ಮನದಾಳಕ್ಕಿಳಿಯದ “ಒಡಲಾಳ’!


Team Udayavani, Aug 19, 2017, 3:21 PM IST

16.jpg

ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ “ಒಡಲಾಳ’ ನಾಟಕದ ಪ್ರದರ್ಶನ ನಡೆಯಿತು. ಹೆಸರಾಂತ ರಂಗನಿರ್ದೇಶಕ ಜನಾರ್ಧನ್‌ (ಜನ್ನಿ) ಅವರು ಹೊಸ ಹುಡುಗರ ತಂಡ ಕಟ್ಟಿ, ಅಭ್ಯಾಸ ಮಾಡಿಸಿ, ರಾಜಧಾನಿಯಲ್ಲಿ ಮೊದಲ ಪ್ರದರ್ಶನದ ಪ್ರಯೋಗ ನಡೆಸಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಜನ್ನಿ ನಿರ್ದೇಶನದ “ಒಡಲಾಳ’ ನೋಡುಗರ ಮನದಾಳಕ್ಕಿಳಿಯಲೇ ಇಲ್ಲ. ಈಗಾಗಲೇ ರಂಗದ ಮೇಲೆ ಅಭೂತಪೂರ್ವ ಯಶಸ್ಸು ಸಾಧಿಸಿರುವ ರಂಗಕೃತಿಯನ್ನು ನಿರ್ದೇಶಿಸುವಾಗ ನಿರ್ದೇಶಕನಲ್ಲಿರಬೇಕಾದ ಹೊಸ ಕಾಣೆR ಕಣ್ಮರೆಯಾಗಿತ್ತು. ಒಡಲಾಳದ ಸಾಕವ್ವ ಮತ್ತವಳ ಕೌಟುಂಬಿಕ ಸಂಬಂಧಗಳು ಸಾಂಕೇತಿಕತೆಯನ್ನು ಮೀರಿದ ಗಾಢತೆಯನ್ನು ಹೊಂದಿರುವುದನ್ನು ಮರೆಯಬಾರದು. ನಾಟಕದ ಮೊದಲರ್ಧ ಭಾಗ ಸಾಕವ್ವನ ಕುಟುಂಬದವರ ಪರಿಚಯ, ಅವರ ದಿನಚರಿಯನ್ನು ಪರಿಚಯಿಸುವುದಕ್ಕಷ್ಟೇ ಮೀಸಲಾಗಿತ್ತು.

ಉಳಿದ ಭಾಗದಲ್ಲಿ ಸಾಕವ್ವನ ರಾಜಹುಂಜ ಕಣ್ಮರೆಯಾಗಿದ್ದು, ಅದರ ಹುಡುಕಾಟ ಮತ್ತು ಇಡೀ ಕುಟುಂಬದ ಹಸಿವು ಆವರಿಸಿಕೊಳ್ಳಬೇಕಿತ್ತು. ಆದರೆ, ಈ ಪ್ರದರ್ಶನದಲ್ಲಿ ಇಂಥ ಮ್ಯಾಜಿಕ್‌ ನಡೆಯಲಿಲ್ಲ. ಸಾಕವ್ವ ಮತ್ತು ಚೆಲುವಮ್ಮರ ನಡುವಿನ ಜಗಳ ಕೂಡ ಪೇಲವವಾಗಿತ್ತು. ಇದ್ದುದರಲ್ಲಿ ಸಾಕವ್ವನ ಪಾತ್ರಧಾರಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿ, ನೋಡುಗರ ನೆನಪಿನಲ್ಲಿ ಉಳಿದಳು. ಆದರೂ ಅವಳ ಸಂಭಾಷಣೆಯ ವೇಗ ಸಾಕವ್ವನ ಪಾತ್ರ ಬೆಳಗುವಂತೆ ಮಾಡುವ ಅವಕಾಶವನ್ನು ಕಸಿದುಕೊಂಡಿತು. 

ಗೌರಿ ಹೇಳುವ ಯಾವ ಮಾತೂ ಸರಿಯಾಗಿ ಕೇಳಿಸದ ಕಾರಣ “ನವಿಲಿನ ಚಿತ್ರ’ ಮಾತ್ರ ಅವಳ ಅಸ್ತಿತ್ವವನ್ನು ಉಳಿಸಿತೆನ್ನಬೇಕು. ಮುಗ್ಧ ಶಿವು ಸ್ವಲ್ಪ ಗಡವನೆನಿಸಿದ್ದರಿಂದ ಅವನ ಅಮಾಯಕ ಪ್ರಶ್ನೆಗಳಲ್ಲಿ ಮುಗ್ಧತೆ ಕಣ್ಮರೆಯಾಗಿತ್ತು. ಉಳಿದ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ. ಸಾಕವ್ವನ ಮನೆಗೆ ಪೊಲೀಸರು ಬಂದಾಗ ಸಾಕವ್ವ ಹಾಸ್ಯದ ವಸ್ತುವಾಗುತ್ತಾಳೆಂಬುದು ಮೂಲಕಥೆಯಲ್ಲಿ ಸತ್ಯವಾದರೂ ನಾಟಕದಲ್ಲಿ ಗೋಜಲಿನ ಗೂಡಾಗಿ, ಕಿರುಚಾಟದಲ್ಲಿ ಸಂಭಾಷಣೆಯೇ ಕೇಳದಂತಾಗಿತ್ತು. 

ರಂಗಸಜ್ಜಿಕೆ ಉತ್ತಮವಾಗಿತ್ತು. ಸಾಕವ್ವನ ಪುಟ್ಟ ಮನೆಯಲ್ಲೇ ಮೂರು ದಿಕ್ಕಿಗೆ ಮೂರು ಒಲೆ ಉರಿಯುವುದನ್ನು ತೋರಿಸಲು ನಿರ್ದೇಶಕರು ಮಾಡಿದ ಪ್ರಯತ್ನ ಉತ್ತಮವಾಗಿತ್ತು. ತಮ್ಮ ನಡುವೆ ಏನೇ ಜಗಳ ನಡೆದಿದ್ದರೂ ಕಾಫಿ ಕುಡಿಯುವಾಗ, ತಮ್ಮ ತಂದ ಕಡಲೆಕಾಯಿ ತಿನ್ನುವಾಗ, ಕಡಲೆಪುರಿ ತಿನ್ನುವಾಗ ಇಡೀ ಕುಟುಂಬ ತೋರುವ ಸಾಮರಸ್ಯವನ್ನು ತುಂಬಾ ಚೆನ್ನಾಗಿ ರಂಗದ ಮೇಲೆ ತೋರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ನೆರಳು ಬೆಳಕಿನ ಸಂಯೋಜನೆ, ಹಿನ್ನೆಲೆ ಗಾಯನ ಮತ್ತು ಧ್ವನಿವರ್ಧಕದ ಹೊಂದಾಣಿಕೆಯಲ್ಲಿ ವಹಿಸಿದ ಎಚ್ಚರಿಕೆ ಪೂರಕವಾಗಿತ್ತು. ಹೊಸ ಹುಡುಗರು ಮಾಡಿದ ಪ್ರಯೋಗವಿದು ಎಂಬ ರಿಯಾಯ್ತಿ ನೀಡಿ, ಈ ಮೇಲಿನ ಹಲವು ಸಂಗತಿಗಳನ್ನು ಮರೆತರೂ ನಿರ್ದೇಶಕರ ಹಿನ್ನೆಲೆಯನ್ನು ಕಡೆಗಣಿಸಲಾಗದು. ದೇವನೂರು ಮಹಾದೇವ ಅವರ ಮಹತ್ವಾಕಾಂಕ್ಷೆಯ ಕೃತಿ “ಒಡಲಾಳ’ ತೆರೆದು ತೋರಿದ ದಲಿತ ಕುಟುಂಬವೊಂದರ ಅವಸ್ಥೆಯ ಸ್ವರೂಪ ಯಾವ ಬಗೆಯೆಂಬುದನ್ನು ಅರಿತವರಿಗೆಲ್ಲರಿಗೂ, ಜನ್ನಿ ನಿರ್ದೇಶನದ ಒಡಲಾಳ ನಾಟಕ ತೀವ್ರ ನಿರಾಸೆ ಮೂಡಿಸಿತೆಂಬುದನ್ನು ಹೇಳಲೇಬೇಕು.

ಡಾ. ಎಚ್‌.ಎಸ್‌. ಸತ್ಯನಾರಾಯಣ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.