ಮನೆಯ ಅಂದಕ್ಕೆ ಕೆಲವು ಸಲಹೆಗಳು ಬೇಕೇ ಬೇಕು..


Team Udayavani, Mar 27, 2017, 12:46 PM IST

tulasi.jpg

ಇಂತಿಂಥ ದಿಕ್ಕಿನಲ್ಲಿ ಇಂತಿಂಥದ್ದನ್ನೇ ರಚಿಸಿಕೊಂಡು ಹೋಗುವುದು ಸರಿಯೇ. ಆದರೆ ಕೆಲವರು ಅಲ್ಲಿಗೆ ವಾಸ್ತು ಶುದ್ಧಿಗೆ ಅವಶ್ಯಕವಾದ ವಿಚಾರಗಳನ್ನು ಮಾಡಿ ಮುಗಿಸಿದರಾಯ್ತು. ಎಂದು ನಿರಾಳವಾಗುತ್ತಾರೆ. ಆದರೆ ಸಂಯೋಜಿಸಲ್ಪಟ್ಟ ವ್ಯವಸ್ಥೆಗಳು ಕೆಲ ಶಿಸ್ತುಬದ್ಧವಾದ ಆವರಣಗಳೊಂದಿಗೆ ಅಂದಗೊಂಡಿರುವುದೂ ಮುಖ್ಯ.

ಮನೆಯನ್ನು ಕಟ್ಟುವಾಗ ದಿಕ್ಕುಗಳ ಕುರಿತಾದ ಎಚ್ಚರ ಕಾಳಜಿಗಳನ್ನು ಚೆನ್ನಾಗಿ ಹೊಂದಿ ಇಂತಿಂಥ ದಿಕ್ಕಿನಲ್ಲಿ ಇಂತಿಂಥದ್ದನ್ನೇ ರಚಿಸಿಕೊಂಡು ಹೋಗುವುದು ಸರಿಯೇ. ಆದರೆ ಕೆಲವರು ಅಲ್ಲಿಗೆ ವಾಸ್ತು ಶುದ್ಧಿಗೆ ಅವಶ್ಯಕವಾದ ವಿಚಾರಗಳನ್ನು ಮಾಡಿ ಮುಗಿಸಿದರಾಯ್ತು. ಎಂದು ನಿರಾಳವಾಗುತ್ತಾರೆ. ಆದರೆ ಸಂಯೋಜಿಸಲ್ಪಟ್ಟ ವ್ಯವಸ್ಥೆಗಳು ಕೆಲ ಶಿಸ್ತುಬದ್ಧವಾದ ಆವರಣಗಳೊಂದಿಗೆ ಅಂದಗೊಂಡಿರುವುದೂ ಮುಖ್ಯ. ಉದಾಹರಣೆಗೆ ಮನೆಯ ಆಗ್ನೇಯದಲ್ಲಿ ಪೂರ್ವದಿಕ್ಕನ್ನು ಬಳಸಿಕೊಂಡು ಉತ್ತಮ ಅಡುಗೆ ಮನೆಯನ್ನು ರೂಪಿಸಿರುತ್ತಾರೆ. ಆದರೆ ಅಡುಗೆ ಮನೆಯನ್ನು ಶೂಚಿಯಾಗಿಟ್ಟು ಕೊಳ್ಳುವ ಕ್ರಮದಲ್ಲಿ ವಿಫ‌ಲರಾಗುತ್ತಾರೆ. ದುರ್ಗಾಸೂಕ್ತದಲ್ಲಿ ಒಂದು ಮಾತು ಬರುತ್ತದೆ. ತಾಮಗ್ನಿ ವರ್ಣಾಂ ತಪಸಾಜ್ವಂತೀ ದುರ್ಗೆಯ ಬಣ್ಣ ಬೆಂಕಿಯ ಬಣ್ಣ. ಬೆಂಕಿಯೋ ಬೆಳಕೋ ಬೇರೆ ಯಾರೂ ಅಲ್ಲ ಅದು ಸಾûಾತ್‌ ದುರ್ಗೆ. ಇಂಥ ದುರ್ಗೆ ಮನೆಯ ಅಡುಗೆ ಮನೆಯಲ್ಲಿ ನಮ್ಮ ಅನ್ನದ ರುಚಿಗಾಗಿ ಬೇಯುವಿಕೆಗೆ ಒದಗಿ ಬರುತ್ತಾಳೆ. ಅಡುಗೆ ಮನೆ ದುರ್ಗೆಯ ಸ್ಥಾನ. ಇಂಥ ದುರ್ಗೆ ಶ್ರೀ ವಲ್ಲಭನಾದ ಮಲಬೋಧ ಸ್ವತ್ಛತೆಯನ್ನು ಬೋಧಿಸುವ ಘನವಂತಿಕೆಯ ವಿಷ್ಣುವಿನ ಸಹೋದರಿ. ಕಾಣಿಸುವ ವಿಶ್ವದ ಒಳಗೂ ಹೊರಗೂ ವ್ಯಾಪಿಸಿದ ಅನಂತಮೂರ್ತಿಯ ಸಹೋದರಿ.ಇಂಥವಳು ಇರುವ ಜಾಗೆಯಾದ ಅಡುಗೆ ಮನೆಯನ್ನು ವಾಸ್ತು ಶಿಸ್ತಲ್ಲಿ ಕಟ್ಟಿಸಿರಬೇಕು. ಆದರೆ ಅದನ್ನು ಶುಚಿಯಾಗಿ ಇಟ್ಟುಕೊಳ್ಳುವ ಜನ ಕಡಿಮೆ. ಕೆಟ್ಟ ಕೊಳೆತ ತರಕಾರಿ ತ್ಯಾಜ್ಯಗಳ ವಾಸನೆ ತುಂಬಿರುತ್ತದೆ. ನೀರು ಚೆಲ್ಲಿರುತ್ತದೆ. ಹಳೆಯ ಜಿಡ್ಡುಗಳು ತುಂಬಿರುತ್ತದೆ. ಇಲ್ಲಿ ದುರ್ಗೆಯು ಶುಚಿಯಾಗಿ ನಿಲ್ಲಲಾರಳು. 

ಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ಬಗೆಯ ಸಸ್ಯಗಳನ್ನು ಬೆಳೆಸಲು ಮನೆಯೊಳಗೂ ಸೌಂದರ್ಯವರ್ಧನೆಯ ನೆಪದಲ್ಲಿ ಮನೆಯೊಳಗೂ ಬೆಳೆಸಲು ಹೋಗಬೇಡಿ. ನಿಮ್ಮ ಸಂವರ್ಧನೆಯ ಬಗೆಗಿನ ಚೈತನ್ಯ ಉತ್ತರ ದಿಕ್ಕಿನಿಂದ ಸಿಗಬೇಕು. ಇಂಥದೊಂದು ಚೈತನ್ಯವನ್ನು ಸಸ್ಯಗಳು ಕಬಳಿಸಬಾರದು. ಹೊರಗೆ ಪ್ರಧಾನವಾದ ಪ್ರವೇಶದ್ವಾರಕ್ಕೆ ಕಾಲು ಹಾಕಿ ಮಲಗಬಾರದು. ಒಳ್ಳೆಯ ಫ‌ಲಗಳು ಮನೆಯನ್ನು ಪ್ರವೇಶಿಸುವುದನ್ನು ತಡೆದುಬಿಡುತ್ತದೆ. ಮನೆಯಲ್ಲಿ ಒಡೆದ ಕನ್ನಡಿಗಳಾಗಲೀ ಒಡೆದ ನುಗ್ಗಿ ಜಗ್ಗಿ ಮುದುಡಿದ ಪಾತ್ರಗಳಾಗಲೀ ಇರಬಾರದು. ಕಸದ ರಾಶಿ ಬಳಕೆಯಾಗದ ವಸ್ತುಗಳು ಎಂದೋ ಬೇಕು ಎಂಬುದಕ್ಕೆ ಇಡಲಾದ ಅಡ್ಡಾದಿಡ್ಡಿ ಸರಕುಗಳು ಪ್ರಮುಖವಲ್ಲದ ಜಾಗಗಳಲ್ಲಿ ಶಿಸ್ತಾಗಿ ಕಟ್ಟಿ ಇಡಬೇಕು. ಕಸದ ಬಳಕೆಯಾಗದ ಗಂಟು ಮನೆಯಿಂದ ಹೊರಕ್ಕೆ ಸಾಗಿಸಬೇಕು. ಇಲ್ಲದಿದ್ದರೆ ಮನೆಯ ಸಕಾರಾತ್ಮಕ ಪಂಚಭೂತಾತ್ಮಕ ಸಿದ್ಧಿ ವಲಯಕ್ಕೆ ತೊಂದರೆ ಸಾಧ್ಯ.

ಮನೆಯ ಉತ್ತರ ದಿಕ್ಕು ಕಿಕ್ಕಿರಿದು ತುಂಬಿರಬಾರದು. ಪೂರ್ವಕ್ಕೆ ಬೆಳಕಿರಬೇಕು. ಈಶಾನ್ಯವು ಮನೆಯ ಇತರ ಭಾಗಗಳಿಗಿಂತ ಬೆಳೆದು ವಿಸ್ತಾರ ಒದಗಿರಬೇಕು. ಚಪ್ಪಲಿಯ ಗೂಡು ನೀಟಾಗಿರಬೇಕು. ಚೆಪ್ಪಲಿ, ಶು, ಸಾಕ್ಸ್‌ಗಳ ಸಂತೆಯಂತಿರಬಾರದು. ಉತ್ತರದಿಕ್ಕು ಸರಳವಾದ ಸೌಂದರ್ಯದಿಂದ ವಂಚಿತಗೊಂಡರೆ ಮಾಡುವ ಕೆಲಸಕ್ಕೆ ತೊಂದರೆ. ಇಲ್ಲಾ ಕೆಲಸವೇ ಸಿಗದಿರುವ ದುರ್ಭರತೆ ಎದುರಾಗುತ್ತದೆ. ಪ್ರತಿ ಕೋಣೆಯಲ್ಲೂ ಕೋಣೆಯ ಉತ್ತರ ದಿಕ್ಕು ಪ್ರಕಾಶಮಯವಾಗಿ ಇರಲೇ ಬೇಕು. ಮನೆಯ ಯಜಮಾನ ಮಲಗುವ ಕೋಣೆ ಮನೆಯ ನೈರುತ್ಯದಲ್ಲಿ ಸಂಯೋಜನೆಯಾಗಿದ್ದರೆ ಒಳಿತು. ಮಲಗುವ ಕೋಣೆಯ ಜಲದ ವಿಚಾರದಲ್ಲಿ ಎಚ್ಚರ ಹೊಂದಿರಬೇಕು. ನೀರು ಇರಬಾರದು. ಆಲಪಾತದ ಚಿತ್ರಗಳೂ ಇರಬಾರದು. ಊಟದ ಮುಖ್ಯ ಟೇಬಲ್‌ ಮೇಲೆ ಬಣ್ಣಬಣ್ಣದ ಚಿತ್ತಾರಕ್ಕಿಂತ ಒಂದೇ ಬಣ್ಣದಿಂದ ದುಂಡು ಆಕೃತಿ ಪಡೆದಿದ್ದರೆ ಉತ್ತಮ. ಪಚನಕ್ರಿಯೆಗೆ ಪರಿಪೂರ್ಣವಾದ ಸಂಪನ್ನ ಚಕ್ರ ಲಭ್ಯವಾಗುತ್ತದೆ. ಸಂಡಾಸಿನ ಕೋಣೆಯಲ್ಲಿ ಕಲ್ಲುಪ್ಪನ್ನು ಒಂದು ಪುಟ್ಟ ತಟ್ಟೆಯಲ್ಲಿ ಹಾಕಿ ಇಡಿ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಕಡಿಮೆಯಾಗುತ್ತದೆ. 

– ಅನಂತಶಾಸ್ತ್ರಿ

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.