ಉಳ್ಳಾಲ ದರ್ಗಾ: ಹಬ್ಬ ಆಚರಣೆ ವಿವಾದ; ಘರ್ಷಣೆ


Team Udayavani, Jun 27, 2017, 3:45 AM IST

26-REPORT-1.jpg

ಉಳ್ಳಾಲ: ಉಳ್ಳಾಲದಲ್ಲಿ ಈದ್‌ ಉಲ್‌ ಫಿತ್ರ ಆಚರಣೆ ವಿಚಾರದಲ್ಲಿ ನಡೆದ ಗೊಂದಲ ಸೋಮವಾರ ಗಂಭೀರ ಸ್ವರೂಪ ಪಡೆದಿದ್ದು, ಈದ್‌ ನಮಾಜ್‌ಗೆ ಬಂದಿದ್ದ ಸಾವಿರಾರು ಜನರು ದರ್ಗಾಕ್ಕೆ ಬೀಗ ಹಾಕಿರುವುದನ್ನು ಖಂಡಿಸಿ ದರ್ಗಾದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡರೆ ಇನ್ನೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳ್ಳಾಲ ದರ್ಗಾ ಸಮಿತಿ ಸದಸ್ಯ ಮಹಮ್ಮದ್‌ ಆಳೇಕಲ ಮತ್ತು ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್‌ ರಿಲ್ವಾನ್‌ ಗಾಯಗೊಂಡವರು. ಇವರಲ್ಲಿ ಮಹಮ್ಮದ್‌ ಅಳೇಕಲ ಅವರಿಗೆ ಗಂಭೀರ ಗಾಯವಾಗಿದ್ದು, ದಾಂಧಲೆ ಸಂದರ್ಭದಲ್ಲಿ ಹಲ್ಲೆಗೀಡಾದವರಿಗೆ ಪೊಲೀಸರು ರಕ್ಷಣೆ ನೀಡಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು.

ಘಟನೆಯ ವಿವರ: ಈದ್‌ ಉಲ್‌ ಫಿತ್ರ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರದೇಶದಲ್ಲಿ ಚಂದ್ರ ದರ್ಶನವಾದರೆ ಮಂಗಳೂರು, ಉಡುಪಿ ಸಹಿತ ಉಳ್ಳಾಲದ ಖಾಝಿಗಳು ಪರಸ್ಪರ ಚರ್ಚಿಸಿ ಈದ್‌ ಆಚರಣೆಯ ಘೋಷಣೆಯನ್ನು ಮಾಡುತ್ತಿದ್ದು, ಶನಿವಾರ ಚಂದ್ರದರ್ಶನವಾದ ಹಿನ್ನೆ°ಲೆಯಲ್ಲಿ ಉಡುಪಿ ಮತ್ತು ಮಂಗಳೂರು ಖಾಝಿಯವರು ರವಿವಾರ ಈದ್‌ ಉಲ್‌ ಫಿತ್ರ ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ ಪ್ರಸ್ತುತ ಕೇರಳದಲ್ಲಿ ನೆಲೆಸಿರುವ ಉಳ್ಳಾಲ ಖಾಝಿಯವರಾದ ಕೂರತ್‌ ತಂಗಳ್‌ ಅವರು ತನ್ನ ವ್ಯಾಪ್ತಿಯ ಮಸೀದಿಗಳಿಗೆ ರವಿವಾರ ಉಪವಾಸ ಮುಂದುವರಿಸಬೇಕು. ಸೋಮವಾರ ಈದ್‌ ಆಚರಣೆ ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ ಉಳ್ಳಾಲ ದರ್ಗಾದ ಸಹಾಯಕ ಖಾಝಿ ಉಡುಪಿ ಮತ್ತು ದ.ಕ.ಜಿಲ್ಲಾ ಖಾಝಿಯವರ ಘೋಷಣೆಯಂತೆ ರವಿವಾರ ಈದ್‌ ಆಚರಣೆಗೆ ಕರೆ ನೀಡಿದ್ದರು. ಈ ಸಂದರ್ಭದಲ್ಲಿ ಕೂರತ್‌ ತಂಗಳ್‌ ಅನುಯಾಯಿಗಳು ಸೋಮವಾರ ಈದ್‌ ಆಚರಣೆ ನಡೆಸುವ ಘೋಷಣೆ ಗೊಂದಲಕ್ಕೆ ಕಾರಣವಾಗಿತ್ತು.

ಮೊಹಲ್ಲಾ ನಮಾಜ್‌ ಬಳಿಕ ದರ್ಗಾಕ್ಕೆ ಆಗಮಿಸಿದ ಜನರು: ಕೂರತ್‌ ತಂಗಳ್‌ ಅವರ ಆದೇಶದಂತೆ ರವಿವಾರ ಉಪವಾಸ ಆಚರಿಸಿದ ಉಳ್ಳಾಲ ದರ್ಗಾ ವ್ಯಾಪ್ತಿಯ ಕೆಲವು ಮಸೀದಿಗಳ ಭಕ್ತಾಧಿಗಳು ಈದ್‌ ನಮಾಜ್‌ಗೆ ಸುಮಾರು 9.30ರ ವೇಳೆಗೆ ಆಗಮಿಸಿದಾಗ ದರ್ಗಾಕ್ಕೆ ಬೀಗ ಹಾಕಲಾಗಿತ್ತು. ಈ ಸಂದರ್ಭದಲ್ಲಿ ನಮಾಜ್‌ಗೆ ಬಂದಿದ್ದ ತಂಡದ ಕೆಲವು ಮುಖಂಡರು ಬೀಗ ತೆಗೆಯುವಂತೆ ಒತ್ತಾಯಿಸಿದ್ದು ಈ ಸಂದರ್ಭದಲ್ಲಿ ದರ್ಗಾ ಎದುರು ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಾಸ್ತಿಕಟ್ಟೆಯ ಮಹಮ್ಮದ್‌ ರಿಲ್ವಾನ್‌ ಮಾತಿನ ಚಕಮಕಿ ನಡೆಸುತ್ತಿದ್ದ ಎರಡು ತಂಡದವರನ್ನು ಬಿಡಿಸಲು ಹೋದಾಗ ಗುಂಪೊಂದು ರಿಲ್ವಾನ್‌ಗೆ ಹಲ್ಲೆ ನಡೆಸಿದ್ದು, ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಹಲ್ಲೆ ನಡೆಸುತ್ತಾ ಮಸೀದಿಯ ಹೊರಗೆ ತಂದರು: ಈದ್‌ ನಮಾಜ್‌ಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ದರ್ಗಾ ಸದಸ್ಯ ಕೆ.ಎನ್‌ ಮಹಮ್ಮದ್‌ ಅಳೇಕಲ ಸಮಾಧಾನಿಸಲು ಆಗಮಿಸಿದ್ದು, ಈ ಸಂದರ್ಭದಲ್ಲಿ ತಂಡವೊಂದು ಮಹಮ್ಮದ್‌ ಆವರು ದರ್ಗಾ ಆಡಳಿತ ಸಮಿತಿಯ ಕಡೆಯವರು ಎಂದು ಆರೋಪಿಸಿ ಹಿಗ್ಗಾಮುಗ್ಗ ಥಳಿಸಿತ್ತು. ಪೊಲೀಸರು ಮಹಮ್ಮದ್‌ ಅವರ ರಕ್ಷಣೆಗೆ ಧಾವಿಸಿದರೂ ಹಲ್ಲೆಕೋರರ ತಂಡ ಮಹಮ್ಮದ್‌ ಅವರನ್ನು ಎಳೆದಾಡುತ್ತಾ ಮಸೀದಿಯ ಹೊರಗಡೆವರೆಗೆ ಎಳೆದಾಡುತ್ತಾ ಬಂದಿತ್ತು. 

ಈ ಸಂದರ್ಭದಲ್ಲಿ ಡಿಸಿಪಿ ಹನುಂತರಾಯ, ಶಾಂತರಾಜು,ಎಸಿಪಿ ಶೃತಿ, ಇನ್ಸ್‌ಪೆಕ್ಟರ್‌ಗಳಾದ ಗೋಪಿಕೃಷ್ಣ ತಿಲಕ್‌ಚಂದ್ರ, ಧರ್ಮೇಂದ್ರ ಎಸ್‌ಐಗಳಾದ ರಾಜೇಂದ್ರ, ಪ್ರಕಾಶ್‌, ಕೆಎಸ್‌ಆರ್‌ಪಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.

ನಮಾಜ್‌ ಬಳಿಕ ಶಾಂತ : ಪೊಲೀಸರ ಮಾತುಕತೆ ಬಳಿಕ ದರ್ಗಾದಲ್ಲಿ ಶಿಹಾಬುದ್ಧೀನ್‌ ಸಖಾಫಿ ಉಳ್ಳಾಲ ಅವರ ನೇತೃತ್ವದಲ್ಲಿ ನಮಾಜ್‌ ಹಾಗೂ ಈದ್‌ ಖುತುಬಾ ನಡೆಯಿತು. ಬಳಿಕ ಮಾತನಾಡಿದ ಶಿಹಾಬುದ್ಧೀನ್‌ ಸಖಾಫಿ ಈ ವರ್ಷ ರಮಳಾನ್‌ 30 ಪೂರ್ತಿ ಲಭಿಸಿದ್ದು ಕೂರತ್‌ ತಂಗಳ್‌ರವರ ನಿರ್ದೇಶನದಂತೆ ಇಂದು ಈದ್‌ ಆಚರಿಸಲಾಯಿತು. ಕೂರತ್‌ ತಂಗಳ್‌ ಅವರು ಸುಮಾರು 180ಕ್ಕಿಂತಲೂ ಅಧಿಕ ಮೊಹಲ್ಲಗಳಿಗೆ ಖಾಝಿ ಯಾಗಿದ್ದು. ಇವುಗಳಲ್ಲಿ ಉಳ್ಳಾಲವೂ ಒಂದು. ನಿನ್ನೆ ಖಾಝಿಯವರ ತೀರ್ಮಾನವನ್ನು ವಿರೋಧಿಸಿ ಒಂದು ಬಣ ಉಳ್ಳಾಲದಲ್ಲಿ ಈದ್‌ ಆಚರಿಸಿತ್ತು. ಇದನ್ನು ಕೂರತ್‌ ತಂಗಳ್‌ ಅನುಯಾಯಿಗಳು ವೈಚಾರಿಕವಾಗಿ ವಿರೋಧಿಸಿದ್ದರಾದರೂ ಯಾವುದೇ ಪ್ರತಿರೋಧ ಮಾಡಿರಲಿಲ್ಲ. ಆದರೆ ಇಂದು ಹಬ್ಬ ಆಚರಿಸಿದವರಿಗೆ ಝಿಯಾರತ್‌ ಮಾಡುವ ಅವಕಾಶ ನಿರಾಕರಿಸಿದ್ದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್‌ ಅವರು, ದರ್ಗಾದೊಳಗಡೆ ಅಕ್ರಮ ಪ್ರವೇಶಗೈದು ಮಸೀದಿಯ ಧಾರ್ಮಿಕ ವಿಧಿಗಳ ವಿಚಾರಗಳನ್ನು ಉಲ್ಲಂಘಿಸಿ, ಧ್ವನಿ ವರ್ಧಕಗಳ ಮೂಲಕ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ದರ್ಗಾ ಪಾವಿತ್ರÂತೆ ಮತ್ತು ಸಹಬಾಳ್ವೆಗೆ ಧಕ್ಕೆಯುಂಟಾಗಿದೆ. ಏಕಾಏಕಿ ತರಾವಿ ನಮಾಜಿಗೆ ಕರೆಕೊಟ್ಟ ಕೆಲವರ ವಿಶ್ವಾಸದ್ರೋಹಕ್ಕೆ ಅನುಗುಣವಾಗಿ ಬಾಗಿಲು ಮುಚ್ಚಿ ದರ್ಗಾದ ಪಾವಿತ್ರÂತೆಯನ್ನು ಉಳಿಸಬೇಕಾಯಿತು. ಹಬ್ಬ ಮುಗಿದರೂ ಮೂರನೆಯ ಹೆಚ್ಚುವರಿ ನಮಾಜನ್ನು ನೆರವೇರಿಸಿ ಉಳ್ಳಾಲದಲ್ಲಿ ಅಶಾಂತಿಗೆ ಪ್ರಚೋದನೆಯನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

ಹಿರಿಯ ವಿಧ್ವಾಂಸರು ಈದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಉಳ್ಳಾಲದಲ್ಲೂ ಹಬ್ಬದ ಆಚರಣೆ ನಡೆಸಲಾಗಿದೆ. ಸೋಮವಾರ ದರ್ಗಾ ವಠಾರದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ 35 ಮಂದಿ ವಿರುದ್ಧ ದೂರು ನೀಡಲಾಗಿದೆ ಎಂದರು. ಉಪಾಧ್ಯಕ್ಷರಾದ ಯು.ಕೆ. ಮೋನು ಇಸ್ಮಾಯಿಲ್‌, ಬಾವ ಮಹಮ್ಮದ್‌, ಪ್ರ. ಕಾರ್ಯದರ್ಶಿ ಮಹಮ್ಮದ್‌ ತ್ವಾಹ , ಜತೆ ಕಾರ್ಯದರ್ಶಿ ಆಝಾದ್‌ ಇಸ್ಮಾಯಿಲ್‌ ಕೋಶಾಧಿಕಾರಿ ಯು.ಕೆ. ಇಲಿಯಾಸ್‌, ಅರೆಬಿಕ್‌ ಟ್ರಸ್ಟ್‌ ಉಪಾಧ್ಯಕ್ಷ ಮಹಮ್ಮದ್‌ ಹಳೆಕೋಟೆ, ಪ್ರ. ಕಾರ್ಯದರ್ಶಿ ಅಮೀರ್‌ ಪಟ್ಲ, ಜತೆ ಕಾರ್ಯದರ್ಶಿ ಆಸೀಫ್‌ ಅಬ್ದುಲ್ಲಾ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.