ಈ “ಕಾಪಿ’ ದುನಿಯಾ: ಕಲ್ಲಿನೊಂದಿಗೆ ಹಾರಿದ ಲಂಕೇಶ್‌ ಪೋಯೆಮ್ಮು! 


Team Udayavani, Aug 22, 2017, 9:23 AM IST

22-JOSH-1.jpg

ನಮ್ಮ ಚೀಟಿಯಲ್ಲಿ ಉತ್ತರಗಳು ಮಾತ್ರವಲ್ಲದೇ, ಆ ಚೀಟಿ ಯಾರಿಂದ ಯಾರಿಗೆ ತಲುಪಬೇಕು ಎಂಬ ಸೂಚನೆಯನ್ನೂ ಬರೆಯುತ್ತಿದ್ದೆವು…
  
ಅದು ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಸಮಯ. ಅಂದು ಇಂಗ್ಲಿಷ್‌ ಪರೀಕ್ಷೆ ಇತ್ತು. ನಾವು ಹತ್ತು ಜನ ಸ್ನೇಹಿತರು ಸೇರಿ ಪ್ಲಾನ್‌ ಮಾಡಿ, ನಮಗೆ ಬೇಕಾದ ಗೈಡ್‌ನ‌ ಹಾಳೆ ಮತ್ತು ಪಟ್ಟಿ ನೋಟ್ಸ್‌ ಹರಿದು ಅದರಲ್ಲಿ ಸಣ್ಣ ಸಣ್ಣ ಕಲ್ಲು ಹಾಕಿ, ಕಾಗದದ ಮುದ್ದೆ ಮಾಡಿ ಒಬ್ಬರಿಂದ ಒಬ್ಬರಿಗೆ ಥ್ರೋಬಾಲ… ಥರ ಪಾಸ್‌ ಮಾಡುವ ಪ್ಲಾನ್‌ ಮಾಡಿದೆವು.

ಪರೀಕ್ಷೆ ಶುರುವಾಯಿತು. ಕಾಪಿ ಚೀಟಿ ರೊಟೇಶನ್‌ ಆಗ್ತಾ ಇತ್ತು. ಇನ್ನೇನು ಪರೀಕ್ಷೆ ಮುಗಿಯಲಿಕ್ಕೆ ಒಂದು ತಾಸು ಬಾಕಿ ಇತ್ತು. ನನ್ನ ಸ್ನೇಹಿತನೊಬ್ಬನ ಕೈಯಲ್ಲಿ ನನಗೆ ಬೇಕಾದ ಕಾಪಿ ಚೀಟಿ ಇತ್ತು. ಎಷ್ಟೊತ್ತಾದರೂ ಅದು ನನ್ನ ಬಳಿ ಬರಲಿಲ್ಲ. ನಾನು ಮೆಲ್ಲಗೆ ಗದರಿದಾಗ ಅವನು ಒಂದೇ ಸಲ ಅದರಲ್ಲಿ ಕಲ್ಲು ಹಾಕಿ ಸಿಟ್ಟಿನಿಂದ ಜೋರಾಗಿ ನನ್ನತ್ತ ಎಸೆದ. ಅವನು ಎಸೆದ ಫೋರ್ಸಿಗೆ ಅದು ಮಿಸ್‌ ಆಗಿ ನಮ್ಮ ರೂಮ್‌ಗೆ ಇನ್‌ವಿಜಿಲೇಟರ್‌ ಆಗಿ ಬಂದಿದ್ದ ನಮ್ಮದೇ ಶಾಲೆಯ ಹೆಗಡೆ ಸರ್‌ ತಲೆಗೆ ಬಿದ್ದಿತ್ತು. ಪಾಪ, ಪತ್ರಿಕೆ ಓದುತ್ತಾ ಮೈಮರೆತು ಕೂತಿದ್ದವರು, ಒಮ್ಮೆಲೇ “ಅಯ್ಯಪ್ಪಾ’ ಎನ್ನುತ್ತಾ ದಢಕ್ಕನೆ ಹೌಹಾರಿ ಕೆಳಗೆ ಬಿದ್ದರು. ಪುಣ್ಯಾತ್ಮ ಗೆಳೆಯ ಕಾಪಿಚೀಟಿಯಲ್ಲಿ ದೊಡ್ಡ ಕಲ್ಲನ್ನೇ ಸುತ್ತಿದ್ದರಿಂದ ಸರ್‌ಗೆ ಏಟಾಗಿತ್ತು. ಅದರ ಹಿಂದೆಯೇ ನಮ್ಮ ಬಂಡವಾಳವೂ ಬಯಲಾಗಿತ್ತು.

ಈಗ ನಾವು ಕಾಪಿ ಚೀಟಿ ರೆಡಿ ಮಾಡುತಿದ್ದ ವಿಧಾನವನ್ನು ಹೇಳುತ್ತೇನೆ. ನಮ್ಮ ಚೀಟಿಯಲ್ಲಿ ಉತ್ತರಗಳು ಮಾತ್ರವಲ್ಲದೇ, ಆ ಚೀಟಿ ಯಾರಿಂದ ಯಾರಿಗೆ ತಲುಪಬೇಕು ಎಂಬ ಸೂಚನೆಯನ್ನೂ ಬರೆಯುತ್ತಿದ್ದೆವು. “ಪ್ರಭು, ನಿಂದು ಬರೆದಾದ ಕೂಡಲೇ ಹರೀಶನಿಗೆ ಕೊಡು’, ಈ ರೀತಿಯ ಅನೇಕ ಟಿಪ್ಪಣಿಗಳೂ ಇದ್ದವು. ಒಟ್ಟಿನಲ್ಲಿ ಆ ಕಾಪಿಚೀಟಿಯನ್ನು ಬಳಸಿದ್ದ ಎಲ್ಲರ ಹೆಸರೂ ಅದರಲ್ಲಿ ನಮೂದಾಗಿರುತ್ತಿತ್ತು. 

ಹೆಗಡೆ ಸರ್‌, ಕಾಪಿ ಚೀಟಿಯನ್ನು ಬಿಡಿಸಿ ನೋಡಿ, ಆಗ ಸುಮ್ಮನಿದ್ದರು. ಪರೀಕ್ಷೆ ಮುಗಿದ ಮೇಲೆ ಚೀಟಿಯಲ್ಲಿದ್ದ ಒಬ್ಬೊಬ್ಬರ ಹೆಸರನ್ನೇ ಕರೆದು “ವಾಟ್‌ ಈಸ್‌ ದ ಸಮ್ಮರಿ ಆಫ್ ದಿ ಪೋಯೆಮ… ದಿ ಮದರ್‌?’ ಎಂದು ಕೇಳುತ್ತಾ ಹೋದರು. ಉತ್ತರಪತ್ರಿಕೆಯಲ್ಲಿ ಮಾತ್ರ ನೀಟಾಗಿ ಉತ್ತರ ಬರೆದಿದ್ದ ನಮಗೆ, ಉತ್ತರ ಹೇಳಲು ಬರಲಿಲ್ಲ. ನಾನು “ದ ಮದರ್‌ ಈಸ್‌ ಎ ಬ್ಯೂಟಿಫ‌ುಲ… ಪೋಯೆಮ… ಬೈ ಲಂಕೇಶ್‌…’ ಎಂದು ರಾಗವೆಳೆದೆ. ಅಲ್ಲಿಂದ ಮುಂದೆ ಗೊತ್ತಿದ್ದರಲ್ಲವೆ ಹೇಳ್ಳೋಕೆ! ಸರ್‌ ನಮ್ಮೆಲ್ಲರ ಕಿವಿ ಹಿಂಡಿದರು. “ಕಾಪಿ ಚೀಟಿ ಬರೆಯೋಕೆ ಒಂದು ಗಂಟೆ ವೇಸ್ಟ್‌ ಮಾಡ್ತೀರ. ಅದೇ ವೇಳೇಲಿ ಓದೋಕೆ ಆಗಲ್ವಾ?’ ಎಂದು ಬೈದು ಬುದ್ಧಿ ಹೇಳಿದರು. ಅದೇ ಪ್ರಶ್ನೆ ಫೈನಲ್‌ ಪರೀಕ್ಷೆಯಲ್ಲಿ ಬಂದಾಗ ಉತ್ತರ ನನಗೆ ಚೆನ್ನಾಗಿ ಬಾಯಿಪಾಠ ಬಂದಿತ್ತು! 

ನಾಗಪ್ಪಎಂ. ಪ್ರಭು, ಅಂಕೋಲಾ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.