ಕನಸೆಂಬ ಕುದುರೆಯನೇರಿ


Team Udayavani, Mar 18, 2017, 11:31 AM IST

eradu-kanasu.jpg

ಅನಾಥ ಮಕ್ಕಳೇ ಆತನ ಪ್ರಪಂಚ. ಪ್ರಚಾರದ ಹುಚ್ಚಿಲ್ಲ. ಸೇವೆಯಲ್ಲೇ ಖುಷಿ ಕಾಣುವ ಸ್ವಭಾವ ಆತನದು. ಆತನ ವಯಸ್ಸಿನ ಹುಡುಗರು ಸ್ಟೈಲಿಶ್‌ ಲೈಫ್ ನಡೆಸುತ್ತಿದ್ದರೆ ಈತ ಮಾತ್ರ ಅನಾಥಾಶ್ರಮ ನಡೆಸುತ್ತಾ ಅದರಲ್ಲೇ ಖುಷಿ ಕಾಣುತ್ತಾನೆ. ಮುತ್ತುವಿನ ಈ ಕಾರ್ಯಕ್ಕೆ ಪ್ರೇರಣೆಯೇನು, ಅದರ ಉದ್ದೇಶವೇನು ಎಂಬ ತಿಳಿಯುವ ಕುತೂಹಲವಿದ್ದರೆ ನೀವು ಎರಡೂವರೆ ಗಂಟೆ ಸೀಟಿಗೆ ಅಂಟಿಕೊಂಡು ಕೂರಲೇಬೇಕು.

ಕನಸಿನ ದೀರ್ಘ‌ ಪಯಣದಲ್ಲಿ ನೀವು ಸಾಕಷ್ಟು ವಿಷಯಗಳನ್ನು ಬೇಕೋ ಬೇಡವೋ ಕಣ್ತುಂಬಿಕೊಳ್ಳಲೇಬೇಕು. ನಿರ್ದೇಶಕ ಮದನ್‌ ಅವರ ಸಿನಿಮಾ ಪ್ರೀತಿಯನ್ನು ಹಾಗೂ ಅವರು ಆಲೋಚಿಸಿದ ರೀತಿಯನ್ನು ಮೆಚ್ಚಲೇಬೇಕು. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಯಾವ ವರ್ಗಕ್ಕೂ ಮೋಸ ಆಗಬಾರದು ಎಂಬ ಕಾರಣಕ್ಕೆ ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಕಾಮಿಡಿ, ಕಲರ್‌ಫ‌ುಲ್‌ ಹಾಡು, ಫ್ಲ್ಯಾಶ್‌ಬ್ಯಾಕ್‌ ಸ್ಟೋರಿ … ಹೀಗೆ ಎಲ್ಲವನ್ನು ಕಟ್ಟಿಕೊಟ್ಟಿದ್ದಾರೆ.

ಹಾಗಾಗಿ, “ಸುಖ-ದುಃಖ’ದ ಸಮ್ಮಿಲನದಂತೆ ಈ ಸಿನಿಮಾ ಮೂಡಿಬಂದಿದೆ. ಎಲ್ಲವನ್ನು ಒಂದೇ ಸಿನಿಮಾದಲ್ಲಿ ನೀಡುವ ಪ್ರಯತ್ನವೇ ಸಿನಿಮಾದ ಮೈನಸ್‌ ಪಾಯಿಂಟ್‌ ಎಂದರೆ ನಿರ್ದೇಶಕರಿಗೆ ಬೇಸರವಾಗಬಹುದು. ಹಾಗೆ ನೋಡಿದರೆ ಚಿತ್ರದ ಒನ್‌ಲೈನ್‌ ಚೆನ್ನಾಗಿದೆ. ಅನಾಥ ಮಕ್ಕಳನ್ನು ಯಾವ ರೀತಿ ದಂಧೆಗೆ ಬಳಸುತ್ತಾರೆಂಬ ಲೈನ್‌ ಇಟ್ಟುಕೊಂಡು ಸಿನಿಮಾ ಆರಂಭಿಸಿದ ಮದನ್‌ ಇಂಟರ್‌ವಲ್‌ ನಂತರ ಅದನ್ನು ಮೊಟಕುಗೊಳಿಸಿ ಬೇರೆಯೇ ಲೋಕವನ್ನು ತೋರಿಸಿದ್ದಾರೆ.

ಹಾಗಾಗಿ, ಒಂದು ಟಿಕೆಟ್‌ನಲ್ಲಿ ಎರಡು ಸಿನಿಮಾ ನೋಡಿದ ಅನುಭವ ನಿಮಗೆ ಆಗುತ್ತದೆ. ಆದರೆ, ಆ ಲೈನ್‌ ಅನ್ನು ಮತ್ತಷ್ಟು ಬೆಳೆಸಿಕೊಂಡು ಹೋಗಿದ್ದರೆ “ಕನಸು’ ಕಲರ್‌ಫ‌ುಲ್‌ ಹಾಗೂ ಒಂದು ಸೀರಿಯಸ್‌ ವಿಷಯದ ಸಿನಿಮಾವಾಗುತ್ತಿತ್ತು. ಆದರೆ, ನಿರ್ದೇಶಕರಿಗೆ ಫ್ಯಾಮಿಲಿ ಅಟ್ಯಾಚ್‌ಮೆಂಟ್‌ ಜಾಸ್ತಿ. ಹಾಗಾಗಿ, ತುಂಬಿದ ಕುಟುಂಬದ ಸಂಭ್ರಮ, ಸಡಗರ, ನೋವು-ನಲಿವನ್ನು ಸ್ವಲ್ಪ ಜಾಸ್ತಿಯೇ ತೋರಿಸಿದ್ದಾರೆ. 

ನಾಯಕನ ಕಾಯಕದ ಹಿಂದಿನ ಉದ್ದೇಶವನ್ನು ಹೇಳುವುದಕ್ಕಾಗಿ ಫ್ಲ್ಯಾಶ್‌ಬ್ಯಾಕ್‌ ಮೊರೆ ಹೋದ ನಿರ್ದೇಶಕರು ಸಿನಿಮಾ ಮುಗಿಯಲು ಹತ್ತು ನಿಮಿಷವರೆಗೂ ಆ ಫ್ಲ್ಯಾಶ್‌ಬ್ಯಾಕ್‌ನಿಂದ ಹೊರಬಂದಿಲ್ಲ. ಹಾಗಾಗಿ, ಚಿತ್ರ ಆರಂಭವಾದಾಗ ನೋಡಿದ ನಾಯಕ ಕಾಯಕ ಮತ್ತೆ ನಿಮಗೆ ಸಿಗೋದೇ ಇಲ್ಲ. ಚಿತ್ರದ ಮೊದಲರ್ಧವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿರೂಪಣೆ ವಿಷಯದಲ್ಲೂ ಇಲ್ಲಿ ನಿರ್ದೇಶಕರ ಕೆಲಸವನ್ನು ಮೆಚ್ಚಬಹುದು.

ಆದರೆ, ಇಂಟರ್‌ವಲ್‌ ನಂತರ ಮಾತ್ರ ಕೆಟ್ಟ ರಸ್ತೆಯಲ್ಲಿ ಸಾಗುವ ವಾಹನದಂತೆ ಇಡೀ ಸಿನಿಮಾ ನಿಧಾನಗತಿಯಲ್ಲೇ ಸಾಗುತ್ತದೆ. ಇಲ್ಲಿ ಸಾಕಷ್ಟು ಅನಾವಶ್ಯಕ ದೃಶ್ಯಗಳನ್ನು ತರಲಾಗಿದೆ. ನಿರ್ದೇಶಕರ ಕಾಮಿಡಿ ಪ್ರೀತಿಯನ್ನೇನೋ ಮೆಚ್ಚಬಹುದು. ಆದರೆ, ಆ ಪ್ರೀತಿ ಮಾತ್ರ ಇಲ್ಲಿ ಸ್ವಲ್ಪ ಅತಿಯಾದ ಕಾರಣ ತುಂಬಾ ಉದ್ದುದ ಕಾಮಿಡಿ ದೃಶ್ಯಗಳನ್ನು ಇಟ್ಟಿದ್ದಾರೆ. ಇವೆಲ್ಲದಕ್ಕೆ ಕತ್ತರಿ ಹಾಕಿದ್ದರೆ ಸಿನಿಮಾದ ಅವಧಿ ಕಡಿಮೆಯಾಗಿ, ಕಥೆಗೆ ಮತ್ತಷ್ಟು ಮಹತ್ವ ಬರುತ್ತಿತ್ತು.  

ಫ್ಯಾಮಿಲಿ ಡ್ರಾಮಾ ಇಷ್ಟಪಡುವವರಾದರೆ “ಎರಡು ಕನಸು’ ನೋಡಲಡ್ಡಿಯಿಲ್ಲ. ಜಾತ್ರೆ, ಕಲರ್‌ಫ‌ುಲ್‌ ಹಾಡು ಎಲ್ಲವನ್ನೂ ನೀವು ಕಣ್ತುಂಬಿಕೊಳ್ಳಬಹುದು.  ನಾಯಕ ವಿಜಯರಾಘವೇಂದ್ರ “ಕಸ್ತೂರಿ ನಿವಾಸ’ದ ಮುತ್ತುವಾಗಿ, ಕುಟುಂಬದ ಕಣ್ಮಣಿಯಾಗಿ ಇಷ್ಟವಾಗುತ್ತಾರೆ. ಈ ಬಾರಿ ಯಾವ ಆ್ಯಕ್ಷನ್‌ ಹೀರೋಗೂ ಕಮ್ಮಿ ಇಲ್ಲದಂತೆ ಫೈಟ್‌ ಮಾಡಿದ್ದಾರೆ. ನಾಯಕಿಯರಾದ ಕ್ರಿಷಿ ತಾಪಂಡ, ಕಾರುಣ್ಯ ರಾಮ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಕುರಿ ಪ್ರತಾಪ್‌, ಪೆಟ್ರೋಲ್‌ ಪ್ರಸನ್ನ ಸೇರಿದಂತೆ ಇತರ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 

ಚಿತ್ರ: ಎರಡು ಕನಸು
ನಿರ್ಮಾಣ: ಅಶೋಕ್‌
ನಿರ್ದೇಶನ: ಮದನ್‌
ತಾರಾಗಣ: ವಿಜಯ ರಾಘವೇಂದ್ರ, ಕ್ರಿಷಿ ತಾಪಂಡ, ಕಾರುಣ್ಯ ರಾಮ್‌, ಪೆಟ್ರೋಲ್‌ ಪ್ರಸನ್ನ, ಕುರಿ ಪ್ರತಾಪ್‌ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.