ನಿಮ್ಮ ವಾಸ್ತುದೋಷ ನಿವಾರಣೆ ಇವರಿಂದ ಮಾತ್ರ ಸಾಧ್ಯ


Team Udayavani, Jun 19, 2017, 5:50 PM IST

vastu.jpg

ಭೂ ವರಾಹ ಸ್ವಾಮಿಯು ಮನೆಯ ವಾಸ್ತು ದೋಷವನ್ನು ನಿವಾರಿಸುವಲ್ಲಿ ಒಳ್ಳೆಯ ಫ‌ಲ ಕೊಡುತ್ತಾನೆ. ವರಾಹ ಸ್ವಾಮಿ
ಎಂದರೆ ಬೇರೆ ಯಾರೂ ಅಲ್ಲ. ಶ್ರೀಮನ್ನಾರಾಯಣನೇ ಭೂ ವರಾಹ ಸ್ವಾಮಿ. ಅವನೇ ಮಹಾ ವಿಷ್ಣು. ವಿಶ್ವದ ಸಂಬಂಧವಾಗಿ ಭೂಮಿಯ ಸಂಬಂಧವಾಗಿ ವಿಷ್ಣುವಿನ ಪಾತ್ರರಕ್ಷಣೆಯ ವಿಚಾರವಾಗಿ ಬಹಳ ಪ್ರಧಾನವಾದದ್ದು. ಭೂಮಿ ಎಂದರೆ ಸಾûಾತ್‌ ಲಕ್ಷಿà. 

ಧಾರಿಣೀಯೇ ಇವಳು. ನಮ್ಮೆಲ್ಲರ ಭಾರವನ್ನು ಹೊರುತಿರುವ, ಹೊತ್ತರೂ ಸಹನೆ ಕಳೆದುಕೊಳ್ಳದ ಇವಳು ಆಹಾರವನ್ನೂ ವಜ್ರವೈಢೂರ್ಯದಂಥ ಅಪಾರ ಕಾಂತಿ ರತ್ನರಾಶಿಗಳನ್ನೂ ಅನೇಕ ರೀತಿಯ ನಮಗೆ ಅವಶ್ಯವಿರುವ
ಲೋಹಗಳನ್ನು ಬಂಗಾರ ಬೆಳ್ಳಿಯಂಥ ಬೆಲೆಬಾಳುವ ವಸ್ತುಗಳನ್ನು ಒದಗಿಸುತ್ತಾಳೆ. ನಾವು ನಡೆಸುವ ಎಲ್ಲಾ ರೀತಿಯ ಪ್ರಕೃತಿಯ ಮೇಲೆ ಅಂತಜಾìಲಕ್ಕಾಗಲೀ, ಗಣಿಗಾರಿಕೆಯ ಸಂಬಂಧವಾಗಿರಲಿ, ಕಟ್ಟಡಗಳ ರಚನೆಗಾಗಿರಲಿ, ಸಸ್ಯ ಸಂಪತ್ತಿನ ಲೂಟಿಯನ್ನೇ ನಡೆಸುತ್ತಿರುವುದಾಗಲೀ, ನಿರಂತರವಾಗಿ ನಡೆಸುವ ದೌರ್ಜನ್ಯಗಳನ್ನು ಸಹನೆಯಿಂದ ಸಹಿಸಿಕೊಳ್ಳುತ್ತಿದ್ದಾಳೆ. ಒಂದು ಮಿತಿಯ ನಂತರ ನಾಶಕ್ಕೆ ಆಕೆ ಸಹಜವಾಗಿಯೇ ಏನನ್ನೂ ಮಾಡಲಾಗದ ಅಸಹಾಯಕತೆಗೆ ತುತ್ತಾಗಬಲ್ಲಳು. ಈಗಾಗಲೇ ಇದನ್ನು ನಾವು ಮನಗಾಣುತ್ತಿದ್ದೇವೆ.

ಭೂವರಾಹ ಸ್ವಾಮಿಯಿಂದ ಭೂಮಿಯ ರಕ್ಷಣೆ ಹಿರಣ್ಯ ಕಶಪುವಿನ ತಮ್ಮ ಹಿರಣ್ಯಾಕ್ಷ ಹರಿಯ ದ್ವೇಷಿ. ಒಮ್ಮೆ ವಿಷ್ಣು
ಪತ್ನಿಯಾದ ಭೂ ದೇವಿಯನ್ನು ಚಾಪೆಯಂತೆ ಸುತ್ತಿ, ಲಪಟಾಯಿಸುವ ಸಲುವಾಗಿ ದೌರ್ಜನ್ಯ ನಡೆಸಲು ಮುಂದಾದಾಗ ಮಹಾವಿಷ್ಣುವು ವರಾಹ ರೂಪದಲ್ಲಿ ಅಂದರೆ ಹಂದಿಯ ರೂಪದಲ್ಲಿ ಬಂದು ಭೂದೇವಿಯನ್ನು ಸಂರಕ್ಷಿಸುತ್ತಾನೆ. ಇಷ್ಟೇ ಅಲ್ಲ, ಹಿರಣ್ಯಾಕ್ಷನನ್ನು ತನ್ನ ಹರಿತವಾದ ಕೋರೆ ುಂದ ಸಿಗಿದು ಕೊಲ್ಲುತ್ತಾನೆ. ತನ್ನ ಪ್ರೀತಿಯ ಪತ್ನಿ ಲಕ್ಷಿ$¾ ಸ್ವರೂಪಳಾದ ಭೂಮಿಗೆ ಬಂದ ಕುತ್ತನ್ನು ತಪ್ಪಿಸುತ್ತಾನೆ. ಇದು ವಿಷ್ಣು ಪುರಾಣದ ಕತೆ.

ಒಟ್ಟಿನಲ್ಲಿ ಭೂದೇವಿಗೆ ಆತಂಕ ಬಂದಾಗಲೆಲ್ಲಾ ವಿಷ್ಣುವಿನ ರಕ್ಷೆ ಇದೆ. ನಾವು ಭೂದೇವಿಯ ಮಕ್ಕಳು. ನಾವೇ ಈಗ ಮಕ್ಕಳಂತೆ ವರ್ತಿಸುವುದು ಬಿಟ್ಟು ಹಿರಣ್ಯಾಕ್ಷ ಎಂಬ ಅಸುರನಂತೆ ಭೂಮಿಯನ್ನು ಹಿಂಸಿಸುತ್ತಿದ್ದೇವೆ. ನಮ್ಮ ನಾಶಕ್ಕೆ ನಾವೇ ಗೋರಿಗಳನ್ನು ತೋಡುತ್ತಿದ್ದೇವೆ. ಭೂಮಿಯ ಧಾರಣ ಶಕ್ತಿ ಸವಕಳಿಯಾಗಿ ಭೂಕಂಪನಗಳು ಒಂದು ಮಿತಿಯನ್ನು ದಾಟಿ ಅಪಾಯದ ಗಂಟೆ ಭಾರಿಸುತ್ತಿದೆ. ಸುರಕ್ಷಿತ ವಲಯದಲ್ಲಿದ್ದ ಬೆಂಗಳೂರು ಕೂಡಾ ಕ್ಷಿಪ್ರವಾಗಿ ಪರಿವರ್ತನ ಗೊಳ್ಳುತ್ತಾ ಸಹಜವಲ್ಲದ ಭೂಕಂಪನವನ್ನು ಅನುಭಸುತ್ತಿದೆ. ಈಗೊಂದು ತಿಂಗಳ ಹಿಂದೆ ಕಾರಣವೇ ಇರದೆ ಬೆಂಗಳೂರು, ಮಂಡ್ಯ, ಚನ್ನಪಟ್ಟಣಗಳು ಕೊಂಚ ಕಂಪಿಸಿತ್ತು. ಕಾಡು ಕಡಿದಿದ್ದೇವೆ. ಭೂಮಿಯನ್ನು ಮಿತಿಮೀರಿ ತೋಡುತ್ತಿದ್ದೇವೆ. ಅಂತರ್ಜಲ ಬಾಚುತ್ತಿದ್ದೇವೆ. ನಾಶಕ್ಕೆ ಇನ್ನೇನು ಬೇಕಾಗಿದೆ. ಬೆಂಗಳೂರನ್ನೇ ಗಮನಿಸಿ.
ಎಲ್ಲಿ ಬೇಕಾದಲ್ಲಿ ಮನೆ ಅಪಾರ್‌rಮೆಂಟ್‌ ವಾಸ್ತು ವಿಚಾರಗಳು ಮನಸ್ಸಿಗೆ ಬಂದ ಹಾಗೆ ಕಲಸುಮೇಲೋಗರ. ಹಣವಿದ್ದರೂ ಸುಖವಿಲ್ಲ. ಹಣ ಇರದಿದ್ದರೂ ಸುಖವಿಲ್ಲ.

ವಾಸ್ತು ದೋಷ ಛೇದನಕ್ಕೆ ಭೂವರಾಹ ಸ್ವಾಮಿ ಸಾಧಕರು, ಆರಾಧಕರು ಕೆಲವು ವಿಶೇಷ ಶಕ್ತಿಯನ್ನು ಪಡೆದಿರುತ್ತಾರೆ. ಶಕ್ತಿ ದೇವತೆಗಳಾದ ರಾಜ ರಾಜೇಶ್ವರಿ, ಗಣಪತಿ, ಮಾರುತಿ, ದತ್ತಾತ್ರೇಯ ಆರಾಧನೆ ಇವೆಲ್ಲಾ ರಾಮರûಾ ಸ್ತೋತ್ರ ಸಿದ್ದಿ – ಇತ್ಯಾದಿಗಳಿಂದ ವಿಶೇಷವಾದ ಪಾಸಿಟಿವ್‌ ಪವರ್‌ ಸಂಪಾದಿಸಿಕೊಂಡ ಅವಧೂತರುಗಳು ನಮ್ಮ ನಡುವೆ ಇದ್ದಾರೆ. ಅವಧೂತ ಶಕ್ತಿ ಹಾಗೆ ಯಾರು ಯಾರಿಗೋ ಸಿದಿಟಛಿಸುವುದಿಲ್ಲ. ಅವಧೂತರು ತಾವು ಎಂದು ಹೇಳಿಕೊಳ್ಳುವ ಜನ ಢೋಂಗಿತನ ತೋರಿಸುವ ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡುತ್ತಾರೆ. ಆದರೆ ಸೂಕ್ತವಾದ ಶಕ್ತಿ ಇರುವವರು ಒಂದು ವಿಶೇಷವಾದ ಶಕ್ತಿ ತುಂಬಿ ಪರಾಶಕ್ತಿಯನ್ನು ಅನಾವರಣಗೊಳಿಸುತ್ತಾರೆ. ಎಷ್ಟೇ ಹೆಣಗಾಡಿದರೂ ವಾಸ್ತುವಿನ ವಿಚಾರ ಯಾವುದೇ ಮನೆ, ವಸತಿ, ಸಮುತ್ಛಯ, ಸಂಕೀರ್ಣ ವಾಸ್ತು ದೋಷಗಳಿಂದ ಮುಕ್ತವಾಗಿರುವುದಿಲ್ಲ. ಇಂಥ
ಸಂದರ್ಭದಲ್ಲಿ ಭೂವರಾಹಸ್ವಾಮಿಯು ಅನುಗ್ರಹಪೂರ್ವಕ ಉಪಸ್ಥಿತಿ ವಾಸ್ತುದೋಷಗಳನ್ನು ಕರಗಿಸುತ್ತದೆ. ಸಂಗಡ ಸ್ವಾಮಿಯ ಬಗೆಗಿನ ಸೂಕ್ತ ಧ್ಯಾನ, ಅನುಷ್ಠಾನಗಳು ಆಗಬೇಕು. ದೇವಿಯು ಇಡೀ ಜಗತ್ತನ್ನು ಹೊತ್ತು ಜಗತ್ತೇ ಅವಳಾಗಿರುವಾಗ, ಅವಳನ್ನು ಯುಗಂಧರಾ ಎಂದು ಕರೆಯಲ್ಪಡುತ್ತಾಳೆ. ಅವಳನ್ನು ಸಂರಕ್ಷಿಸುವ ವಿಷ್ಣುವೇ ವಾಸ್ತುದೋಷವನ್ನು ನಿವಾರಣೆ ಮಾಡುತ್ತಾನೆ.

– ಅನಂತಶಾಸ್ತ್ರಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.