ಕುಂತ್ರೆ ನಿಂತ್ರೆ ನಿಂದೇ ಗ್ಯಾನ, ಜೀವಕ್ಕಿಲ್ಲ ಸಮಾಧಾನ


Team Udayavani, May 30, 2017, 2:45 PM IST

kuntre.jpg

ನೀನು ಇಷ್ಟಪಡುತ್ತಿದ್ದ ಗುಲಾಬಿ ರಂಗಿನ ರವಿಕೆ, ಮೊಲದ ಬಿಳುಪಿನ ಲಂಗ ತೊಟ್ಟು ಮೊಲದಂತೆ ಕಿವಿ ನಿಮಿರಿಸಿಕೊಂಡು ಕಣ್ಣು ಪಿಳಿ ಪಿಳಿ ಬಿಡುತ್ತ ಮಾವಿನ ಮರದಡಿ ಅದೇ ಹೆಬ್ಬಂಡೆಯ ಮೇಲೆ ನಿನ್ನ ಸವಿನೆನಪುಗಳ ಮೂಟೆ ಹೊತ್ತು ಕೂತಿದ್ದೇನೆ. ನನ್ನ ಪಕ್ಕದ ಜಾಗ ಎಂದೆಂದಿಗೂ ನಿನ್ನದೇ….

ನಿನ್ನೊಂದಿಗಿದ್ದಾಗ ಉತ್ಸಾಹ, ಹುರುಪು ತುಂಬಿದ ಚೆಂಡಿನಂತೆ ಪುಟಿಯುತ್ತಿದ್ದೆ. ನೀ ನನ್ನಿಂದ ದೂರ ಸರಿದ ಮೇಲೆ ಕಣ್ಣೀರಿನಲ್ಲೇ ದಿನಗಳೆಯುತ್ತಿದ್ದೇನೆ. ಕಣ್ಣೀರಿನ ಹಿಂದಿನ ಕೈ ನಿನ್ನದೇ ಎಂದು ಬೇರೆ ಹೇಳಬೇಕಿಲ್ಲ. ನಿನ್ನೊಂದಿಗೆ ಕಳೆದ ಆ ದಿನಗಳ ಮಧುರ ಕ್ಷಣಗಳೇ ಈ ದಿನ ಕ್ಷಣ ಕ್ಷಣವೂ ಜೀವ ಹಿಂಡುತ್ತಿವೆ. ಮರಳಿ ಬಾರದೇ ಇರುವ ನಿನ್ನ ದಾರಿಯನ್ನು  ಕಾಯುವುದೇ ನನ್ನ ಪಾಲಿನ ಕಾಯಕವಾಗಿದೆ. ನಾವಿಬ್ಬರೂ ಪ್ರೀತಿಸಲು, ಕಪಿಚೇಷ್ಟೆಗಳ ಕಚಗುಳಿಯನ್ನಿಡಲು ಬಳಸಿಕೊಂಡ ಆ ನಿರ್ಜೀವ ಹೆಬ್ಬಂಡೆಯೂ ನನ್ನ ನೋವಿಗೆ ಮರುಗಿದೆ. ಕಷ್ಟ ಕಂಡು ಕರಗಿದೆ. ಹೆಬ್ಬಂಡೆಯ ಮಗ್ಗುಲಲ್ಲಿ ಆಕಾಶದೆತ್ತರಕ್ಕೆ ಕೊಂಬೆ ಚಾಚಿದ್ದ ಮಾವಿನ ಮರವೂ ನನ್ನ ಗೋಳು ಕಂಡು ಸಂಕಟ ಪಡುತ್ತಿದೆ.

ಅಂದು ನನ್ನೊಂದಿಗಿದ್ದು ನನ್ನ ಸಡಗರ ಸಂಭ್ರಮ ಹಂಚಿಕೊಂಡಿದ್ದ ಚಂದ್ರ, ತಂಗಾಳಿ, ಕೆರೆ, ನದಿ ಇಂದು ನಿನ್ನಂತೆಯೇ ಕಾಡಿಸಿ ಪೀಡಿಸುತ್ತಿವೆ. ಇವೆಲ್ಲಾ ನಿನ್ನ ಪಕ್ಷ ವಹಿಸಿ ಅಣಕಿಸುತ್ತಿವೆಯೇನೋ ಎನಿಸುತ್ತಿದೆ. ಹೆಬ್ಬಂಡೆ, ಮಾವಿನ ಮರ ಮಾತ್ರ ಪ್ರಾಮಾಣಿಕವಾಗಿ ನನ್ನ ನೋವಿನಲ್ಲಿ ತಾವೂ ಭಾಗಿಯಾಗಿ, ನೆರಳಿನ ಆಸರೆ ನೀಡಿ, ಒಂದು ಸುಂದರ ದಿನ ನನ್ನನ್ನು ಹುಡುಕಿಕೊಂಡು ನೀನು ಬಂದೇ ಬರುತ್ತಿಯಾ ಎಂದು ಧೈರ್ಯ ತುಂಬಿ ಭರವಸೆಯ ಹೊಂಗಿರಣಗಳನ್ನು ಚೆಲ್ಲುತ್ತಿವೆ.

ಮುದ್ದು ರಾಮ, ನಿನಗೂ ಗೊತ್ತಿದೆ, ನನ್ನ ನೆನಪು ನಿನಗೂ ನಕ್ಷತ್ರಿಕನಂತೆ ಕಾಡುತ್ತಿದೆ ಎಂದು. “ತುಂಬಾ ಹಟದ ಹುಡುಗಿ ನೀನು’ ಎಂದು ಹೇಳಿ ಅಂದು ಎದ್ದು ಹೋದವನು ಇಂದಿನವರೆಗೂ ಸನಿಹ ಸುಳಿದಿಲ್ಲ. ಸದಾ ನೀನು ಇಷ್ಟಪಡುತ್ತಿದ್ದ ಗುಲಾಬಿ ರಂಗಿನ ರವಿಕೆ, ಮೊಲದ ಬಿಳುಪಿನ ಲಂಗ ತೊಟ್ಟು ಮೊಲದಂತೆ ಕಿವಿ ನಿಮಿರಿಸಿಕೊಂಡು ಕಣ್ಣು ಪಿಳಿ ಪಿಳಿ ಬಿಡುತ್ತ ಮಾವಿನ ಮರದಡಿ ಅದೇ ಹೆಬ್ಬಂಡೆಯ ಮೇಲೆ ನಿನ್ನ ಸವಿನೆನಪುಗಳ ಮೂಟೆ ಹೊತ್ತು ಕೂತಿದ್ದೇನೆ. ನನ್ನ ಪಕ್ಕದ ಜಾಗ ಎಂದೆಂದಿಗೂ ನಿನ್ನದೇ ಎಂಬುದು ನಿನಗೂ ಚೆನ್ನಾಗಿ ಗೊತ್ತು.

ಗೊತ್ತಿದ್ದೂ ಗೊತ್ತಿದ್ದೂ ಕಾಡಿಸಿ ಪೀಡಿಸಿ ವಿರಹದ ಸುತ್ತಿಗೆಯ ಏಟು ಕೊಟ್ಟು ಶಿಕ್ಷಿಸಿದ್ದು ಸಾಕು. ನೋವು ತಿಂದ ಹೃದಯಕೆ ಮೆತ್ತನೆಯ ಸವಿಮುತ್ತುಗಳ ಸುರಿಸಿ ಒಡಲಿನ ಕಣ ಕಣದಲ್ಲೂ ಆವರಿಸಿಕೊಂಡು  ನೀ ಮುರಿದ ಕನಸುಗಳ ಕೆನ್ನೆ ಸವರಿ ಜೋಡಿಸಿ ಬಿಡು. ನಿನ್ನ ಪುಟ್ಟ ಗುಡಿಸಲಿನ ಸೋರುವ ಸೂರಿನಡಿಯಲ್ಲಿ ನಿನ್ನೊಲವಿನ ಅಮೃತ ಹನಿಗಳ ಧಾರೆಯನ್ನು ನನ್ನೆದೆಯ ಮೇಲೆ ಬೀಳಿಸಿಕೊಂಡು ಜೀವನ ಪೂರ್ತಿ ನಿನ್ನ ಮುದ್ದಿನ ರಾಣಿಯಾಗಿ ಇದ್ದು ಬಿಡುವೆ.

ನಿನ್ನ ಬರುವನ್ನೇ ಕಾಯುತ್ತಿರುವ                                      
ನಿನ್ನ ಪ್ರೀತಿಯ ಸೀತೆ

-ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ 

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.