ಹುಲಿಯನ್ನು ಮಾಯ ಮಾಡಿದ ಹುಡುಗಿ


Team Udayavani, Oct 5, 2017, 6:00 AM IST

lead-kathe1.jpg

“ಸ್ವರ್ಣಪುರ’ ರಾಜ್ಯದಲ್ಲಿ ಸ್ವರ್ಣರಾಜನೆಂಬ ಅರಸನಿದ್ದ. ಅವನ ಬಳಿ ರಾಜಪ್ಪನೆಂಬ ಸೇವಕನಿದ್ದ. ಅವನು, ರಾಜನ ಮಕ್ಕಳನ್ನು ರಥದಲ್ಲಿ ಶಾಲೆಗೆ ಕರೆದೊಯ್ದು ಅರಮನೆಗೆ ವಾಪಸ್‌ ಕರೆತರುವ ಕೆಲಸವನ್ನು ಮಾಡುತ್ತಿದ್ದ. ರಾಜಪ್ಪನಿಗೆ ಸ್ವರ್ಣ ಎಂಬ ಹೆಸರಿನ ಮಗಳಿದ್ದಳು. ಅವಳು ತುಂಬಾ ಬುದ್ಧಿವಂತೆ. ಅವಳಿಗೆ ತಾನೂ ರಥದಲ್ಲಿ ಕುಳಿತು ರಾಜರ ಮಕ್ಕಳ ಜೊತೆ ಶಾಲೆಗೆ ಹೋಗಬೇಕೆಂಬ ಆಸೆ. ಆದರೆ ಮಗಳ ಆಸಕ್ತಿಗೆ ಸಹಾಯ ಮಾಡಲಾಗದ ಕುರಿತು ರಾಜಪ್ಪನಿಗೆ ಬೇಸರವಿತ್ತು. 

ಒಂದು ದಿನ ಆ ಊರಿಗೆ ಒಬ್ಬ ಹುಲಿಯ ಜೊತೆ ಬಂದ. ಬಂದವನು ರಾಜರಿಗೊಂದು ಸವಾಲು ಹಾಕಿದ. “ಪಂಜರದ ಬಾಗಿಲು ತೆಗೆಯದೆ ಹುಲಿಯನ್ನು ಹೊರಬಿಡಬೇಕು. ಅಥವಾ ಹುಲಿ, ಪಂಜರದಿಂದ ಮಾಯವಾಗುವಂತೆ ಮಾಡಬೇಕು. ಹಾಗೆ ಮಾಡದಿದ್ದರೆ ಸೋತು ನನಗೆ ರಾಜ್ಯ ಬಿಡಬೇಕು.’ ಎಂದು ಊರಿಡೀ ಡಂಗುರ ಸಾರಿದ. ರಾಜನ ಸುದ್ದಿ ಮುಟ್ಟಿತು. ಮಂತ್ರಿಗಳು, ಸೈನಿಕರು, ಜಟ್ಟಿಗಳು, ಬೇಟೆಗಾರರನ್ನು ಅದೇನೆಂದು ನೋಡಿಕೊಂಡು ಬರಲು ಕಳಿಸಿದ. ಅವರೆಲ್ಲರೂ ಹುಲಿ ಕಂಡು ಹೆದರಿದರು. ಯಾರೊಬ್ಬರೂ ಅದರ ಹತ್ತಿರಕ್ಕೂ ಹೋಗುವ ಧೈರ್ಯ ಮಾಡಲಿಲ್ಲ. ರಾಜನಿಗೆ ತನ್ನ ಹೆಸರನ್ನು ಹೇಗೆ ಉಳಿಸಿಕೊಳ್ಳುವುದೆಂದು ಚಿಂತೆಯಾಯಿತು. ಆಗ ಅಲ್ಲಿಗೆ ಬಂದಳು ಸ್ವರ್ಣ. ತಾನು ಆ ಸವಾಲನ್ನು ಸ್ವೀಕರಿಸುತ್ತೇನೆ ಎಂದಳು. ರಾಜನಿಗೆ ಆಶ್ಚರ್ಯವಾಯಿತು. ರಾಜಪ್ಪ “ಇದೇನಿದು ನಿನ್ನ ಹುಚ್ಚಾಟ’ ಎಂದು ತಡೆದನು. ಆದರೆ ಸ್ವರ್ಣ ರಾಜನ ಹೆಸರನ್ನು ತಾನು ಉಳಿಸಿಯೇ ತೀರುವೆನೆಂದು ಭರವಸೆ ನೀಡಿದಾಗ ರಾಜ ಸಮ್ಮತಿಸಿದನು. 

ಜನರೆಲ್ಲರೂ ಅಂದು ಮೈದಾನದಲ್ಲಿ ನೆರೆದರು. ಮಧ್ಯದಲ್ಲಿ ಪಂಜರ ಇಡಲಾಗಿತ್ತು. ಪಂಜರವನ್ನು ಅರ್ಧಂಬರ್ಧ ಬಟ್ಟೆಯಿಂದ ಮುಚ್ಚಲಾಗಿತ್ತು. ಹುಲಿಯ ಘರ್ಜನೆ ಕೇಳಿಯೇ ಜನರು ಬೆಚ್ಚಿದರು. ಪುಟ್ಟ ಹುಡುಗಿ ಏನು ಮಾಡುವಳ್ಳೋ ಎಂದು ಕನಿಕರ ಪಟ್ಟರು. ಎಲ್ಲರೂ ನೋಡುತ್ತಿದ್ದಂತೆಯೇ ಸ್ವರ್ಣ ಹುಲಿ ಹತ್ತಿರ ಹೋದಳು. ಒಂದೆರಡು ಸುತ್ತು ಬಂದ ಸ್ವರ್ಣ ಪಂಜರದ ಸುತ್ತ ಬೆಂಕಿಯನ್ನು ಹಚ್ಚಿದಳು. ಜನರಿಗೆ ಅವಳು ಏನು ಮಾಡುತ್ತಿದ್ದಾಳೆಂದೇ ತಿಳಿಯಲಿಲ್ಲ. ಏನಾದರೂ ಮಂತ್ರ ತಂತ್ರವನ್ನು ಪ್ರಯೋಗಿಸುತ್ತಿದ್ದಾಳೆಯೇ ಎಂದು ಪಂಜರದತ್ತಲೇ ಎಲ್ಲರು ಕಣ್ಣುಗಳನ್ನು ನೆಟ್ಟಿದ್ದರು. ಪಂಜರದ ಬಟ್ಟೆಯನ್ನು ಪೂರ್ತಿ ಸರಿಸಿದಾಗ ಹುಲಿ ಪಂಜರದಲ್ಲಿರಲಿಲ್ಲ. ಅದನ್ನು ಕಂಡು ಜನರು ಹೌಹಾರಿದರು. ಕಣ್ಣೆದುರೇ ಹುಲಿಯನ್ನು ಮಾಯ ಮಾಡಿ ರಾಜನ ಹೆಸರನ್ನುಳಿಸಿದ ಸ್ವರ್ಣಳನ್ನು ಕುರಿತು ಹರ್ಷೋದ್ಗಾರ ಮಾಡಿದರು. 

ಹುಲಿಯನ್ನು ಮಾಯ ಮಾಡಿದ್ದು ಹೇಗೆಂಬ ಪ್ರಶ್ನೆ ರಾಜರನ್ನೂ ಕೊರೆಯುತ್ತಿತ್ತು. ಅವರು ಕೇಳಿದಾಗ ಸ್ವರ್ಣ ಆ ರಹಸ್ಯವನ್ನು ಬಿಚ್ಚಿಟ್ಟಳು. “ನಾನು ಪಂಜರದ ಸುತ್ತ ಸುತ್ತಿದರೂ ಆ ಹುಲಿ ಜನರನ್ನೇ ನೋಡುತ್ತಿತ್ತು. ನನ್ನತ್ತ ದೃಷ್ಟಿಯನ್ನು ಹಾಯಿಸಲೇ ಇಲ್ಲ. ನೀವೆಲ್ಲರೂ ಅದರ ಸದ್ದು ಕೇಳಿಯೇ ಭಯಪಟ್ಟಿದ್ದಿರಿ. ಆದರೆ ವಿಷಯವೇನೆಂದರೆ ಅದು ನಿಜವಾದ ಹುಲಿಯಾಗಿರಲಿಲ್ಲ. ಘರ್ಜನೆ ಸದ್ದನ್ನು ಮನುಷ್ಯನೇ ಹೊರಡಿಸುತ್ತಿದ್ದ. ಇದು ನನಗೆ ತಿಳಿಯಿತು.’. “ಅದು ಸರಿ, ನಕಲಿಯಾದರೂ, ಅದನ್ನು ಪಂಜರದಿಂದ ಹೇಗೆ ಮಾಯ ಮಾಡಿದೆ?’ ಎಂದು ಕೇಳಿದ ರಾಜ. ಸ್ವರ್ಣ, ಆ ರಹಸ್ಯವನ್ನೂ ಬಿಚ್ಚಿಟ್ಟಳು “ರಾಜರೇ, ಅದು ಮೇಣದಿಂದ ತಯಾರಿಸಲಾಗಿದ್ದ ಹುಲಿಯ ಮೂರ್ತಿಯಾಗಿತ್ತು. ಅದಕ್ಕೇ ಸುತ್ತಲೂ ಬೆಂಕಿಯನ್ನು ಹಚ್ಚಿದೆ. ಅದರ ಶಾಖಕ್ಕೆ ಮೇಣ ಕರಗಿತು. ಹುಲಿ ಮಾಯವಾಯಿತು’ ಎಂದು ನಕ್ಕಳು. ಅವಳ ಬುದ್ಧಿವಂತಿಕೆಗೆ ತಲೆದೂಗಿದ ರಾಜ “ಭೇಷ್‌ ಸ್ವರ್ಣ. ಮೆಚ್ಚಿದೆ ನಿನ್ನ ಬುದ್ಧಿವಂತಿಕೆಯನ್ನು. ನಿನಗೇನು ಬಹುಮಾನ ಬೇಕೋ ಕೇಳು’ ಎಂದನು ಸಂತೃಪ್ತನಾಗಿ. ಇದೇ ಸರಿಯಾದ ಸಮಯವೆಂದು ಸ್ವರ್ಣ ತನಗೆ ರಾಜಕುಮಾರರ ಜೊತೆ ರಥದಲ್ಲಿ ಕುಳಿತು ಶಾಲೆಗೆ ಹೋಗಲು ಅವಕಾಶ ಮಾಡಿಕೊಡಬೇಕೆಂದು ಕೇಳಿದಳು. ರಾಜ ಸ್ವರ್ಣಾಳ ಕೋರಿಕೆಯನ್ನು ಪೂರೈಸಿದ.

– ಲಲಿತಾ ಕೆ. ಹೊಸಪ್ಯಾಟಿ, ಹುನಗುಂದ

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.