ವಂಡ್ಸೆ -ಅಡಿಕೆಕೊಡ್ಲು ಸಂಪರ್ಕ ಕಿರುಸೇತುವೆ ನಿರ್ಮಾಣ


Team Udayavani, Jul 23, 2017, 8:05 AM IST

2207kde12.gif

ಕುಂದಾಪುರ:  ವಂಡ್ಸೆ ಗ್ರಾ.ಪಂ. ವ್ಯಾಪ್ತಿಯ  ವಂಡ್ಸೆಯಿಂದ ಅಡಿಕೆಕೊಡ್ಲು, ಸಂಭಾರ್ತಿ, ನೂಜಾಡಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯು ನಿರ್ಮಾಣವಾಗಿದ್ದು, ಇದರಿಮದ ಈ ಭಾಗದ  ಜನರ ಬಹುದಿನದ ಕನಸು ನನಸಾಗಿದೆ.

ಈ ಭಾಗದಲ್ಲಿ  ಸುಮಾರು ನೂರ ಐವತ್ತಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು ದಿನ ನಿತ್ಯದ ಸಂಚಾರಕ್ಕೆ ಈ ಮಾರ್ಗವನ್ನೇ ಅವಲಂಬಿಸಿದ್ದರು. ಆದರೆ ಅತಿ ಹತ್ತಿರದಲ್ಲೇ ಇರುವ ವಂಡ್ಸೆ ಪೇಟೆಯನ್ನು ಸಂಪರ್ಕಿಸಲು ಈ ತೊರೆಯನ್ನು ದಾಟಿ ಹೋಗಬೇಕಾಗಿರುವುದರಿಂದ  ಮಳೆಗಾಲದಲ್ಲಿ  ಈ ನಾರ್ಗದಲ್ಲಿ ಸಂಚರಿಸುವುದು ಬಹಳಷ್ಟು ಕಷ್ಟಕರವಾಗಿತ್ತು. ಈ ಸೇತುವೆಗೆ ಪೂರಕವಾಗಿ ಸಂಪರ್ಕ ರಸ್ತೆ ನಿರ್ಮಾಣವಾಗಿ 4-5 ವರ್ಷ ಕಳೆದರೂ ಸೇತುವೆ ಮಾತ್ರ ನಿರ್ಮಾಣ ಆಗಿರಲಿಲ್ಲ. ಇದರಿಂದಾಗಿ ಈ ಭಾಗದ ಜನರು  ಅಡಿಕೆಕೊಡ್ಲುವಿಗೆ ನೂಜಾಡಿ ಮೂಲಕ  ಸುಮಾರು ಐದು ಕಿ.ಮೀ ಸುತ್ತು ಬಳಿಸಿ ಸಾಗಬೇಕಾಗಿದ್ದರಿಂದ ಇಲ್ಲಿನ ಜನರಿಗೆ  ಸೇತುವೆ ನಿರ್ಮಾಣ ತುರ್ತು ಆವಶ್ಯಕತೆಯಾಗಿತ್ತು.

ಕರಾವಳಿ ಪ್ರಾಧಿಕಾರ, ಗ್ರಾ.ಪಂ. ನಿಧಿ ಬಳಕೆ
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರ ಶಿಫಾರಸಿನಂತೆ ಕರಾವಳಿ ಪ್ರಾಧಿಕಾರದಿಂದ ರೂ.5 ಲಕ್ಷ ರೂ.ಹಾಗೂ  ಬಾಕಿ ಉಳಿದ ರಸ್ತೆ  ಕಾಮಗಾರಿಗೆ ವಂಡ್ಸೆ ಗ್ರಾ.ಪಂ ಅನುದಾನವನ್ನು   ಬಳಸಿಕೊಂಡು ಈ ಕಿರು ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ. ಕೂಡು ರಸ್ತೆ ಹಾಗೂ ಬದಿಕಟ್ಟುವ ಕೆಲಸ ಬಾಕಿಇದ್ದು  ಶೀಘ್ರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಸೇತುವೆ ನಿರ್ಮಾಣದಿಂದ  ಈ ಭಾಗ‌ದ ಜನರಿಗೆ ಮುಖ್ಯವಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ.

ಅಪಾಯಕಾರಿ ತೊರೆಯಿಂದ ಮುಕ್ತಿ 
ತೊರೆಯು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ  ಶಾಲಾ ಮಕ್ಕಳಿಗೆ  ಹಾಗೂ ಸ್ಥಳಿಯ ಜನರಿಗೆ ತೊರೆ ದಾಟುವುದು ಕಷ್ಟಕರವಾಗಿತ್ತು. ಪರಿಸರದ   ಗ್ರಾಮಸ್ಥರು  ಕಿರು ಸೇತುವೆ ಕಲ್ಪಿಸಿಕೊಡುವಂತೆ ಬೇಡಿಕೆ ಇಡುತ್ತಲೇ ಬಂದಿದ್ದರು ಹಾಗೂ ಗ್ರಾಮಸಭೆಯಲ್ಲಿ  ಮನವಿ ಮಾಡಿದ್ದರೂ  ಕೆಲವೊಂದು ತಾಂತ್ರಿಕ ಕಾರಣಗಳಿಂದ  ಸೇತುವೆ ರಚನೆಗೆ ಸಮಯ ಕೂಡಿ ಬಂದಿರಲಿಲ್ಲ. ನಂತರ  ವಂಡ್ಸೆ  ಗ್ರಾ.ಪಂ. ಅಧ್ಯಕ್ಷರು ಸ್ವತಃ ಮುತುವರ್ಜಿವಹಿಸಿಕೊಂಡು  ಸೇತುವೆ ನಿರ್ಮಾಣ ಮಾಡುವಲ್ಲಿ  ಹೆಚ್ಚಿನ ಕಾಳಜಿಯನ್ನು ವಹಿಸಿದ್ದರು.  ಇದರಿಂದಾಗಿ  ವಂಡ್ಸೆ ಭಾಗದ ಅಡಿಕೆಕೊಡ್ಲು  ನೂಜಾಡಿಯಿಂದ  ಹೋಗುವವರು  ಈ  ಮಾರ್ಗವಾಗಿ  ಹೋಗಲು ಅನಕೂಲಕರವಾಗಿದೆ. ಸುಮಾರು ನಾಲ್ಕೈದು ಕಿ.ಮೀ. ಸುತ್ತಿ ಬಳಸುವುದು ತಪ್ಪಿದಂತಾಗಿದೆ.

ಸಣ್ಣ ತೊರೆಗೆ ಕಿರು ಸೇತುವೆಯನ್ನು ನಿರ್ಮಿಸುವಂತೆ ಗ್ರಾಮಸ್ಥರ ಬೇಡಿಕೆಯಂತೆ ಗ್ರಾ.ಪಂ. ನಿರ್ಣಯವನ್ನು ಕೈಗೊಂಡು ಶಾಸಕರ ಶಿಫಾರಸಿನೊಂದಿಗೆ ಕರಾವಳಿ ಪ್ರಾಧಿಕಾರದ ಅನುದಾನವನ್ನು ಬಳಸಿಕೊಂಡು  ಕಿರು ಸೇತುವೆಯನ್ನು ನಿರ್ಮಿಸಲಾಗಿದೆ.  ಗ್ರಾ.ಪಂ. ಹಾಗೂ ಕರಾವಳಿ ಪ್ರಾಧಿಕಾರದ ಅನುದಾನವನ್ನು   ಬಳಿಸಿಕೊಂಡು  ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣವಾಗಲಿದೆ.ಇನ್ನು  ಕೂಡು ರಸ್ತೆ ಹಾಗೂ ಸೈಡ್‌ ವಾಲ್‌ಗ‌ಳ ನಿರ್ಮಾಣದ ಕಾಮಗಾರಿ ನಡೆಯಲಿದೆ. ಅತಿ ಶೀಘ್ರದಲ್ಲಿ ಜನಸಂಚಾರಕ್ಕೆ  ಈ ಮಾರ್ಗ ಮುಕ್ತವಾಗಲಿದೆ.
-ಉದಯಕುಮಾರ್‌ ಶೆಟ್ಟಿ, 
ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.