ಭೀಮನ ಪಾತ್ರಕ್ಕೆ ನನ್ನನ್ನು ಯಾರು ಕೇಳಲಿಲ್ಲ
Team Udayavani, Aug 9, 2017, 10:50 AM IST
“ಬಾಹುಬಲಿ’ ಚಿತ್ರದ ನಂತರ ತೆಲುಗು ನಟ ರಾಣಾ ದಗ್ಗುಬಾಟಿಯ ಬೇಡಿಕೆ ಕೂಡಾ ಹೆಚ್ಚಿದೆ. ಅವರನ್ನು ಹುಡುಕಿಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಸದ್ಯ ಅವರು ನಟಿಸಿರುವ “ನೇನೇ ರಾಜ ನೇನೇ ಮಂತ್ರಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಾಣಾ ದಗ್ಗುಬಾಟಿ ಕೆಲವು ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ …
* ಕನ್ನಡದ “ಕುರುಕ್ಷೇತ್ರ’ದ ಭೀಮನ ಪಾತ್ರಕ್ಕೆ ನಿಮ್ಮನ್ನು ಸಂಪರ್ಕಿಸಲಾಗಿತ್ತೆಂಬ ಮಾತು ಕೇಳಿ ಬಂದಿತ್ತು?
“ಕುರುಕ್ಷೇತ್ರ’ ಎಂಬ ಸಿನಿಮಾ ಬರುತ್ತಿರುವ ಬಗ್ಗೆ ಕೇಳಿದ್ದೇನೆ. ಆದರೆ, ಭೀಮನ ಪಾತ್ರಕ್ಕೆ ನನ್ನನ್ನು ಯಾರು ಕೇಳಿರಲಿಲ್ಲ. ಆ ಬಗ್ಗೆ ಕೇಳಿಕೊಂಡು ನನ್ನ ಬಳಿ ಯಾರೂ ಬಂದಿಲ್ಲ. ಆ ವಿಚಾರ ನನಗೆ ಗೊತ್ತೇ ಇಲ್ಲ. ಕೇಳಿದ್ದರೆ ಆ ಬಗ್ಗೆ ಯೋಚಿಸಬಹುದಿತ್ತು.
* ಕನ್ನಡದಲ್ಲಿ ನೀವು “ಆಸ್ಫೋಟ’ ಸಿನಿಮಾದಲ್ಲಿ ನಟಿಸುತ್ತೀರೆಂದು ಸುದ್ದಿಯಾಗಿತ್ತು?
ಆ ಸಿನಿಮಾಕ್ಕೆ ಕೇಳಿದ್ದರು. ಇನ್ನೂ ಮಾತುಕತೆಯ ಹಂತದಲ್ಲಿದೆ.
* ಕನ್ನಡದಲ್ಲಿ ನಟಿಸುವ ಆಸಕ್ತಿ ಇದೆಯಾ?
ಖಂಡಿತಾ ಇದೆ. ನಾನು ಕೇವಲ ತೆಲುಗು ಒಂದೇ ಭಾಷೆಗೆ ಸೀಮಿತವಾಗಬೇಕೆಂದುಕೊಂಡಿಲ್ಲ. ಈಗಾಗಲೇ ತಮಿಳು, ಹಿಂದಿಯಲ್ಲೂ ನಟಿಸಿದ್ದೇನೆ. ಯಾವ ಭಾಷೆಯಿಂದ ಒಳ್ಳೆಯ ಅವಕಾಶ ಸಿಗುತ್ತದೋ ಅಲ್ಲಿ ನಟಿಸುತ್ತೇನೆ. ಕನ್ನಡದಿಂದಲೂ ನನಗೆ ಆಫರ್ ಬಂದು ಪಾತ್ರ ಇಷ್ಟವಾದರೆ ಖಂಡಿತಾ ನಟಿಸುತ್ತೇನೆ.
* ಸದ್ಯ ನಿಮ್ಮ “ನೇನೇ ರಾಜ ನೇನೇ ಮಂತ್ರಿ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಪಾತ್ರ ಹೇಗಿದೆ?
ಇಲ್ಲಿ ನಾನು ಜೋಗೇಂದ್ರ ಎಂಬ ಪಾತ್ರ ಮಾಡಿದ್ದೇನೆ. ಸಖತ್ ರಗಡ್ ಆಗಿರುವಂತಹ ಪಾತ್ರ ತುಂಬಾ ಚೆನ್ನಾಗಿದೆ. ಪೊಲಿಟಿಕಲ್ ಬ್ಯಾಕ್ಡ್ರಾಪ್ನಲ್ಲಿ ನಡೆಯುವ ಕಥೆ ಇದು.
* ನಿಮ್ಮ ಮೊದಲ ಸಿನಿಮಾ “ಲೀಡರ್’ ಕೂಡಾ ಪೊಲಿಟಿಕಲ್ ಬ್ಯಾಕ್ಡ್ರಾಪ್ನಲ್ಲೇ ಇತ್ತು. ನಿಮಗೆ ರಾಜಕೀಯ ಆಸಕ್ತಿ ಹೆಚ್ಚಾ?
ಆ ತರಹ ಏನಿಲ್ಲ. ಆ ಪಾತ್ರವೇ ಬೇರೆ ಈ ಪಾತ್ರವೇ ಬೇರೆ. ನಾನು ರಾಜಕೀಯ ಹಿನ್ನೆಲೆ ಅಲ್ಲದೇ, “ದಿ ಘಜಿಯಾ ಅಟ್ಯಾಕ್’, “ಬೆಂಗಳೂರು ನಾಟ್ಕಲ್’ ತರಹದ ಸಿನಿಮಾನೂ ಮಾಡಿದ್ದೇನೆ. ಆದರೆ ಅದರ ಬಗ್ಗೆ ಯಾರು ಮಾತನಾಡೋದಿಲ್ಲ. ಅದೇ ರಾಜಕೀಯದ ಹಿನ್ನೆಲೆ ಪಾತ್ರ ಮಾಡಿದರೆ ಬೇಗನೇ ಗುರುತಿಸುತ್ತಾರೆ. ಯಾವುದೇ ಉದ್ದೇಶದಿಂದ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ಪಾತ್ರ ಇಷ್ಟವಾದರೆ ಮಾಡುತ್ತೇನೆ.
* ನಿಮ್ಮ ತಂದೆಯವರ ನಿರ್ಮಾಣದಲ್ಲಿ ಮೊದಲ ಬಾರಿಗೆ ನಟಿಸಿದ್ದೀರಿ. ಯಾಕೆ ಇಷ್ಟು ವರ್ಷ ನಟಿಸಿರಲಿಲ್ಲ?
ನಟಿಸಬಾರದೆಂದೇನಿರಲಿಲ್ಲ. ಸಾಕಷ್ಟು ಬಾರಿ ಚರ್ಚೆಯಾಗುತ್ತಿತ್ತು. ಆದರೆ ಅವರಿಗೆ ಇಷ್ಟವಾದರೆ ನನಗೆ ಇಷ್ಟವಾಗುತ್ತಿರಲಿಲ್ಲ. ನನಗೆ ಇಷ್ಟವಾದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸಿನಿಮಾ ಮಾಡಲಾಗಲಿಲ್ಲ. ಆದರೆ, ಈ ಸಿನಿಮಾದ ಕಥೆ ಇಬ್ಬರಿಗೂ ಇಷ್ಟವಾಯಿತು.
* ಹಾಫ್ಬೀಟ್ ಅಥವಾ ಬ್ರಿಡ್ಜ್ ಸಿನಿಮಾ ಬಂದರೆ ಮಾಡುತ್ತೀರಾ?
ಯಾವುದೇ ಸಿನಿಮಾವಾದರೂ ಜನರಿಗೆ ಮನರಂಜನೆ ನೀಡಬೇಕು. ನಾನು ಇಲ್ಲಿವರೆಗೆ ಮಾಡಿರುವ ಸಿನಿಮಾಗಳಲ್ಲಿ ಸಾಕಷ್ಟು ಕಥೆಗಳು ವಿಭಿನ್ನವಾಗಿವೆ. ಅವೆಲ್ಲವನ್ನು ಎಂಟರ್ಟೈನಿಂಗ್ ಆಗಿ ಮಾಡಿದ್ದೇವೆ ಅಷ್ಟೇ. ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ. ಅದು ಸಿಗಬೇಕು.
* ತೆಲುಗಿನ ಯಾವುದಾದರೂ ಕ್ಲಾಸಿಕ್ ಫಿಲಂನ ರೀಮೇಕ್ ಮಾಡಬೇಕಾದರೆ ಯಾವುದನ್ನು ಆಯ್ಕೆ ಮಾಡುತ್ತೀರಿ?
ಇಲ್ಲ, ಯಾವುದನ್ನು ಮಾಡೋದಿಲ್ಲ. ಕ್ಲಾಸಿಕ್ ಸಿನಿಮಾಗಳನ್ನು ನಾವು ಮುಟ್ಟಬಾರದು. ಅದನ್ನು ನೋಡಿ ಖುಷಿಪಡಲು ಬಯಸುತ್ತೇನೆ ಅಷ್ಟೇ.
* ಬೆಂಗಳೂರು ಬಗ್ಗೆ ಏನಂತಿರಿ?
ಬ್ಯೂಟಿಫುಲ್ ಸಿಟಿ. ನನ್ನ ಈ ಹಿಂದಿನ ಪ್ರತಿ ಸಿನಿಮಾಕ್ಕೂ ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮುಂದೆಯೂ ಅದೇ ಪ್ರೀತಿ ಇಲ್ಲಿನ ಜನರಿಂದ ಸಿಗುತ್ತದೆಂದು ನಂಬಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್ಲೈನ್ ಆಮಿಷಕ್ಕೆ ಮಾರುಹೋಗದಿರಿ
ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?