ರಕ್ಷಣೆಗೆ ಕೋರಿ ಎಸ್ಪಿ ಕಚೇರಿಗೆ ಬಂದ ನವ ಜೋಡಿ
Team Udayavani, Aug 18, 2017, 4:28 PM IST
ಕೋಪ್ಪಳ: ಪ್ರೀತಿ, ಪ್ರಣಯದಲ್ಲಿ ಬಿದ್ದಿರುವ ನವ ಜೋಡಿಯು ಇತ್ತೀಚೆಗಷ್ಟೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಪಾಲಕರ ಭಯಕ್ಕೆ ಹೆದರಿ ತಮಗೆ ರಕ್ಷಣೆ ನೀಡುವಂತೆ ಕೊಪ್ಪಳ ಎಸ್ಪಿ ಕಚೇರಿ ಮೆಟ್ಟಿಲೇರಿದ ಘಟನೆ ಗುರುವಾರ ನಡೆದಿದೆ. ಗೋವಾ ಮೂಲದ ಯುವತಿ ಅನಿತಾ ರಾಥೋಡ್ ಹಾಗೂ ಗಂಗಾವತಿ ತಾಲೂಕಿನ ಡಣಾಪುರ ನಿವಾಸಿ ಸುರೇಶ್ ನಾಯಕ್ ಅವರೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವಜೋಡಿಗಳು. ಅನಿತಾ ರಾಥೋಡ್ ಗೋವಾದಲ್ಲಿಯೇ ತನ್ನ ಪದವಿ ಅಭ್ಯಾಸ ಪೂರ್ಣಗೊಳಿಸಿದ್ದಾಳೆ. ಆದರೆ ಗಂಗಾವತಿ ತಾಲೂಕಿನ ಡಣಾಪೂರದಲ್ಲಿ ಅವರ ಅಜ್ಜಿಯ ಮನೆ ಇದ್ದ ಕಾರಣ ಹಲವು ವರ್ಷದಿಂದ ಬಂದು ಹೋಗುತ್ತಿದ್ದಳು. ಈ ಮಧ್ಯೆ ಸುರೇಶ ನಾಯಕ್ ಜೊತೆ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಇಬ್ಬರು ಕಳೆದ 9 ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸಿದ್ದಾರೆ. ಸುರೇಶ ನಾಯಕ್ ಗಂಗಾವತಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾನೆ. ಇಬ್ಬರ ಪ್ರೀತಿ ಎರಡೂ ಕುಟುಂಬಕ್ಕೆಗೊತ್ತಾಗಿದೆ. ಸುರೇಶ ಮನೆಯಲ್ಲಿ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಆದರೆ ಅನಿತಾ ಅವರ ಮನೆಯಲ್ಲಿ ಪ್ರೀತಿಯ ವಿಷಯ ಗೊತ್ತಾಗಿದೆ. ಇದರಿಂದ ಯುವತಿ ತಂದೆ-ತಾಯಿ ಆಕೆಗೆ ಬುದ್ಧಿ ಮಾತು ಹೇಳಿದ್ದಾರೆ. ಇದನ್ನು ಧಿಕ್ಕರಿಸಿದ ಈ ಜೋಡಿ ಆ.10ರಂದು ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಲು ತೆರಳುತ್ತಿದ್ದಂತೆ ಯುವತಿ ಸಂಬಂಧಿಕರು ಇವರ ಬೆನ್ನು ಹತ್ತಿದ್ದಾರೆ. ಇದರಿಂದ ಭಯಗೊಂಡ ಈ ಜೋಡಿಯು ಕಳೆದ ಏಳು ದಿನಗಳಿಂದ
ವಿವಿಧೆಡೆ ಸುತ್ತಾಡಿದ್ದಾರೆ. ಇವರಿಬ್ಬರ ಪ್ರೀತಿಗೆ ಸ್ನೇಹ ಬಳಗವೂ ಸಾಥ್ ನೀಡಿದೆ. ಕೊನೆಗೆ ಪರಿಸ್ಥಿತಿ ಕೈ ಚೆಲ್ಲುವ ಹಂತಕ್ಕೆ ತಲುಪಿದ ವೇಳೆ ಸ್ನೇಹಿತರೊಂದಿಗೆ ಕೊಪ್ಪಳ ಎಸ್ಪಿ ಕಚೇರಿಗೆ ಬಂದು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಅನಿತಾ ಅವರ ತಂದೆ ರಾಜು ರಾಥೋಡ್ ಅವರು ಎಸ್ಪಿ ಕಚೇರಿಗೆ ದೌಡಾಯಿಸಿ ಮಗಳೊಂದಿಗೆ ವಾಕ್ಸಮರ ನಡೆಸಿ, ಅಳಲು ತೋಡಿಕೊಂಡರು. ಕೊನೆಗೆ ಸ್ಥಳೀಯ ಪೊಲೀಸರೇ ಪರಿಸ್ಥಿತಿ ತಿಳಿಗೊಳಿಸಿ ಎಸ್ಪಿ ಅವರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಿಕೊಳ್ಳುವಂತೆ ಯುವತಿ ಪಾಲಕರಿಗೆ ಸಲಹೆ ನೀಡಿದ ಪ್ರಸಂಗ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ