ಗಂಟೆಯಲ್ಲಿ ಬೆಂಗಳೂರು. ಮತ್ತೂಂದು ಗಂಟೆಯಲ್ಲಿ ಮನೆ ಎಂಬ ಹುರುಪಿನಲ್ಲಿದ್ದೆ. ಸ್ವಲ್ಪ ದೂರ ಚಲಿಸಿದ ರೈಲು ಏಕೋ ನಿಂತಿತು. ಸಿಗ್ನಲ ಬಿದ್ದಿಲ್ಲವೇನೋ ಎಂಬ ಊಹೆ ಎಲ್ಲರದು. ಬೆಂಗಳೂರಿನಲ್ಲಿ ಬಂದ್‌ನ ಹಿಂದಿನ ದಿನವೇ ದೊಡ್ಡ ಅನಾಹುತ ನಡೆದುದರ ಕಲ್ಪನೆ ನಮ್ಮಲ್ಲಿ ಯಾರಿಗೂ ಇರಲಿಲ್ಲ. 

ನಿಂತ ರೈಲು ಕೊನೆಗೆ ಹೊರಟಿದ್ದು ರಾತ್ರಿ ಹತ್ತೂವರೆಗೆ. ಬೆಂಗಳೂರು ತಲುಪಿದಾಗ ಹನ್ನೆರಡರ ರಾತ್ರಿ. ಅಷ್ಟೊಂದು ಲಗೇಜಿನೊಂದಿಗೆ ಹೊರಬರಲು ಹರಸಾಹಸ ಪಡುತ್ತಿದ್ದಾಗ ಸಿಕ್ಕ ಪೋರ್ಟರ್‌, “ಸಾರ್‌, ಆಟೋ ತುಂಬಾ ಕಡಿಮೆ ಸಂಖ್ಯೆಯಲ್ಲಿದೆ. ಬೇಕಿದ್ದರೆ ನನ್ನ ಜತೆ ಓಡಿ ಬರಬೇಕು’ ಎನ್ನುತ್ತಲೇ ನನ್ನೆಲ್ಲ ಲಗೇಜಿನ ಜತೆ ಹೊರಗಡೆ ತಂದುಬಿಟ್ಟ. ಇನ್ನೂರು ರೂಪಾಯಿ ಕೊಟ್ಟರೆ ಮಾತ್ರ ಜಯನಗರ, ದಾರಿಯಲ್ಲಿ ಕತ್ರಿಗುಪ್ಪೆಯ ಪ್ಯಾಸೆಂಜರ್‌ ಒಬ್ಬರಿದ್ದಾ ರೆ ಎಂದ ಆಟೋದವನು. ಗೋಣಾಡಿಸಿ ಹೊರಟರೆ ದಾರಿಯುದ್ದಕ್ಕೂ ಸುಟ್ಟ ಟೈರುಗಳು, ಗಾಜೊಡೆದ ಬಸ್ಸು- ಕಾರುಗಳು. ಸಮಯಕ್ಕೆ ಸರಿಯಾಗಿ ಪೋರ್ಟರ್‌ ನೆರವು ನೀಡಿರದಿದ್ದರೆ, ಆಟೋರಿಕ್ಷಾ ಚಾಲಕ ಬರುವುದಿಲ್ಲ ಎಂದಿದ್ದರೆ… ಏನಾಗುತ್ತಿತ್ತೂ? ಊಹಿಸಲಾಗದು.

– ಹಾಲ್ದೊಡ್ಡೇರಿ ಸುಧೀಂದ್ರ, ಹಿರಿಯ ವಿಜ್ಞಾನಿ

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.