ಗುಡಿಯೊಳಗಿನ ಆಸ್ತಿ,ಈ ಮಾಸ್ತಿ


Team Udayavani, May 14, 2017, 2:09 PM IST

3-a.jpg

ಚಿತ್ರ: ಮಾಸ್ತಿಗುಡಿ  ನಿರ್ಮಾಣ: ಸುಂದರ್‌ ಗೌಡ  ನಿರ್ದೇಶನ: ನಾಗಶೇಖರ್‌ ತಾರಾಗಣ: ವಿಜಯ್‌, ಅಮೂಲ್ಯ,ಕೃತಿ ಖರಬಂದಾ, ರಂಗಾಯಣ ರಘು,ಬಿ. ಜಯಶ್ರೀ, ಅನಿಲ್‌, ಉದಯ್‌ಮುಂತಾದವರು.

ಕಾಡಲ್ಲಿ ಹುಲಿ ವಾಸಿಸುವುದಕ್ಕೂ, ಊರುಗಳಲ್ಲಿ ನೀರು ಸರಬರಾಜಾಗುವುದಕ್ಕೂ ಏನು ಸಂಬಂಧ? ಸಂಬಂಧ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಉತ್ತರ ಬರಬಹುದು. ಆದರೆ, ಅಲ್ಲೊಂದು ಸಂಬಂಧ ಇದೆ. ನಾವಿಲ್ಲಿ ನೆಮ್ಮದಿಯಾಗಿರಬೇಕಾದರೆ, ನಗರಗಳಲ್ಲಿ ನೀರಿನ ಸಮಸ್ಯೆಗಳಿರಬಾರದೆಂದಾದರೆ, ಕಾಡುಗಳಲ್ಲಿ ಹುಲಿಗಳು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಓಡಾಡಿಕೊಂಡಿರಬೇಕು. ಆ ಸಂಬಂಧವನ್ನು ಕಮರ್ಷಿಯಲ್‌ ಆಗಿ ಹೇಳುವ ಪ್ರಯತ್ನವನ್ನು “ಮಾಸ್ತಿಗುಡಿ’ ಚಿತ್ರದಲ್ಲಿ ನಾಗಶೇಖರ್‌ ಮಾಡಿದ್ದಾರೆ.

ಅದೊಂದು ಕಾಡು. ಆ ಕಾಡುಗಳಲ್ಲಿ 350 ಹುಲಿಗಳಿವೆ. ಆ ಹುಲಿಗಳನ್ನು ಕೊಂದು, ಅದರ ಚರ್ಮ, ಉಗುರು ಮಾರಿ ಕೋಟ್ಯಾಂತರ ಹಣ ಮಾಡಬೇಕೆಂದು ಒಂದು ಮಾಫಿಯಾ ಹೊರಟಿದೆ. ಇನ್ನೊಂದು ಕಡೆ ಆ ಕಾಡಿನಲ್ಲೊಬ್ಬ ಕಾವಾಡಿಗ. ಹುಲಿ ಸಂರಕ್ಷಿಸುವುದಷ್ಟೇ, ಇಡೀ ಕಾಡೇ ದೇವರು ಎಂದು ನಂಬಿರುವವನು ಅವನು. ಒಬ್ಬ ಸಾಮಾನ್ಯ ಕಾವಾಡಿಗ, ಹೇಗೆ ಈ ಮಾಫಿಯಾ ವಿರುದ್ಧ ಹೋರಾಡುತ್ತಾನೆ ಎಂಬ ಕಥೆಯನ್ನು ನಾಗಾ ಶೇಖರ್‌, “ಮಾಸ್ತಿಗುಡಿ’ಯಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ.

ಇಷ್ಟೇ ಹೇಳಿದರೆ ಅದೊಂದು ಥ್ರಿಲ್ಲರ್‌ ಕಥೆಯಾಗಿಬಿಡುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ತಂತ್ರ-ಪ್ರತಿತಂತ್ರಗಳ ಈ ಕಥೆಯಲ್ಲಿ ಅವರು ಹಲವು ಟ್ವಿಸ್ಟುಗಳನ್ನು ತರುವ ಪ್ರಯತ್ನ ಮಾಡುತ್ತಾರೆ. ಪ್ರಮುಖವಾಗಿ ಒಂದು ತ್ರಿಕೋನ ಪ್ರೇಮಕಥೆಯನ್ನು ಇಟ್ಟಿದ್ದಾರೆ. ಕಾಡು ಜನರ ನಂಬಿಕೆ-ಮೂಢನಂಬಿಕೆ, ಆಚಾರ-ವಿಚಾರಗಳು, ಮುಗ್ಧತೆ-ಸಿಟ್ಟನ್ನು ಪೂರಕವಾಗಿ ಬಿಚ್ಚಿಡುತ್ತಾ ಹೋಗಿದ್ದಾರೆ. ಜನ ಗಂಭೀರವಾಗಿರಬಾರದು, ಸ್ವಲ್ಪ ನಗಬೇಕೆಂದು, ಕಾಮಿಡಿ ಸೀನುಗಳಿಗೂ ಜಾಗ ಕೊಟ್ಟಿದ್ದಾರೆ.

ಬಹುಶಃ ಇದೇ ಚಿತ್ರದ ಸಮಸ್ಯೆಯೆಂದರೆ ತಪ್ಪಿಲ್ಲ. ಚಿತ್ರದ ಮೊದಲಾರ್ಧವೆಲ್ಲಾ ಕಾಡಿನಲ್ಲಿ ಒಂದಿಷ್ಟು ಅನಿರೀಕ್ಷಿತ ಘಟನೆಗಳು ನಡೆಯುವುದು, ಅದನ್ನು ನಾಯಕ ಬೇಧಿಸುವ ಪ್ರಯತ್ನ ಮಾಡುವುದು ಇವೆಲ್ಲಾ ಪ್ರೇಕ್ಷಕರನ್ನು ಒಂದು ಕಡೆ ಹಿಡಿದಿಡುತ್ತದೆ. ಇಂಟರ್‌ವೆಲ್‌ಗಿಂಥ ಮುನ್ನ ಒಂದು ದೊಡ್ಡ ಟ್ವಿಸ್ಟ್‌ ಎದುರಾಗುತ್ತದೆ. ಅಲ್ಲಿಂದ ಚಿತ್ರ ಇನ್ನೊಂದು ಮಜಲಿಗೆ ಹೋಗಬಹುದು ಎಂದು ಪ್ರೇಕ್ಷಕರು ಕಾದರೆ, ಅವರ ನಿರೀಕ್ಷೆ ಸುಳ್ಳಾಗುತ್ತದೆ. ಒಂದು ಕಡೆ ಮಾಫಿಯಾದ ಕೆಲಸ ಪ್ರಗತಿಯಲ್ಲಿರುವಾಗಲೇ, ಎರಡೆರೆಡು ಪ್ರೇಮಕಥೆಗಳು, ಆತ್ಮದ ನೆರಳು, ಕಾಡು ಜನರ ಆತಂಕ ಇವೆಲ್ಲವೂ ಚಿತ್ರದಲ್ಲಿದೆ.

ಯಾವುದೋ ಒಂದು ಘಟನೆ ಚಿತ್ರವನ್ನು ಮೇಲಕ್ಕೆತ್ತಿತು ಎನ್ನುವಷ್ಟರಲ್ಲಿ, ಇನ್ನೊಂದೆರೆಡು ದೃಶ್ಯಗಳು ಕಾಲೆಳೆಯುತ್ತವೆ. ಮತ್ತೆ ಚಿತ್ರ ಪಿಕಪ್‌ ಆಯಿತು ಎನ್ನುವಷ್ಟರಲ್ಲಿ, ಇನ್ನಾéವುದೋ ದೃಶ್ಯ ಚಿತ್ರದ ವೇಗಕ್ಕೆ ಅಡ್ಡಗಾಲು ಹಾಕುತ್ತದೆ. ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ, ಒಂದು ವಿಷಯ ಖುಷಿಯಾಗುತ್ತದೆ. ನಾಗಶೇಖರ್‌ ಇದುವರೆಗೂ ಹೆಚ್ಚಾಗಿ ಲವ್‌ ಮತ್ತು ಫ್ಯಾಮಿಲಿ ಸೆಂಟಿಮೆಂಟ್‌ ಚಿತ್ರಗಳನ್ನು ಮಾಡಿಕೊಂಡು ಬಂದವರು. ಈ ಚಿತ್ರದಿಂದ ಇನ್ನೊಂದು ಹೆಜ್ಜೆ ಅವರು ಮೇಲಿಟ್ಟಿದ್ದಾರೆ.

ಒಂದು ಸಂತೋಷದ ವಿಷಯವೆಂದರೆ, ಕನ್ನಡದಲ್ಲಿ ಕಾಡಿನ ಚಿತ್ರವೊಂದು ಬರದೇ ಯಾವುದೋ ಕಾಲವಾಗಿತ್ತು. ಅಂಥದ್ದೊಂದು ಪ್ರಯತ್ನವನ್ನು ನಾಗಶೇಖರ್‌ ಮಾಡಿರುವುದಷ್ಟೇ ಅಲ್ಲ, ಚಿತ್ರದಲ್ಲೊಂದು ಒಳ್ಳೆಯ ಸಂದೇಶವನ್ನೂ ಇಟ್ಟಿದ್ದಾರೆ. ಇದರ ಜೊತೆಗೆ ಖುಷಿಗೆ ಕಾರಣವಾಗುವ ಇನ್ನೊಂದು ವಿಷಯವೆಂದರೆ, ಸಂಗೀತ ನಿರ್ದೇಶಕ ಸಾಧು ಕೋಕಿಲ ವಾಪಸ್ಸಾಗಿರುವುದು.

ಮೂರು ಮೆಲೋಡಿ ಹಾಡುಗಳು, ಸನ್ನಿವೇಶಕ್ಕೆ ತಕ್ಕಂತಹ ಅದ್ಭುತವಾದ ಹಿನ್ನೆಲೆ ಸಂಗೀತ ಇವೆಲ್ಲಾ ಚಿತ್ರದ ಹೈಲೈಟುಗಳು ಎಂದರೆ ತಪ್ಪಿಲ್ಲ. ಇನ್ನು ಸತ್ಯ ಹೆಗಡೆ ಅವರ ಛಾಯಾಗ್ರಹಣದಲ್ಲಿ ಒಂದೊಂದು ಫ್ರೆಮು ಸಹ ಖುಷಿಕೊಡುತ್ತದೆ. ಇದೆಲ್ಲವೂ ಒಂದು ತಕ್ಕಡಿಯಾದರೆ, ಇನ್ನೊಂದರಲ್ಲಿ ಅಭಿನಯವಿದೆ. ಮೂರು ವಿವಿಧ ಗೆಟಪ್‌ಗ್ಳಲ್ಲಿ ವಿಜಯ್‌ ಚಿತ್ರದ ತುಂಬಾ ಆವರಿಸಿಕೊಳ್ಳುತ್ತಾರೆ.

ಕಾಡು ಪ್ರೀತಿಸುವ ಮಾಸ್ತಿಯಾಗಿ ವಿಜಯ್‌ ಅಭಿನಯ ಚೆನ್ನಾಗಿದೆ. ಸಾಯುವ ಸನ್ನಿವೇಶದಲ್ಲಿ ಅಮೂಲ್ಯ ಚಪ್ಪಾಳೆ ಗಿಟ್ಟಿಸುತ್ತಾರೆ. ರಂಗಾಯಣ ರಘು, ಬಿ. ಜಯಶ್ರೀ, ಶ್ರೀನಿವಾಸಮೂರ್ತಿ, ದೇವರಾಜ್‌ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅನಿಲ್‌ ಮತ್ತು ಉದಯ್‌ ಸಹ ವಿಜಯ್‌ ಸರಿಸಮನಾಗಿ ಮಿಂಚಿರಬಹುದು ಎಂಬ ನಿರೀಕ್ಷೆ ಇದ್ದರೆ ಅದು ಸುಳ್ಳಾಗುತ್ತದೆ. ಅನಿಲ್‌ ಮತ್ತು ಉದಯ್‌ ಚಿತ್ರದಲ್ಲಿ ಇದ್ದೂ, ಇಲ್ಲದಂತಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದು ಹೆಚ್ಚೆಂದರೆ 10 ನಿಮಿಷ ಅಷ್ಟೇ. ಅಲ್ಲಿಗೆ “ಮಾಸ್ತಿಗುಡಿ’ ಕಥೆ ಮುಗಿಯಿತು ಎಂದು ಭಾವಿಸಬೇಕಿಲ್ಲ. ಮಾಸ್ತಿ ಮತ್ತೂಮ್ಮೆ ಬರುತ್ತಾರಂತೆ, ಎರಡನೆಯ ಭಾಗದಲ್ಲಿ. ಅಲ್ಲಿಯವರೆಗೂ ಈ ಗುಡಿಯ ದರ್ಶನ ಪಡೆದುಕೊಳ್ಳಿ.

 ಚೇತನ್‌ ನಾಡಿಗೇರ್‌ 

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.