ಭೂಮಿ ಮೇಲೆ ಚಿಟ್ಟೆ ಹುಟ್ಟಿದ್ದು ಹೇಗೆ?


Team Udayavani, May 11, 2017, 11:44 AM IST

lead–KATHE–chitte.jpg

ಸಾವಿರಾರು ವರ್ಷಗಳ ಹಿಂದಿನ ಮಾತು. ಜಗತ್ತು ಸೃಷ್ಟಿಯಾಗಿ ಕೆಲ ಸಮಯ ಕಳೆದಿತ್ತು. ಕಾಡು, ಗುಡ್ಡ, ನದಿಗಳಿಂದ ಕೂಡಿದ ಸುಂದರ ಭೂಮಿಯಲ್ಲಿ ಅನೇಕ ಪ್ರಾಣಿಪಕ್ಷಿಗಳು ಜನರು ವಾಸವಾಗಿದ್ದರು. ಅವರೆಲ್ಲರ ನಾಯಕ ದೇವದಾಸ. ಕರುಣಾಳು ಮತ್ತು ಶಕ್ತಿವಂತನಾಗಿದ್ದ ಆತ ಮಾಂತ್ರಿಕ ವಿದ್ಯೆಯನ್ನು ಅಭ್ಯಾಸ ಮಾಡಿದ್ದ. ಕಠಿಣ ಸಾಧನೆಯ ಫ‌ಲವಾಗಿ ಅನೇಕ ವಿಶೇಷ ಶಕ್ತಿಗಳನ್ನು ಹೊಂದಿದ್ದ. ಆದರೆ, ಅವುಗಳನ್ನು ಆತನೆಂದೂ ಅನಗತ್ಯವಾಗಿ ಪ್ರಯೋಗಿಸುತ್ತಿರಲಿಲ್ಲ. ಜನರಿಗೆ ಒಳಿತಾಗುವ ಕಾರ್ಯಕ್ಕೆ ಮಾತ್ರ ಬಳಸುತ್ತಿದ್ದ. ಹಾಗಾಗಿಯೇ ಜನರಿಗೆ ಆತನ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ.

ಆಗಾಗ್ಗೆ ಕುದುರೆ ಏರಿ ಎಲ್ಲಾ ಕಡೆ ಸಂಚರಿಸುವುದು, ಸುತ್ತಲಿನ ಆಗುಹೋಗುಗಳನ್ನು ಗಮನಿಸುವುದು ಆತನ ರೂಢಿಯಾಗಿತ್ತು. ಹಾಗೊಮ್ಮೆ ತಿರುಗುವಾಗ ಆತನ ಕಿವಿಗೆ ಜೋರಾಗಿ ನಗು, ಕೇಕೆ ಗಲಾಟೆಯ ಸದ್ದು ಕಿವಿಗೆ ಬಿತ್ತು. ಕುತೂಹಲದಿಂದ ದನಿಯನ್ನು ಹಿಂಬಾಲಿಸಿದರೆ ಕಂಡದ್ದು ವಿಶಾಲವಾದ ಹುಲ್ಲುಗಾವಲು. ಅಲ್ಲಿ ಹಸಿರು ಹುಲ್ಲಿನ ನಡುವೆ ನೂರಾರು ಚೆಂದದ ಹೂವುಗಳು ಅರಳಿದ್ದವು. ಸೂರ್ಯನ ಎಳೆಬಿಸಿಲು ಬಂಗಾರದಂತೆ ಹೊಳೆಯುತ್ತಿತ್ತು. ಹತ್ತಿರದಲ್ಲಿದ್ದ ಕೊಳದ ಸ್ವತ್ಛ ನೀರು ಥಳಥಳಿಸುತ್ತಿತ್ತು. ಸುತ್ತಲಿದ್ದ ಕಾಡಿನ ಮರಗಳ ಪಚ್ಚಹಸಿರು ಎಲೆಗಳು ಕಣ್ಣಿಗೆ ತಂಪೆರೆಯುತ್ತಿದ್ದವು. ಇವೆಲ್ಲದರ ನಡುವೆ ನೂರಾರು ಮಕ್ಕಳು ಖುಷಿಯಿಂದ ಕುಣಿಯುತ್ತಾ ಓಡುತ್ತಾ ಆಟವಾಡುತ್ತಿದ್ದರು. ದೇವದಾಸನಿಗೆ ಕೇಳಿದ್ದು ಅವರ ಹಾರಾಟಧಿ ಸಂತೋಷದ ಕೂಗಾಟವೇ. ಮುದ್ದುಮಕ್ಕಳ ಆನಂದ ಕಂಡು ದೇವದಾಸನಿಗೆ ಮನಸ್ಸು ತುಂಬಿ ಬಂತು. ಹಾಗೇ ನೋಡುತ್ತಾ ನಿಂತ.

ಆಗ ಎಲ್ಲಿಂದಲೋ ಚೆಂಡೊಂದು ಆತನ ಬಳಿಗೆ ಬಂದು ಬಿತ್ತು. ಅದನ್ನು ತೆಗೆದುಕೊಳ್ಳಲು ಮಕ್ಕಳೆಲ್ಲಾ  ಒಟ್ಟಾಗಿ ಹತ್ತಿರ ಬಂದರು. ಚೆಂಡನ್ನು ಮಕ್ಕಳಿಗೆ ಕೊಟ್ಟು, “ಆಟ ನಿಮಗೆಲ್ಲಾ ಪ್ರೀತಿಯೇ? ದಿನವೂ ಆಡುತ್ತೀರಾ?’ ಎಂದು ಪ್ರಶ್ನಿಸಿದ ದೇವದಾಸ. ಅದಕ್ಕೆ ಮಕ್ಕಳೆಲ್ಲಾ  “ಹೌದು’ ಎಂದು ಉತ್ತರಿಸಿದರು. ಅಷ್ಟರಲ್ಲಿ ಅಲ್ಲಿದ್ದ ಪುಟ್ಟ ಹುಡುಗಿಯೊಬ್ಬಳು, “ಆಟ ಇಷ್ಟವೇನೋ ಹೌದು. ಆದರೆ, ದಿನವೂ ಆಡಲಾಗುವುದಿಲ್ಲ. ಈ ಎಲ್ಲಾ  ಮರದ ಎಲೆಗಳು ಉದುರುತ್ತವೆ, ಹೂವುಗಳು ಬಾಡುತ್ತವೆ, ಕೆಲವೊಮ್ಮೆ ಸೂರ್ಯ ಮೋಡಗಳ ನಡುವೆ ಅಡಗುತ್ತಾನೆ. ನೀರೂ ಚಳಿಗೆ ಹೆಪ್ಪುಗಟ್ಟುತ್ತದೆ. ಬಣ್ಣಗಳೇ ಇಲ್ಲದೆ ಈ ಹುಲ್ಲುಗಾವಲು ಬೋಳುಬೋಳಾಗಿರುತ್ತದೆ. ಆ ಬೇಸರದ ವಾತಾವರಣದಲ್ಲಿ ಆಟ ರುಚಿಸದು. ಆಗ ನಮಗೆ ಹೀಗೆ ಆಡಲು ಸಾಧ್ಯವಿಲ್ಲ’ ಎಂದಳು. ಕೂಡಲೇ ಎಲ್ಲಾ  ಮಕ್ಕಳು “ನಿಜ’ ಎಂದು ಒಪ್ಪಿಗೆ ಸೂಚಿಸಿದರು. ತಮ್ಮತಮ್ಮಲ್ಲೇ ಯಾರಾದರೂ ನಮಗೆ ದಿನವೂ ಆಡುವಂತೆ ಏನಾದರೂ ಮಾಡಿದ್ದರೆ ಒಳ್ಳೆಯದಿತ್ತು ಎಂದು ಮಾತನಾಡಿಕೊಂಡು ನಂತರ ಚೆಂಡನ್ನು ಮರಳಿ ಪಡೆದು ಆಟ ಮುಂದುವರಿಸಿದರು. ಮಕ್ಕಳ ಮಾತಿಗೆ ನಕ್ಕು ದೇವದಾಸನೂ ತನ್ನ ಪಯಣ ಮುಂದುವರರಿಸಿದ.

ಅದಾಗಿ ತಿಂಗಳು ಕಳೆದ ಬಳಿಕ ಮತ್ತೆ ಅದೇ ದಾರಿಯಲ್ಲಿ ಬರುವಾಗ ಆ ಚೆಂದದ ಹುಲ್ಲುಗಾವಲು, ಮುದ್ದುಮಕ್ಕಳ ನೆನಪಾಯಿತು. ಕಾಣುವ ಆಸೆಯಾಗಿ ಅಲ್ಲಿಗೆ ಬಂದರೆ ಕಂಡದ್ದೇನು?ಎಲೆ ಉದುರಿದ ಬೋಳು ಮರಗಳು, ಮೋಡ ಕವಿದ ಸೂರ್ಯ, ಮುದುಡಿದ ಹೂಗಳು, ರಾಡಿಯಾದ ಕೊಳದ ನೀರು. ಎಲ್ಲೆಲ್ಲೂ ಮಬ್ಬು ಮಸುಕು ವಾತಾವರಣ. ಮಕ್ಕಳೆಲ್ಲಾ  ಸುಮ್ಮನೇ ಸಪ್ಪೆಮುಖ ಹೊತ್ತು ಕುಳಿತಿದ್ದರು. ಒಬ್ಬರಲ್ಲೂ ಆಡುವ ಉತ್ಸಾಹವಿಲ್ಲ. ಅಜಗಜಾಂತರ ವ್ಯತ್ಯಾಸವಿದ್ದ ಆ ದಿನ ಮತ್ತು ಈ ದಿನವನ್ನು ಕಂಡು ದೇವದಾಸನಿಗೆ ದುಃಖವಾಯಿತು. ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲೇಬೇಕೆಂದು ನಿಶ್ಚಯಿಸಿದ.

ಕೆಲ ನಿಮಿಷ ಯೋಚಿಸಿ ತನ್ನ ಮಾಯಾಚೀಲವನ್ನು ಹೊರತೆಗೆದ.ಅಲ್ಲೇ ಗಿಡಧಿ ಮರಗಳ ನಡುವೆ ನಿದ್ರಿಸುತ್ತಿದ್ದ ಕೆಲವು ಕಪ್ಪು ಬಣ್ಣದ ಕೀಟಗಳನ್ನು ಚೀಲದೊಳಗೆ ಹಾಕಿದ.ನಂತರ ಉದುರಿದ ಮರದ ಕೆಲವು ಎಲೆಗಳನ್ನು ಜೋಡಿಸಿದ. ಅವುಗಳ ಮೇಲೆ ತನ್ನ ವಿಶೇಷ ಕುಂಚದಿಂದ ನಾನಾ ರೀತಿಯ ವಿನ್ಯಾಸಗಳನ್ನು ಬರೆದ. ಚಿತ್ರಗಳಿಗೆ ಗುಲಾಬಿಯ ಕೆಂಪು, ಹುಲ್ಲಿನ ಹಸಿರು, ಬಿಸಿಲಿನ ಹಳದಿ, ನೀರಿನ ನೀಲಿ, ಹಿಮದ ಬಿಳಿ, ಹಣ್ಣಿನ ಕಿತ್ತಳೆ ಹೀಗೆ ತನ್ನ ಕಣ್ಣಿಗೆ ಚೆಂದ ಕಂಡ ಎಲ್ಲಾ ಬಣ್ಣಗಳನ್ನು ತೆಗೆದು ಚಿತ್ರಿಸಿದ. ಬಣ್ಣ ತುಂಬಿದ ಎಲ್ಲಾ ಎಲೆಗಳನ್ನು ಮಾಯಾ ಚೀಲದೊಳಕ್ಕೆ ಹಾಕಿದ. ತನ್ನೆಲ್ಲಾ  ಶಕ್ತಿ ಉಪಯೋಗಿಸಿ ಚೀಲ ಚೆನ್ನಾಗಿ ಕುಲುಕಿದ.

ನಂತರ ಚೀಲವನ್ನು ಸುಮ್ಮನೇ ಕುಳಿತಿದ್ದ ಮಕ್ಕಳ ಹತ್ತಿರ ಒಯ್ದ. ಕುತೂಹಲದಿಂದ ಮಕ್ಕಳೆಲ್ಲಾ  ಚೀಲವನ್ನು ನೋಡಿದರು. ಅವರೆದುರಿನಲ್ಲಿ ಚೀಲವನ್ನು ನಿಧಾನವಾಗಿ ಬಿಚ್ಚಿದಾಗ ಒಳಗಿನಿಂದ ಪಟಪಟಗುಡುತ್ತಾ ನೂರಾರು ಬಣ್ಣಬಣ್ಣದ ಚಿಟ್ಟೆಗಳು ಆಕಾಶದ ತುಂಬೆಲ್ಲಾ  ಹಾರಾಡಿದೆವು. ಮಾಯಾಶಕ್ತಿ ಫ‌ಲವಾಗಿ ಬಣ್ಣ ಬಳಿದ ಎಲೆಗಳು ಕೀಟಗಳಿಗೆ ರೆಕ್ಕೆಗಳಾಗಿ ಅಂಟಿಕೊಂಡಿದ್ದವು. ಇದರಿಂದ ಕಪ್ಪುಕೀಟಗಳು ಅತ್ಯಾಕರ್ಷಕ ಚಿಟ್ಟೆಗಳಾಗಿದ್ದವು. ಮಕ್ಕಳಂತೂ ಮನ ಸೆಳೆಯುವ ಇವುಗಳನ್ನು ಕಂಡು ಕುಣಿದು ಕುಪ್ಪಳಿಸಿದರು, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ತಮಗಾಗಿ ಯೋಚಿಸಿ, ಕೀಟಕ್ಕೊಂದು ಹೊಸ ರೂಪ ಕೊಟ್ಟ ದೇವದಾಸನಿಗೆ ಮನಃಪೂರ್ವಕ ವಂದನೆ ಸಲ್ಲಿಸಿದರು. ಅಂದಿನಿಂದ ಯಾವುದೇ ಕಾಲದಲ್ಲೂ, ನಿಸರ್ಗದ ಬಣ್ಣಗಳನ್ನು ಶಾಶ್ವತವಾಗಿ ತಮ್ಮಲ್ಲಿ ಇಟ್ಟುಕೊಂಡ ಚಿಟ್ಟೆಗಳು ಸೌಂದರ್ಯ ಸಂಭ್ರಮಕ್ಕೆ ಸಂಕೇತವಾದವು.

– ಡಾ. ಕೆ.ಎಸ್‌. ಚೈತ್ರಾ

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.