ತಂಬಾಕು ಬಿಟ್ಟು ಹಾಕು ಟೊಮೆಟೊಗೆ ಕೈ ಹಾಕು


Team Udayavani, Aug 14, 2017, 6:15 AM IST

IMG-20170727-WA0031.jpg

ಮೈಸೂರು ಜಿಲ್ಲೆಯ ಹುಣಸೂರಿನ ಹನಗೋಡು ಹೋಬಳಿಯ ಗೌಡಿಕೆರೆ ರೈತ  ಗೋಪಾಲೇಗೌಡರ ಪುತ್ರ ಬಿ.ಎ. ಪದವೀಧರ ಮಂಜುನಾಥ ಅಪ್ಪನ ಕಾಲದ ತಂಬಾಕು ಬೆಳೆ ಬಿಟ್ಟಿದ್ದಾರೆ. ಬದಲಾಗಿ ಟೊಮೆಟೊ ಹಿಂದೆ ಬಿದ್ದಿದ್ದಾರೆ.  ಹೀಗೆ ಮಾಡಿದ್ದರಿಂದ ಲಾಸ್‌ ಏನೂ ಆಗಿಲ್ಲ. ಲಾಭವೇ ಎಲ್ಲಾ. ಮಂಜುನಾಥ್‌ರ ತಂದೆ ಗೋಪಾಲೇಗೌಡರಿಗೆ ಒಟ್ಟು 9 ಎಕರೆ ಜಮೀನಿದೆ.  3 ಎಕರೆ ಜಮೀನಿನಲ್ಲಿ ಮಂಜುನಾಥ್‌ ಮತ್ತು ಅವರ ಸಹೋದರ ಉಳುಮೆ ಮಾಡುತ್ತಾರೆ. ಈ ಮೊದಲು  ಜಮೀನಿನ ಮೇಲೆ ಸಾಲಸೋಲ ಮಾಡಿ ಹೊಗೆಸೊಪ್ಪು ಬೆಳೆಯುತ್ತಿದ್ದರು.

ಆಗ ಕೈ ಸೇರುತ್ತಿದ್ದದ್ದು ಲಕ್ಷ ರೂ! ಮತ್ತೆ ಭೂಮಿ ಹದ ಮಾಡಲು ಆರಂಭಿಸುತ್ತಿದ್ದರು, ಈ ಕಡೆ ಬದುಕೂ ನಡೆಯಬೇಕು. ಅತ್ತ ಕೃಷಿ ಕೆಲಸವೂ ಸಾಗಬೇಕು… ಹಾಗಿತ್ತು ಪರಿಸ್ಥಿತಿ ಹಾಗಾಗಿ ಮೇಲಿಂದ ಮೇಲೆ ಮತ್ತೆ ಕಾರ್ಮಿಕರಿಗೆ ಬಟವಾಡೆ, ಮನೆಗೆ ದವಸ ಧಾನ್ಯಗಳ ಖರೀದಿಯಿಂದಾಗಿ ಗಳಿಸಿದ ಹಣವೆಲ್ಲ ಮೂರು ತಿಂಗಳಲ್ಲೇ ಖರ್ಚಾಗಿ ಬಿಡುತ್ತಿತ್ತು. ಮತ್ತೆ ಸಾಲಕ್ಕಾಗಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಇದರಿಂದಾಗಿ ಕೃಷಿಯ ಸಹವಾಸಕ್ಕೆ ಗುಡ್‌ಬೈ ಹೇಳಲೂ ಇವರು ನಿರ್ಧರಿಸಿದ್ದರು. ಸ್ನೇಹಿತರ ಸಲಹೆ ಮೇರೆಗೆ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ಸದಾಶಿವ ಹಾಗೂ ಹೆಬ್ಟಾರ್‌ರನ್ನು ಭೇಟಿ ಮಾಡಿದರು. ಅರ್ಕಾ ರಕ್ಷಕ್‌ ಟೊಮ್ಯಾಟೋ ಬೆಳೆಯ ಸಲಹೆ ಪಡೆದರು. ಬೆಳೆಯಲು ಶುರುಮಾಡಿದರು. 

ಬೆಂಗಳೂರಿನಿಂದ ಗ್ರಾಮಕ್ಕಾಗಮಿಸಿದವರೇ ಕುಟುಂಬದವರೊಂದಿಗೆ ಚರ್ಚಿಸಿ,  ಮತ್ತೆ ಬೆಂಗಳೂರಿನತ್ತ ಪಯಣ ಬೆಳೆಸಿ, ಹೆಸರುಗಟ್ಟ ರಸ್ತೆಯಲ್ಲಿರುವ ಐ.ಎ.ಎಚ್‌.ಆರ್‌.ಸಿ.ಕೇಂದ್ರದಲ್ಲಿ ಸಿಗುವ ಅರ್ಕಾ ರಕ್ಷಕ್‌ ಟೊಮ್ಯಾಟೋ ಬೀಜವನ್ನು ಪ್ಯಾಕೆಟಿಗೆ 350 ರೂ ಕೊಟ್ಟು 25 ಪ್ಯಾಕೆಟ್‌ ಖರೀದಿಸಿದರು. ಹಿಂದೆ ತಂಬಾಕು ಬೆಳೆಯುತ್ತಿದ್ದುದರಿಂದಾಗಿ ಭೂಮಿಯಲ್ಲಿ ಸಾರ ಕಡಿಮೆಯಾಗುವ ಜೊತೆಗೆ ಕಳೆಯ ಭಯವೂ ಇತ್ತು. ಇದಕ್ಕಾಗಿ 10 ಟ್ರಾಕ್ಟರ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ನಾಟಿ ಮಾಡಿದರು. ಮಲಿcಂಗ್‌ ಶೀಟ್‌ ತಂದು ಹಾಸಿದ್ದರಿಂದಾಗಿ ಅಷ್ಟಾಗಿ ಕಳೆ ಮೇಲೇಳಲಿಲ್ಲ. ಜಮೀನಿನಲ್ಲಿ ಬೋರ್‌ ವೆಲ್‌ ಇದ್ದುದ್ದರಿಂದ ಈ ಬಾರಿಯ ಬರವೂ ತಟ್ಟಲಿಲ್ಲ, ಸಸಿ ಮೇಲೆದ್ದು ಟೊಮೆಟೊ ಕಾಯಿ ಬಿಡುವ ಹಂತಕ್ಕೆ ಬಂದಾಗ,  ದಾರಿಯಲ್ಲಿ ಹೋಗುವವರೂ ಇವರ ತೋಟದ ಕಡೆ ತಿರುಗಿನೋಡುವಂತಾಯಿತು. 

ಈಗ 10-15 ಟನ್‌ನಷ್ಟು ಟೊಮೆಟೊ ಕಟಾವು ಮಾಡಿ ಸ್ಥಳೀಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು. 

ಮಾರುಕಟ್ಟೆಯಲ್ಲಿನ ದಲ್ಲಾಳಿಗಳ ಹಾವಳಿ ಇದ್ದುದ್ದನ್ನ ಮನಗಂಡು ಸ್ವತಃ ಮಾರಾಟಕ್ಕೂ ನಿಂತರು.  ಈತನಕ 25 ಟನ್‌ ನಷ್ಟು ಮಾರಾಟ ಮಾಡಿದ್ದಾರೆ. ಬಿರು ಬೇಸಿಗೆಯಲ್ಲಿ 1,200ರಿಂದ 1,350 ರೂ. ಪ್ರತಿ ಕ್ರೇಟಿಗೆ (ಟನ್‌ಗೆ ಸರಾಸರಿ 50-54 ಸಾವಿರ) ಸಿಗುತ್ತಿದೆ.  ಇದೀಗ ಮಳೆ ಆರಂಭವಾದಂದಿನಿಂದ 700 ರಿಂದ 800ರೂ ಸಿಗುತ್ತಿದೆ. ಈಗಾಗಲೇ 40 ಲಕ್ಷರೂ ನಷ್ಟು ಟೊಮೆಟೊ ಮಾರಾಟ ಮಾಡಿದ್ದಾರೆ.  ಇರುವ 6 ಎಕರೆ ಭೂಮಿಯಲ್ಲಿ ತಂಬಾಕು ಬೆಳೆಯಿಂದ ವಾರ್ಷಿಕ ಸರಾಸರಿ 4-5 ಲಕ್ಷರೂ. ಆದಾಯ ಬರುತ್ತಿತ್ತು.  ತಂಬಾಕು ಕೂಡ ಟೊಮೆಟೊನಂತೆ  ನಾಲ್ಕು ತಿಂಗಳ ಬೆಳೆ. ಆದರೆ ಹೆಚ್ಚಿನ ಲಾಭ ಮಾತ್ರ ಟೊಮೆಟೊದಲ್ಲಿ. ಟೊಮ್ಯಾಟೋ ಎಂದಾಗ ಆರಂಭದಲ್ಲಿ ಭಯವಿತ್ತು. ಕುಟುಂಬದವರೊಂದಿಗೆ ಚರ್ಚಿಸಿದೆ.  ಬೆಳೆಯ ಪ್ರತಿಹಂತದಲ್ಲೂ ತೊಡಗಿಕೊಂಡದ್ದರಿಂದ ಲಾಭ ಹೆಚ್ಚಾಗಿದೆ ಎನ್ನುತ್ತಾರೆ ಮಂಜುನಾಥ.   ಮಂಜುನಾಥ ಕೃಷಿ ರೈತ ಮೋರ್ಚಾ ಅಧ್ಯಕ್ಷರೂ ಆಗಿದ್ದಾರೆ. ಬಿಡುವಿಲ್ಲದೆ ಇದ್ದರೂ ಕೃಷಿಯೊಂದಿಗಿನ ಒಡನಾಟದಿಂದ ದೂರವಾಗಿಲ್ಲ. 

– ಸಂಪತ್‌ ಕುಮಾರ್‌ ಹುಣಸೂರು

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.