ಬರದಲ್ಲೂ ಕೈ ಹಿಡಿದ ಬದನೆ 20 ಗುಂಟೆಯಲ್ಲಿ ಭರ್ಜರಿ ಬೆಳೆ


Team Udayavani, Aug 21, 2017, 7:50 AM IST

badane.jpg

ಕಲಬುರಗಿಯ ಕಡೆ ನೀರಿಧ್ದೋನೇ ಪುಣ್ಯಾತ್ಮ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಿರುವಾಗ ಇಲ್ಲೊಂದು ಕುಟುಂಬ 20 ಗುಂಟೆ ಜಮೀನಿನಲ್ಲಿ ಭರ್ಜರಿಯಾಗಿ ಬದನೆಕಾಯಿ ಬೆಳೆಯುತ್ತಿದೆ. 

ಜೇವರ್ಗಿ ತಾಲೂಕಿನ ಕಲ್ಲೂರು (ಬಿ) ಗ್ರಾಮದ ಮಲಕಣ್ಣ ತಳವಾರ ಕುಟುಂಬ 20 ಗುಂಟೆ ಭೂಮಿಯಲ್ಲಿ  ಬದನೆಕಾಯಿ ಬೆಳೆದು ಗೆದ್ದಿದ್ದಾರೆ. ತಕ್ಕ ಮಟ್ಟಿಗೆ ಓದಿಕೊಂಡಿರುವ ಮಕ್ಕಳಾದರೂ ಸರಕಾರಿ ನೌಕರಿ, ಖಾಸಗಿ ನೌಕರಿ ಸಿಗಲಿಲ್ಲ ಎಂದು ಕೊರಗುವುದಕ್ಕಿಂತ ಇರುವ ಭೂಮಿಯಲ್ಲೇ ಅಪ್ಪನ ಹೆಗಲಿಗೆ ಹೆಗಲು ಕೊಟ್ಟು, ಅವ್ವನೊಂದಿಗೆ ಸೇರಿಕೊಂಡು ದುಡಿಯಲು ಮುಂದಾಗಿ, ಈಗ ತಿಂಗಳಿಗೆ 40 ಸಾವಿರ ರೂ.ಗೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. 

20 ಗುಂಟೆ ಭೂಮಿ
ಮಲಕಣ್ಣ ತಳವಾರ ಅವರು 20 ಗುಂಟೆಯಲ್ಲಿ ಮಾಂಜರಿ ಎನ್ನುವ ತಳಿಯ ಬದನೆ ಬೀಜಗಳನ್ನು ತಂದು, ಹೊಲದಲ್ಲಿಯೇ ಸಸಿಗಳನ್ನು ಮಾಡಿ, ನಾಟಿ ಮಾಡಿದ್ದಾರೆ. 20 ಸಾಲುಗಳಲ್ಲಿ ಒಟ್ಟು 2,500 ಗಿಡಗಳನ್ನು ಬೆಳೆದಿದ್ದಾರೆ. ಈಗ ಪ್ರತಿ ನಿತ್ಯ 1,000ದಿಂದ 1500 ರೂ. ಗಳಿಕೆ ಶುರುವಾಗಿದೆ.

“ನೀರಿನ ಲಭ್ಯತೆ ನೋಡಿಕೊಂಡು ಕೇವಲ 20ಗುಂಟೆಯಲ್ಲಿ ಬದನೆ ಬೆಳೆಯುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ನನ್ನ ಪತ್ನಿ ಸಂಗಮ್ಮ, ಮಕ್ಕಳಾದ ಸಿದ್ದಣ್ಣ, ಶಿವರಾಜ್‌ ಬದನೆಕಾಯಿ ಕಿತ್ತು, ಟ್ರೇಗಳಿಗೆ ತುಂಬಿ ಇಡುತ್ತಾರೆ. ದೊಡ್ಡ ಮಗ ಸಿದ್ದಣ್ಣ ತಳವಾರ ಮಾರುಕಟ್ಟೆಗೆ ಕೊಂಡೋಯ್ದು ಮಾರಾಟ ಮಾಡುವ ಹೊಣೆ ಹೊತ್ತಿದ್ದಾನೆ ಎನ್ನುತ್ತಾರೆ. ನಮಗೆ ಮಾರಾಟದ ಸಮಸ್ಯೆ ಇಲ್ಲ. ವಾರದ ಎರಡು ದಿನ ಹೊರತು ಪಡಿಸಿದರೆ ಜೇವರ್ಗಿ, ಸಿಂದಗಿ, ನೆಲೋಗಿ, ಮಂದೇವಾಲಗಳಲ್ಲಿ ಸಂತೆ ಇರುತ್ತದೆ. ಅಲ್ಲದೆ, ಕಲಬುರಗಿ ಮಾರುಕಟ್ಟೆಗೂ ಬದನೆಕಾಯಿ ತಗೊಂಡು ಹೋಗ್ತೀವೆ ಎನ್ನುತ್ತಾರೆ ಮಲಕಣ್ಣ ತಳವಾರ.

3ಲಕ್ಷ ರೂ. ಬಂದಿತ್ತು
ಕಳೆದ ವರ್ಷ ಬದನೆಕಾಯಿ ಇವರನ್ನು ಸಂಕಷ್ಟದಿಂದ ಪಾರು ಮಾಡಿದೆಯಂತೆ.  ಹೊಲದಿಂದ ಅನತಿ ದೂರದಲ್ಲಿ ಭೀಮಾ ನದಿ ಇದೆ. ಅಲ್ಲದೆ ಹೊಲದಲ್ಲಿ ಬಾವಿ ತೋಡಿಕೊಂಡಿದ್ದೇವೆ. ಹಾಗಾಗಿ ನಮ್ಮ ಜಮೀನಿನಲ್ಲಿ ಸಾಕಷ್ಟು ನೀರಿದೆ. ಹಾಗಂತ ಹೆಚ್ಚು ನೀರು ಬಳಸುತ್ತಿಲ್ಲ. 

ಕಳೆದ ವರ್ಷ 30 ಗುಂಟೆಯಲ್ಲಿ ಬದನೆ ಬೆಳೆದು 3ಲಕ್ಷ ರೂ.ಗಳನ್ನು ಗಳಿಕೆ ಮಾಡಿದ್ದೆವು.  ಅದರಿಂದ ಈ ವರ್ಷವೂ ಬದನೆಯನ್ನು ಬೆಳೆಯುತ್ತಿದ್ದೇವೆ. ಬದನೆಯಿಂದ ನಮಗೆ ಪ್ರತಿ ತಿಂಗಳು 40 ಸಾವಿರ ರೂ.ಗಿಂತ ಹೆಚ್ಚಿನ ಆದಾಯ ಬರುತ್ತಿದೆ. ಇಡೀ ಕುಟುಂಬ ಟೊಂಕ ಕಟ್ಟಿನಿಂತು ದುಡಿಯುತ್ತಿದ್ದೇವೆ. ಕೃಷಿ ನಂಬಿದವರನ್ನು ಯಾವತ್ತೂ ಕೈ ಬಿಟ್ಟಿಲ್ಲ. ಬಿಡೋದಿಲ್ಲ.. ಆದರೆ, ತುಂಬಾ ಜತನದಿಂದ ದುಡಿಯಬೇಕು ಎನ್ನುತ್ತಾರೆ ಮಕಲಣ್ಣ ತಳವಾರ.

– ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.