ಭೀಮ, ಅಭಿಮನ್ಯು ಮತ್ತು ಘಟೋತ್ಕಚರ ದಾಳಿ


Team Udayavani, Oct 12, 2017, 11:15 AM IST

purana.jpg

ಸಂಜಯನು ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ನಿರೂಪಣೆ ಮಾಡುತ್ತಿದ್ದ. ಧೃತರಾಷ್ಟ್ರನು, “ಸಂಜಯ, ಪಾಂಡವರು ಮತ್ತೆ ಮತ್ತೆ ವಿಜೃಂಭಿಸುತ್ತಿದ್ದಾರೆ. ನನ್ನ ಮಕ್ಕಳಲ್ಲಿ ಹಲವರು ಆಗಲೇ ಹತರಾಗಿದ್ದಾರೆ. ಪಾಂಡವರು ಹೀಗೆ ಮೇಲುಗೈ ಸಾಧಿಸಲು ಕಾರಣವೇನು? ನನಗೆ ತುಂಬಾ ನಿರಾಸೆಯಾಗುತ್ತಿದೆ’ ಎಂದ. ಆಗ ಸಂಜಯನು, “ಮಹಾರಾಜ,  ಪಾಂಡವರು ಬಲಶಾಲಿಗಳು, ಧರ್ಮ ಸ್ಥಾಪನೆಗಾಗಿ ಧರ್ಮ ಏನು ಹೇಳಿದೆಯೋ ಅದೇ ರೀತಿಯಲ್ಲಿ ಯುದ್ಧ ಮಾಡುತ್ತಿದ್ದಾರೆ. ಕೃಷ್ಣನಿರುವ ಕಡೆ ಧರ್ಮ, ಧರ್ಮವಿರುವ ಕಡೆ ವಿಜಯ’ ಎಂದು ಹೇಳಿ ತನ್ನ ಕಥೆಯನ್ನು ಮುಂದುವರಿಸಿದ. 

ಹೀಗೆಯೇ ಯುದ್ಧವು ಒಂಬತ್ತನೇ ದಿನದವರೆಗೆ ಸಾಗಿತು. ಭೀಷ್ಮ, ದ್ರೋಣ, ದುರ್ಯೋಧನ, ದುಶಾÏಸನ, ಅಶ್ವತ್ಥಾಮ, ಶಲ್ಯ, ಭೀಮ, ಅರ್ಜುನ, ಸಾತ್ಯಕಿ, ಅಭಿಮನ್ಯು..ಹೀಗೆ ಎಲ್ಲರೂ ಯುದ್ಧದಲ್ಲಿ ಅಸಾಧಾರಣ ಶೌರ್ಯವನ್ನು ಮೆರೆದರು. ಭೂರಿಶ್ರವನು ಸಾತ್ಯಕಿಯ ಹತ್ತು ಮಂದಿ ಮಕ್ಕಳನ್ನು ಕೊಂದ. ಮತ್ತೆ ಮತ್ತೆ ಕುರುಸೇನೆಯು ದಿಕ್ಕುಗೆಟ್ಟು ಪಲಾಯನ ಮಾಡಿತು. ಇದನ್ನೆಲ್ಲ ಕೇಳಿದ ಧೃತರಾಷ್ಟ್ರನು, “ಸಂಜಯ, ನಮ್ಮ ಕಡೆ ಪರಾಕ್ರಮಿಗಳಿದ್ದಾರೆ. ಸ್ವಾಮಿನಿಷ್ಠ ಸೈನ್ಯ ನಮ್ಮದು. ಇಷ್ಟಾದರೂ ನಾವು ಸೋಲುತ್ತಿದ್ದೇವೆ ಎಂದರೆ ಇದು ವಿಧಿಯ ಆಟ, ದುರ್ಯೋಧನನು ವಿದುರನ ಎಚ್ಚರಿಕೆಯ ಮಾತುಗಳನ್ನು ಕೇಳಲಿಲ್ಲ’ ಎಂದು ವಿಷಾದಿಸಿದ. 

ಹೀಗಿರುವಾಗಲೇ ಒಮ್ಮೆ ಭೀಮ ಮತ್ತು ದುರ್ಯೋಧನರ ನಡುವೆ ಭೀಕರ ಕಾಳಗವಾಯಿತು. ದುರ್ಯೋಧನನು ಪ್ರಯೋಗಿಸಿದ ಬಾಣಗಳಿಂದ ಭೀಮನಿಗೆ ಘಾಸಿಯಾಯಿತು. ದುರ್ಯೋಧನನು ಭೀಮನನ್ನು ಕೊಲ್ಲಲು ಅವನ ಮೇಲೆ ಎರಗಿದ. ಕೋಪದಿಂದ ಕುದಿಯುತ್ತಿದ್ದ ಭೀಮನು ಬೆಂಕಿಯಂತೆ ಬೆಳಗುತ್ತಿದ್ದ ಮೂವತ್ತಾರು ಬಾಣಗಳನ್ನು ಹೊಡೆದು ದುರ್ಯೋಧನನ ಸಾರಥಿಯನ್ನೂ, ಕುದುರೆಗಳನ್ನೂ ಕೊಂದ, ಧ್ವಜವನ್ನೂ ಉರುಳಿಸಿದ. ಭೀಮನ ಈ ಮರುದಾಳಿಯಿಂದ ದುರ್ಯೋಧನನಿಗೆ ತಡೆಯಲಾರದಷ್ಟು ನೋವಾಯಿತು. ಆಗ ಧೃತರಾಷ್ಟ್ರನ ಮಗಳು ದುಶ್ಶಲೆಯ ಗಂಡ ಜಯದ್ರಥನೂ, ಕೃಪಾಚಾರ್ಯರೂ ದುರ್ಯೋಧನನ ಸಹಾಯಕ್ಕೆ ಧಾವಿಸಿದರು. ಇವರ ಕಾಳಗ ನಡೆಯುತ್ತಿರುವಾಗಲೇ ರಾತ್ರಿಯಾಗಿ ಯುದ್ಧವಿರಾಮ ಘೋಷಣೆಯಾಯ್ತು. ಭೀಷ್ಮರು ಕೌರವಸೇನೆಯ ದಳಪತಿಯಾಗಿದ್ದ ಹತ್ತು ದಿನಗಳಲ್ಲಿ ಇಂಥ, ರಕ್ತ ಹೆಪ್ಪುಗಟ್ಟುವಂತೆ ಮಾಡಿದ ಮುಖಾಮುಖೀಗಳು ಎಷ್ಟೋ. ಮತ್ತೆ ಮತ್ತೆ ದುರ್ಯೋಧನನು, ಭೀಷ್ಮ ಪಿತಾಮಹರು ಪಾಂಡವರ ಪಕ್ಷಪಾತಿಯೆಂದೂ, ಅವರು ಮನಸ್ಸಿಟ್ಟು ಯುದ್ಧ ಮಾಡುತ್ತಿಲ್ಲವೆಂದೂ ಆಕ್ಷೇಪಿಸಿದ. ಆಗ ಭೀಷ್ಮರು, “ಪಾಂಡವರು ಧರ್ಮವನ್ನು ಅನುಸರಿಸುತ್ತಾರೆ. ನಾನು, ದ್ರೋಣರು, ವಿದುರ, ಗಾಂಧಾರಿ ಸೇರಿ ಎಲ್ಲರೂ ನಿನಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ನೀನು ಕೇಳದೇ ಹೋದೆ. ನೆನಪಿಟ್ಟುಕೋ: ಎಷ್ಟೇ ಹೋರಾಡಿದರೂ ನಾನು, ದ್ರೋಣರು, ನೀನು ಯಾರೂ ಯುದ್ಧದಲ್ಲಿ ಉಳಿಯುವುದಿಲ್ಲ’ ಎಂದು ಹೇಳಿದರು. 

ಆರನೆಯ ದಿನ ಶಕುನಿ ಮತ್ತು ಅವನ ಸೋದರರು, ಅರ್ಜುನನ ಮಗನಾದ ಸುಂದರಾಂಗನೂ ವೀರನೂ ಆಗಿದ್ದ ಇರಾವತನ ಮೇಲೆ ದಾಳಿ ಮಾಡಿದರು. ಇರಾವತನು ಬಹು ಪರಾಕ್ರಮದಿಂದ ಸೆಣಸಾಡಿದ. ಮೈತುಂಬಾ ಬಾಣಗಳು ನೆಟ್ಟಿದ್ದರೂ ಶತ್ರುಗಳ ಮೇಲೆ ಏರಿ ಹೋದ. ಅಲಂಬುಸ ಎನ್ನುವ ರಾಕ್ಷಸ ಪಾಂಡವರ ವೈರಿ, ದುರ್ಯೋಧನನ ಸೈನ್ಯವನ್ನು ಸೇರಿದ್ದ. ದುರ್ಯೋಧನನು ಅವನಿಗೆ ಇರಾವತನನ್ನು ಕೊಲ್ಲುವಂತೆ ಆಜ್ಞೆ ಮಾಡಿದ. ಅಲಂಬುಸನು ಮಾಯಾಯುದ್ಧ ಮಾಡಿ ಇರಾವತನನ್ನು ಕೊಂದ. ಇದನ್ನು ಕಂಡ ಘಟೋತ್ಕಚನು ಆಕ್ರೋಶದಿಂದ ದುರ್ಯೋಧನನ ಮೇಲೆ ಬಾಣಗಳನ್ನು ಸುರಿಸಿದ. ಎರಡು ಸೈನ್ಯಗಳ ಪರಾಕ್ರಮಿಗಳೂ ತಮ್ಮ ತಮ್ಮ ವೀರರ ನೆರವಿಗೆ ಧಾವಿಸಿದರು. ಕೊನೆಗೆ ಭೀಮ, ಅಭಿಮನ್ಯು ಮತ್ತು ಘಟೋತ್ಕಚರ ದಾಳಿಯಿಂದ ಕಂಗೆಟ್ಟು ಕೌರವ ಸೇನೆ ಓಡಿಹೋಯ್ತು. ಆ ಹೊತ್ತಿಗೆ ಕತ್ತಲಾಗಿ ಅಂದಿನ ದಿನದ ಯುದ್ಧ ಮುಗಿದು ಹೋಯ್ತು. 

–  (ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.