ಸೌದಿಯಲ್ಲಿ ಕೊಪ್ಪಳದ ಮಹಿಳೆಗೆ ಕಿರುಕುಳ
Team Udayavani, Jul 31, 2017, 3:26 PM IST
ಕೊಪ್ಪಳ: ಸೌದಿ ಅರೆಬಿಯಾದಲ್ಲಿ ಖುರಹಾನ್ ಪಠಣ ಮಾಡುವ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಪತ್ನಿಯನ್ನು ಉಡುಪಿ ಏಜೆಂಟ್ ಮೂಲಕ ಕರೆದುಕೊಂಡು ಹೋಗಿದ್ದು, ಅಲ್ಲಿ ನನ್ನ ಪತ್ನಿಗೆ ಮಾನಸಿಕ, ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಪತಿ ಬಾಬುಸಾಬ್ ಬಾಬಣ್ಣನವರ್ ರವಿವಾರ ನಗರದ ಸಂಸದರ ನಿವಾಸದ ಬಳಿ ಗೋಳಾಡಿದರು.
ಪತ್ನಿ ಚಾಂದಸಾಬ್ ಬಾಬಣ್ಣವರ್ ಸೌದಿ ಅರೆಬಿಯಾದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ನನ್ನನ್ನು ಇಲ್ಲಿಂದ ಬೇಗ ಕರೆದುಕೊಂಡು ಹೋಗಿ, ನನಗೆ ಇಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಊಟವನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದು ಗೋಗರೆಯುತ್ತಿದ್ದಾಳೆ. ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ ಎಂದು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ನನಗೆ ದಿಕ್ಕೇ ತೋಚದಂತಾಗಿದೆ. ನನ್ನ ಪತ್ನಿ ರಕ್ಷಿಸಿ ಭಾರತಕ್ಕೆ ಕರೆ ತರಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಪತಿ ಬಾಬುಸಾಬ್ ಕಣ್ಣೀರಿಟ್ಟರು.
ಏನಿದು ಘಟನೆ ?: ಬಾಬುಸಾಬ ಬಾಬಣ್ಣನವರ್ ಕೊಪ್ಪಳದ ನಿರ್ಮಿತಿ ಕೇಂದ್ರದ ಬಡಾವಣೆಯ ನಿವಾಸಿ. ಈತನ ಪತ್ನಿ ಚಾಂದ ಸುಲ್ತಾನ್ ಖುರಾನ್ ಪಠಣ ಮಾಡುತ್ತಿದ್ದಳು. ಈ ಮಾಹಿತಿ ಪಡೆದ ಉಡುಪಿ ಮೂಲದ ಶೆಮ್ಷೇರ್ ಎನ್ನುವ ಏಜೆಂಟ್ ಈ ಕುಟುಂಬ ಪತ್ತೆ ಮಾಡಿ ಸೌದಿ ಅರೇಬ್ಬಿಯಾದಲ್ಲಿ
ಪ್ರತಿ ತಿಂಗಳು 40 ಸಾವಿರ ವೇತನ ಕೊಡಲಾಗುತ್ತೆ. ಅಲ್ಲಿನ ಮಕ್ಕಳಿಗೆ ಖುರಹಾನ್ ಪಠಣ ಮಾಡಿಸಲು ಚಾಂದ್ ಸುಲ್ತಾನ್ ಅವರನ್ನು ಕಳುಹಿಸಿಕೊಡುವಂತೆ ಈ ಕುಟುಂಬಕ್ಕೆ ಪುಸಲಾಯಿಸಿದ್ದಾನೆ. ಇದಕ್ಕೆ ಒಪ್ಪಿದ ಬಾಬುಸಾಬ್ ತನ್ನ ಪತ್ನಿಯನ್ನು 3 ತಿಂಗಳ ಹಿಂದೆ ಸೌದಿ ಅರಬಿಯಾಗೆ ಕಳುಹಿಸಿದ್ದಾನೆ. ಸೌದಿ ಅರೆಬಿಯಾದ ಏಜೆಂಟ್ ಆರೀಫ್ ಮೂಲಕ ರಿಯಾಜ್ ಎನ್ನುವ ಏರಿಯಾದಲ್ಲಿನ ಫರೀದ್ಸಾಬ್ ಎನ್ನುವ ಮನೆ ಮಾಲೀಕರ ಮನೆಯಲ್ಲಿ ಚಾಂದ ಸುಲ್ತಾನ್ ಅವರನ್ನು ಕೆಲಸಕ್ಕೆ ಇರಿಸಿದ್ದಾರೆ. ಆದರೆ ನನ್ನ ಪತ್ನಿಗೆ ಖುರಹಾನ್ ಪಠಣ ಕೆಲಸ ಕೊಡಿಸುವುದು ಬಿಟ್ಟು ಶೌಚಾಲಯ
ಸ್ವತ್ಛತೆ, ಮನೆ ಸ್ವತ್ಛತೆಗೆ ಇಟ್ಟುಕೊಂಡಿದ್ದಾರೆ.
ತಿಂಗಳಿಗೊಮ್ಮೆ ನನಗೆ ಕರೆ ಮಾಡಿ, ನನಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ. ನನಗೆ ಊಟ ಕೊಡುತ್ತಿಲ್ಲ. ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ನನ್ನನ್ನು ಕೂಡಲೇ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ದೂರವಾಣಿ ಮೂಲಕ ಕೊಪ್ಪಳದ ತನ್ನ ಪತಿ ಬಾಬುಸಾಬ್ಗ ಕರೆ ಮಾಡಿದ್ದಾಳೆ. ಇದರಿಂದ ವಿಚಲಿನಾದ ಪತಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಗೋಳಾಡಿ ಕಣ್ಣೀರಿಟ್ಟಿದ್ದಲ್ಲದೆ ನನ್ನ ಪತ್ನಿಯನ್ನು ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದರು.
ಬಾಬಾಸಾಬ್ ತನ್ನ ಸಮಸ್ಯೆಯನ್ನು ನನ್ನ ಮುಂದೆ ಹೇಳಿದ್ದಾನೆ. ನಾನು ದೆಹಲಿಗೆ ಹೊರಟಿದ್ದೇನೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಪ್ರಸ್ತಾಪಿಸಿ ಗಮನಕ್ಕೆ ತರುವೆ. ನೊಂದ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.
ಸಂಗಣ್ಣ ಕರಡಿ, ಸಂಸದ
ನನ್ನ ಪತ್ನಿಗೆ ಸೌದಿ ಅರೇಬಿಯಾದಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮನೆಯೊಂದರಲ್ಲಿ ಕೂಡಿ ಹಾಕಿದ್ದಾರಂತೆ. ನನ್ನ ಪತ್ನಿ ರಸ್ತೆ ಪಕ್ಕ ಹೊರಟಿದ್ದ ಯುವಕನಿಂದ ಕಿಟಕಿ ಮೂಲಕ ಫೋನ್ ಪಡೆದು ನನಗೆ ವಿಷಯ ತಿಳಿಸಿದ್ದಾಳೆ. ನನ್ನ ಪತ್ನಿ ಸಂಕಷ್ಟದಲ್ಲಿದ್ದಾಳೆ. ರಕ್ಷಿಸಲು ಸಂಸದರಿಗೆ ಮನವಿ ಮಾಡಿದ್ದೇನೆ.
ಬಾಬುಸಾಬ್ ಬಾಬಣ್ಣನವರ್, ಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ