ಜಡ್ಕಲ್: ಗಾಳಿ-ಮಳೆ; ವ್ಯಾಪಕ ಹಾನಿ
Team Udayavani, Jul 21, 2017, 8:00 AM IST
ಕೊಲ್ಲೂರು: ಜಡ್ಕಲ್ ಗ್ರಾಮದಲ್ಲಿ ಗುರುವಾರ ಮುಂಜಾವ ಬೀಸಿದ ಭಾರೀ ಗಾಳಿ-ಮಳೆಗೆ ಅಲ್ಲಿನ ಶಾಲೆ ಸಹಿತ ವಿವಿಧ ಮನೆಗಳ ಹೆಂಚು, ಆರ್ಸಿಸಿ ಶೀಟ್ಗಳು ಹಾರಿಹೋಗಿ ಅಪಾರ ನಷ್ಟ ಉಂಟಾಗಿದೆ. ವಿವಿಧೆಡೆ ಅಡಿಕೆ ಹಾಗೂ ಬಾಳೆ ತೋಟ ನಾಶವಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ.
ಜಡ್ಕಲ್ ಗ್ರಾಮದ ಗಂಗಾಧರನ್ ಅವರ ಮನೆ ಭಾಗಶಃ ಹಾನಿಯಾಗಿದ್ದು, ಜಾಯ್ ಜೋಸೆಫ್ ಅವರ ಮನೆಯ ಮಾಡು ಸಂಪೂರ್ಣವಾಗಿ ಹಾರಿಹೋಗಿದೆ. ವನಜಾ ವಿಜಯಾ ಅರಳೇಕಟ್ಟೆ ಅವರ ಮನೆ ಹಾನಿಗೊಂಡಿದೆ. ಕೆ.ಸಿ.ಮ್ಯಾಥ್ಯೂ ಅವರ ಅಡಿಕೆ ತೋಟದ 200ಕ್ಕೂ ಹೆಚ್ಚು ಬೆಳೆದ ಅಡಿಕೆ ಮರಗಳು ಮುರಿದು ಬಿದ್ದಿದೆ. ತಂಗಚ್ಚನ್ ಅವರ ತೋಟದ ಅಡಿಕೆ ಮರಗಳು ನೆಲಕಚ್ಚಿವೆ. ರಮಣನ್ ಅವರ ಬಾಳೆ ತೋಟವು ಧ್ವಂಸಗೊಂಡಿದೆ. ಜಾನ್ ಪಿ.ಎಲ್. ಅವರ ರಬ್ಬರ್ ಹಾಗೂ ಅಡಿಕೆ ತೋಟವು ನಾಶವಾಗಿದೆ. ಹೊಸೂರು ಗ್ರಾಮದ ಜೋಸೆಫ್ ಅವರ ತೋಟದ 200 ಅಡಿಕೆ ಮರಗಳು ಮುರಿದು ಬಿದ್ದಿದೆ. ಕಾನಿR ನಿವಾಸಿ ಮ್ಯಾಥ್ಯೂ ಅವರ ಅಡಿಕೆ ತೋಟ ನಾಶವಾಗಿದೆ.
ಮೆಸ್ಕಾಂ ಇಲಾಖೆಯ ಅನೇಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಜಡ್ಕಲ್ನ ಸರಕಾರಿ ಹಿ.ಪ್ರಾ. ಶಾಲೆಯ ಮಾಡಿನ ಹೆಂಚು ಹಾರಿಹೋಗಿದ್ದು ನಷ್ಟ ಸಂಭವಿ ಸಿದೆ. ಶಾಸಕ ಗೋಪಾಲ ಪೂಜಾರಿ ಸ್ಥಳಕ್ಕೆ ಭೇಟಿ ಇತ್ತು ಪರಿಶೀಲನೆ ನಡೆಸಿ ದರು. ಜಡ್ಕಲ್ ಗ್ರಾ.ಪಂ. ಗ್ರಾಮ ಲೆಕ್ಕಿಗ ಹರೀಶ್, ಗ್ರಾ.ಪಂ. ಸದಸ್ಯ ದೇವದಾಸ್ ಸ್ಥಳಕ್ಕೆ ಭೇಟಿ ಇತ್ತು ಉಂಟಾದ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ