ಸತ್ಯಭಾಮ ಹೇಳ್ತಾರೆ ಗೇರುಪಾಠ


Team Udayavani, Jan 16, 2017, 3:45 AM IST

geru.jpg

ಇಲ್ಲಿದೆ ಆರೇಳು ತಳಿಗಳ ಗೇರು ಮರಗಳು. ಸಮೃದ್ಧ ಗೇರು ಕೃಷಿಗೆ ಮಾದರಿಯಾಗಿ ಈಗ ಎಲ್ಲ ಮರಗಳೂ ಹೂ, ಹಣ್ಣು, ಕಾಯಿಗಳಿಂದ ಕೊಂಬೆಗಳು ಬಾಗುತ್ತಿವೆ. ಇಂತಹ ಕೃಷಿಯನ್ನು ಮಾಡಿರುವವರು ಏಕಾಂಗಿ ಮಳೆ ಸತ್ಯಭಾಮಾ. ಬಂಟ್ವಾಳ ತಾಲೂಕಿನ ಮಂಚಿಯಲ್ಲಿದೆ ಅವರ ಸಾಧನೆಯ ಗೇರು ಕೃಷಿ.

ಐದು ವರ್ಷಗಳ ಹಿಂದೆ ಸತ್ಯಭಾಮಾ ಮೂರು ಎಕರೆ ಕಾಲಿ ಗುಡ್ಡದಲ್ಲಿ  ಗೇರು ಕೃಷಿ ಮಾಡಲು ಯೋಚಿಸಿದಾಗ ಪುತ್ತೂರಿನ ಗೇರು ಅಭಿವೃದ್ಧಿ ಮಂಡಳಿ ಮಾಹಿತಿ ಒದಗಿಸಿತು. ಕೃಷಿ ವಿಜಾnನಿ ಗಂಗಾಧರ ನಾಯಕ್‌ ಸ್ವತಃ ಸ್ಥಳಕ್ಕೆ ಬಂದು ಕೃಷಿಯ ಮಾರ್ಗದರ್ಶನ ಮಾಡಿದರು. ಐವತ್ತು ಸಾವಿರ ರೂ.ಗಳ ಸಹಾಯಧನವನ್ನೂ ಒದಗಿಸಿದರು. ಉಳ್ಳಾಲ, ಉಳ್ಳಾಲ-2, ಉಳ್ಳಾಲ-4, ಭಾಸ್ಕರ, ವೆಂಗೊರ್ಲ, ಆರ್‌ಐ ತಳಿಗಳ ಎಂಟು ನೂರು ಗಿಡಗಳ ನಾಟಿಯೂ ನಡೆಯಿತು.

ಗಿಡದಿಂದ ಗಿಡಕ್ಕೆ ಮೂರು ಮೀಟರ್‌ ಸಾಲಿನಿಂದ ಸಾಲಿಗೆ ಆರು ಮೀಟರ್‌ ಅಂತರ ವಿಡಲಾಗಿದೆ. ಜೂನ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಎರಡು ಕಂತುಗಳಾಗಿ ರಸಗೊಬ್ಬರ ಪೂರೈಸುವುದು.  ಕೆಳಭಾಗದ ಕೊಂಬೆ ಮತ್ತು ಮೇಲಿನ ಚಿಗುರನ್ನು ತೆಗೆದು ಗಿಡ ವಿಶಾಲವಾಗಿ ಹರಡುವಂತೆ ಮಾಡುವುದು ಕೃಷಿಯಲ್ಲಿ ಪ್ರತಿ ವರ್ಷವೂ ಪಾಲಿಸಲೇಬೇಕಾದ ನಿಯಮಗಳು.

ಮೊದಲನೆಯ ವರ್ಷವೇ ಗಿಡ ಹೂ ಬಿಟ್ಟಿದೆ. ಒಂದು ಕ್ವಿಂಟಾಲು ಕಚ್ಚಾ ಗೇರುಬೀಜ ದೊರಕಿದೆ ಎನ್ನುತ್ತಾರೆ ಸತ್ಯಭಾಮಾ. ನಾಲ್ಕನೆಯ ವರ್ಷ ಬಂದ ಫ‌ಸಲು ಹದಿನೈದು ಕ್ವಿಂಟಾಲು. ಈ ಸಲವೂ ಸಮೃದ್ಧವಾಗಿ ಹೂಗಳಿವೆ. ಮೂವತ್ತು ಕ್ವಿಂಟಾಲು ಫ‌ಸಲು ಬರಬಹುದು. ಮುಂದೆ ಸರಾಸರಿ ಒಂದು ಮರದಿಂದ ಹತ್ತು ಕಿಲೋ ಪ್ರಕಾರ ಎಂಭತ್ತು ಕ್ವಿಂಟಾಲು ಬೆಳೆ ಕೊಯ್ಯುವ ನಿರೀಕ್ಷೆ ಅವರದು. ಪ್ರತೀ ಮರಕ್ಕೂ 900 ಗ್ರಾಮ್‌ ಯೂರಿಯಾ, 150 ಗ್ರಾಮ್‌ ಪೊಟಾಷ್‌, 300 ಗ್ರಾಮ್‌ ರಾಕ್‌ ಫಾಸೆ#àಟ್‌ ಗೊಬ್ಬರಗಳನ್ನು ಎರಡು ಕಂತುಗಳಾಗಿ ಪೂರೈಸುತ್ತಾರೆ. ಹೂ ಬಿಡುವ ಸಮಯದಲ್ಲಿ ಟಿ ಸೊಳ್ಳೆ ಮತ್ತು ಚಿಗುರಿನ ರಸ ಹೀರುವ ಕೀಟಗಳ ನಿಯಂತ್ರಣಕ್ಕೆ ಕರಾಟೆ ಎಂಬ ಸಸ್ಯ ಸ್ನೇಹಿ ಔಷಧವನ್ನು ಸಿಂಪಡಿಸುತ್ತಾರೆ.

ಮೂರು ಸಲ ಔಷಧ ಸಿಂಪಡನೆ ಅನಿವಾರ್ಯ. ಇಬ್ಬನಿ ಮತ್ತು ಮೋಡ ಹೆಚ್ಚಿದ್ದರೆ ಇನ್ನೊಂದು ಸಲ ಸಿಂಪಡಿಸುವುದು ಅಗತ್ಯವಂತೆ. ಈ ಔಷಧ ಇಂಡೋಸಲ್ಫಾನ್‌ನಂತೆ ಜೇನ್ನೊಣಗಳಿಗೆ, ಇತರ ಜೀವಿಗಳಿಗೆ ಹಾನಿಕರವಲ್ಲ ಎನ್ನುತ್ತಾರೆ ಸತ್ಯಭಾಮಾ.

ಇನ್ನು ಗೇರು ತೋಟದಲ್ಲಿ ಕಾಡುಕಂಟಿಗಳಿಲ್ಲ. ಉದುರಿದ ಹಣ್ಣುಗಳನ್ನು ಆಯ್ದುಕೊಳ್ಳಲು ಸುಲಭವಾಗಿದೆ. ಸತ್ಯಭಾಮಾ ಅವರು ಗೇರು ಹಣ್ಣುಗಳಿಂದ ತಯಾರಿಸಿದ ಹಲ್ವ ಮತ್ತು ಷರಬತ್ತು ಯಾವುದರಿಂದ ತಯಾರಿಸಿದ್ದು ಎಂದು ತಿಳಿಯದಷ್ಟು ರುಚಿಕರವಾಗಿದ್ದವು. ಗೇರು ಮಂಡಳಿಯ ಸಭೆಗಳಲ್ಲಿ ಅವರ ಈ ತಯಾರಿಕೆಗಳನ್ನು ಅತಿಥಿಗಳಿಗೂ ಹಂಚಿದ್ದಾರೆ. ಗೇರು ಹಣ್ಣುಗಳಿಗೂ ಉತ್ತಮ ಗಿರಾಕಿ ಇದೆ. ಕಳೆದ ವರ್ಷ ಕಚ್ಚಾ ಬೀಜಕ್ಕೆ ಕಿಲೋಗೆ 117 ರೂ. ಗಳ ಗರಿಷ್ಠ ದರ ಸಿಕ್ಕಿದೆ. ಈ ವರ್ಷ 30 ಕ್ವಿಂಟಾಲು ಬೆಳೆ ಕೈಗೆ ಬರುವ ನಿರೀಕ್ಷೆ ಇದೆ. ಸತ್ಯಭಾಮಾ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಒಬ್ಬನೇ ಮಗ ಬೆಂಗಳೂರಿನಲ್ಲಿ ಎಂಜಿನಿಯರ್‌. ಆದರೂ ಕೃಷಿಯಿಂದಲೇ ಮಕ್ಕಳ ಶ್ರೇಯಸ್ಸನ್ನು ಸಾಧಿಸಿರುವ ಅವರು ಹತ್ತು ಮಿಶ್ರ ತಳಿಯ ದನಗಳನ್ನು ಸಾಕಿ ದಿನಕ್ಕೆ ಎಂಭತ್ತು ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದಾರೆ. ಮಂಚಿ ಹಾಲು ಸಂಘಕ್ಕೆ ಹಾಲು ಪೂರೈಸುವವರಲ್ಲಿ ದ್ವಿತೀಯ ಸ್ಥಾನ ಗಳಿಸಿ ಸನ್ಮಾನವನ್ನು ಪಡೆದಿದ್ದಾರೆ. ಗೇರು ಮಂಡಳಿ ಕೂಡ ಅವರ ಸಾಧನೆಗೆ ಗೌರವ ಸಲ್ಲಿಸಿದೆ. ಕಸಿ ತಳಿಯ ಇನ್ನೊಂದು ವೈಶಿಷ್ಟ್ಯವೆಂದರೆ ಬಹು ಬೇಗನೆ ವರ್ಷದ ಫ‌ಸಲು ಸಿಗುತ್ತದೆಯಂತೆ. ಮಾಹಿತಿಗೆ  8971284717. ರಾತ್ರಿ 7ರಿಂದ 8. 

– ಪ. ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.