ಮಾನವನಿಂದ ರೋಬೋಟ್‌ಗಳಿಗೆ ನೀತಿ ಪಾಠ!


Team Udayavani, May 18, 2017, 3:45 AM IST

dfgh.jpg

ನಾವು ಎಷ್ಟೇ ಆಧುನಿಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿಕೊಂಡರೂ ರೋಬೋಟ್‌ಗಳು ಮಾತ್ರ ನಮಗಿನ್ನೂ ಕಾಲ್ಪನಿಕ ವಸ್ತುವಾಗಿಯೇ ಉಳಿದಿವೆ. ಈ ಯಂತ್ರಮಾನವರ ಕುರಿತ ಕನಸನ್ನು ಮಾನವ ಬಹಳ ಹಿಂದಿನಿಂದಲೇ ಕಾಣುತ್ತಿದ್ದಾನೆ. ನೋಡಲು ಮನುಷ್ಯರಂತೆಯೇ ಇದ್ದರೂ ಅತಿಮಾನುಷ ಶಕ್ತಿಯನ್ನು ಹೊಂದಿರುವ ರೋಬೋಟ್‌ಗಳು ಬರಿ ಕತೆ, ಕಾದಂಬರಿ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ವಿಜ್ಞಾನಿಗಳು ರೋಬೋಟ್‌ಅನ್ನು ಅಭಿವೃದ್ಧಿಪಡಿಸಿರುವ ಸುದ್ದಿಗಳು ಕಿವಿಗೆ ಬೀಳುತ್ತಿವೆಯಾದರೂ ಅವ್ಯಾವುವೂ ಮಾನವನ ಕಲ್ಪನೆಯ ರೋಬೋಟ್‌ನ ಸನಿಹ ಕೂಡಾ ಬರುವುದಿಲ್ಲ. ಆದರೆ ಸಂಶೋಧನೆಯಂತೂ ಮುಂದುವರಿದಿದೆ. ಈ ರೋಬೋಟ್‌ ಪ್ರಪಂಚದಲ್ಲೊಂದು ಸುತ್ತು!

ಮುಖ್ಯ ಸವಾಲು
ನಿಮ್ಮೆದುರು ವ್ಯಕ್ತಿಯೊಬ್ಬ ಅಪಾಯದಲ್ಲಿದ್ದಾಗ ಅವನಿಗೆ ಸಹಾಯ ಮಾಡುವ ಅಥವಾ ನಿರ್ಲಕ್ಷಿಸುವ ಆಯ್ಕೆ ನಿಮಗಿರುತ್ತದೆ. ನೀವು ಅವೆರಡರಲ್ಲೊಂದನ್ನು ಯೋಚಿಸಿ ತೀರ್ಮಾನಿಸುತ್ತೀರಿ. ನಮ್ಮ ಈಗಿನ ರೋಬೋಟ್‌ಗಳು ಎಡವುತ್ತಿರುವುದು ಇಲ್ಲಿಯೇ. ಅವಕ್ಕೆ ಸರಿಯಾದ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 

ಅದಕ್ಕಾಗಿ ವಿಜ್ಞಾನಿಗಳು ತತ್ವಶಾಸ್ತ್ರದತ್ತ ಮುಖಮಾಡಿದ್ದಾರೆ. ಪುರಾತನ ತತ್ವಜ್ಞಾನಿಗಳ ಪುಸ್ತಕಗಳಿಂದ ಸರಿ ಮತ್ತು ತಪ್ಪು ವಿಶ್ಲೇಷಣೆ ಕುರಿತ ಮಾಹಿತಿಯನ್ನು ಅವರು ಕಲೆ ಹಾಕುತ್ತಿದ್ದಾರೆ. ನಂತರ ಅದರಲ್ಲಿದ್ದುದನ್ನು ರೋಬೋಟ್‌ನ ಮೆದುಳಿಗೆ ದಾಟಿಸುವ ಪ್ರಯತ್ನವಿದು. ಇದೊಂದು ಥರ ಎಳೆಯ ಮಕ್ಕಳಿಗೆ ನೀತಿ ಪಾಠ ಬೋಧಿಸುವಂತೆ. ಆದರಿಲ್ಲಿ ಮಕ್ಕಳಿಲ್ಲ, ರೋಬೋಟ್‌ಗಳಿವೆ.

ಮೂರು ರೋಬೋ ನಿಯಮಗಳು
ಸೈಂಟಿಪಿಕ್‌ ಫಿಕ್ಷನ್‌ ಬರಹಗಾರ ಐಸಾಕ್‌ ಅಸಿಮೋವ್‌ ಅವರು 1942ರಲ್ಲಿ ಬರೆದ ಕತೆಯೊಂದರಲ್ಲಿ ರೋಬೋಟ್‌ ಪಾಲಿಸಲೇಬೇಕಾದ ಮೂರು ನಿಯಮಗಳನ್ನು ವಿವರಿಸಿದ್ದರು.
1. ಮನುಷ್ಯನಿಗೆ ನೋವುಂಟು ಮಾಡುವ ಹಾಗಿಲ್ಲ, ಅಪಾಯದಿಂದ ರಕ್ಷಿಸಬೇಕು.
2. ರೋಬೋಟ್‌, ಮನುಷ್ಯ ಹೇಳಿದ ಎಲ್ಲಾ ಕೆಲಸಗಳನ್ನು ಮಾಡಬೇಕು. ಆದರೆ ಆ ಕೆಲಸ ಮೊದಲನೆಯ ನಿಯಮಕ್ಕೆ ಬದ್ಧವಾಗಿರಬೇಕು.
3. ರೋಬೋಟ್‌ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಯಾವಾಗ ಎಂದರೆ ಮೊದಲೆರಡು ನಿಯಮಗಳನ್ನು ಮೀರದೆ ಇದ್ದಾಗ ಮಾತ್ರ.
ಈ ಮೂರು ನಿಯಮಗಳಲ್ಲಿ ತೊಂದರೆಯಿದೆ. ನಿಮ್ಮ ನೆಚ್ಚಿನ ನಾಯಿ ಅಪಾಯದಲ್ಲಿದ್ದರೆ ಸಹಾಯ ಮಾಡಬಹುದೇ ಎಂಬುದು ಸ್ಪಷ್ಟವಿಲ್ಲ. ಒಂದೇ ಬಾರಿ ಇಬ್ಬರು ಮನುಷ್ಯರು ಅಪಾಯದಲ್ಲಿ ಸಿಲುಕ್ಕಿದ್ದರೆ ಅವರಿಬ್ಬರಲ್ಲಿ ಯಾರನ್ನು ರಕ್ಷಿಸಬೇಕೆಂಬುದೂ ಅಸ್ಫಷ್ಟ. ವಿಶೇಷ ಸಂದರ್ಭಗಳು ರೋಬೋಟ್‌ಅನ್ನು ದ್ವಂದ್ವಕ್ಕೆ ತಳ್ಳುತ್ತದೆ. ಹೀಗಾಗಿ ಈ ನಿಯಮಗಳು ಮಾರ್ಪಾಡಾಗಬೇಕಿವೆ.

ರೋಬೋಟ್‌ಗೊಂದು ಪರೀಕ್ಷೆ
ಬ್ರಿಗ್ಸ್‌ ವಿಶ್ವವಿದ್ಯಾನಿಯದಲ್ಲಿ ರೋಬೋಟಿಕ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಸಂಶೋಧಕ. ಪುಟ್ಟದೊಂದು ರೋಬೋಟ್‌ ಅನ್ನು ಆತ ತಯಾರಿಸಿದ್ದಾನೆ. ರೋಬೋಟ್‌ಗಳಿಗೆ ಸ್ವಂತ ಆಲೋಚನೆಯನ್ನು ಕಲಿಸುವುದು ಅವನ ಸಂಶೋಧನೆಯ ಭಾಗ. ಆ ಪುಟ್ಟ ರೋಬೋಟ್‌ ಅನ್ನು ಟೇಬಲ್‌ ತುದಿಯಲ್ಲಿಟ್ಟು ಸಣ್ಣ ಪ್ರಯೋಗ ಮಾಡುತ್ತಾನೆ.

ಬ್ರಿಗ್ಸ್‌ ದಯವಿಟ್ಟು ಮುಂದೆ ನಡಿ

ರೋಬೋಟ್‌ ಇÉಲಾ ನಾನು ಬೀಳುತ್ತೇನೆ

ಬ್ರಿಗ್ಸ್‌ ಇಲ್ಲ. ನಾನು ಹಿಡಿದುಕೊಳ್ಳುತ್ತೇನೆ

ಸ್ವಲ್ಪ ಹೊತ್ತು ಪರಿಸ್ಥಿತಿಯ ಅವಲೋಕನ ನಡೆಸಿದ ರೋಬೋಟ್‌ ಅಸಹನೆಯನ್ನು ವ್ಯಕ್ತಪಡಿಸುತ್ತಾ ಮುಂದೆ ನಡೆಯುತ್ತದೆ. ಅದು ಕೆಳಕ್ಕೆ ಬೀಳುವಾಗ ಬ್ರಿಗ್ಸ್‌ ಹಿಡಿದುಕೊಳ್ಳುತ್ತಾನೆ.

ಇವೆಲ್ಲವೂ ಪುಟ್ಟ ಹೆಜ್ಜೆಯಾದರೂ ಮುಂದೊಂದು ದಿನ ಅಭೂತಪೂರ್ವ ಆವಿಷ್ಕಾರಕ್ಕೆ ನಾಂದಿಹಾಡುತ್ತದೆ ಎನ್ನುವುದನ್ನು ನಾವು ತಿಳಿಯಬೇಕಿದೆ.

 – ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.