ತಂತಿ ಮೇಲೆ ಕಸರತ್ತು: ದೇವರಗದ್ದೆ ಎಂಬ ಕುಗ್ರಾಮವನ್ನು ದೇವರೇ ಕಾಯಬೇಕು
Team Udayavani, Jul 23, 2017, 8:20 AM IST
ಬೈಂದೂರು: ಬೈಂದೂರು ಸಮೀಪದ ಕುಗ್ರಾಮವಾದ ದೇವರಗದ್ದೆ ಎನ್ನುವ ಊರಿನ ಜನರು ಕಳೆದ ಆರು ದಶಕಗಳಿಂದ ತಂತಿ ಮೇಲೆ ಸಂಚರಿಸುತ್ತಾ ಮಳೆಗಾಲ ಕಳೆಯಬೇಕಾದ ಸಂಕಷ್ಟದ ಪರಿಸ್ಥಿತಿ ಹೊಂದಿದ್ದಾರೆ.
ದೇವರ ಮುನಿಸು!
ಬೈಂದೂರು ನೂತನ ಬಸ್ ನಿಲ್ದಾಣದಿಂದ 20 ಕಿ.,ಮೀ ಪೂರ್ವಕ್ಕೆ ಸಾಗಿದಾಗ ಸಹ್ಯಾದ್ರಿ ಪರ್ವತ ಶ್ರೇಣಿಗಳಿವೆ. ಇಲ್ಲಿನ ಪ್ರಸಿದ್ದ ಕೊಸಳ್ಳಿ ಜಲಪಾತಕ್ಕೆ ಸಾಗುವಾಗ ಬಲಭಾಗದ ಕಾಡು ದಾರಿಯಲ್ಲಿ ಸಾಗಿದರೆ ದೇವರಗದ್ದೆ ಕಾಣಸಿಗುತ್ತದೆ. ದೇವರಗದ್ದೆಗೆ ಅಭಿವೃದ್ಧಿಯ ವಿಚಾರದಲ್ಲಿ ದೇವರೆ ಮುನಿದುಕೊಂಡಂತಿದೆ. 35ರಿಂದ40 ಮನೆಗಳಿರುವ ಈ ಭಾಗದಲ್ಲಿ ಮಳೆಗಾಲದ ಮೂರು ತಿಂಗಳು ಹೊರಜಗತ್ತಿನ ಸಂಪರ್ಕವೇ ಇಲ್ಲದಂತಹ ಪರಿಸ್ಥಿತಿಯಿದೆ.
ಊರಿಗೆ ಅಡ್ಡಲಾಗಿ ಹರಿಯುವ ನದಿಯನ್ನು ದಾಟಲು ತಲೆತಲಾಂತರದಿಂದ ತಂತಿಸಂಕವನ್ನು ಬಳಸುತ್ತಿದ್ದಾರೆ. ಜಾಸ್ತಿ ಮಳೆಯಾದಾಗ ನೀರಿನ ರಭಸದಲ್ಲಿ ಕಾಲುಸಂಕವೇ ಕೊಚ್ಚಿ ಹೋಗುತ್ತಿದೆ.
ಅನುಷ್ಠಾನ ಎಂದೋ?
ಹತ್ತಾರು ಬಾರಿ ಕಾಲುಸಂಕ ರಚನೆ ಸೇರಿದಂತೆ ವಿದ್ಯುತ್ ಸೌಲಭ್ಯಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.ಬಳಿಕ ಸ್ಥಳೀಯರೆ ಹಣ ಸಂಗ್ರಹಿಸಿ ಮರದ ತುಂಡುಗಳಿಂದ ಕಾಲುಸಂಕ ರಚಿಸಿಕೊಂಡಿದ್ದಾರೆ. ತುಂಬಿ ಹರಿಯುವ ನದಿಯ ಮೇಲ್ಗಡೆ ತಂತಿ ಹಿಡಿದು ಸಾಗುವಾಗ ಜೀವ ಕೈಗೆ ಬಂದ ಅನುಭವವಾಗುತ್ತದೆ. ಈ ಬಗ್ಗೆ ಕಳೆದ ವರ್ಷ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಸಂಸದರು ಕ್ಷೇತ್ರದಲ್ಲಿ ಅತ್ಯಗತ್ಯವಿರುವ ಕಡೆಗಳಲ್ಲಿ ಕಾಲುಸಂಕ ಶೀಘ್ರ ನಿರ್ಮಿಸುವ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ವರದಿ ತರಿಸಿಕೊಂಡಿದ್ದಾರೆ. ಆದರೆ ಇದುವರಗೆ ಅನುಷ್ಠಾನವಾಗಿಲ್ಲ. ಕೃಷಿಯೆನ್ನೇ ನಂಬಿಕೊಂಡಿರುವ ಇಲ್ಲಿನ ಸ್ಥಳೀಯರಿಗೆ ಸೋಲಾರ್ ದೀಪ ಹೊರತುಪಡಿಸಿದರೆ ಚಿಮಣಿ ದೀಪವೇ ಗತಿಯಾಗಿದೆ.
ಕನಿಷ್ಠ ಪಕ್ಷ ಇಂತಹ ಹಳ್ಳಿಗಳ ಜನರ ನೋವಿಗೆ ಸ್ಪಂದಿಸುವ ಔದಾರ್ಯ ತೋರುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕೆನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕಠಿನ ಪರಿಸ್ಥಿತಿ
ಒಂದೆರೆಡು ಬಾರಿ ಇಲಾಖಾ ಅಧಿಕಾರಿಗಳು ಕಾಲುಸಂಕ ನಿರ್ಮಾಣ ಮಾಹಿತಿ ಪಡೆಯಲು ಆಗಮಿಸಿದ್ದು ನದಿ ದಾಟಲಾಗದೆ ವಾಪಸು ತೆರಳಿದ್ದಾರೆ.ಅನಾರೋಗ್ಯ,ಆಕಸ್ಮಿಕ ಅವಘಡ ಸಂಭವಿಸಿದಾಗ ಇಲ್ಲಿನ ಜನರ ಪರಿಸ್ಥಿತಿ ಹೇಳತೀರದಾಗಿದೆ. ಬೈಂದೂರು ಕ್ಷೇತ್ರದ ಬಹುತೇಕ ಗ್ರಾಮೀಣ ಭಾಗದಲ್ಲಿ ಸೇತುವೆ ನಿರ್ಮಾಣವಾಗಿದೆ. ಕೆಲವೇ ಕೆಲವು ಭಾಗಗಳಲ್ಲಿ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ