ಆನೆ ಮತ್ತು ದರ್ಜಿ!


Team Udayavani, Sep 21, 2017, 11:20 AM IST

21STATE-35.jpg

ಒಂದೂರಲ್ಲಿ ಆನೆ ಮತ್ತು ದರ್ಜಿ ಸ್ನೇಹಿತರಾಗಿದ್ದರು. ದಿನವೂ ಬೆಳಗ್ಗೆ ಆನೆ ಸ್ನಾ ಮಾಡಲು ನದಿಗೆ ಹೋಗುತ್ತಿತ್ತು. ನದಿಗೆ ಹೋಗುವ ದಾರಿಯಲ್ಲಿಯೇ ದರ್ಜಿಯ ಅಂಗಡಿಯಿತ್ತು. ಹಾಗಾಗಿ ಪ್ರತಿದಿನ ಬೆಳಗ್ಗೆ ನದಿಗೆ ಹೋಗುವ ಮುನ್ನ ಆನೆ ದರ್ಜಿಯನ್ನು ಕಂಡು ಅವನು ಕೊಡುವ ಬಾಳೆಹಣ್ಣು ಮತ್ತಿತರ ತಿನಿಸುಗಳನ್ನು ತಿಂದು ಮುಂದಕ್ಕೆ ಹೋಗುತ್ತಿತ್ತು. ಜರ್ಜಿ ಆನೆಗೆ ತನ್ನಿಸಲೆಂದೇ ಥರಹೇವಾರಿ ಖಾದ್ಯಗಳನ್ನು ಮಾಡಿಸುತ್ತಿದ್ದನು. ಆನೆಯೂ ಅಷ್ಟೇ ದರ್ಜಿಗೆ ಏನಾದರೂ ಸಹಾಯ ಬೇಕಾದಾಗ ಕೈ ಜೋಡಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. 

ಒಂದು ದಿನ ದರ್ಜಿಯ ಮನಸ್ಥಿತಿ ಚೆನ್ನಾಗಿರಲಿಲ್ಲ. ಯಾವನೋ ಒಬ್ಬ ಗಿರಾಕಿ ಬೆಳಗ್ಗೆ ಬೆಳಗ್ಗೆ ದರ್ಜಿಯ ಜೊತೆ ಜಗಳವಾಡಿ ಹೋಗಿದ್ದ. ಅದೇ ಸಮಯಕ್ಕೆ ಆನೆ ಆ ದಾರಿಯಲ್ಲಿ ಹಾದು ಎಂದಿನಂತೆ ಸ್ನೇಹಿತ ದರ್ಜಿಯ ಅಂಗಡಿ ಮುಂದೆ ನಿಂತಿತು. ಆದರೆ ಆವತ್ತು ದರ್ಜಿ ಆನೆಗೆ ತಿನ್ನಲು ಏನೂ ಕೊಡಲಿಲ್ಲ. ಆನೆಗೆ ಕಾದು ಕಾದು ಸುಸ್ತಾಯಿತು. ಆದರೂ ದರ್ಜಿ ಕೊಟ್ಟೇ ಕೊಡುವನು ಎಂಬ ಆಸೆಯಲ್ಲಿ ಅಲ್ಲೇ ನಿಂತಿತ್ತು. 

ಆನೆಯನ್ನು ನೋಡಿಯೂ ನೋಡದಂತೆ ಮಾಡುತ್ತಿದ್ದ ದರ್ಜಿಗೆ ಕೋಪ ಹತ್ತಿತು. ತನ್ನ ಸಮಸ್ಯೆಗಳಿಗೆಲ್ಲಾ ಆನೆಯೇ ಕಾರಣ ಎಂಬಂತೆ ಕೈಯಲ್ಲಿ ಸೂಜಿ ಹಿಡಿದು ಕೈ ಮುಂದಕ್ಕೆ ಮಾಡಿದ. ಆನೆ ಪಾಪ, ದರ್ಜಿ ಏನೋ ಕೊಡುತ್ತಿದ್ದಾನೆ ಅಂತ ಬಾಯಿ ಹಾಕಿತು. ಸೂಜಿ ಸೊಂಡಿಲಿಗೆ ಚುಚ್ಚಿ ನೋವಿನಿಂದ ಚೀರಿತು. ಅದನ್ನು ಆನೆ ನಿರೀಕ್ಷಿಸಿರಲಿಲ್ಲ.

ನೋವಿನಿಂದ ಆನೆ ನದಿಯ ಕಡೆಗೆ ದಾಪುಗಾಲಿಕ್ಕಿತು. ಇತ್ತ ಆನೆಗೆ ಸೂಜಿಯಿಂದ ಚುಚ್ಚಿದ ದರ್ಜಿ ಕೆಲಸದಲ್ಲಿ ಮಗ್ನನಾದ. ಸ್ವಲ್ಪ ಹೊತ್ತಿನಲ್ಲಿ ನದಿಯಿಂದ ವಾಪಸ್ಸಾದ ಆನೆ ಮತ್ತೆ ಅಂಗಡಿ ಮುಂದೆ ನಿಂತುಕೊಂಡಿತು.  ದರ್ಜಿ ಆನೆಯತ್ತ ತಿರುಗಿ ನೋಡುವಷ್ಟರಲ್ಲಿ ಸೊಂಡಿಲಿನಲ್ಲಿ ತುಂಬಿಕೊಂಡು ಬಂದಿದ್ದ ಕೆಸರನ್ನು ಆನೆ ಅವನ ಅಂಗಡಿ ತುಂಬಾ ಚೆಲ್ಲಿತು. ಬಟ್ಟೆಗಳೆಲ್ಲಾ ಕೊಳೆಯಾದವು. ಅಷ್ಟರಲ್ಲಿ ಯಾರದೋ ಮೇಲಿನ ಸಿಟ್ಟನ್ನು ಇನ್ಯಾರದೋ ಮೇಲೆ ತೋರಿಸಿದರೆ ಇದೇ ಗತಿ ಎನ್ನುವುದು ದರ್ಜಿಗೆ ಅರ್ಥವಾಗಿತ್ತು.

ಹವನ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.