ಆದರ್ಶ ಬದುಕೇ ಕ್ರಿಸ್ತರ ಸಂದೇಶ ಸಾರುವ ಸಾಧನೆ


Team Udayavani, Oct 22, 2017, 1:15 PM IST

2110bel1ph.jpg

ಬೆಳ್ತಂಗಡಿ, ಅ. 21: ಯೇಸುಕ್ರಿಸ್ತರ ಸಂದೇಶವನ್ನು ಸಾರುವವರು ಮೊದಲು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ತಾನು ಅನುಭವಿಸಿದ ಕ್ರಿಸ್ತನನ್ನು ತನ್ನ ಬದುಕಿನ ಮೂಲಕ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು, ಆದರ್ಶ ಬದುಕೇ ಕ್ರಿಸ್ತರ ಸಂದೇಶ
ಸಾರುವ ಸಾಧನವಾಗಬೇಕು ಹೊರತು ಪುಸ್ತಕದ ಭಾಷಣಗಳಲ್ಲ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಕುರಿಯನ್‌ ಜೋಸೆಫ್‌ ಹೇಳಿದರು.

ಅವರು ಶನಿವಾರ ಬೆಳ್ತಂಗಡಿಯ ಸಂತ ಲಾರೆನ್ಸ್‌ ಪ್ರಧಾನ ದೇವಾಲಯದ ಆವರಣದಲ್ಲಿ ನಡೆದ ಕಿರಿಯ ಕುಸುಮ ಮಿಷನ್‌ ಲೀಗ್‌ನ (ಸಿಎಂಎಲ್‌) 70ನೇ ವರ್ಷಾಚರಣೆಯ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣಕಾರ ರಾಗಿ ಮಾತನಾಡಿದರು. 

ಪ್ರೀತಿಯ ಸಂದೇಶ ತಾನು ತನ್ನ ವ್ಯಕ್ತಿತ್ವವನ್ನು ಸಿಎಂಎಲ್‌ ಮೂಲಕವೇ ರೂಪಿಸಿಕೊಂಡವ ಎಂದ ಅವರು, ಈ ಸಂಘಟನೆ ಸೇವೆ, ತ್ಯಾಗ, ಪ್ರೀತಿ, ಸಹನೆಯ ಸಂದೇಶವನ್ನು ನೀಡುತ್ತಾ ತನ್ನ ಸದಸ್ಯರಲ್ಲಿ ಈ ಗುಣಗಳನ್ನು ಬೆಳೆಸುವ ಮೂಲಕ ಜಗತ್ತಿಗೆ ಸೇವೆ ಮಾಡುವ ಕಾರ್ಯವನ್ನು ಮಾಡುತ್ತಿದೆ. ಸೇವೆ ಹಾಗೂ ತ್ಯಾಗಪೂರ್ಣವಾದ ಜೀವನದ ಮೂಲಕ ಮಿಷನರಿಗಳು ಜಗತ್ತಿನಲ್ಲಿ ಯೇಸುಕ್ರಿಸ್ತರ ಪ್ರೀತಿಯ ಸಂದೇಶವನ್ನು ಸಾರುತ್ತಿವೆ ಸೇವೆ ಮಾಡುವುದು ಎಂದಿಗೂ ಮತಾಂತರಕ್ಕಾಗಿ ಅಲ್ಲ ಅದು ಗುರಿಯೂ ಅಲ್ಲ, ಉತ್ತಮ ಜೀವನ ನಡೆಸುವ ಮೂಲಕ ಇತರರಿಗೆ ಕ್ರಿಸ್ತರ ಸಂದೇಶವನ್ನು ನೀಡುವವನೇ ನೈಜ ಅರ್ಥದಲ್ಲಿ ಕ್ರೈಸ್ತನಾಗುತ್ತಾನೆ ಎಂದರು.

ತಲಶ್ಮೇರಿ ಮಹಾ ಧರ್ಮಪ್ರಾಂತದ ಆರ್ಚ್‌ ಬಿಷಪ್‌ ರೈ| ರೆ| ಜಾರ್ಜ್‌ ಞರಳಕ್ಕಾಟ್‌ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್‌ ರೈ| ರೆ| ಲಾರೆನ್ಸ್‌ ಮುಕ್ಕುಯಿ, ಸಂಘಟನೆಯ ಹಿರಿಯ ಸದಸ್ಯರನ್ನು ಸಮ್ಮಾನಿಸಿದರು.  

ಭದ್ರಾವತಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಜೋಸೆಫ್‌ ಅರುಮಚ್ಚಾಡತ್‌, ಮಂಡ್ಯ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ|ಆ್ಯಂಟನಿ ಕರಿಯಿಲ್‌, ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಗೀವರ್ಗೀಸ್‌ ಮಾರ್‌ಮಕ್ಕಾರಿಯೋಸ್‌ ಶುಭ ಹಾರೈಸಿದರು. 

ಸಿಎಂಎಲ್‌ನ ರಾಷ್ಟ್ರೀಯ ಅಧ್ಯಕ್ಷ ಬಿನೋಯಿ ಪಳ್ಳಿಪರಂಬಿಲ್‌ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮುಖಂಡರಾದ ಡೇವಿಸ್‌ ವಾಲೂರಾನ್‌, ಫಾ| ಹ್ಯಾರಿ ಡಿ’ಸೋಜಾ, ರೋಯಿ ಮ್ಯಾಥ್ಯೂ, ಜ್ಞಾನಪ್ರಕಾಶ್‌, ಜೋರ್ಜ್‌ಕಾರಕ್ಕಲ್‌, ಫಾ| ಆ್ಯಂಟನಿ ಪುದಿಯ ಪರಂಬಿಲ್‌, ಸುಜಿ ಥಾಮಸ್‌, ಮೀರಾ ಜಾರ್ಜ್‌ ಉಪಸ್ಥಿತರಿದ್ದರು. 

ರಾಜ್ಯ ಸಿಎಂಎಲ್‌ ನಿರ್ದೇಶಕ ಫಾ| ಜೋಸೆಫ್‌ ಮಟ್ಟಂ ಸ್ವಾಗತಿಸಿ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಸುಜಿ ಥಾಮಸ್‌ ವರದಿ ವಾಚಿಸಿದರು. ಟೈಟಸ್‌ ಮಂಪರಂಬಿಲ್‌ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಬೆಳ್ತಂಗಡಿ ಅಂಬೇಡ್ಕರ್‌ ಭವನದಿಂದ 3,000ಕ್ಕೂ ಅಧಿಕ ಮಂದಿ ಭದ್ರಾವತಿ, ಮಂಡ್ಯ, ತಲಶ್ಮೇರಿ ಹಾಗೂ ಕೊಡಗು, ದ.ಕ., ಉಡುಪಿ ಪ್ರಾಂತದ ಸಿಎಂಎಲ್‌ ಸದಸ್ಯರಿಂದ ಭವ್ಯ ರ್ಯಾಲಿ ನಡೆಯಿತು. 

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.