ಕಾಗಕ್ಕ- ಗುಬ್ಬಕ್ಕ ಕತೆ
Team Udayavani, Mar 23, 2017, 3:45 AM IST
ಒಂದೂರಲ್ಲಿ ಕಾಗಕ್ಕ ಗುಬ್ಬಕ್ಕ ಇದ್ದರು. ಇಬ್ಬರೂ ಜೀವದ ಗೆಳೆಯರು. ತಿಂಡಿಯನ್ನು ಹಂಚಿಕೊಂಡೇ ತಿನ್ನುತ್ತಿದ್ದರು. ಬಿಡುವಿನ ವೇಳೆಯಲ್ಲಿ ಹತ್ತಿರದ ಮಾವಿನ ಮರದ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ಒಮ್ಮೆ ಇಬ್ಬರೂ ವಾಯು ವಿಹಾರಕ್ಕೆ ತೆರಳಿದ್ದರು. ಅಷ್ಟರಲ್ಲಿ ಜೋರು ಮಳೆ ಮಳೆ ಸುರಿಯಿತು. ಇಬ್ಬರಿಗೂ ಆತಂಕ ಉಂಟಾಯಿತು. ಕೂಡಲೆ ಗೂಡಿಗೆ ಹಾರಿ ಬಂದು ನೋಡಿದರೆ ಗುಬ್ಬಚ್ಚಿ ಗೂಡು ಮಳೆಯಲ್ಲಿ ಕೊಚ್ಚಿಕೊಂಡು ಹೋಗಿತ್ತು. “ಕೆಲ ದಿನಗಳ ಕಾಲ ನಿನ್ನ ಗೂಡಲ್ಲಿ ಉಳಿಯುವುದಕ್ಕೆ ಅವಕಾಶ ಮಾಡಿಕೊಡು’ ಎಂದು ಗುಬ್ಬಚ್ಚಿ ಕೇಳಿಕೊಂಡಿತು. ಆದರೆ ಕಾಗೆ ತನ್ನ ಗೂಡಲ್ಲಿ ತನಗೇ ಜಾಗವಿಲ್ಲ ದಯವಿಟ್ಟು ಕ್ಷಮಿಸು ಎಂದು ಕೈತೊಳೆದುಕೊಂಡುಬಿಟ್ಟಿತು. ಗುಬ್ಬಚ್ಚಿಗೆ ಬೇಜಾರಾದರೂ ಸುಮ್ಮನಾಯಿತು.
ಎರಡು ದಿನಗಳ ಕಾಲ ಮಳೆಗಾಳಿಯಲ್ಲಿ ನೆನೆದು ಹೇಗೋ ಕಷ್ಟಪಟ್ಟು ಗೂಡೊಂದನು ಕಟ್ಟಿಕೊಂಡಿತು ಗುಬ್ಬಚ್ಚಿ. ಈ ಘಟನೆಯ ನಂತರವೂ ಕಾಗೆಯೊಡನೆ ಒಡನಾಡುವುದನ್ನು ಗುಬ್ಬಚ್ಚಿ ನಿಲ್ಲಿಸಲಿಲ್ಲ. ಒಂದು ದಿನ ಮನುಷ್ಯರು ನಗರವನ್ನು ವಿಸ್ತರಿಸುವ ಸಂದರ್ಭ ನಗರದಲ್ಲಿದ್ದ ಮರಗಳನ್ನು ಉರುಳಿಸುತ್ತಾ ಬಂದರು. ಆಗ ಕಾಗೆಯ ಮನೆಯಿದ್ದ ಮರವೂ ನೆಲಕ್ಕುರುಳಿತು. ಕಾಗೆಗೆ ಸೂರಿಲ್ಲದಂತಾಯಿತು. ಅದಕ್ಕೀಗ ಗುಬ್ಬಚ್ಚಿಯ ಬಳಿ ಸಹಾಯ ಕೇಳಲು ನಾಚಿಕೆಯಾಯಿತು. ಆ ಸಮಯದಲ್ಲಿ ಗುಬ್ಬಚ್ಚಿ ತಾನಾಗಿಯೇ ಕಾಗೆಗೆ ಸಹಾಯಹಸ್ತವನ್ನು ಚಾಚಿತು. “ಹೊಸ ಗೂಡು ಕಟ್ಟಿಕೊಳ್ಳುವವರೆಗೆ ತನ್ನ ಮನೆಯಲ್ಲಿ ಆರಾಮಾಗಿರಬಹುದು’ ಎಂದು ಅಭಯ ನೀಡಿತು.
– ವೀಣಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್