ನಿನ್ನ ಮೆಹಂದಿಯ ಹಿಂದೆ ನೋವಿತ್ತಾ?


Team Udayavani, Aug 22, 2017, 11:26 AM IST

22-JOSH-9.jpg

ಈ ಪುಟ್ಟ ಭೂಮಿಯಲ್ಲಿ, ಬೆಟ್ಟದಷ್ಟು ಪ್ರೀತಿ ಕೊಟ್ಟು, ಬಿಟ್ಟು ಹೋದ ಹುಡುಗಿಯ ಹುಡುಕುವುದು ನನ್ನಂಥ ಹುಂಬ ಹುಡುಗನಿಗೆ ಅಸಾಧ್ಯವೇನಲ್ಲ. ನಿನ್ನ ಎದುರು ಬಂದು ಕಣ್ಣಲ್ಲಿ ಕಣ್ಣಿಟ್ಟು, ಬಿಟ್ಟು ಹೋದ ಕಾರಣವ ಕೇಳುವುದೂ ದೊಡ್ಡ ಮಾತೇನಲ್ಲ. ಆದರೆ, ನಾನು ಎಂದೂ ಹಾಗೆ ಮಾಡಲಾರೆ… 

ಪ್ರೀತಿಯ ಹುಡುಗಿ…
ಬದುಕಿನಲ್ಲಿ ಪ್ರೀತಿಯ ಸಸಿ ನೆಟ್ಟು, ಅದು ಹೂಬಿಡುವ ಮೊದಲೇ ನನ್ನನ್ನು ಬಿಟ್ಟು ಹೋದವಳು ನೀನು. ಪ್ರೀತಿಸಿದ ಜೀವ, ಹಲವು ವರ್ಷಗಳ ನಂತರವೂ ಬಿಟ್ಟೂ ಬಿಡದಂತೆ ನೆನಪಾಗುತ್ತಿದ್ದರೆ, ಖಂಡಿತಾ ಅದು ಮೊದಲ ಪ್ರೀತಿಯಾಗಿರುತ್ತದೆ. ನಿನಗೂ ನಾನು ಮೊದಲ ಪ್ರೀತಿಯಾ? ಗೊತ್ತಿಲ್ಲ. ಕಾರಣವೇ ಹೇಳದೆ, ನೀ ನನ್ನ ಬಿಟ್ಟು ಹೋಗಿ ವರ್ಷಗಳೇ ಉರುಳಿವೆ. ಈಗಲೂ ನನಗೆ ನಿನ್ನ ನೆನಪಾದಂತೆ, ನಿನಗೂ ನಾನು ನೆನಪಾಗ್ತಿàನಾ? ಮನದ ಮೂಲೆಯಲ್ಲಾದರೂ ಈ ಹುಡುಗನ ಬಗ್ಗೆ ಮರುಕವಿದೆಯಾ? ನೀ ಬಿಟ್ಟು ಹೊರಟಾಗ ಮಂಡಿಯೂರಿ ಕುಳಿತು ಮಗುವಿನಂತೆ ಅತ್ತ ನನ್ನ ಬಗ್ಗೆ ಕನಿಕರವಿದೆಯಾ? ಹೀಗೆ ಹಲವಾರು ಪ್ರಶ್ನೆಗಳು ನನ್ನನ್ನು ಕಾಡುತ್ತವೆ.

ಈ ಪುಟ್ಟ ಭೂಮಿಯಲ್ಲಿ, ಬೆಟ್ಟದಷ್ಟು ಪ್ರೀತಿ ಕೊಟ್ಟು, ಬಿಟ್ಟು ಹೋದ ಹುಡುಗಿಯ ಹುಡುಕುವುದು ನನ್ನಂಥ ಹುಂಬ ಹುಡುಗನಿಗೆ ಅಸಾಧ್ಯವೇನಲ್ಲ. ನಿನ್ನ ಎದುರು ಬಂದು ಕಣ್ಣಲ್ಲಿ ಕಣ್ಣಿಟ್ಟು, ಬಿಟ್ಟು ಹೋದ ಕಾರಣವ ಕೇಳುವುದೂ ದೊಡ್ಡ ಮಾತೇನಲ್ಲ. ಆದರೆ, ನಾನು ಎಂದೂ ಹಾಗೆ ಮಾಡಲಾರೆ. ಯಾಕೆಂದರೆ, ಆ ದಿನಗಳಲ್ಲಿ ನಿನಗೆ ಅದೆಂಥ ಅನಿವಾರ್ಯತೆಯಿತ್ತೋ? ಅಮ್ಮನ ಕಣ್ಣೀರು, ಅಪ್ಪನ ಮರ್ಯಾದೆ, ನೆಂಟರಿಷ್ಟರ ಚುಚ್ಚುಮಾತು… ಇದನ್ನೆಲ್ಲ ನಿಭಾಯಿಸುವ ಒತ್ತಡವಿತ್ತೋ ಏನೋ? ಇದೆಲ್ಲವೂ ನನ್ನ ಪ್ರೀತಿಯನ್ನು ತಿರಸ್ಕರಿಸಿ ನಡೆಯುವಷ್ಟು ಗಟ್ಟಿ ಮನಸ್ಸನ್ನು ನಿನಗೆ ತಂದು ಕೊಟ್ಟಿತೇನೋ. ಇದು ನನ್ನ ಅಂದಾಜು… 

ನನ್ನನ್ನು ಅಷ್ಟೊಂದು ಪ್ರೀತಿಸಿದ ನಿನಗೆ ನನ್ನ ಬಿಟ್ಟು ಹೊರಡಲು ಅದೆಷ್ಟು ಸಂಕಟವಾಗಿರಬಹುದು. ನಿನ್ನ ಕೈಗಳಲ್ಲರಳಿದ ಮೆಹಂದಿ ರಂಗಿನ ಹಿಂದೆ ನೋವಿತ್ತಾ? ಗೊತ್ತಿಲ್ಲ. ದಡ್ಡಿ, ದೇವರಂಥ ಗೆಳೆಯ ಬೇಕು. ನಾನು ಏನೂ ಹೇಳದಿದ್ರೂ ಅವನಿಗೆಲ್ಲಾ ತಿಳಿಯಬೇಕು ಅಂತ ಪ್ರತಿ ಹುಡುಗಿಯೂ ಬಯಸುತ್ತಾಳೆ. ಅದು ತಪ್ಪಲ್ಲ… ಆದರೆ, ಯಾವ ಹುಡುಗನೂ ದೇವರಾಗಲಾರ.

ನೀ ಹೇಳದೇನೆ ನನಗೆ ಎಲ್ಲಾ ತಿಳಿಯಬೇಕು ಅಂತ ಬಯಸುವುದು ತಪ್ಪಲ್ಲ. ಆದರೆ, ಅಂಥ ವಿದ್ಯೆ ಕಲಿಸಲು ಯಾವ ವಿಶ್ವವಿದ್ಯಾಲಯಗಳಲ್ಲೂ ಕೋರ್ಸುಗಳಿಲ್ಲ. ನೀ ಬಿಟ್ಟು ಹೊರಟ ಕಾರಣವ ತಿಳಿಯುವ ಪ್ರಯತ್ನದಲ್ಲಿದ್ದೇನೆ. ಆದರೆ, ಆ ಯತ್ನದಲ್ಲಿ ಪ್ರತಿ ಬಾರಿಯೂ ಸೋಲುತ್ತಿದ್ದೇನೆ. ನೀ ಇದ್ದಷ್ಟು ದಿನ ನನಗೆ ಬೆಟ್ಟದಷ್ಟು ಪ್ರೀತಿ ಕೊಟ್ಟಿದ್ದೆ. ಬಿಟ್ಟು ಹೊರಟಾಗ ಅಷ್ಟೇ ನೋವನ್ನೂ ಕೊಟ್ಟೆ ಎನ್ನುವುದು ವಿಪರ್ಯಾಸ. ನೀ ಹಾಳುಗೆಡವಿದ ಈ ಹಾಳು ಹೃದಯದಲ್ಲಿ ಮತ್ತೆ ಪ್ರೀತಿ ಚಿಗುರೊಡೆಯಲಾರದು ಎನ್ನುವುದು ಸತ್ಯ. ಆದರೆ, ಮೊನ್ನೆ ಅಮ್ಮ ಯಾವುದೋ ಹುಡುಗಿಯನ್ನು ನೋಡಿದ್ದಾರಂತೆ. ಅವರ ಒತ್ತಾಯಕ್ಕೆ ಮದ್ವೆಗೂ ಒಪ್ಪಿದ್ದೇನೆ. ಇನ್ನೇನು ಕೆಲವು ದಿನಗಳಲ್ಲಿ ಮದ್ವೆಯಾಗುತ್ತಿದ್ದೇನೆ ಕೂಡ. ಅವಳ ಕೈ ಹಿಡಿದ ದಿನದಿಂದಾದರೂ ನನ್ನ ನೆನಪುಗಳ ಗೂಡಿನಿಂದ ಶಾಶ್ವತವಾಗಿ ಹೊರಟು ಬಿಡೇ… ಪ್ಲೀಸ್‌! ಅವಳಿಗಾದರೂ ದೇವರಾಗಲು ಪ್ರಯತ್ನಿಸುತ್ತೇನೆ.

ಗಣೇಶ ಆರ್‌.ಜಿ., ಶಿವಮೊಗ್ಗ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.