ಮರೆಯಲಾಗದ ಇತಿಹಾಸ ಪರೀಕ್ಷೆ


Team Udayavani, Apr 18, 2017, 3:45 AM IST

pareekshe.jpg

ನಾನು ಚೀಟಿ ಮಾಡಿಟ್ಟುಕೊಂಡಿದ್ದು ವ್ಯರ್ಥವಾಗಲಿಲ್ಲ ಎಂದು ಖುಷಿಯಲ್ಲಿ ತೆರೆದೆ. ಅದನ್ನು ನೋಡಿಕೊಂಡು ಕದ್ದು ಬರೆಯಲು ಹೊರಟಾಗ ಶಿಕ್ಷಕರು ಬಳಿ ಬಂದು ನಿಂತರು. 

ಪಿಯುಸಿ ಓದುತ್ತಿದ್ದ ಕಾಲವದು. ಎಲ್ಲರ ದ್ವೇಷ ಕಟ್ಟಿಕೊಂಡು ಕಲಾ ವಿಭಾಗಕ್ಕೆ ಪ್ರವೇಶ ಪಡದುಕೊಂಡಿದ್ದೆ. ಎಲ್ಲಾ ಅಧ್ಯಾಪಕರುಗಳು ನನ್ನ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು. ತೆಗೆದುಕೊಂಡ ಭಂಡ ಧೈರ್ಯಕ್ಕಾದರೂ ನಾನು ಏನಾದರೂ ಸಾಧಿಸಬೇಕಿತ್ತು. ದಿನ ಕಳೆಯುತ್ತಿದ್ದಂತೆ ಪರೀಕ್ಷೆ ಹತ್ತಿರ ಬಂತು. ಬೆಳಗಾದರೆ ಇತಿಹಾಸದ ಪರೀಕ್ಷೆ. ಗತಕಾಲದ ಘಟನೆಗಳನ್ನು ಕೇಳಲು ಏನೋ ಕುತೂಹಲ. ಆದರೆ, ಅದನ್ನು ಇಸವಿ ಸಹಿತ ನೆನಪಿಡಬೇಕೆಂದರೆ ಅಂಗಿಯೊಳಗಡೆ ಇರುವೆ ಬಿಟ್ಟುಕೊಂಡ ಹಾಗೆ. ಅಧ್ಯಾಪಕರುಗಳ ನಿರೀಕ್ಷೆ ಮತ್ತು ಮಹತ್ವಾಕಾಂಕ್ಷೆ ಎರಡೂ ಸೇರಿ ಅಂಕ ಹೆಚ್ಚು ತೆಗೆಯಲೇಬೇಕಾಗಿತ್ತು. ಆದರೆ ಉತ್ತರ ನೆನಪಾಗಬೇಕಲ್ಲಾ!

ಪರೀಕ್ಷೆ ಹಾಲ್‌ಗೆ ಇನ್ನೇನು ಹೋಗುತ್ತಿದ್ದೆ. ಪಠ್ಯದಲ್ಲಿ ಪುಣ್ಯಾತ್ಮ ನೆಪೋಲಿಯನ್‌ನ ಜೀವನಗಾಥೆಯನ್ನು ನೆನಪಿಟ್ಟುಕೊಳ್ಳಬೇಕಾದ ಸಂಕಷ್ಟ. ಆತನ ದಂಡಯಾತ್ರೆಯಷ್ಟೇ ಉದ್ದ ಉದ್ದದ ಸಾಲುಗಳು. ನೆಪೋಲಿಯನ್‌ ಯಾರ ಜೊತೆ ಹೋರಾಡಿದ? ಯಾರ ಜೊತೆ ಒಪ್ಪಂದ ಮಾಡಿಕೊಂಡ? ಆಮೇಲೆ ಏನಾದ? ಎಲ್ಲವನ್ನು ನೆನಪಿಟ್ಟುಕೊಳ್ಳಬೇಕಿತ್ತು. ಪರೀಕ್ಷೆಗೆ ಖಂಡಿತವಾಗಿ ಬಂದೇ ಬರುವ ಪ್ರಶ್ನೆ ಎಂಬುದು ಗೊತ್ತಿತ್ತು. ಅದಕ್ಕೇ ಒಂದಷ್ಟು ಮುಖ್ಯಾಂಶಗಳನ್ನು ಒಂದು ಹಾಳೆ ಮೇಲೆ ಬರೆದುಕೊಂಡು ಪರೀûಾ ಕೊಠಡಿಯ ಒಳಹೊಕ್ಕೆ. ನನ್ನ ಅನುಮಾನದಂತೆಯೇ ಆ ಪ್ರಶ್ನೆ ಬಂದಿತ್ತು.

ನಾನು ಚೀಟಿ ಮಾಡಿಟ್ಟುಕೊಂಡಿದ್ದು ವ್ಯರ್ಥವಾಗಲಿಲ್ಲ ಎಂದು ಖುಷಿಯಲ್ಲಿ ತೆರೆದೆ. ಅದನ್ನು ನೋಡಿಕೊಂಡು ಕದ್ದು ಬರೆಯಲು ಹೊರಟಾಗ ಶಿಕ್ಷಕರು ಬಳಿ ಬಂದು ನಿಂತರು. ನನಗೆ ಪೆಚ್ಚಾಯಿತು. ಅವರು ನನ್ನನ್ನು ಮತ್ತು ಚೀಟಿಯನ್ನು ನೋಡಿ ಹೇಳಿದ್ದು ಒಂದೇ ಮಾತು: “ನೀನು ನಿನಗಾಗಿ ಓದು, ಬೇರೆಯವರನ್ನು ಮೆಚ್ಚಿಸಲು ಓದಬೇಡ’ ಎಂದು. ಅಲ್ಲಿಗೆ ನನ್ನ ಬುದ್ಧಿಗೆ ಹಿಡಿದಿದ್ದ ಗ್ರಹಣ ದೂರವಾಗಿ ಬೆಳಕು ಪಸರಿಸಿದಂತಾಯಿತು. ಆ ಶಿಕ್ಷಕರು ಉತ್ತರ ಪತ್ರಿಕೆ ಕಿತ್ತುಕೊಂಡು ನನ್ನನ್ನು ತರಗತಿಯಿಂದ ಹೊರ ಕಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಾನು ಆ ಶಿಕ್ಷಕರ ಬಳಿ ತೆರಳಿ ಕ್ಷಮೆ ಕೇಳಿ, ಅವರ ಮುಂದೆಯೇ ಕಾಪಿ ಚೀಟಿ ದೂರ ಎಸೆದು ಪರೀಕ್ಷೆ ಬರೆಯಲು ಬಂದು ಕುಳಿತೆ. ಅದೇ ಕೊನೆ, ಮತ್ತೆಂದೂ ಕಾಪಿ ಹೊಡೆಯುವ ಯೋಚನೆ ನನ್ನ ಹತ್ತಿರ ಸುಳಿಯಲಿಲ್ಲ.

– ಪದ್ಮಶ್ರೀ ಭಟ್ಟ ಕೊಪ್ಪದಗದ್ದೆ, ಶಿರಸಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.