ಎರಡು ತಲೆಯ ಪಕ್ಷಿ


Team Udayavani, Sep 28, 2017, 10:47 AM IST

ch8.jpg

ಬಹಳ ಕಾಲದ ಹಿಂದೆ ಎರಡು ತಲೆಯುಳ್ಳ ಪಕ್ಷಿಯೊಂದು ವಾಸವಿತ್ತು. ಅದು ಯಾವಾಗಲೂ ನದಿಯ ತೀರದಲ್ಲಿದ್ದ ದೊಡ್ಡ ಆಲದ ಮರದ ಮೇಲೆ ಕುಳಿತು, ಪ್ರಕೃತಿಯ ರಮ್ಯ ವಾತಾವರಣವನ್ನು ವೀಕ್ಷಿಸುತ್ತಾ, ಮೈ ಮರೆಯುತ್ತಿತ್ತು. ಆ ಪಕ್ಷಿಗೆ ಎರಡು ತಲೆ ಇತ್ತಾದರೂ, ಹೊಟ್ಟೆ ಮಾತ್ರ ಒಂದೇ ಇತ್ತು. ಒಂದು ದಿನ ಅದಕ್ಕೆ ಆಲದ ಮರದ ವಾತಾವರಣ ಬೇಸರ ತಂದಿತು.

ಹೊರಗೆಲ್ಲಾದರೂ ಸುತ್ತಾಡಿಕೊಂಡು ಬರೋಣವೆಂದು ಹೊರಟಾಗ, ಸೇಬು ತೋಟವೊಂದು ಅದರ ಕಣ್ಣಿಗೆ ಬಿತ್ತು. ಯಾರಿಗೂ ಗೊತ್ತಾಗದ ಹಾಗೆ, ತೋಟದ ಮಧ್ಯದ ಒಂದು ಮರದ ಮೇಲೆ ಹೋಗಿ ಕುಳಿತಿತು. ತುಂಬಾ ರುಚಿರುಚಿಯಾದ ಹಣ್ಣುಗಳ ತೋಟವದು. ಪಕ್ಷಿಯ ಒಂದನೇ ತಲೆಗೆ ವಿಪರೀತ ಆಸೆಯಾಗಿ, ಹಣ್ಣನ್ನು ತಿನ್ನಲು ಮುಂದಾಯಿತು. ಇದನ್ನು ಕಂಡು ಎರಡನೇ ತಲೆಗೆ ಹೊಟ್ಟೆಕಿಚ್ಚಾಯಿತು; “ನಾನು ಅತ್ಯಂತ ಕಿರಿಯ ತಲೆ. ಮೊದಲು ನಾನು ತಿನ್ನಬೇಕು’ ಎಂದು ಅದು ಪಟ್ಟು ಹಿಡಿಯಿತು.

ಮೊದಲನೇ ತಲೆ ಅದಕ್ಕೆ ಬುದ್ಧಿವಾದ ಹೇಳಿ, “ನೋಡು… ನಮಗೆ ಎರಡು ತಲೆ ಇದ್ದರೂ ಇರೋದು ಒಂದೇ ಹೊಟ್ಟೆ. ಯಾರು ಮೊದಲು ತಿಂದರೇನು? ನಂತರ ತಿಂದರೇನು? ಬೇಕೆನಿಸಿದ್ದನ್ನು ತಿನ್ನೋಣ. ನಮ್ಮ ಆಸೆಗಳನ್ನು ನಿಗ್ರಹಿಸಿಕೊಳ್ಳುವುದು ಬೇಡ’ ಎಂದಿತು. ಎರಡನೇ ತಲೆಗೆ ಈ ಮಾತನ್ನು ಕೇಳುವಷ್ಟು ಸಂಯಮವಿರಲಿಲ್ಲ. ಸಿಡುಕು ಮೋರೆಯಿಂದ, ಪ್ರತಿಭಟಿಸತೊಡಗಿತು. ಅಷ್ಟರಲ್ಲಾಗಲೇ ಒಂದನೇ ತಲೆ ಸೇಬು ಹಣ್ಣನ್ನು ತಿಂದು, ತೇಗಿಯಾಗಿತ್ತು.

ಮರುದಿನ ಪಕ್ಷಿ ಮತ್ತೆ ಹೊರಗೆ ಹೊರಟಿತು. ಹಾರುತ್ತಾ ಹಾರುತ್ತಾ, ರೆಕ್ಕೆ ಬಳಲಿದ ಕಾರಣ, ಒಂದು ಮರದ ಮೇಲೆ ಹೋಗಿ ಕುಳಿತಿತು. ಅದು ವಿಷದ ಮರ. ಅಲ್ಲಿ ವಿಷಪೂರಿತ ಹಣ್ಣುಗಳು ತೂಗಿಬಿದ್ದಿದ್ದವು. ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲೇಬೇಕೆಂದು ಪಣತೊಟ್ಟಿದ್ದ ಎರಡನೇ ತಲೆ, ಆ ಹಣ್ಣುಗಳನ್ನು ತಿನ್ನಲು ಮುಂದಾಯಿತು. ಒಂದನೇ ತಲೆ ಇದಕ್ಕೆ ಪ್ರತಿರೋಧಿಸುತ್ತಾ, “ನೋಡು ಇಂಥ ಹಣ್ಣುಗಳನ್ನು ತಿನ್ನಬಾರದು. ನಮಗಿರುವುದು ಒಂದೇ ಹೊಟ್ಟೆ.

ವಿಷದ ಹಣ್ಣನ್ನು ತಿಂದರೆ, ನಮ್ಮ ಜೀವವೇ ಹೊರಟು ಹೋಗುತ್ತೆ’ ಎಂದು ಎಚ್ಚರಿಸಿತು. ಸೊಕ್ಕಿನಿಂದ ವರ್ತಿಸುತ್ತಿದ್ದ ಎರಡನೇ ತಲೆ, ಈ ಬುದ್ಧಿಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ. “ಆಸೆಯ ನಿಗ್ರಹ ತಪ್ಪು. ಬೇಕೆನಿಸಿದ್ದನ್ನು ತಿಂದುಬಿಡಬೇಕು ಎಂದು ನೀನೇ ಹೇಳಿದ್ದೆ…’ ಎಂದು ಚುಚ್ಚಿ ಮಾತಾಡುತ್ತಾ, ವಿಷದ ಹಣ್ಣನ್ನು ಕೊಕ್ಕಿನಿಂದ ಕುಟುಕಿ ತಿನ್ನತೊಡಗಿತು. ಕೆಲವೇ ನಿಮಿಷಗಳಲ್ಲಿ ಪಕ್ಷಿಯ ಪ್ರಾಣ ಹಾರಿಹೋಯಿತು.

* ಮೇರಿ

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.