ಹೊಸ ರಾಜನ ಹಳೇ ಸ್ಟೈಲು


Team Udayavani, Feb 4, 2017, 11:27 AM IST

style-raja.jpg

ಅವನೊಬ್ಬ ಸಾಮಾನ್ಯ ಹಳ್ಳಿ ಹುಡುಗ. ಕಿತ್ತು ತಿನ್ನೋ ಬಡತನವಿದ್ದರೂ, ಕನಸುಗಳಿಗೆ ಮಾತ್ರ ಬರವಿಲ್ಲ. ನೂರಾರು ಆಸೆ-ಆಕಾಂಕ್ಷೆ ಹೊತ್ತು ಬೆಂಗಳೂರಿಗೆ ಬರುವ ಅವನಿಗೆ, ಗೆಳೆಯರು ಜತೆಯಾಗುತ್ತಾರೆ. ಆಕಸ್ಮಿಕವಾಗಿ ಹುಡುಗಿಯೊಬ್ಬಳ ಪರಿಚಯವಾಗುತ್ತೆ. ಆ ಪರಿಚಯ ಪ್ರೀತಿಗೂ ತಿರುಗುತ್ತೆ. ಒಬ್ಬ ಸಾಮಾನ್ಯ ಹುಡುಗ, ಶ್ರೀಮಂತ ಹುಡುಗಿಯನ್ನು ಲವ್‌ ಮಾಡಿದಾಗ, ಏನೆಲ್ಲಾ ತೊಂದರೆಗಳು ಎದುರಾಗುತ್ತವೆಯೋ, ಅವೆಲ್ಲವನ್ನೂ ಆ ಹುಡುಗ ಅನುಭವಿಸುತ್ತಾನೆ.

ಅವನ “ಯಾತನಾಮಯ’ ಅನುಭವದೊಳಗೆ ಗೆಳೆತನ, ಪ್ರೀತಿ, ವಾತ್ಸಲ್ಯ, ದ್ವೇಷ, ಅಸೂಯೆ ಇತ್ಯಾದಿಗಳು ಬಂದು ಹೋಗುತ್ತವೆ. ಮುಂದಾ? ಅದನ್ನು ಹೇಳದಿರುವುದೇ ಒಳಿತು. ಇದು “ಸ್ಟೈಲ್‌ ರಾಜ’ನ ಕಥೆ ಮತ್ತು ವ್ಯಥೆ. ಇಷ್ಟು ಹೇಳಿದ ಮೇಲೆ ಸಿನಿಮಾದ ಕಥೆಯನ್ನು ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ. ಕಥೆಯಲ್ಲಿ ಹೊಸತನದ ಮಾತಿಲ್ಲ. ನೋಡುಗನಿಗೆ ಮಜ ಎನಿಸುವ ಸನ್ನಿವೇಶಗಳಿಲ್ಲ. ಕಾಮಿಡಿ ದೃಶ್ಯಗಳು, ಹಾಡುಗಳು ಎಲ್ಲವನ್ನೂ ಬೇಕಂತಲೇ ತುರುಕಿದಂತಿದೆ.

ಹಾಗಾಗಿ, ಈ ರಾಜನ ಅತಿಯಾದ “ಸ್ಟೈಲ್‌’ ನೋಡುಗರ ತಾಳ್ಮೆ ಪರೀಕ್ಷಿಸುವುದು ಸುಳ್ಳಲ್ಲ. ಹಾಗಂತ, ಇದನ್ನು ಆ ರಾಜನ ಮೇಲೆ ಗೂಬೆ ಕೂರಿಸುವಂತಿಲ್ಲ. ಒಬ್ಬ ನಿರ್ದೇಶಕನಿಗೆ ಕಥೆ ಹಾಗೂ ನಿರೂಪಣೆ ಮೇಲೆ ಹಿಡಿತ ಇರಬೇಕು. ಆ ಎರಡೂ ಇಲ್ಲಿದ್ದಿದ್ದರೆ ಬಹುಶಃ, ರಾಜನ ಸ್ಟೈಲ್‌ ನೋಡುಗರಿಗೆ ತಕ್ಕಮಟ್ಟಿಗೆಯಾದರೂ ಖುಷಿ ಕೊಡುತ್ತಿತ್ತೇನೋ? ಕಥೆಯ ಒನ್‌ಲೈನ್‌ ಚೆನ್ನಾಗಿದೆ. ಅದನ್ನು ಸರಿಯಾಗಿ ನಿರೂಪಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಈ ರೀತಿಯ ಕಥೆಗಳು ಸಾಕಷ್ಟು ಬಂದು ಹೋಗಿವೆಯಾದರೂ, ಬೆರಳೆಣಿಕೆಯಷ್ಟು ಒಳ್ಳೆಯ ಅಂಶಗಳಿವೆ. ಅವುಗಳನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡದಿರುವುದೇ ಚಿತ್ರದ ಮೈನಸ್‌. ಚಿತ್ರದಲ್ಲಿ ತಾಯಿ ಮತ್ತು ಮಗನ ನಡುವಿನ ಸನ್ನಿವೇಶ ಸ್ವಲ್ಪಮಟ್ಟಿಗೆ ಭಾವತೆ ಹೆಚ್ಚಿಸುವುದನ್ನು ಬಿಟ್ಟರೆ, ಉಳಿದ ಯಾವ ದೃಶ್ಯಗಳೂ ಇಲ್ಲಿ  ಗಮನಸೆಳೆಯುವುದಿಲ್ಲ. ಚಿತ್ರದಲ್ಲಿ ಚಿಕ್ಕಣ್ಣರಂತಹ ಕಾಮಿಡಿ “ಪೀಸ್‌’ ಇದ್ದರೂ ಅವರನ್ನಿಲ್ಲಿ ಸರಿಯಾಗಿ ಬಳಸಿಕೊಳ್ಳದಿರುವುದು ಇನ್ನೊಂದು ಮೈನಸ್‌.

ಚಿಕ್ಕಣ್ಣ ಅವರ ಯಾವ ದೃಶ್ಯವೂ ನಗು ತರಿಸಲ್ಲ ಅನ್ನೋದೇ ನಂಬಲಾಗದ ಸತ್ಯ! ಕಥೆ ಬರೀ, ಪ್ರೀತಿ ಸುತ್ತವೇ ತಿರುಗಿರುವುದರಿಂದ ನೋಡುಗರ ತಲೆ  ತಿರುಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ತಾನು ಪ್ರೀತಿಸುವ ಹುಡುಗಿಯ ಹಿಂದೆ ಪದೇ ಪದೇ ಸುತ್ತೋದು, ಅವಳನ್ನು ಆಕರ್ಷಿಸಲು ಮಾಡುವ ಡ್ರಾಮಾಗಳೆಲ್ಲವೂ “ಸಿಲ್ಲಿ’ತನವನ್ನು ಪ್ರದರ್ಶಿಸಿ, ನೋಡುಗರನ್ನು ಸೀಟಿಗೆ ಒರಗಿಕೊಳ್ಳುವಂತೆ ಮಾಡುತ್ತವೆ.

ಕಥೆಯ ಜಾಡನ್ನು ಕಷ್ಟಪಟ್ಟು  ಹಿಡಿದು, ಆಮೆಗತಿಯಲ್ಲಿ ಸಾಗುವ ದೃಶ್ಯಗಳನ್ನು ಅರ್ಥಮಾಡಿಕೊಳ್ಳುವಷ್ಟರಲ್ಲೇ, ಕ್ರಮವಲ್ಲದ ಹಾಡುಗಳು ತೂರಿಕೊಂಡು ಇನ್ನಷ್ಟು ತಾಳ್ಮೆ ಪರೀಕ್ಷಿಸವುದು ನಿಜ. ಹಾಗಾಗಿ ಸ್ಟೈಲ್‌ರಾಜನ ಇಷ್ಟ-ಕಷ್ಟಗಳು ಪರಿಣಾಮಕಾರಿ ಎನಿಸಲ್ಲ. ಗಿರೀಶ್‌ಗೆ ಇದು ಮೊದಲ ಸಿನಿಮಾ. ಹಾಗಾಗಿ, ಇರುವ ತಪ್ಪುಗಳನ್ನು ಸಹಿಸಿಕೊಂಡು ನೋಡಬೇಕು. ನಟನೆಯಲ್ಲಿನ್ನೂ ಬಹುದೂರ ಸಾಗಬೇಕು. ಫೈಟ್‌ನಲ್ಲೇನೋ “ಹರಸಾಹಸ’ ಮಾಡಿದ್ದಾರೆ. ಚಿಕ್ಕಣ್ಣ ಇಲ್ಲಿ ಹೆಸರಿಗಷ್ಟೇ.

ಅವರು ಮಾಡುವ ಹಾಸ್ಯದಲ್ಲಿ ಯಾವ ಕಚಗುಳಿಯೂ ಇಲ್ಲ. ಶೋಭರಾಜ್‌ ಪಾತ್ರಕ್ಕೆ ಯಾವುದೇ ಮೋಸ ಮಾಡಿಲ್ಲ. ವಿಲನ್‌ ಆಗಿ ಸೂರ್ಯಕಿರಣ್‌ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಾಯಕಿ ರನುಷಾ ಬಗ್ಗೆ ಇಲ್ಲಿ ಹೇಳದಿರುವುದೇ ಒಳಿತು. ಉಳಿದಂತೆ ಕುರಿರಂಗ, ಗಿರಿಜಾ ಲೋಕೇಶ್‌ ಇರುವಷ್ಟು ಕಾಲ ಸೈ ಎನಿಸಿಕೊಳ್ಳುತ್ತಾರೆ.  ರಾಜೇಶ್‌ ರಾಮನಾಥ್‌ ಸಂಗೀತದಲ್ಲಿ ಒಂದು ಹಾಡು ಬಿಟ್ಟರೆ, ಬೇರೇನೂ ಕೇಳುವಂತಿಲ್ಲ. ಎಂ.ಬಿ.ಅಳ್ಳಿಕಟ್ಟಿ ಕ್ಯಾಮೆರಾ ಕೈಚಳಕದಲ್ಲಿ ಯಾವ ಲೋಪದೋಷಗಳಿಲ್ಲ.

ಚಿತ್ರ: ಸ್ಟೈಲ್‌ ರಾಜ
ನಿರ್ದೇಶನ: ಹರೀಶ್‌
ನಿರ್ಮಾಣ: ರಮೇಶ್‌
ತಾರಾಗಣ: ಗಿರೀಶ್‌, ರನೂಷಾ, ಚಿಕ್ಕಣ್ಣ, ಕುರಿ ರಂಗ, ಶೋಭರಾಜ್‌, ಸೂರ್ಯಕಿರಣ್‌, ಗಿರಿಜಾ ಲೋಕೇಶ್‌ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.