ಒಲವಿನ ಕುಲುಮೆಯಲಿ ಹೃದಯ ಬೇಯುತ್ತಿದೆ!


Team Udayavani, Aug 15, 2017, 7:15 AM IST

olavina-kulume.jpg

ಶುದ್ಧ ಬಿಳಿ ಹಾಳೆಯಂಥ ನನ್ನ ಒಲವಿನಲಿ ನಿನ್ನದೇ ಹೆಸರು ಬರೆದಿರುವೆ. ನಿನ್ನ ಮನದೊಳಗೆ ನಾ ಇದ್ದೇನಾ? ಅರಿಯುವುದಾದರೂ ಹೇಗೆ? 

ಒಲವಿನ ಹುಡುಗಿ, ನಿತ್ಯ ನಿನ್ನನ್ನು ನೋಡುತ್ತಲೇ ಇದ್ದೇನೆ. ನಿರಭ್ರ ಆಕಾಶದಲ್ಲಿ ತೇಲುವ ಬೆಳದಿಂಗಳನ್ನು ನೋಡಿದಂತೆ. ಕಾಲೇಜಿನ ಕಾರಿಡಾರಿನಲ್ಲಿ, ಲೈಬ್ರರಿಯ ಸೈಲೆನ್ಸಿನಲ್ಲಿ, ಕ್ಯಾಂಟೀನಿನ ಕಲರವದಲ್ಲಿ, ಗೆಳತಿಯರ ಹಿಂಡಿನ ಸಂಭ್ರಮದಲ್ಲಿ, ಒಬ್ಬಂಟಿಯಾಗಿ ಹೊರಟ ನಿನ್ನ ಸ್ಕೂಟಿಯ ಬಿರುಗಾಳಿಯಲ್ಲಿ, ಕಣ್ಣುಮುಚ್ಚಿ ಕೈ ಜೋಡಿಸಿ ನಿಂತು, ಮೂವತೂ¾ರು ಸೆಕೆಂಡು ಮಣಮಣಿಸಿ ಪ್ರಾರ್ಥನೆ ಸಲ್ಲಿಸುವ ಕೃಷ್ಣ ದೇವರ ಗುಡಿಯಲ್ಲಿ, ನಂಗೆ ಪ್ರಾಣ ಹೋಗುವಷ್ಟು ಇಷ್ಟದ ಆಕಾಶ ನೀಲಿ ಬಣ್ಣದ ಚೂಡಿದಾರ್‌ನಲ್ಲಿ, ನಿನ್ನ ಅರಿವಿಗೆ ಬಾರದೇ ನಿನ್ನ ನೆರಳಾಗಿ ನಡೆಯುತ್ತಲೇ ಇದ್ದೇನೆ. ನೀ ಸಿಗದ ದಿನ ನನ್ನೊಳಗೇ ನಾನು ನಿನ್ನೊಂದಿಗೆ ಅಲೆಯುತ್ತಾ ಕಳೆಯುತ್ತೇನೆ. 

ನಿನ್ನ ಹಿಂದೆ ನನ್ನಂಥವನೊಬ್ಬ ಆಗಂತುಕ ಇದ್ದಾನೆಂಬ ಸುಳಿವು ಸಿಕ್ಕರೆ ನೀ ತತ್ತರಿಸಿ ಹೋಗುತ್ತೀಯ. ಎದುರು ಬಂದು ನನ್ನ ಪ್ರೀತಿ ನಿವೇದಿಸಿಕೊಂಡರೆ ನೀ ಬೆಚ್ಚಿಬೀಳುತ್ತೀಯ. ನಿನ್ನ ಸನಿಹ ಸುಳಿಯಲು ಇಂಥವೇ ನೂರಾರು ಚಿಂತೆಗಳ ತಡೆಗೋಡೆಗಳು ಧುತ್ತನೆ ಎದ್ದು ನಿಲ್ಲುತ್ತವೆ. ನಿನ್ನನ್ನು ತಲುಪುವ ಯಾವ ಹಾದಿಯೂ ಕಾಣದೆ, ಇರುಳಲ್ಲಿ ಭವಿಷ್ಯದ ಕನಸನ್ನು ಉರಿಸಿ, ಹಗಲಲ್ಲಿ ವಾಸ್ತವದ ಬೂದಿಯಲ್ಲಿ ಹೊರಳುತ್ತೇನೆ. ಮತ್ತೆ ಮತ್ತೆ ಅದೇ ನೋವಿನ ಸುಖಕ್ಕೆ ಮರಳಿ ಮರಳಿ ಹಂಬಲಿಸಿ ನರಳುತ್ತೇನೆ. 

ಅಪರಿಚಿತತೆಯಲ್ಲೇ ಒಲವನ್ನು ನವಿರು ಕಂಪನದ ಅಲೆಯಾಗಿಸಿ ನನ್ನತ್ತ ಎಸೆದುಹೋದ ಹುಡುಗಿ ನೀನು. ಅದು ನನ್ನ ಹೃದಯಕ್ಕೆ ತಲುಪುವ ವೇಳೆಗೆ ಬಿರುಗಾಳಿಯಾಗಿತ್ತು. ಈ ಅಲ್ಲೋಲ ಕಲ್ಲೋಲವನ್ನು ಎದೆಯೊಳಗಿಟ್ಟುಕೊಂಡು ನಿನ್ನೆದುರು ಹೇಗೆ ಹಾಜರಾಗಲಿ ಹೇಳು? ಎದುರು ಬದುರಾದಾಗ ಮೌನದ ತುಟಿಯಲ್ಲಿ, ತುಂಟ ಕಂಗಳ ಭೇಟಿಗೆ ಕಾನ್ಫಿಡೆನ್ಸ್‌ ತುಂಬುವಂಥ¨ªೊಂದು ಹಾಯ… ಹೇಳಬಾರದೇ? ದಿನಗಳು ಮೋಡದಿಂದ ಕಳಚಿ ಬಿದ್ದ ಹನಿಗಳಂತೆ ಎಲ್ಲೋ ಹರಿದು ಮರೆಯಾಗುತ್ತಲೇ ಇವೆ. ನಿರೀಕ್ಷೆಯ ಅಗ್ಗಷ್ಟಿಕೆಗೆ ಈ ಬದುಕನ್ನು ಒಟ್ಟುತ್ತಲೇ ಇದ್ದೇನೆ. ಒಲವಿನ ಕುಲುಮೆಯಲ್ಲಿ ಹೃದಯ ಬೇಯುತ್ತಲೇ ನಗುತಿದೆ. ಸಂತೆಯಲ್ಲೂ ಒಬ್ಬಂಟಿ ಹಾದಿಯ ನಂಟು ಗಂಟುಬಿದ್ದಿದೆ. ನನ್ನ ನಿನ್ನ ಹಾದಿ ಒಂದಾಗುವ ಘಳಿಗೆಗಾಗಿ ಕಾಯುತ್ತೇನೆ. 

ಒಂದಂತೂ ದಿಟ. ಯಾವತ್ತಿಗೂ ನಾನು ನಿನ್ನೆದುರು ನಿಂತು, ನನ್ನೊಳಗನ್ನು ನಿನ್ನ ಇಷಾರೆ ಇಲ್ಲದೆ ನಿವೇದಿಸಲಾರೆ. ನಿವೇದಿಸಿ ತಿರಸ್ಕಾರಕ್ಕೀಡಾಗಿ ಪರಿತಪಿಸುವುದಕ್ಕಿಂತ. ಈ ಒಬ್ಬಂಟಿ ಕನಸು ಲೇಸು. ಆದರೂ ಮನಸು ಎಂಬುದು ಯಾವ ಮಾತನ್ನೂ ಕೇಳದ ಲೂಸು ಲೂಸು. ನಾನಾದರೂ ಎನು ಮಾಡಲಿ ಹೇಳು? ನಿನ್ನ ಹೊರತು ಮತ್ತೂಂದು ಜಗತ್ತು ಇಲ್ಲದೇ ಉಳಿದುಹೋದವನು. 

ನಿನ್ನ ನಿರೀಕ್ಷೆಯಲ್ಲಿ
– ಜೀವ ಮುಳ್ಳೂರು  

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.