ಮೂಲ್ಕಿ ರೈಲು ನಿಲ್ದಾಣದ ರಸ್ತೆಯ ಸೇತುವೆ: ಬೃಹತ್ ಹೊಂಡಕ್ಕೆ ಮುಕ್ತಿ
Team Udayavani, Oct 22, 2017, 12:54 PM IST
ಹಳೆಯಂಗಡಿ: ಮೂಲ್ಕಿ ರೈಲ್ವೇ ನಿಲ್ದಾಣಕ್ಕೆ ತೆರಳುವ ಬಹು ಸಂಚಾರದ ರಸ್ತೆಯಲ್ಲಿ ಸಿಗುವ ರೈಲ್ವೇ ಸೇತುವೆಯಲ್ಲಿ ನಿರ್ಮಾಣವಾಗಿದ್ದ ಬೃಹತ್ ಹೊಂಡಕ್ಕೆ ಕೊನೆಗೂ ರೈಲ್ವೇ ಇಲಾಖೆಯು ಮುಕ್ತಿ ನೀಡಿದೆ.
ರೈಲ್ವೇ ನಿಲ್ದಾಣಕ್ಕೆ ಹಾಗೂ ಅಕ್ಕಪಕ್ಕದ ಪ್ರದೇಶಗಳಿಗೆ ಸೇತುವೆ ಮೇಲೆ ತೆರಳುವವರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಬಗ್ಗೆ ಉದಯವಾಣಿ ಸುದಿನದಲ್ಲಿ ಅ. 10ರಂದು ‘ಸೇತುವೆ ಮೇಲೆ ಸಂಚಾರಕ್ಕೆ ಹೊಂಡ, ರಾಡ್ ಅಡ್ಡಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ವರದಿಗೆ ಎಚ್ಚೆತ್ತ ಇಲಾಖೆಯು ಈ ಬೃಹತ್ ಹೊಂಡಕ್ಕೆ ಸಿಮೆಂಟ್ ಮಿಶ್ರಿತ ಕಾಂಕ್ರೀಟನ್ನುಬಳಸಿ ದುರಸ್ತಿ ನಡೆಸಿದೆ. ಎರಡು ದಿನ ವಾಹನಗಳ ಸಂಚಾರಕ್ಕೂ ಸೇತುವೆ ಮೇಲೆ ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು.
ಸೇತುವೆಯಲ್ಲಿ ಮಳೆ ನೀರು ತುಂಬಿ ಹೊಂಡಗಳು ಅದರಲ್ಲಿನ ಕಬ್ಬಿಣದ ರಾಡುಗಳು ಮಕ್ಕಳಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆಯೂ ಹೆಚ್ಚಾಗಿತ್ತು.ವಾಹನಗಳಲ್ಲಿ ಸಂಚರಿಸುವವರು ಸಹ ಹೊಂಡದ ಮೂಲಕವೇ ಸಾಗಬೇಕಾದುದರಿಂದ ಟಯರ್ ಪಂಕ್ಚರ್ ಆಗಿದ್ದ ಹಲವು ಉದಾಹರಣೆಗಳಿದ್ದವು. ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ್ ರಾವ್ ಸಹ ಮೌಖೀಕವಾಗಿ ಹಲವಾರು ಬಾರಿ ಇಲಾಖೆಗೆ ದುರಸ್ತಿ ಮಾಡಲು ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ