ಈ ಜರ್ನಿಯಲ್ಲಿ ತಿರುವುಗಳು ಜಾಸ್ತಿ!


Team Udayavani, Sep 2, 2017, 10:34 AM IST

happy journey.jpg

ಅವನು ಸತ್ತು ಆಗಲೇ ಎರಡು ತಿಂಗಳಾಗಿವೆ ಅಂತ ಇನ್‌ಸ್ಪೆಕ್ಟರ್‌ ಹೇಳುತ್ತಿದ್ದಂತೆಯೇ, ಅವರೆಲ್ಲಾ ಗಾಬರಿಯಾಗುತ್ತಾರೆ. ಏಕೆಂದರೆ, ಕೆಲವು ದಿನಗಳ ಹಿಂದೆ ಸ್ವತಃ ಅವನೇ ಅವರಿಗೆ ಫೋನ್‌ ಮಾಡಿ, ತನ್ನ ಹಳ್ಳಿಯ ಮನೆಗೆ ಕರೆದಿರುತ್ತಾನೆ. ಅವರು ಆ ಮನೆಗೆ ಬಂದ ಸಂದರ್ಭದಲ್ಲಿ ಅವರಿಗೆ ಆತಿಥ್ಯ ನೀಡಿ ಸತ್ಕರಿಸುತ್ತಾನೆ. ಹೀಗಿರುವಾಗ ಅವನು ಎರಡು ತಿಂಗಳ ಹಿಂದೆಯೇ ಸಾಯುವುದಕ್ಕೆ ಹೇಗೆ ಸಾಧ್ಯ?

ಒಂದು ಪಕ್ಷ ಅವನು ಸತ್ತು ಹೋದ ಅಂತಿಟ್ಟುಕೊಂಡರೂ, ಅವರ ಜೊತೆಗೆ ಎರಡು ದಿನಗಳ ಕಾಲ ಕಳೆದಿದ್ದು ಯಾರು? ಈ ವಿಷಯ ತಿಳಿಯುವುದಕ್ಕಾದರೂ ನೀವು ಜರ್ನಿ ಕೈಗೊಳ್ಳಬೇಕು. ಅದು ಹ್ಯಾಪಿ ಆಗಿ ಮುಗಿಯುತ್ತದೋ ಅಥವಾ ಇಲ್ಲವೋ ಎಂಬುದು ನಿಮಗೆ ಬಿಟ್ಟಿದ್ದು. ಯುವಕರು ಬೇರೆಯವರ ಜೀವನದಲ್ಲಿ ಹೇಗೆಲ್ಲಾ ಚೆಲ್ಲಾಟವಾಡುತ್ತಾರೆ ಮತ್ತು ಅದರಿಂದ ಏನೇನು ಅನಾಹುತಗಳಾಗುತ್ತವೆ ಎಂದು ಹೇಳುವ ಕಥೆ “ಹ್ಯಾಪಿ ಜರ್ನಿ’.

ಇಲ್ಲಿ ಒಂದಿಷ್ಟು ಗೆಳೆಯರು, ಒಂದೇ ಕಂಪೆನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುತ್ತಾರೆ. ಅದರಲ್ಲಿ ಒಬ್ಟಾತ ಒಂದು ಹುಡುಗಿಗೆ ಪ್ರಪೋಸ್‌ ಮಾಡುತ್ತಾನೆ. ಅವಳು ನಿರಾಕರಿಸುತ್ತಾಳೆ. ಆಕೆಯನ್ನು ಪ್ರೀತಿಸುತ್ತಿರುವ ಮತ್ತೂಬ್ಬ, ಇವನಿಗೆ ಹೊಡೆದು ಬೀಳಿಸುತ್ತಾನೆ. ಇವರೆಲ್ಲರ ಸಹವಾಸವೇ ಬೇಡ ಎಂದು ಅವನು ಗೆಳೆಯರನ್ನು, ಕೆಲಸವನ್ನು ಮತ್ತು ಊರನ್ನು ಬಿಟ್ಟು ತನ್ನ ಹಳ್ಳಿಗೆ ಬರುತ್ತಾನೆ. ಹಾಗೆ ಬಂದರೂ, ಅವನು ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗುವುದಿಲ್ಲ.

ಹಳೆಯ ನೆನಪುಗಳು ಕಾಡುತ್ತಲೇ ಇರುತ್ತವೆ. ಅದರಿಂದ ಆತ ಆಚೆ ಬರುವುದು ಹೇಗೆ ಅಂತ ಒದ್ದಾಡುತ್ತಿರುವಾಗಲೇ, ಅದೊಂದು ಘಟನೆ ನಡೆದು ಹೋಗುತ್ತದೆ. ಆ ಘಟನೆ ಅವನೊಬ್ಬನ ಜೀವನವಷ್ಟೇ ಅಲ್ಲ, ಎಲ್ಲರ ಜೀವನದಲ್ಲೂ ಒಂದು ಬದಲಾವಣೆ ತರುತ್ತದೆ. ಬಹುಶಃ “ಹ್ಯಾಪಿ ಜರ್ನಿ’ಯಲ್ಲಿ ತಾಯಿ ಸೆಂಟಿಮೆಂಟ್‌ ಒಂದು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಇದೆ ಎಂದರೆ ತಪ್ಪಿಲ್ಲ. ಕಾಮಿಡಿ, ಥ್ರಿಲ್‌, ಹಾರರ್‌, ಸ್ನೇಹ, ಪ್ರೀತಿ ಎಲ್ಲವನ್ನೂ ಮಿಕ್ಸ್‌ ಮಾಡಿ ಒಂದು ಚಿತ್ರ ಮಾಡಿದ್ದಾರೆ ಶ್ಯಾಮ್‌ ಶಿವಮೊಗ್ಗ.

ಚಿತ್ರ ಶುರುವಾಗುವುದು ಒಂದಿಷ್ಟು ಜನ ಕಾಡಿನಲ್ಲಿ ಓಡುವ ಮೂಲಕ. ಅವರು ಯಾಕೆ ಓಡುತ್ತಿದ್ದಾರೆ ಎಂದು ಶುರುವಾಗುವ ಕುತೂಹಲವು ದೃಶ್ಯದಿಂದ ದೃಶ್ಯಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಅದು ದೆವ್ವದ ಚೇಷ್ಟೆಯಾ ಅಥವಾ ಯಾರಾದರೂ ಈ ರೀತಿ ಮಾಡುತ್ತಿದ್ದಾರಾ ಎಂಬ ಕುತೂಹಲ ವಿಪರೀತವಾಗಿ ಕಾಡುತ್ತದೆ. ಆ ಮಟ್ಟಕ್ಕೆ ಸಾಕಷ್ಟು ತಿರುವುಗಳನ್ನು ಇಟ್ಟಿದ್ದಾರೆ ಶ್ಯಾಮ್‌. ಹೀಗೆ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರವು, ಕ್ರಮೇಣ ದಾರಿ ತಪ್ಪುತ್ತದೆ.

ಬಹುಶಃ ಅಷ್ಟೊಂದು ತಿರುವುಗಳೇ ಚಿತ್ರದ ಮೈನಸ್‌ ಪಾಯಿಂಟ್‌ಗಳೆಂದರೆ ತಪ್ಪಿಲ್ಲ. ಕೆಲವು ತಿರುವುಗಳು ತೀರ ಸಿಲ್ಲಿ ಎನಿಸಲೂಬಹುದು. ಚಿತ್ರವನ್ನು ಸ್ವಲ್ಪ ಗಂಭೀರವಾಗಿ ಮತ್ತು ಹೇಳುವುದನ್ನು ಸರಿಯಾಗಿ ಹೇಳಿದ್ದರೆ, ಪ್ರಯಾಣ ಸುಖಕರವಾಗಿತ್ತಿತ್ತೇನೋ? ಏಕೆಂದರೆ, ಮಧ್ಯದಲ್ಲಿ ಒಂದಿಷ್ಟು ಕೆಟ್ಟ ಕಾಮಿಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವುದರ ಜೊತೆಗೆ, ಪ್ರೇಕ್ಷಕರನ್ನು ಅಲ್ಲಲ್ಲಿ ಬೋರ್‌ ಹೊಡೆಸುತ್ತವೆ. ಇವೆಲ್ಲಾ ಪ್ರಯಾಣವನ್ನು ಇನ್ನಷ್ಟು ಸುಸ್ತು ಮಾಡುತ್ತದೆ. ಜರ್ನಿ ಮುಗಿದು, ಪ್ರೇಕ್ಷಕ ಕೆಳಗಿಳಿಯುವಷ್ಟರಲ್ಲಿ ಸುಸ್ತಾಗಿರುತ್ತಾನೆ.

ಬರೀ ಚಿತ್ರಕಥೆಯಷ್ಟೇ ಅಲ್ಲ, ಅಭಿನಯದಲ್ಲೂ ಅತಿರೇಕ ಸ್ವಲ್ಪ ಜಾಸ್ತಿಯೇ ಇದೆ. ನವೀನ್‌ ಪಡೀಲ್‌ ಮತ್ತು ಕುರಿ ಪ್ರತಾಪ್‌ ಅವರ ಕಾಮಿಡಿ ಪಂಚ್‌ಗಳು ಅಲ್ಲಲ್ಲಿ ಪ್ರೇಕ್ಷಕರನ್ನು ನಗಿಸುತ್ತದೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ಮಜಾ ಕೊಡುವ ಸನ್ನಿವೇಶಗಳು ಕಡಿಮೆಯೇ. ಇನ್ನು ಕಲಾವಿದರ ಪೈಕಿ ಸೃಜನ್‌, ರಮೇಶ್‌ ಭಟ್‌ ಮತ್ತು ಶಿವಧ್ವಜ್‌ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಂದ್ರಕಾಂತ್‌ ಅವರ ಸಂಗೀತ ಮತ್ತು ಎಂ.ಆರ್‌. ಸೀನು ಅವರ ಛಾಯಾಗ್ರಹಣದಲ್ಲಿ ಅದ್ಭುತ ಎನ್ನುವಂತದ್ದು ಏನೂ ಇಲ್ಲ.

ಚಿತ್ರ: ಹ್ಯಾಪಿ ಜರ್ನಿ
ನಿರ್ದೇಶನ: ಶ್ಯಾಮ್‌ ಶಿವಮೊಗ್ಗ
ನಿರ್ಮಾಣ: ಕರಿಷ್ಮಾ ಆರ್‌ ಶೆಟ್ಟಿ
ತಾರಾಗಣ: ಸೃಜನ್‌ ಲೋಕೇಶ್‌, ಅಮಿತಾ ಕುಲಾಲ್‌, ನವೀನ್‌ ಪಡೀಲ್‌, ಕುರಿ ಪ್ರತಾಪ್‌, ಶಿವಧ್ವಜ್‌, ರಮೇಶ್‌ ಭಟ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.