ನಿನಗಾಗಿ ಏನನ್ನೂ ಬೇಕಾದರೆ ಗೆಲ್ಲಬಲ್ಲೆ!


Team Udayavani, Aug 22, 2017, 10:40 AM IST

22-JOSH-8.jpg

ನೀನು ನನ್ನ ಪಕ್ಕದಲ್ಲಿದ್ದರೆ, ಚಿಕ್ಕ ಮಗುವಿನಂತಿರುವ ನಿನ್ನ ಮುದ್ದಾದ ಮುಖವನ್ನು ಮನಸಾರೆ ಮುದ್ದಾಡಬೇಕೆನಿಸುತ್ತದೆ. ನೀನು ನನ್ನಿಂದ ಅಡಿಯಷ್ಟು ದೂರದಲ್ಲಿ ನಿಂತರೂ ಅದನ್ನು ನನಗೆ ಸಹಿಸಲಾಗದು… 

ನನ್ನ ಪಾಡಿಗೆ ನಾನು ಹಾಯಾಗಿ, ಜಾಲಿಯಾಗಿ ಜೀವನ ನಡೆಸುತ್ತಿದ್ದೆ. ನಿನ್ನನ್ನು ಅದ್ಯಾರು ನನ್ನ ಬದುಕಿನೊಳಗೆ ಕಳಿಸಿದರೋ ಏನೋ? ನೀ ಬಂದಾಗಿನಿಂದಲೂ ನನ್ನ ಕಣ್ಣಿಗೆ ನಿದ್ದೆಯ ಕೊರತೆ ಉಂಟಾಗಿದೆ! ಪ್ರತಿ ಹುಡುಗನಿಗೂ ಒಬ್ಬಳು ಕನಸಿನ ರಾಣಿ ಇದ್ದೇ ಇರುತ್ತಾಳೆ. ಹಾಗೆಯೇ ನನ್ನ ಕನಸಿನ ರಾಣಿಗೆ ಇರುವ, ಇರಬೇಕಾದ ಎಲ್ಲಾ ಲಕ್ಷಣಗಳನ್ನೂ ನಿನ್ನಲ್ಲಿ ಕಂಡಿದ್ದೇನೆ. ಆದ್ದರಿಂದಲೇ ನನ್ನ ನಿದ್ದೆಯು ನಿನ್ನ ಮೇಲಿನ ಪ್ರೀತಿಯೆಂಬ ಭಾವನೆಗಳ ಸುರಿಮಳೆಗೆ ನಶಿಸಿಹೋಗಿದೆ. 

ಹೆಣ್ಣಿಗಾಗಿ ಏನೆಲ್ಲಾ ತ್ಯಾಗಗಳನ್ನು ಮಾಡುವುದು, ಯುದ್ಧಗಳನ್ನು ಗೆಲ್ಲುವುದು, ಹೆಣ್ಣಿನ ಒಲವು ಗಳಿಸಲಿಕ್ಕಾಗಿಯೇ ಪ್ರಪಂಚಕ್ಕೆ ಎದುರಾಗಿ ನಿಲ್ಲುವುದನ್ನು ಸಿನಿಮಾಗಳಲ್ಲಿ ನೋಡಿ, “ಇವರಿಗೇನಾದರೂ ಹುಚ್ಚು ಹಿಡಿದಿದೆಯಾ?’ ಎಂದು ನಗುತ್ತಿದ್ದೆ. ಹಾಗೆಲ್ಲಾ ಇದ್ದ ನನಗೂ ಈಗ, ನಿನಗಾಗಿ ಏನನ್ನೂ ಬೇಕಾದರೂ ಗೆಲ್ಲಬಲ್ಲೆ ಎಂಬ ಧೈರ್ಯ ತುಂಬಿದ್ದೀಯಾ! ನಿನ್ನ ಜೊತೆಗೂಡಿ ಬದುಕಲು ಎಂಥ ಯುದ್ಧಗಳನ್ನಾದರೂ ಮಾಡಬಲ್ಲೆ ಎಂಥ ಕಷ್ಟಗಳನ್ನಾದರೂ ಎದುರಿಸಬಲ್ಲೆ ಎಂದು ನನಗೆ ಈಗ ಅನ್ನಿಸುತ್ತಿದೆ. ನೀನು ನನ್ನ ಪಕ್ಕದಲ್ಲಿದ್ದರೆ, ಚಿಕ್ಕ ಮಗುವಿನಂತಿರುವ ನಿನ್ನ ಮುದ್ದಾದ ಮುಖವನ್ನು ಮನಸಾರೆ ಮುದ್ದಾಡಬೇಕೆನಿಸುತ್ತದೆ. ನೀನು ನನ್ನಿಂದ ಅಡಿಯಷ್ಟು ದೂರದಲ್ಲಿ ನಿಂತರೂ ಅದನ್ನು ನನಗೆ ಸಹಿಸಲಾಗದು. ಇಂಥ ನೂರಾರು ಭಾವನೆಗಳು ನನ್ನ ಮನದಲ್ಲಿ ತಾಂಡವವಾಡುತ್ತಿವೆ. ಅದಕ್ಕೆ ಕಾರಣ, ನನಗೆ ನಿನ್ನ ಮೇಲಿರುವ ಪ್ರೀತಿ! ಈ ಪ್ರೀತಿಯೆಂಬುದೊಂದು ರೋಗ, ಆ ಪ್ರೀತಿಯ ಬಲೆಗೆ ಸಿಲುಕಿಕೊಂಡವರು ರೋಗಿಗಳು. ಆ ರೋಗಕ್ಕೆ ಟಾನಿಕ್ಕೂ ಪ್ರೀತಿಯೇ! ನನಗೀಗ ಆ ಪ್ರೀತಿಯೆಂಬ ಟಾನಿಕ್‌ನ ಅಗತ್ಯವಿದೆ. ಆ ಟಾನಿಕ್‌ ನೀಡಿ ನನ್ನನ್ನು ರೋಗಮುಕ್ತನನ್ನಾಗಿ ಮಾಡು.

ನಿನ್ನ ಮೇಲೆ ಇಷ್ಟೆಲ್ಲಾ ಭಾವನೆಗಳು ನನ್ನ ಮನಸ್ಸಿನಲ್ಲಿದ್ದರೂ ನೀ ಯಾರೆಂದು ನಾ ಇದುವರೆಗೂ ತಿಳಿದುಕೊಳ್ಳಲೇ ಇಲ್ಲ. ಅದಕ್ಕೆ ನನ್ನನ್ನು ಕ್ಷಮಿಸು! ನಿನ್ನ ಮೇಲಿನ ಪ್ರೀತಿಯ ಭಾವನೆಗಳಿಂದ ತಾನೇ ನನಗೆ ನಿದ್ದೆ ಬರದಂತಾಗಿದ್ದು? ಈಗಲಾದರೂ ಹೇಳು, ನನ್ನ ನಿದ್ದೆಯನ್ನು ಕದಿಯಲು ನಿನಗೆ ಅನುಮತಿ ನೀಡಿದವರು ಯಾರು? ನಿದ್ದೆ ಕದ್ದ ಚೆಲುವೆ ಇಷ್ಟಕ್ಕೂ ನೀ ಯಾರು?

ಗಿರೀಶ್‌ ಚಂದ್ರ ವೈ.ಆರ್‌., ತುಮಕೂರು

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.