ಜೋಳದ ಹುಡುಗ ಲಾಭ ಮಾಡ್ಯಾನೆ!


Team Udayavani, Oct 16, 2017, 11:03 AM IST

jola-1.jpg

ಬಿಳಿರಂಗನ ಬೆಟ್ಟದ ಸೋಲಿಗರು ಮಾತ್ರ ಬೆಲೆಯುತ್ತಿದ್ದ, ಕಣ್ಮರೆಯಾಗುತ್ತಿದ್ದ ಬಹುವರ್ಣದ ಮುಸುಕಿನ ಜೋಳದ ತಳಿಯನ್ನು ಹುಡುಕಿ ತಂದು, ಬೆಳೆದು, ಆಸಕ್ತರಿಗೆ ಹಂಚುತ್ತಿರುವ  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಯುವಕ ಅಭಿಲಾಷ್‌ರ ಯಶೋಗಾಥೆ ಇಲ್ಲಿದೆ.

ಪದವಿ ಮುಗಿದ ಮೇಲೆ ಯಾರದೇ ಕೈ ಕೆಳಗೆ ಕೆಲಸ ಮಾಡಲು ಅಭಿಲಾಷ್‌ನ ಮನಸ್ಸು ಒಲ್ಲೆ ಎಂದಿತು. ಆಗಲೇ ಅವನು ಕೃಷಿ ಕಡೆಗೆ ಮುಖ ಮಾಡಿದ್ದು.  ಕೃಷಿ ಕುಟುಂಬದಿಂದ ಬಂದ ಅಭಿಲಾಷ್‌ ತಂದೆ  ರೇಚಣ್ಣ ಕೃಷಿ ಪಂಡಿತರು. ಅವರು ದೇಸಿ ಬೀಜಗಳ ಬೆಳೆಯವುದರಲ್ಲಿ ನಿರತರಾಗಿದ್ದಾರೆ. ವಿಷಮುಕ್ತ ಕೃಷಿಯನ್ನು ಕಲಿಯಲೆಂದು ರೈತ ನಾಯಕ ಎಂ.ಡಿ ನಂಜುಂಡಸ್ವಾಮಿಯವರು ಚಾಮರಾಜನಗರದಲ್ಲಿ ಕಟ್ಟಿದ ಅಮೃತಭೂಮಿಗೆ ಹೋಗಿ ಅಲ್ಲಿ ತರಬೇತಿ ಪಡೆದು ಬಿಳಿರಂಗನ ಬೆಟ್ಟದ ಸೋಲಿಗರ ಪೋಡುಗಳಿಂದ ಸಂಗ್ರಹಿಸಿ ತಂದ ಬಣ್ಣದ ಮುಸುಕಿನ ಜೋಳವನ್ನು ಬೆಳೆಯಲಾಗಿತ್ತು.

ಯಾವುದೇ ರಾಸಾಯನಿಕ ಬಳಸದೇ, ಹುಲುಸಾಗಿ ಬೆಳೆದಿದ್ದ ಈ ಜೋಳ ಅಭಿಲಾಷ್‌ ಅವರ ಗಮನ ಸೆಳೆಯಿತು. ಅಮೃತಭೂಮಿಗೆ ಬಂದವರೆಲ್ಲ ಬಣ್ಣದ ಮುಸುಕಿನಜೋಳದ ಗುಣಗಾನ ಮಾಡುತ್ತಿರುವುದು ಅಭಿಲಾಷ್‌ ಅವರಲ್ಲಿ ಅದನ್ನು ಬೆಳೆಸುವ ಆಸೆಯನ್ನು ಮತ್ತಷ್ಟು ಹೆಚ್ಚಿಸಿತು. ತರಬೇತಿ ಮುಗಿಸಿಕೊಂಡು ಊರಿಗೆ ಬಂದು ಹಿಂಗಾರಿ  ಜೋಳದ ರೀತಿ ಬೇಸಿಗೆಯಲ್ಲೇ ಬಣ್ಣದ ಜೋಳ ಬೆಳೆಯಲು ಅಪ್ಪನ ಮನವೊಲಿಸಿದರು.ಮಾವಿನ ತೋಟದ ನಡುವಿನ ಎರಡು ಎಕರೆ ಖಾಲಿ ಜಾಗದಲ್ಲಿ ಬಣ್ಣದ ಮುಸುಕಿನ ಜೋಳ ಬೆಳೆಯಲು ತೀರ್ಮಾನಿಸಿ, ಮಿತ್ರ ನವೀನ ಅವರಿಂದ ಇಪ್ಪತ್ತು ಸೇರು ಬೀಜವನ್ನು ಎರವಲು ಪಡೆದುಕೊಂಡರು.

ಮಾರ್ಚ್‌ ಆರಂಭದಲ್ಲಿ ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಮತ್ತು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಕೊಟ್ಟು ಮುಸುಕಿನ ಜೋಳದ ಬೀಜಗಳನ್ನು ಬಿತ್ತನೆ ಮಾಡಲಾಯಿತು. ಪೈರು ಬೆಳವಣಿಗೆ ಹಂತಕ್ಕೆ ಬರುವ ಹೊತ್ತಿಗೆ, ಕೊಳವೆಬಾವಿಯಲ್ಲಿ ನೀರು ನಿಂತು ಹೋಯಿತು. ತುಂತುರು ನೀರಾವರಿ ಮೂಲಕ ಸಿಕ್ಕಷ್ಟೇ ನೀರನ್ನು ನೀಡಿದರು. ಬರನಿರೋಧಕ ಗುಣವಿದ್ದ ಮುಸುಕಿನ ಜೋಳ ಆರು ಅಡಿ ಎತ್ತರದವರೆಗೂ ಬೆಳೆದು ನಿಂತಿತು.

ಫ‌ಸಲು
ನೀರಿನ ಕೊರತೆಯ ಕಾರಣ ಇಳುವರಿ ಕುಂಠಿತವಾಗಿದೆ. ಎಕರೆಗೆ 8 ರಿಂದ 10 ಕ್ವಿಂಟಾಲ್‌ ಬೀಜ ಸಿಕ್ಕಿದೆ. ನೀರು ಸರಿಯಾಗಿದ್ದೂ, ಸರಿಯಾಗಿ ಕಳೆ ತೆಗೆದಲ್ಲಿ ಎಕರೆಗೆ 10 -15 ಕ್ವಿಂಟಾಲ್‌ ಬೆಳೆಯಬಹುದು. ಈ ಜೋಳ ಎತ್ತರ ಬೆಳೆಯೋದರಿಂದ ಹೆಚ್ಚು ಹಸಿರಾಗಿರುವುದರಿಂದ ದನಕರುಗಳಿಗೆ ಒಳ್ಳೆಯ ಮೇವಾಗುತ್ತದೆ. ಸಾವಯವಕ್ಕೆ ಒಗ್ಗುವ ಬಣ್ಣದ ಮುಸುಕಿನ ಜೋಳ ನಾಲ್ಕರಿಂದ ನಾಲ್ಕೂವರೆ ತಿಂಗಳ ಬೆಳೆ. ಈ ಜೋಳದ ಕಾಳು ಹೆಚ್ಚು ಸಿಹಿಯಾಗಿರುವುದರಿಂದ ಹಕ್ಕಿ, ಹಂದಿಗಳ ಕಾಟ ಇದ್ದೇ ಇದೆ. ಇದಕ್ಕೆ ಯಾವುದೇ ರೋಗಗಳ ಬಾಧೆ ಇರುವುದಿಲ್ಲ.

ಮಾರಾಟ ಹಾಗೂ ಲಾಭ
ಮುಸುಕಿನ ಜೋಳದ ಬೀಜವನ್ನು ರಾಜ್ಯವಲ್ಲದೇ ಮಹಾರಾಷ್ಟ, ತಮಿಳುನಾಡು ರಾಜ್ಯದ ರೈತರು 50 ರೂ.ಗೆ ಕೆಜಿಯಂತೆ ಖರೀದಿಸುತ್ತಿದ್ದಾರೆ. ಕೆಲ ರೈತರು ಈ ವರ್ಷ 10 ಕೆಜಿ ಬೀಜ ತೆಗೆದುಕೊಂಡು ಹೋಗಿ ಮುಂದಿನ ವರ್ಷ 20 ಕೆಜಿ ಬೀಜ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಜೋಳದ ಕೃಷಿಯಲ್ಲಿ ಎರಡು ಎಕರೆಯಲ್ಲಿ ಖರ್ಚು ತೆಗೆದು 50 ಸಾವಿರ ರೂಗಳ ಲಾಭ ಈ ಬಾರಿ ಸಿಕ್ಕಿದೆ ಎನ್ನುತ್ತಾರೆ ಅಭಿಲಾಷ್‌. 

ಅಭಿಲಾಷ್‌ ಹಾಗೂ ಅವರ ಮಿತ್ರ ನವೀನ್‌ರಂಥ ಬಿಸಿರಕ್ತದ ಹುಡುಗರು ದೇಸಿ ಮುಸುಕಿನ ಜೋಳವನ್ನು ಹುಡುಕಿ, ಬೆಳೆದು, ಬೀಜ ಹಂಚುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಉದ್ದಕ್ಕೂ ದೇಸಿ ಮುಸುಕಿನ ಜೋಳದ ಕಂಪು ಹಬ್ಬಿಸುವ ಉಮೇದು ಇವರದು. 

* ಗುರುರಾಜ ಬ. ಕನ್ನೂರ
ಕೈ ಜೋಡಿಸುವವರಿಗೆ ಮಾಹಿತಿಗೆ: 9739762973.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.