ಗೋಪಾಡಿ: ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ
Team Udayavani, Jul 23, 2017, 7:10 AM IST
ಕೋಟೇಶ್ವರ: ಗೋಪಾಡಿಯ ತಿರುವಿನಿಂದ ವಕ್ವಾಡಿಗೆ ಸಾಗುವ ಜಿ.ಪಂ. ನ ಸುಪರ್ದಿಯ ಮುಖ್ಯ ರಸ್ತೆಯು ಭಾರೀ ಹೊಂಡಗಳಿಂದ ಕೂಡಿದ್ದು ಪಾದಚಾರಿಗಳು ಸಾಗದಷ್ಟು ದುಸ್ಥಿತಿಯಲ್ಲಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಗೋಪಾಡಿಯಿಂದ ಚಾರುಕೊಟ್ಟಿಗೆ ತನಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಆಗಿದ್ದು ಮಳೆಯ ನಿಮಿತ್ತ ಕಾಮಗಾರಿ ಆರಂಭಗೊಳ್ಳದಿರುವುದು ಆ ಮಾರ್ಗವಾಗಿ ಸಾಗುವ ನಿತ್ಯ ಸಂಚಾರಿಗಳಿಗೆ ಹರಸಾಹಸ ಪಟ್ಟು ಸಾಗಬೇಕಾದ ಸಂದಿಗª ಪರಿಸ್ಥಿತಿ ಬಂದೊದಗಿದೆ. ಮಳೆಗಾಲದ ಮೊದಲು ಹದಗೆಟ್ಟ ಈ ರಸ್ತೆಯ ಹೊಂಡಗಳಿಗೆ ಡಾಮಾರು ಲೇಪ ಹಾಕಲಾಗಿದ್ದರೂ ಮಳೆ ಆರಂಭಗೊಂಡಂತೆ ಈ ರಸ್ತೆಯು ಹೊಂಡಮಯವಾಗಿರುವುದು ಲಘು ಹಾಗೂ ಘನ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ.
ಮಳೆಯ ಕಾರಣ ಗುತ್ತಿಗೆದಾರರರಿಗೆ ಕಾಮಗಾರಿ ಆರಂಭಿಸುವುದು ಕಷ್ಟಸಾಧ್ಯವಾಗಿರುವುದರಿಂದ ಮಳೆ ಮುಗಿಯುತ್ತಿರುವಂತೆ ಕಾಂಕ್ರೀಟೀಕರಣದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿ.ಪಂ. ಸದಸ್ಯೆ ಶ್ರೀಲತಾ ಎಸ್. ಶೆಟ್ಟಿ ಅವರು ತಿಳಿಸಿದ್ದಾರೆ.