ಮೈ ಫಾದರ್‌ ಈಸ್‌…


Team Udayavani, Oct 24, 2017, 10:11 AM IST

24-28.jpg

ನನಗಾಗ ಇಂಗ್ಲಿಷಿನ ಪದಗಳಿಗೆ ಅರ್ಥವಷ್ಟೇ ಗೊತ್ತಾಗುತ್ತಿತ್ತು. ಆಗಲೇ ಗುರುಗಳು- ವಾಟ್‌ ಈಸ್‌ ಯುವರ್‌ ಫಾದರ್‌ ಎಂದು ಕೇಳಿಬಿಡಬೇಕೆ? ಅದರ ಕನ್ನಡಾರ್ಥ- “ನಿಮ್ಮಪ್ಪ ಏನು?’ ಎಂದಿರಬೇಕು ಎಂದೇ ಯೋಚಿಸಿ, ಉತ್ತರಿಸಲು ಬಾಯೆ¤ರೆದೆ…

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ನಮಗೆ, ಐದನೆಯ ತರಗತಿಯಿಂದ ಇಂಗ್ಲೀಷ್‌ ಒಂದು ಭಾಷೆಯಾಗಿ ಪರಿಚಯವಾಯಿತು. ಅಲ್ಲಿಯ ತನಕ ಮನೆಯಲ್ಲಿ ಸೋದರತ್ತೆಯರು, ಚಿಕ್ಕಪ್ಪಂದಿರು ಕಾಲೇಜಿನ ನೋಟ್ಸೆನಲ್ಲಿ ಇಂಗ್ಲೀಷ್‌ ಅನ್ನು ಕೂಡಿಸಿ ಬರೆಯುವುದನ್ನೇ ಬೆರಗಿನಿಂದ ನೋಡುತ್ತಿದ್ದ ನನಗೆ ಅದೊಂದು ತಮಾಷೆಯಾಗಿ ಕಾಣುತ್ತಿತ್ತು. ನಾನೂ ಒಂದು ಪುಸ್ತಕ ತೆಗೆದುಕೊಂಡು ಆಸ್ಪತ್ರೆಯಲ್ಲಿ ಮಾನಿಟರ್‌ನಲ್ಲಿ ರೋಗಿಯ ಉಸಿರಾಟ ದಾಖಲಾಗುವ ಹಾಗೆ ಗೆರೆಗಳನ್ನು ಮೇಲೆ ಕೆಳಗೆ ಎಳೆಯುತ್ತಾ ಬರೆದು ಅಪ್ಪನಿಗೆ ಇಂಗ್ಲೀಷ್‌ ಬರೆದಿದ್ದನ್ನು ತೋರಿಸಿದಾಗ ಅವರು ನಗುತ್ತಾ “ಚೆನ್ನಾಗಿದೆ’ ಅಂದಿದ್ದರು. ಆ ಮಾತು ಕೇಳಿ ನನಗೆ ಏನೋ ಸಂತೋಷ.

ಹೈಸ್ಕೂಲಿಗೆ ಬಂದಾಗ, ಅಪ್ಪ ನಮ್ಮನ್ನು ಇಂಗ್ಲೀಷ್‌ ಮೀಡಿಯಮ್‌ಗೆ ಸೇರಿಸಿಬಿಟ್ಟರು. ಆಗ ಶುರುವಾಯ್ತು ನೋಡಿ ನಿಜವಾದ ಫಜೀತಿ. ಬರೀ “ವಾಟ್‌ ಈಸ್‌ ಯುವರ್‌ ನೇಮ್‌’, “ವಾಟ್‌ ಈಸ್‌ ದಿಸ್‌’ ಗೆ ಉತ್ತರಿಸಲು ಮಾತ್ರ ಗೊತ್ತಿದ್ದ ನನಗೆ ಗುರುಗಳು “ವಾಟ್‌ ಈಸ್‌ ಯುವರ್‌ ಫಾದರ್‌?’ ಅಂತಾ ಪ್ರಶ್ನೆ ಕೇಳಿದ ತಕ್ಷಣ, ನನಗೆ ತಲೆ ಕೆರೆದುಕೊಳ್ಳುವಂತಾಯಿತು. ನಮ್ಮಪ್ಪ ಏನು? ಅಂದರೆ ನಾನು ತಾನೇ ಏನೆಂದು ಉತ್ತರ ಕೊಡಬೇಕು ಹೇಳಿ! ಮತ್ತೂಮ್ಮೆ ಅದೇ ಪ್ರಶ್ನೆ ಕೇಳಿದಾಗ “ಮೈ ಫಾದರ್‌ ಈಸ್‌ ಮೈ ಫಾದರ್‌ ಸರ್‌’ ಅಂದೆ. ನಮ್ಮಪ್ಪ ನನಗೆ ಅಪ್ಪನೇ ಎಂಬ ನನ್ನ ಉತ್ತರ ಕೇಳಿ ಗುರುಗಳಿಗೂ ನಗು ತಡೆಯಲಾಗಲಿಲ್ಲ.  

ಮತ್ತೂಂದು ದಿನ ಶಾಲೆಗೆ ಪೆನ್ನು ಮರೆತು ಹೋಗಿದ್ದೆ. ಪಕ್ಕದಲ್ಲಿದ್ದ ಇಂಗ್ಲೀಷ್‌ ಮೀಡಿಯಂ ಓದುತ್ತಿದ್ದ ಗೆಳತಿಗೆ “ಪೆನ್ನು ಇದ್ದರೆ ಕೊಡು.’ ಎಂದು ಕನ್ನಡದಲ್ಲಿ ಕೇಳಿದೆ.  ಅದಕ್ಕೆ ಅವಳು “ಐ ವೋಂಟ್‌ ಗೀವ್‌’ ಅಂತಾ ಮುಖ ತಿರುಗಿಸಿದಾಗ ಪೆನ್ಸಿಲ್ಲಿನಲ್ಲಿ ಬರೆಯಲು ಶುರುಮಾಡಿದೆ.  ಮೇಷ್ಟ್ರು ಅದನ್ನು ನೋಡಿ “ಆಸ್ಕ್ ಯುವರ್‌ ಫ್ರೆಂಡ್‌ ಫಾರ್‌ ದ ಪೆನ್‌’ ಎಂದಾಗ “ಸರ್‌ ಅಕೀ ಗಿವಂಗಿಲ್ಲಂತ್ರೀ’ ಎನ್ನುತ್ತಿದ್ದಂತೆ ತರಗತಿಯಲ್ಲಿ ನಗೆಯ ಅಲೆ ಎದ್ದಿತು.

 ನಳಿನಿ ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.