ಸ್ನೇಹಕ್ಕೆ ಸ್ನೇಹ: ಪ್ರೀತಿಗೆ ಪ್ರೀತಿ


Team Udayavani, Jun 11, 2017, 11:35 AM IST

Noorondu-Nenapu.jpg

ಬಹುಶಃ ಆ ಕಾಲೇಜು ತನ್ನ ದಿಕ್ಕನ್ನೇ ಬದಲಿಸುತ್ತದೆ ಎಂದು ಅವನಿಗೆ ಗೊತ್ತಿರುತ್ತದೋ ಇಲ್ಲವೋ ಗೊತ್ತಿಲ್ಲ. ತಾಯಿಯ ಒತ್ತಾಯದ ಮೇರೆಗೆ ಅವನು ಇದ್ದ ಕಾಲೇಜು ಬಿಟ್ಟು ಇನ್ನೊಂದು ಕಾಲೇಜು ಸೇರುತ್ತಾನೆ. ಅಲ್ಲಿಗೆ ಹೋದ ನಂತರ ಅವನ ದುನಿಯಾನೇ ಬದಲಾಗಿಬಿಡುತ್ತದೆ. ಹೊಸ ಹೊಸ ಸ್ನೇಹಿತರು, ಹೊಸ ಹೊಸ ಸನ್ನಿವೇಶಗಳು, ಸಂಬಂಧಗಳು, ಸಂತೋಷಗಳು ಎಲ್ಲವೂ ಸಿಗುತ್ತಾ ಹೋಗುತ್ತದೆ. ಇದೆಲ್ಲದರಿಂದ ಅವನ ಜೀವನವೇ ಬದಲಾಗಿ ಹೋಗುತ್ತದೆ.

ಆದರೆ, ಎಲ್ಲಾ ಸಂತೋಷಗಳಿಗೂ ಭಗವಂತ ಒಂದು ಫ‌ುಲ್‌ಸ್ಟಾಪ್‌ ಇಡುವಂತೆ, ಶ್ರೇಯಸ್‌ನ ಈ ಸಂತೋಷಗಳಿಗೂ ಫ‌ುಲ್‌ಸ್ಟಾಪ್‌ ಇಡುತ್ತಾನೆ. ಪ್ರತಿಯೊಬ್ಬರ ಕಾಲೇಜು ಜೀವನವನ್ನು ನೆನಪಿಸುವಂತಹ “ಕಿರಿಕ್‌ ಪಾರ್ಟಿ’ ಕೆಲವು ತಿಂಗಳುಗಳ ಹಿಂದಷ್ಟೇ ಬಂದಿತ್ತು. ಅದೇ ಸಾಲಿಗೆ ಸೇರಿದ ಇನ್ನೊಂದು ಸಿನಿಮಾ “ನೂರೊಂದು ನೆನಪು’. ಒಬ್ಬ ವಿದ್ಯಾರ್ಥಿಯ ಕಾಲೇಜು ಜೀವನದಲ್ಲಿನ ನೂರೊಂದು ನೆನಪುಗಳ’ನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಸ್ನೇಹ, ಪ್ರೀತಿ, ತ್ಯಾಗ, ದ್ವೇಷ … ಎಲ್ಲವೂ ಇರುವ ಒಂದು ಚಿತ್ರವನ್ನು ಪ್ರೇಕ್ಷಕರೆದುರು ಇಡಲಾಗಿದೆ. ಹಾಗೆ ನೋಡಿದರೆ, ಈ ತರಹದ ಚಿತ್ರಗಳು ಹೊಸದೇನಲ್ಲ. ಕಾಲೇಜಿನ ನೆನಪುಗಳನ್ನು ಮೆಲುಕು ಹಾಕುವಂತಹ ಹಲವು ಚಿತ್ರಗಳು ಇದುವರೆಗೂ ಕನ್ನಡ ಮತ್ತು ಬೇರೆಬೇರೆ ಭಾಷೆಗಳಲ್ಲಿ ಬಂದಿದೆ. ಆದರೆ, ಅದೇ ಕಥೆಯನ್ನು ರೆಟ್ರೋ ಸ್ಟೈಲ್‌ನಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಕುಮರೇಶ್‌ ಮಾಡಿದ್ದಾರೆ. ಅದೇ ಈ ಚಿತ್ರದ ಹೈಲೈಟ್‌ ಎಂದರೆ ತಪ್ಪಲ್ಲ.

ಇಡೀ ಚಿತ್ರ ಫ್ಲಾಶ್‌ಬ್ಯಾಕ್‌ನಲ್ಲಿ ನಡೆಯುತ್ತದೆ. ಚಿತ್ರ ಪ್ರಾರಂಭವಾಗುವುದು 1989ರಲ್ಲಿ. ಒಂದು ಸೀನು ಮುಗಿಯುತ್ತಿದ್ದಂತೆಯೇ, ಚಿತ್ರ 1981ಕ್ಕೆ ರಿವರ್ಸ್‌ ಹೋಗುತ್ತದೆ. ಅಲ್ಲಿ ಶ್ರೇಯಸ್‌ ಎಂಬ ಹುಡುಗನ ಕಥೆಯನ್ನು ಹೇಳಲಾಗುತ್ತದೆ. ಕೊನೆಯ ದೃಶ್ಯದಲ್ಲಿ ಮತ್ತೆ ಫಾಸ್ಟ್‌ ಫಾರ್ವರ್ಡ್‌ ಆಗಿ, ಚಿತ್ರ 89ರಲ್ಲಿ ಮುಗಿಯುತ್ತದೆ. ರೆಟ್ರೋ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿರುವುದು ಹೈಲೈಟ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಮಾರು 35 ವರ್ಷಗಳಷ್ಟು ಹಿಂದಿನ ಪರಿಸರ, ಪರಿಕರ ಇವೆಲ್ಲವನ್ನೂ ಚೆನ್ನಾಗಿ ತೋರಿಸಲಾಗಿದೆ.

ಈ ಮಧ್ಯೆಯೇ ಒಂದಿಷ್ಟು ಯಡವಟ್ಟುಗಳಿವೆ. 81ರಲ್ಲಿ ನಡೆಯುವ ಕಥೆಯಲ್ಲಿ 84ರಲ್ಲಿ ಬಿಡುಗಡೆಯಾದ “ಬಂಧನ’ ಚಿತ್ರದ ಒಂದು ದೃಶ್ಯ ಬಂದುಬಿಡುತ್ತದೆ. ಇನ್ನು ಕೆಲವು ಕಾಸ್ಟೂéಮ್‌ಗಳು, ಅತಿರೇಕದ ಅಭಿನಯ ಇವೆಲ್ಲಾ ಪ್ರೇಕ್ಷಕರಿಗೆ ಕಿರಿಕಿರಿ ಮಾಡುವುದು ಹೌದು. ಇವೆಲ್ಲದರ ಜೊತೆಗೆ ಚಿತ್ರದ ಪ್ರಮುಖ ಸಮಸ್ಯೆಯೆಂದರೆ, ಚಿತ್ರದ ವೇಗ. ಚಿತ್ರದ ನಿಧಾನವಷ್ಟೇ ಅಲ್ಲ, ಚಿತ್ರದಲ್ಲಿ ಹೆಚ್ಚಿನ ಟ್ವಿಸ್ಟ್‌ಗಳನ್ನು ಕಾಣುವುದು ಕಷ್ಟ. ಚಿತ್ರದಲ್ಲಿ ಕೆಲವು ಎಮೋಷನಲ್‌ ಎನ್ನುವಂತಹ ಸನ್ನಿವೇಶಗಳಿವೆ.

ಆದರೆ, ಅದ್ಯಾವುದೇ ಪ್ರೇಕ್ಷಕರನ್ನು ತಟ್ಟುವುದೇ ಇಲ್ಲ. ಅದೇ ಕಾರಣಕ್ಕೆ ಚಿತ್ರದಲ್ಲಿ ನಾಯಕನ “ನೂರೊಂದು ನೆನಪು’ಗಳನ್ನು ನೋಡಬಹುದೇ ಹೊರತು, ಚಿತ್ರದ “ನೂರೊಂದು ನೆನಪು’ಗಳು ಕಾಡುವುದೇ ಇಲ್ಲ. ಇಡೀ ಚಿತ್ರದ ಕೇಂದ್ರಬಿಂದುವೆಂದರೆ ಅದು ಚೇತನ್‌ ಅವರ ಪಾತ್ರ. ಅದರ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ ಮತ್ತು ಚೇತನ್‌ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರೆ. ಹೆಚ್ಚು ಆಕ್ರಮಣಕಾರಿಯಲ್ಲದ, ಹಾಗೆಯೇ ತೀರಾ ಸೋಬರ್‌ ಅಲ್ಲದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇನ್ನು ಡಿಎಸ್‌ಪಿಯಾಗಿ ಕಾಣಿಸಿಕೊಂಡಿರುವ ರಾಜ್‌ವರ್ಧನ್‌, ಇನ್ನಷ್ಟು ಪಳಗಬೇಕು. ಆದರೂ ಮೊದಲ ಪ್ರಯತ್ನದಲ್ಲೇ ಅವರು ಗಮನಸೆಳೆಯುತ್ತಾರೆ. ನಾಯಕಿಯರ ಪೈಕಿ ಹೆಚ್ಚು ಗಮನಸೆಳೆಯುವುದು ಮೇಘನಾ ರಾಜ್‌. ಯಶ್‌ ಶೆಟ್ಟಿ, ರವಿಶಂಕರ್‌ ತರಹ ನಟಿಸುತ್ತಾರೋ ಅಥವಾ ಅವರನ್ನು ಅನುಕರಣೆ ಮಾಡುತ್ತಾರೋ ಹೇಳುವುದು ಕಷ್ಟ.

ರಾಜೇಶ್‌ ನಟರಂಗ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿ ಹೋಗುತ್ತಾರೆ. “ನೂರೊಂದು ನೆನಪು’ ನಿಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿಸುವಂತಹ ಇನ್ನೊಂದು ಚಿತ್ರ. ಅಂದಹಾಗೆ, ಇದು “ದುನಿಯಾದಾರಿ’ ಎನ್ನುವ ಮರಾಠಿ ಕಾದಂಬರಿ ಆಧಾರಿತ ಮತ್ತು ಅದೇ ಹೆಸರಿನ ಚಿತ್ರದ ರೀಮೇಕು.

ಚಿತ್ರ: ನೂರೊಂದು ನೆನಪು
ನಿರ್ಮಾಣ: ಕುಮರೇಶ್‌
ನಿರ್ದೇಶನ: ಸೂರಜ್‌ ದೇಸಾಯಿ, ಮನಿಶ್‌ ದೇಸಾಯಿ
ತಾರಾಗಣ: ಚೇತನ್‌, ರಾಜ್‌ವರ್ಧನ್‌, ಮೇಘನಾ ರಾಜ್‌, ಸುಷ್ಮಿತಾ ಜೋಷಿ, ಯಶ್‌ ಶೆಟ್ಟಿ, ನಟರಂಗ ರಾಜೇಶ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.