ತಮ್ಮಿಂದ ತೊಂದರೆಯಾಗಿದೆ ಎಂದರೆ ಚಿತ್ರರಂಗ ಬಿಡುತ್ತೇನೆ ಶಿವರಾಜಕುಮಾರ್


Team Udayavani, Jan 4, 2017, 11:25 AM IST

bal-shiv.jpg

14 ವರ್ಷಗಳ ಹಿಂದೆ ಇನ್ನು ರೀಮೇಕ್‌ ಮಾಡುವುದಿಲ್ಲ ಎಂದು ಶಿವರಾಜಕುಮಾರ್ ಘೋಷಿಸಿದ್ದರು. ಅದರಂತೆ ಅವರು ರೀಮೇಕ್‌ ಚಿತ್ರಗಳಿಂದ ದೂರವೇ ಇದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಶಿವರಾಜಕುಮಾರ್‌ ಅವರು ರೀಮೇಕ್‌ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಈ ಕುರಿತು ಶಿವರಾಜಕುಮಾರ್‌ ಅವರು ತಮ್ಮ ಹೇಳಿಕೆ ನೀಡಿರಲಿಲ್ಲ.

ಈಗ ಖುದ್ದು ಶಿವರಾಜ ಕುಮಾರ್‌ ತಾವು ರೀಮೇಕ್‌ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಯಾಕೆ ನಟಿಸುತ್ತಿರುವದಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ನಡೆದ “ಶ್ರೀಕಂಠ’ ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಶಿವರಾಜಕುಮಾರ್‌ ಅವರು ರೀಮೇಕ್‌ ಬಗ್ಗೆ, ಕಳೆದ ವರ್ಷದ ಬಗ್ಗೆ, ಕಲಾವಿದರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತಾಡಿದ್ದಾರೆ.

* “ಒಪ್ಪಂ’ ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿದ್ದೀರಂತೆ?
-ಹೌದು, ಆ ಸಿನಿಮಾ ನೋಡಿದೆ. ತುಂಬಾ ಇಷ್ಟವಾಯಿತು. ಹೃದಯಕ್ಕೆ ಹತ್ತಿರವಾದ ಸಿನಿಮಾವನ್ನು ಮಾಡೋದು ತಪ್ಪಲ್ಲ. ಆ ಮೂಲಕ ನಾನೂ ಮತ್ತಷ್ಟು ಹೃದಯಗಳಿಗೆ ಹತ್ತಿರವಾಗಬಹುದು. ಇದ್ದ ಬದ್ದ ಸಿನಿಮಾಗಳನ್ನೆಲ್ಲಾ ನಾನು ರೀಮೇಕ್‌ ಮಾಡುತ್ತಿಲ್ಲ. ತೀರಾ ಅಪರೂಪ ಎನಿಸಿದ, ಖುಷಿಕೊಟ್ಟ ಸಿನಿಮಾಗಳನ್ನು ಮಾಡುವುದು ತಪ್ಪಲ್ಲ. ಅಷ್ಟಕ್ಕೂ ನಾನು ರೀಮೇಕ್‌ನಲ್ಲಿ ನಟಿಸುತ್ತಿದೇನೆ. ಕ್ರೈಮ್‌ ಮಾಡ್ತಿಲ್ಲ.

* 2016 ಹೇಗಿತ್ತು. 2017 ರ ನಿರೀಕ್ಷೆ ಏನು?
-2016 ನನ್ನ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದ ಮೂಲಕ ಆರಂಭವಾಯಿತು. ಆ ನಂತರ ಬಂದ “ಶಿವಲಿಂಗ’ ಹಾಗೂ “ಕಬೀರ’ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾಯಿತು. ಈ ವರ್ಷ “ಶ್ರೀಕಂಠ’ ಮೂಲಕ ಆರಂಭವಾಗುತ್ತಿದೆ. ಈ ವರ್ಷವೂ ಚೆನ್ನಾಗಿರುತ್ತದೆ ಎಂಬ ವಿಶ್ವಾಸವಿದೆ. “ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’, “ಲೀಡರ್‌’, “ಟಗರು’ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿದೆ.

* ನಾಯಕ ನಟರು ಕಿರುತೆರೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಾಕಷ್ಟು ತಕರಾರು ನಡೆಯುತ್ತಿದೆ. ಈ ಬಗ್ಗೆ ಏನಂತೀರಿ?
-ಅದು ಅರ್ಥವಿಲ್ಲದ ಮಾತು. ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಜವಾಬ್ದಾರಿಗಳಿವೆ. ಅದನ್ನು ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಈಗ ನಾನು ಸೇರಿದಂತೆ ಅನೇಕ ನಟರು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಂತ ಅವರ ಸಿನಿಮಾ ಕೆಲಸಕ್ಕೆ ಯಾವತ್ತೂ ತೊಂದರೆಕೊಟ್ಟಿಲ್ಲ. ನಿರ್ಮಾಪಕರು ಕರೆದಾಗ ಬಂದಿದ್ದಾರೆ. ತಮ್ಮ ಸಿನಿಮಾವನ್ನು ಎಷ್ಟು ಪ್ರಮೋಶನ್‌ ಮಾಡಬೇಕೋ ಅಷ್ಟು ಮಾಡುತ್ತಾರೆ. ಯಾರಾದರೂ ನಿರ್ಮಾಪಕರು ಬಂದು ನಮ್ಮಿಂದ ತೊಂದರೆಯಾಗಿದೆ ಎನ್ನಲಿ ನಾನು ಚಿತ್ರರಂಗ ಬಿಟ್ಟುಬಿಡುತ್ತೇನೆ. ಸುಖಾಸುಮ್ಮನೆ ತಕರಾರು ಮಾಡುವುದರಲ್ಲಿ ಅರ್ಥವಿಲ್ಲ. 

* ಈ ವಾರ ಬಿಡುಗಡೆಯಾಗುತ್ತಿರುವ “ಶ್ರೀಕಂಠ’ದ ಸ್ಪೆಷಲಾಟಿ ಏನು?
-ಇದೊಂದು ಹೊಸ ತರಹದ ಕಥೆ. ನಿರ್ದೇಶಕ ಮಂಜು ಸ್ವರಾಜ್‌ ವಿಭಿನ್ನವಾಗಿ ನಿರೂಪಿಸಿದ್ದಾರೆ. ಕಾಮನ್‌ಮ್ಯಾನ್‌ ಕುರಿತಾದ ಸಿನಿಮಾ. ತನಗೆ ಬರುವ ಸಮಸ್ಯೆಗಳನ್ನು ಒಬ್ಬ ಕಾಮನ್‌ಮ್ಯಾನ್‌ ಹೇಗೆ ಎದುರಿಸುತ್ತಾನೆಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ನಿರ್ಮಾಪಕ ಮನುಗೌಡ ಅವರು ತುಂಬಾ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

* ಚಿತ್ರದ ರೈಲು ಸಾಹಸ ಹಾಗೂ ಕಟೌಟ್‌ ಹತ್ತಿರುವ ಬಗ್ಗೆ ಹೇಳಿ?
-ರೈಲು ಸಾಹಸವನ್ನು ನಾನು ಈ ಹಿಂದೆ “ಜೋಡಿ’ ಹಾಗೂ “ಪ್ರೀತ್ಸೆ’ ಸಿನಿಮಾದಲ್ಲಿ ಮಾಡಿದ್ದೆ. ಈಗ “ಶ್ರೀಕಂಠ’ದಲ್ಲೂ ಮಾಡಿದ್ದೇನೆ. ಪಕ್ಕಾ ಪ್ಲಾನಿಂಗ್‌, ವೀಲ್‌ ಪವರ್‌ನಿಂದ ಅದು ಮಾಡಲು ಸಾಧ್ಯ. ಇನ್ನು, ಕಟೌಟ್‌ ಹತ್ತುವ ದೃಶ್ಯಕ್ಕೆ ರೋಪ್‌ ಎಲ್ಲಾ ತಂದಿದ್ದರು. ಆದರೆ ನಾನು ಹಾಗೇ ಹತ್ತಿದೆ. ಅಭಿಮಾನಿಗಳು ನಮ್ಮ ಕಟೌಟ್‌ಗೆ ಹತ್ತಿ ಹಾರ, ಹಾಲು ಹಾಕುತ್ತಾರೆ. ಆ ಅನುಭವ ಹೇಗಿರುತ್ತದೆಂಬುದನ್ನು ತಿಳಿಯಲು ನಾನೂ ಹತ್ತಿದೆ. ಮನಸ್ಸಿನಲ್ಲಿ ಪ್ರೀತಿ, ಅಭಿಮಾನ ಇದ್ದರೆ ಎಲ್ಲವೂ ಸುಲಭ ಎಂದು ನನಗೆ ಆಗ ಅನಿಸಿತು.

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.