ಜಾವ ಡೇ: ಜಾವ, ಯಜ್ಡಿ ಬೈಕ್ ಪ್ರದರ್ಶನ , 70ರ ದಶಕದ 70 ಬೈಕ್ಗಳು!
Team Udayavani, Jul 26, 2017, 8:05 AM IST
ಮಹಾನಗರ: ವಿಶಾಲವಾದ ಮೈದಾನ ದಲ್ಲಿ ಜಾವ, ಯಜ್ಡಿ ಬೈಕ್ಗಳದ್ದೇ ಸದ್ದು. 70ರ ದಶಕದ ಸುಮಾರು 70 ಬೈಕ್ಗಳು ಬೈಕ್ ಪ್ರೇಮಿಗಳ ಹುಬ್ಬೇರಿಸಿದ್ದವು. 1970ರ 130 ಕೆ.ಜಿ ತೂಗುವ ದೊಡ್ಡ ಜಾವದಿಂದ ಹಿಡಿದು, ಅಪರೂಪದ ಟಿವಿಎಸ್ನಂಥ ಯಜ್ಡಿ ಕೊಲ್ಟ ಬೈಕ್ಗಳು ಪ್ರದರ್ಶನದಲ್ಲಿದ್ದವು!
ಇದು ಕಂಡು ಬಂದದ್ದು ದಿ ಯಜ್ಡಿ ಜಾವ ಓನರ್ ಕ್ಲಬ್ ಆಫ್ ಇಂಡಿಯಾದ ಮಂಗಳೂರು ಶಾಖೆ ವತಿಯಿಂದ 15ನೇ ಇಂಟರ್ನ್ಯಾಷನಲ್ ಜಾವ ಡೇ ಅಂಗವಾಗಿ ನಗರದ ಕಾರ್ಸ್ಟ್ರೀಟ್ನ ಬಿಇಎಂ ಹೈಸ್ಕೂಲ್ನ ಮೈದಾನದಲ್ಲಿ ಆಯೋಜಿಸಲಾದ ಹಳೆಯ ಬೈಕ್ಗಳ ಪ್ರದರ್ಶನದಲ್ಲಿ.
70-80ರ ದಶಕದಲ್ಲಿ ಯುವ ಜನರ ಮನಗೆದ್ದ ಈ ಬೈಕ್ಗಳ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡು 22 ವರ್ಷ ಕಳೆದರೂ ಆ ಬೈಕ್ಗಳ ಕ್ರೇಜ್ ಈಗಲೂ ಜನರ ಲ್ಲಿದೆ ಎನ್ನುವುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿತ್ತು. ಪ್ರದರ್ಶನದಲ್ಲಿ ಈ ವಾಹನದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿತ್ತು. ದ.ಕ., ಉಡುಪಿ, ಕೊಡಗು, ಶಿವಮೊಗ್ಗ, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಯಜ್ಡಿ, ಜಾವ ಬೈಕ್ಗಳ ಮಾಲೀಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಅಭಿನಂದನೆ
ಕಾರ್ಗಿಲ್ ಯುದ್ಧವನ್ನು ಸ್ಮರಿಸಲಾಯಿತು. ದ.ಕ. ಜಿಲ್ಲಾ ಮಾಜಿ ಸೈನಿಕ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಸೇರಿದಂತೆ ಆರು ಮಂದಿ ಮಾಜಿ ಸೈನಿಕರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರು ಬೈಕ್ನಲ್ಲಿ ಲೇಹ್ ಲಡಾಕ್ ಪ್ರಯಾಣ ಸಂದರ್ಭ ಕಾರ್ಗಿಲ್ ವೀರ ಯೋಧರ ಸಾಧನೆ, ಹೋರಾಟ ಮನತಟ್ಟಿದ ಹಿನ್ನೆಲೆಯಲ್ಲಿ ವೀರ ಯೋಧರ ಸ್ಮರಣೆ ನಡೆಯಿತು ಎನ್ನುತ್ತಾರೆ ಸಂಘದ ಸಂಚಾಲಕ ಶಾನ್ ಫೆರ್ನಾಂಡಿಸ್. ಸದಸ್ಯರಿಗೆ ಕಾರ್ಗಿಲ್ ಕುರಿತ ರಸಪ್ರಶ್ನೆ ನಡೆದು ಬಹುಮಾನ ವಿತರಿಸಲಾಯಿತು. ಯಜ್ಡಿ ಮತ್ತು ಜಾವ ಬೈಕ್ ಮೆಕಾನಿಕ್ಗಳನ್ನು ಗುರುತಿಸಿ ಗೌರವಿಸಲಾಯಿತು.
ಹಳೆಯ ಬೈಕ್ ಸಂಗ್ರಹಕಾರ ಸೂರಜ್
ಇಲ್ಲಿ ಪ್ರದರ್ಶನಗೊಂಡ ಸುಮಾರು 70 ಬೈಕ್ಗಳ ಪೈಕಿ 10 ಬೈಕ್ಗಳು ಅಶೋಕನಗರದ ನಿವಾಸಿ ಉದ್ಯಮಿ ಸೂರಜ್ ಹೆನ್ರಿ ಅವರಿಗೆ ಸೇರಿದ್ದಾಗಿತ್ತು. ಸೂರಜ್ ಹೆನ್ರಿ ಅವರಿಗೆ ಬೈಕ್ಗಳೆಂದರೆ ಅಪಾರ ಪ್ರೀತಿ. 2008ರಿಂದ ಬೈಕ್ಗಳ ಸಂಗ್ರಹಣೆಗೆ ಅವರು ತೊಡಗಿದ್ದು, ಪ್ರಸ್ತುತ ಮೂವತ್ತಕ್ಕೂ ಹೆಚ್ಚು ಬೈಕ್ಗಳನ್ನು ಹೊಂದಿದ್ದಾರೆ. ಅತ್ಯಂತ ಹಳೆಯ ಮತ್ತು ಅಪರೂಪದ ಬೈಕ್ಗಳಾದ 1942ರ ಏರಿಯಲ್, ಇನ್ನೊಸೆಂಟಿ 48, ಲಕ್ಷ್ಮೀ, ಸುವೇಗ, ಲೂನಾ ಟಿಎಫ್ಆರ್, ವೆಸ್ಪಾ, ಲೂಂಬಿ, ಯಜ್ಡಿ 175, ರಾಜ್ದೂತ್, ಯಮಹಾ ಆರ್ಡಿ 50 ಮೊದಲಾದ ಬೈಕ್ಗಳ ಸಂಗ್ರಹ ಇವರಲ್ಲಿದೆ. ತನ್ನ ಹಳೆಯ ಬೈಕ್ನಲ್ಲಿ ಸೂರಜ್ ಅವರು ಲಡಾಕ್, ಕಾರ್ಗಿಲ್, ಊಟಿ ಮುಂತಾದ ಕಡೆಗಳಲ್ಲಿ ಸುತ್ತಾಡಿ ಬಂದಿದ್ದಾರೆ. 2015ರಲ್ಲಿ ಬೆಂಗಳೂರಿನಲ್ಲಿ ನಡೆದ ಲಿಮ್ಕಾ ದಾಖಲೆಯಲ್ಲಿ 437 ಮಂದಿ ಭಾಗವಹಿಸಿದ್ದರು. ಈಗ ಗಿನ್ನಿಸ್ ರೆಕಾರ್ಡ್ಗೂ ಪ್ರಯತ್ನ ಮಾಡಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ