ಉಳ್ಳಾಲ: ತಲವಾರಿನಿಂದ ಕಡಿದು ಕೊಲೆಗೆ ಯತ್ನ
Team Udayavani, Mar 29, 2017, 3:50 AM IST
ಉಳ್ಳಾಲ: ಬೈಕ್ನಲ್ಲಿ ತೆರಳುತ್ತಿದ್ದ ಕೋಡಿ ನಿವಾಸಿ ನೌಷದ್ ಹುಸೈನ್(23)ನ ಮೇಲೆ ಬೈಕ್ನಲ್ಲಿ ಬಂದ ಇಬ್ಬರು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ. ಕೈಗೆ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಮುಖ ಆರೋಪಿ ರಮೀತ್ನನ್ನು ಪೊಲೀಸರು ವಶಕ್ಕೆ ಪದ್ದಾರೆ.
ಕೋಡಿ ನಿವಾಸಿ ನೌಷಾದ್ ಹುಸೈನ್ ಬೈಕ್ನಲ್ಲಿ ಮುಕ್ಕಚ್ಚೇರಿ ಕಡೆಗೆ ತೆರಳುತ್ತಿದ್ದ ಉಳ್ಳಾಲ ಕೋಡಿ ಸಮೀಪದ ವೀರಭದ್ರ ದೇವಸ್ಥಾನ ಹಾಗೂ ರೆಹಮಾ ನಿಯಾ ಮಸೀದಿ ನಡುವೆ ಬೈಕ್ನಲ್ಲಿ ಬಂದಿದ್ದ ಇಬ್ಬರು ತಲವಾರು ಬೀಸಿದ್ದರು.
ಈ ಸಂದರ್ಭದಲ್ಲಿ ನೌಷಾದ್ ಚಲಾಯಿಸುತ್ತಿದ್ದ ಬೈಕ್ ಬಿದ್ದಿದ್ದು, ಒಬ್ಟಾತ ಬೀಸಿದ ತಲವಾರಿನಿಂದ ನೌಷಾದ್ ಕೈಗೆ ಗಂಭೀರಾ ಏಟಾಗಿದ್ದು, ಸ್ಥಳೀಯ ಔಟ್ ಪೋಸ್ಟಿನಲ್ಲಿದ್ದ ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿದಾಗ ಬೈಕ್ನಲ್ಲಿ ಬಂದಿದ್ದ ಓರ್ವ ಪಕ್ಕದ ಓಣಿಯಲ್ಲಿ ಪರಾರಿಯಾಗಿದ್ದು, ಇನ್ನೊರ್ವ ಬೈಕ್ನಲ್ಲಿ ಪರಾರಿಯಾಗಿದ್ದ.
ರಮಿತ್ ತಂಡದ ಕೃತ್ಯ: ರಮಿತ್ ಮತ್ತು ಆತನ ಸ್ನೇಹಿತ ಪ್ರಜ್ವಲ್, ನೌಷಾದ್ನ ಕೊಲೆಗೆ ಯತ್ನಿಸಿದ ಆರೋಪಿಗಳು. ರಮಿತ್ ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಮೊಗವೀರ ಪಟ್ಣದಲ್ಲಿ 2016ರ ಎ.12ರಂದು ಮೀನುಗಾರ ರಾಜು ಕೋಟ್ಯಾನ್ ಹತ್ಯೆ ನಡೆದಿತ್ತು. ಅದಕ್ಕೆ ಪ್ರತೀಕಾರವಾಗಿ ಉಳ್ಳಾಲದಲ್ಲಿ ಇಬ್ರಾಹಿಂ ನಫಾನ್ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು, ಈ ಪ್ರಕರಣ ಸಂಬಂಧ ಮೊಗವೀರಪಟ್ನದ ರಮಿತ್ ಮತ್ತು ಸಹಚರರನ್ನು ಬಂಧಿಸಿಲಾಗಿತ್ತು. ಎರಡು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ರಮಿತ್ ನೌಷಾದ್ ಹುಸೈನ್ ಹತ್ಯೆಗೆ ಸಂಚು ರೂಪಿಸಿದ್ದ.
ಉಳ್ಳಾಲದಲ್ಲಿ ಬಿಗಿ ಬಂದೋಬಸ್ತ್ : ಘಟನೆ ನಡೆದ ರವಿವಾರ ತಡರಾತ್ರಿಯಿಂದಲೇ ಉಳ್ಳಾಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಗಾಯಾಳು ದಾಖಲಾಗಿರುವ ಉಳ್ಳಾಲದ ಸರೋಜ್ ಆಸ್ಪತ್ರೆಯ ಎದುರು ನೌಷಾದ್ನ ಸಂಬಂಧಿಕರು, ಸ್ನೇಹಿತರು ಸಹಿತ ಸ್ಥಳೀಯರು ಜಮಾಯಿಸಿದ್ದು, ಪೊಲೀಸರು ಉದ್ರಿಕ್ತರಾಗದಂತೆ ಅವರ ಮನವೊಲಿಸಿದರು. ಪೊಲೀಸ್ ಕಮಿಷನರ್ ಚಂದ್ರಶೇಖರ್, ಡಿಸಿಪಿಗಳಾದ ಶಾಂತರಾಜು, ಸಂಜೀವ ಪಾಟೀಲ್, ಎಸಿಪಿ ಶ್ರುತಿ, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಮಂಗಳೂರು ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ಉಳ್ಳಾಲ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಸಹಿತ ಕೆಎಸ್ಆರ್ಪಿ ಪೊಲೀಸರು ಸ್ಥಳದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ