ಓನ್ಲಿ ಪ್ಲಸ್‌ ನೋ ಮೈನಸ್‌ ! ಗಣಿತ ಮೇಷ್ಟ್ರ ಕೃಷಿ ಲೆಕ್ಕಾಚಾರ


Team Udayavani, Jul 17, 2017, 2:45 AM IST

plus.jpg

ಮಲ್ಯ ಮೇಸ್ಟ್ರೆ ಎಂದೇ ಮಂಗಳೂರಿನಲ್ಲಿ ಹೆಸರಾಗಿರುವ ಎಸ್‌. ಗಣೇಶ್‌ ಮಲ್ಯರು ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಸರಳ ಪಾಠಗಳ ಮೂಲಕ ಗಣಿತದ ಸಾಗರದಲ್ಲಿ ಈಜಲು ಕಲಿಸಿದವರು. ಮೂವತ್ತಮೂರು ವರ್ಷ ಮಂಗಳೂರಿನ ಎರಡು ಶಾಲೆಗಳಲ್ಲಿ ಗಣಿತದ ಪಾಠ ಮಾಡಿ ನಿವೃತ್ತರಾಗಿ ಈಗ ಪೂರ್ಣಾವಧಿ ಕೃಷಿಯಲ್ಲಿ ತೊಡಗಿದವರು.

ಮಂಗಳೂರು – ಕಾರ್ಕಳ ಹೆ¨ªಾರಿಯಲ್ಲಿ ಸಾಗುವಾಗ, ಗುರುಪುರ – ಕೈಕಂಬ ದಾಟಿದಾಗ ಸಿಗುವ ತೆಂಕ ಎಡಪದವು ಗ್ರಾಮದ ರಸ್ತೆ ಪಕ್ಕದÇÉೇ ಇದೆ ಅವರ 37 ಸೆಂಟ್ಸ್‌ ಜಮೀನು. ಅಲ್ಲಿ ಅವರು 1996ರಲ್ಲಿ ಜಮೀನು ಖರೀದಿಸಿದಾಗ ಹುಬ್ಬೇರಿಸಿದವರು ಹಲವರು. ಮಂಗಳೂರಿನ ಕದ್ರಿಯ ಸ್ವಂತ ಮನೆಯಲ್ಲಿ ನೆಮ್ಮದಿಯಾಗಿ ಇರುವುದು ಬಿಟ್ಟು, ಇಲ್ಲಿಗೆ ಬಂದು ಕಷ್ಟ ಪಡುವುದು ಏಕೆಂದು ಪ್ರಶ್ನೆ ಮಾಡಿದವರು ಕೆಲವರು.

ಈಗ ಮಲ್ಯರಿಗೆ ಕೃಷಿಯೇ ವೃತ್ತಿ. ಪ್ರತಿ ದಿನ ಮುಂಜಾನೆ ಐದು ಗಂಟೆಗೆ ಎದ್ದು, ಏಳು ಗಂಟೆಗೆ ಮುಂಚೆ ತಮ್ಮ ಆಹಾರ ಸಿದ್ಧಪಡಿಸಿಕೊಳ್ಳುತ್ತಾರೆ. ಅನಂತರ, ಮಧ್ಯಾಹ್ನ ಊಟದ ಹೊತ್ತಿನ ತನಕ ತೋಟದಲ್ಲಿ ಕೆಲಸ. ಅವರು ಬೀಜ ಬಿತ್ತಿ, ಗಿಡ ನೆಟ್ಟು ಅದರ ಪಾಡಿಗೆ ಅದನ್ನು ಬಿಡುವವರಲ್ಲ. ಪ್ರತಿಯೊಂದು ಮೊಳಕೆಯನ್ನೂ ಗಿಡವನ್ನೂ ಕಾಳಜಿಯಿಂದ ಬೆಳೆಸುವವರು.

ಆದ್ದರಿಂದಲೇ, ಸಾಮಾನ್ಯವಾಗಿ ಒಂದು ಎಕರೆ (100 ಸೆಂಟ್ಸ್‌)ಯಲ್ಲಿ ಬೆಳೆಸುವಷ್ಟು ಗಿಡಮರಗಳನ್ನು ಕೇವಲ 37 ಸೆಂಟ್ಸ್‌ ಜಾಗದಲ್ಲಿ ಬೆಳೆಸಲು ಅವರಿಗೆ ಸಾಧ್ಯವಾಗಿದೆ. ಹದಿನೆಂಟು ಹಲಸಿನ ಮರಗಳು ಮತ್ತು ಹತ್ತು ಮಾವಿನ ಮರಗಳು ಇವರ ತೋಟದ ದೊಡª ಮರಗಳು. ತೆಂಗು, ಪುನರ್ಪುಳಿ ಮರಗಳು, ಪಪ್ಪಾಯಿ, ಕೊಕ್ಕೋ ಗಿಡಗಳು, ಬಿದಿರು ಮತ್ತು ಬೆತ್ತ ಅಲ್ಲಲ್ಲಿ ಇವೆ. ಹಲವು ಮರಗಿಡಗಳಿಗೆ ಹಬ್ಬಿವೆ ಕರಿಮೆಣಸಿನ ಬಳ್ಳಿಗಳು. ಹರಿವೆ, ಬಸಳೆ, ಬದನೆ, ತೊಂಡೆ, ಬೆಂಡೆ, ನುಗ್ಗೆ, ಪಾಲಕ್‌ ಇತ್ಯಾದಿ ತರಕಾರಿಗಳು ಸೊಂಪಾಗಿ ಬೆಳೆದಿವೆ.

ಅವರ ಪುಟ್ಟ ತೋಟದಲ್ಲಿ ಎತ್ತ ನೋಡಿದರೂ ದಟ್ಟ ಹಸುರು. ಇದಕ್ಕೆ ಮುಖ್ಯ ಕಾರಣ ಮರಗಿಡಬಳ್ಳಿಗಳಿಗೆ ಅವರು ಒದಗಿಸುವ ಗೊಬ್ಬರ. 37 ಸೆಂಟ್ಸ್‌ ಜಾಗದಲ್ಲಿವೆ ಹತ್ತು ಕಾಂಪೋಸ್ಟ್‌ ಡ್ರಮ್ಮುಗಳು. ಅವರು ಕಾಂಪೋಸ್ಟ್‌ ಮಾಡುವ ವಿಧಾನ: ಹಣ್ಣು, ತರಕಾರಿಗಳ ಸಿಪ್ಪೆ, ಕಳೆಗಿಡಗಳು, ಕಸಕಡ್ಡಿ ಇವನ್ನೆಲ್ಲ ಡ್ರಮ್ಮಿಗೆ ಹಾಕಿ, ಅನಂತರ ಬೆವೇರಿಯ ಹಾಕುವುದು. ಹೀಗೆ ತಯಾರಾದ ಕಾಂಪೋಸ್ಟನ್ನು ಪ್ರತಿಯೊಂದು ಮರ ಹಾಗೂ ಗಿಡಕ್ಕೆ ಹಾಕುತ್ತಾರೆ. ಇದಲ್ಲದೆ, ಪ್ರತಿಯೊಂದು ತೆಂಗಿನಮರಕ್ಕೆ  ಅವರು ಹಾಕುವ ಬೇವಿನಹಿಂಡಿಯ ಪ್ರಮಾಣ ವರುಷಕ್ಕೆ ನಾಲ್ಕು ಕಿಲೋಗ್ರಾಮ…. 
ಗಣೇಶ ಮಲ್ಯರು ಖರೀದಿಸಿದ ಜಮೀನಿನಲ್ಲಿ ನೀರಿನಾಸರೆ ಇರಲಿಲ್ಲ. ಮರಗಿಡಗಳಿಗೆ ನೀರುಣಿಸಲಿಕ್ಕಾಗಿ 45 ಅಡಿ ಆಳ, 9 ಅಡಿ ವ್ಯಾಸದ ಬಾವಿ ತೋಡಿಸಿದರು. ಆದರೆ ಬೇಸಿಗೆಯಲ್ಲಿ ಆ ಬಾವಿಯಲ್ಲಿಯೂ ನೀರಿಲ್ಲದೆ ಪರದಾಡುವಂತಾಯಿತು. ಅದು ವರ್ಷಕ್ಕೆ 3,500 ಮಿಮೀ ಮಳೆ ಬೀಳುವ ಜಾಗ. ಹಾಗಾಗಿ ಅಲ್ಲಿ ಮಳೆನೀರು ಇಂಗಿಸಲು ಗಣೇಶ ಮಲ್ಯ ನಿರ್ಧರಿಸಿದರು. ಅವರ ಜಮೀನಿನ ಪಕ್ಕದಲ್ಲಿಯೇ ಶಾಲೆಯೊಂದಿತ್ತು. ಆ ಶಾಲೆಯ ಬಯಲಿನಲ್ಲಿ ಸುರಿಯುವ ಮಳೆ ನೀರನ್ನೂ ಇಂಗಿಸಲು ಮಲ್ಯರು ತಮ್ಮದೇ ವೆಚ್ಚದಲ್ಲಿ ವ್ಯವಸ್ಥೆ ಮಾಡಿದರು. ಆ ಮಳೆಗಾಲದಲ್ಲಿ ಭಾರೀ ಮಳೆ ಸುರಿದಾಗ, ಗಣೇಶ ಮಲ್ಯರ ಕಾಂಪೌಂಡು ಗೋಡೆಯೇ ಕುಸಿದು, ಬಹಳ ನಷ್ಟ ಅನುಭವಿಸಿದರು. ಅನಂತರ 2001ರಲ್ಲಿ ತಮ್ಮ ಜಮೀನಿನಲ್ಲಿ ಇಂಗುಗುಂಡಿಗಳನ್ನು ಮಾಡಿದರು. ಮನೆಯ ಟೆರೇಸಿನ ನೀರನ್ನು ಅವಕ್ಕೆ ಇಂಗಿಸಿದರು.

ಈ ವ್ಯವಸ್ಥೆಯಿಂದ 2014ರವರೆಗೆ ಅವರ ನೀರಿನ ಸಮಸ್ಯೆಗೆ ಪರಿಹಾರ ದೊರೆಯಿತು.  ಆದರೆ 2015ರ ಬಿರುಬೇಸಿಗೆಯಲ್ಲಿ ಬಾವಿಯ ನೀರು ಕೇವಲ ಐದಡಿಗೆ ಇಳಿದಾಗ ಮಲ್ಯರಿಗೆ ಆತಂಕ ಶುರುವಾಯಿತು.  ಅನಂತರ, ಗುಜರಾತಿನಿಂದ ತರಿಸಿದ ಮಳೆನೀರಿನ ಫಿಲ್ಟರ್‌ ಅನ್ನು 2016ರ ಮಳೆಗಾಲದಲ್ಲಿ ಜೋಡಿಸಿ, ಟೆರೇಸಿನ ಮಳೆನೀರನ್ನೆಲ್ಲ ಬಾವಿಗೆ ಇಂಗಿಸಿ¨ªಾರೆ. 

ಗಣೇಶ ಮಲ್ಯರದ್ದು ಅಪ್ಪಟ ಸಾವಯವ ಕೃಷಿ. ರಾಸಾಯನಿಕಗಳು ಮಹಾವಿಷಗಳೆಂದು ತಿಳಿದಿರುವ ಅವರು, ತಮ್ಮ ಜಮೀನಿನಲ್ಲಿ ಸಸ್ಯಗಳಿಗೆ ಪೋಷಕಾಂಶ ಒದಗಿಸಲು, ಕೀಟಬಾಧೆ ಹಾಗೂ ರೋಗ ನಿಯಂತ್ರಿಸಲು ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಸಾವಯವ ಕೃಷಿಯ ಹಣ್ಣು ತರಕಾರಿಗಳು ಬಹಳ ರುಚಿ ಎಂಬುದು ಅವರ ಅನುಭವ. ತರಕಾರಿಗಳು ಸಮೃದ್ಧವಾಗಿ ಬೆಳೆದಾಗ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು ನಡೆಸುವ ಭಾನುವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ.  

ತಮ್ಮ ಪುಟ್ಟ ತೋಟದಲ್ಲಿ ಎಲ್ಲ ಕೃಷಿ ಕೆಲಸಗಳಿಗೆ ಬೇಕಾದ ಸಾಧನ ಸಲಕರಣೆಗಳನ್ನು ಗಣೇಶ ಮಲ್ಯರು ಖರೀದಿಸಿ¨ªಾರೆ. ಚೈನ್‌, ಗರಗಸ ಸಹಿತ ಈ ಯಾವುದೇ ಸಾಧನಕ್ಕೆ ಅವರು ಸರಕಾರದ ಸಬ್ಸಿಡಿ ಪಡೆದಿಲ್ಲ. ಆ ಸಬ್ಸಿಡಿ ಪಡೆಯಬೇಕಾದರೆ ಹಲವಾರು ದಾಖಲೆಗಳನ್ನು ಜೋಡಿಸಿಕೊಳ್ಳಬೇಕು, ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಗೆ ಮತ್ತೆಮತ್ತೆ ಭೇಟಿ ನೀಡಬೇಕು; ಅದೆಲ್ಲ ಸತಾಯಿಸುವಿಕೆ ಅನುಭವಿಸುವ ಬದಲಾಗಿ, ಸಾಧನ ಸಲಕರಣೆಗಳನ್ನು ನೇರವಾಗಿ ಖರೀದಿಸುವುದು ಉತ್ತಮ ಎನ್ನುತ್ತಾರೆ ಗಣೇಶ ಮಲ್ಯ. 

ಈಗಲೂ ಶನಿವಾರ ಮತ್ತು ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದ ವಿದ್ಯಾರ್ಥಿಗಳಿಗೆ ಗಣೇಶ ಮಲ್ಯರಿಂದ ಗಣಿತ ಪಾಠ ನಡೆಯುತ್ತದೆ.  ಅದು ಅವರು ಸೇವಾ ಮನೋಭಾವದಿಂದ ನಡೆಸುವ ಉಚಿತ ಪಾಠ. ಇತ್ತ ಗಣಿತ ಕಲಿಸುತ್ತಾ ತಮ್ಮ ಪರಿಣತಿಯ ಧಾರೆ ಎರೆಯುತ್ತಾರೆ. ಅತ್ತ ಪುಟ್ಟ ತೋಟದ ಪ್ರತಿಯೊಂದು ಗಿಡಮರದ ಕಾಳಜಿ ವಹಿಸುವ ಕೃಷಿ ಕಾಯಕ. ಇದು ಮಲ್ಯರ ನೆಮ್ಮದಿಯ ಬದುಕಿನ ಸೂತ್ರ. ಮಣ್ಣಿನ ಕಾಯಕದಿಂದ ದೇಹಕ್ಕೆ ಸಿಗುವ ವ್ಯಾಯಾಮಕ್ಕೆ ವಿಷರಹಿತ ಆಹಾರ ಕೂಡಿಸಿದಾಗ ಆರೋಗ್ಯ ವೃದ್ಧಿ ಎಂಬುದು ಅವರ ಸಿದ್ಧಾಂತ. ಮಣ್ಣಿನ ಮತ್ತು ಸಸ್ಯಗಳ ಅಗೋಚರ ಲೋಕದ ವಿದ್ಯಮಾನಗಳು ಎಲ್ಲೂ ಗಣಿತ ಲೆಕ್ಕಾಚಾರಗಳನ್ನು ಮೀರಿದ ಪ್ರಕೃತಿಯ ವಿಸ್ಮಯಗಳನ್ನೂ ಎಂಬುದು ಅವರ ನಂಬಿಕೆ.  

– ಅಡ್ಕೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.