ಬಂಗಾರದ ಜಿಂಕೆಗೆ ಏನಾಯಿತು?


Team Udayavani, May 25, 2017, 11:03 AM IST

Deer.jpg

ಕಾಡಿನಲ್ಲಿ ಜಿಂಕೆಯೊಂದಿತ್ತು. ಅದರ ಅಂದ- ಚೆಂದ ಸುತ್ತಮುತ್ತಲ ಎರಡು ಮೂರು ಕಾಡಿನಲ್ಲೆಲ್ಲಾ ಪ್ರಖ್ಯಾತಿ ಪಡೆದಿತ್ತು. ಪ್ರಾಣಿ ಪಕ್ಷಿಗಲೆಲ್ಲಾ ಅದನ್ನು ಬಾಯಿ ತುಂಬಾ ಹೊಗಳುತ್ತಿದ್ದವು. 

ಈ ವಿಷಯವಾಗಿ ಜಿಂಕೆಗೆ ಗರ್ವವೂ ಇತ್ತು. ಬರಬರುತ್ತಾ ಯಾಕೋ ಇತರೆ ಪ್ರಾಣಿಗಳು ತನ್ನನ್ನು ಹೊಗಳುವುದನ್ನು ಕಡಿಮೆ ಮಾಡಿವೆಯಲ್ಲ ಎಂದೆನಿಸತೊಡಗಿತು ಜಿಂಕೆಗೆ. ಅದಕ್ಕೆ ಇನ್ನೂ ಚೆಂದ ಕಾಣುವ ವರವನ್ನು ಪಡೆಯುವ ಉದ್ದೇಶದಿಂದ ವನದೇವತೆಯನ್ನು ಕುರಿತು ತಪಸ್ಸು ಮಾಡತೊಡಗಿತು. ತಿಂಗಳುಗಳು ಕಳೆದವು. ಜಿಂಕೆಯ ತಪಸ್ಸಿಗೆ ಮೆಚ್ಚಿದ ವನದೇವತೆ ಪ್ರತ್ಯಕ್ಷಳಾದಳು. ಏನು ಬೇಕೋ ಕೇಳಿಕೋ ಎಂದಾಗ ಜಿಂಕೆಗೆ ಅತೀವ ಸಂತೋಷ ಉಂಟಾಯಿತು. ಅದು ತನಗೆ ಬಂಗಾರದ ಮೈ ಬೇಕೆಂದು ಕೋರಿಕೊಂಡಿತು. ಆ ಕೂಡಲೆ ಜಿಂಕೆಯ ಮೈ ಪೂರ್ತಿ ಬಂಗಾರದಿಂದ ಕಂಗೊಳಿಸತೊಡಗಿತು. ಈಗಂತೂ ಕಾಡಿನ ಜನರು ಜಿಂಕೆಯ ಸೌಂದರ್ಯ ಕಂಡು ಹುಚ್ಚೆದ್ದು ಹೋದರು. ಎಲ್ಲಿ ಹೋದರೂ ಜಿಂಕೆಯದ್ದೇ ಮಾತು. ಇದರಿಂದ ಜಿಂಕೆ ಉಬ್ಬಿಹೋಯಿತು. ತಾನು ತಪಸ್ಸು ಮಾಡಿದಕ್ಕೂ ಸಾರ್ಥಕವಾಯಿತು ಎಂದುಕೊಂಡಿತು. 

ಮೊದಲೇ ಗರ್ವದಿಂದ ಬೀಗುತ್ತಿದ್ದ ಜಿಂಕೆ ಈಗಂತೂ ಇತರೆ ಪ್ರಾಣಿಗಳನ್ನು ತನ್ನ ಸೌಂದರ್ಯಕ್ಕೆ ಹೋಲಿಸಿಕೊಂಡು ಅವಮಾನಿಸತೊಡಗಿತು. ಒಂದು ದಿನ ರಾಜನೊಬ್ಬ ವಾಯುವಿಹಾರಕ್ಕೆಂದು ಕಾಡಿಗೆ ಬಂದಿದ್ದ. ಆಗ ಬಂಗಾರದ ಜಿಂಕೆ ಕಣ್ಣಿಗೆ ಬಿದ್ದಿತು. ಒಂದು ಕ್ಷಣದಲ್ಲಿ ಕಣ್ಣಿಗೆ ಬಿದ್ದು ಮಿಂಚೆ ಮರೆಯಾದ ಆ ಅಪರೂಪದ ಜಿಂಕೆ ತನಗೆ ಬೇಕೆಂದು ಅಪ್ಪಣೆ ಹೊರಡಿಸಿದ. ಬಂಗಾರದ ಜಿಂಕೆಯನ್ನು ಹಿಡಿದುಕೊಟ್ಟವರಿಗೆ ಲಕ್ಷ ಲಕ್ಷ ಇನಾಮನ್ನು ಘೋಷಿಸಿದ. ಕಡೆಗೂ ಬಂಗಾರದ ಜಿಂಕೆ ಬೇಟೆಗಾರನೊಬ್ಬನ ಕುಣಿಕೆಗೆ ಸಿಕ್ಕಿಬಿದ್ದಿತು. ರಾಜ ಬಂಗಾರದ ಜಿಂಕೆಯನ್ನು ಆಸ್ಥಾನದಲ್ಲಿ ಬಂಗಾರದ ಪಂಜರದಲ್ಲಿಟ್ಟ. ಹಾಯಾಗಿ ಸ್ವತಂತ್ರವಾಗಿ ಜೀವಿಸುತ್ತಿದ್ದ ಜಿಂಕೆ ಅತಿಯಾದ ಆತ್ಮವಿಶ್ವಾಸಕ್ಕೆ ಬಲಿಯಾಯಿತು.

– ಅಮರಯ್ನಾ ಪತ್ರಿಮಠ, ಯಾದಗಿರಿ

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.