ಪಂಚಮ ಸ್ಥಾನ ದೋಷ ಸಂತಾನ ಭಾಗ್ಯಕ್ಕೆ ದಕ್ಕೆ ತರಬಲ್ಲುದೆ?


Team Udayavani, Jan 28, 2017, 4:00 AM IST

8.jpg

ಜನ್ಮಕುಂಡಲಿಯಲ್ಲಿ ಐದನೆಯ ಮನೆಯು ಬಹಳ ಮಹತ್ವದ ಸ್ಥಳವಾಗಿದೆ. ಸಹಜವಾಗಿಯೇ ಇದು ತ್ರಿಕೋನ ಸ್ಥಾನವಾದುದರಿಂದ ಮಾನವನ ಸಂಬಂಧವಾದ ಯಶಸ್ಸಿನ ಏರಿಳಿತಗಳಲ್ಲಿ ಈ ಸ್ಥಳವು ನಿರ್ಣಾಯಕವಾದ ಪಾತ್ರಗಳನ್ನು ವಹಿಸುತ್ತದೆ. ಮುಖ್ಯವಾಗಿ ಸಂತಾನ- ಅಂದರೆ ಮಕ್ಕಳ ಪ್ರಾಪ್ತಿಯ ಬಗೆಗೆ ಈ ಮನೆಯನ್ನು ವರವಾಗಿ ವಿಶ್ಲೇಷಿಸಬೆಕಾಗುತ್ತದೆ. ಕೇವಲ ಮಕ್ಕಳ ಪ್ರಾಪ್ತಿ ಅಥವಾ ಅಪ್ರಾಪ್ತಿಯ ವಿಷಯವೊಂದೇ ಅಲ್ಲ, ಆ ಮನೆಯ ಶಕ್ತಿ ಹಾಗೂ ದೌರ್ಬಲ್ಯಗಳ ಮೇಲಿಂದ ಮಕ್ಕಳ ಸಾವು, ಮಕ್ಕಳಿಂದ ಎದುರಾಗುವ ಪೀಡೆ, ಮನೋಲ್ಲಾಸ, ಇತ್ಯಾದಿ ಇತ್ಯಾದಿಗಳನ್ನು ಕೂಡ ಈ ಪಂಚಮಭಾವದಿಂದ ನಿರ್ಣಯಿಸಬಹುದು. ಕುಟುಂಬ ಸ್ಥಾನ, ಲಾಭ, ಸುಖ ಹಾಗೂ ಭಾಗ್ಯ ಸ್ಥಾನಗಳು ಕೂಡಾ ತಂತಮ್ಮ ಶಕ್ತಿ ಹಾಗೂ ಮಿತಿಗಳೊಡನೆ ಈ ಪಂಚಮ ಭಾವವನ್ನು ನಿಯಂತ್ರಿಸಬಲ್ಲವು. ಮನುಷ್ಯನ ಅದೃಷ್ಟ ದೈವಬಲ, ಒಟ್ಟಾರೆಯಾಗಿ ಪಂಚಮ ಸಂತಾನ ಭಾವದಿಂದಲೇ ಹೆಚ್ಚು ಸ್ಪಷ್ಟ ಎಂಬುದರ ಮೇಲಿಂದ ಪಂಚಮ ಸ್ಥಳ ಮಹತ್ವದ ಆಯಕಟ್ಟಿನ ಸ್ಥಳವಾಗಿದೆ. 

ಸರ್ಪದೋಷ ಸಂತಾನ ದೋಷ ತರಬಲ್ಲುದೇ?
ಸಂತಾನ ದೋಷಕ್ಕೆ ಸರ್ಪ ದೋಷವೂ ಕಾರಣವಾಗಬಲ್ಲದೇ ವಿನಾ ಸಂತಾನ ದೋಷಕ್ಕೆ ಸರ್ಪದೋಷವೇ ಮುಖ್ಯ ಕಾರಣವಲ್ಲ. ಪಂಚಮ ಸ್ಥಾನದ ಅಧಿಪತಿಗಿರುವ ದೋಷವು, ಪಂಚಮಭಾವದಲ್ಲಿರುವ ಗ್ರಹಗಳು ಈ ಗ್ರಹಗಳಿಗೆ ಒದಗಿದ ನೀಚತನ ಅಥವಾ ಅಸ್ತಂಗತ ದೋಷಗಳು, ಸಂತಾನ ಹೀನತೆಯನ್ನು ಅಥವಾ ಸಂತಾನ ವಿಳಂಬವನ್ನು ಕೊಂಡಿ ಕೊಡಿಸಬಲ್ಲುದು.

ಹಾಗೆಯೇ ಈ ಪಂಚಮಭಾವ ರಾಗ-ಭಾವಗಳನ್ನು, ಉದ್ವಿಗ್ನತೆ, ನಿರುದ್ವಿಗ್ನತೆಗಳನ್ನು ಕೂಡಾ ನಿರ್ಧರಿಸುವುದರಿಂದ ಬಹುತೇಕವಾಗಿ ನಿರ್ವಿàರ್ಯತೆ ಪುರುಷನಿಗೆ ಅಥವಾ ಬಂಜೆತನ ಮಹಿಳೆಗೆ ದೋಷ ಅಲ್ಲದಿದ್ದರೂ ಹೆಣ್ಣು ಹಾಗೂ ಗಂಡಿನ ಮಿಲನ ಕ್ರಿಯೆಯನ್ನೇ ದೋಷಪೂರ್ಣವಾಗಿ ಮಾಡಿಬಿಡಬಲ್ಲದು. ಹೀಗಾಗಿ ಗಂಡು ಹಾಗೂ ಹೆಣ್ಣಿನ ಜಾತಕಗಳ ಜೋಡಣೆಯ ಸಂದರ್ಭದಲ್ಲೇ ಈ ಆಂಶವನ್ನು ಸರಿಯಾಗಿ ಪರಿಶೀಲಿಸಿಯೆ ಜಾತಕ ಹೊಂದಾಣಿಕೆ ಸಾಧ್ಯವಾಗಬೇಕು. ಗಂಡು ಹಾಗೂ ಹೆಣ್ಣು ಇಬ್ಬರೂ ಉದ್ವಿಗ್ನ ಸ್ಥಿತಿಯವರಾದರೆ ಪೂರ್ವಪುಣ್ಯ ಸ್ಥಾನದ ಚಿಕ್ಕ ದೋಷವೂ ಕೂಡಾ ಸಂತಾನಹೀನತೆಯನ್ನು ತಂದೊಡ್ಡಬಹುದಾಗಿದೆ. ಉದ್ವಿಗ್ನತೆ, ನಿರುದ್ವಿಗ್ನತೆಗಳು ಒಂದು ಹೆಣ್ಣಿನಲ್ಲಿದ್ದರೆ ಇದಕ್ಕೆ ವಿರುದ್ದ ಭಾವದ ಗಂಡು ಆಕೆಗೆ ಸರಿಯಾದ ಜೊತೆಗಾರನಾಗಬಲ್ಲ. ಪೂರ್ವಪುಣ್ಯ ಸ್ಥಾನದ ತೀವ್ರ ದೌರ್ಬಲ್ಯಗಳು ಕೂಡಾ ಹೆಣ್ಣುಗಂಡುಗಳ ಸಂಯೋಜನೆಯೊಂದಿಗೆ ನಿವಾರಣೆಯಾಗಿ ಉತ್ತಮ ಸಂತಾನಕ್ಕ ಕಾರಣವಾಗಬಲ್ಲದು. 

ಮಕ್ಕಳಿದ್ದರೂ ಪೀಡೆ
ಮನುಷ್ಯನ ಬದುಕಿನಲ್ಲಿ ಪೀಡೆಯ ಘಟ್ಟ ಎಲ್ಲಿಂದ ಪ್ರಾರಂಭ ಎಂದು ನಿಖರವಾಗಿ ಊಹಿಸಬಾರದು. ಉತ್ತಮವಾದ ಬಾಲ್ಯ, ಯುಕ್ತ ವಯಸ್ಸಿನಲ್ಲಿ ಮದುವೆ, ಶೀಘ್ರ ಸಂತಾನ ಅದರಲ್ಲೂ ಪುತ್ರ ಪ್ರಾಪ್ತಿಯ ಸುಯೋಗ. ಕೇಳಬೇಕೆ..? ಸ್ವರ್ಗಕ್ಕೆ ಮೂರೇ ಗೇಣು. ಆದರೆ ಹುಣ್ಣಿಮೆಯ ಚಂದ್ರನಂತೆ ಪರಿಶೋಭಿಸಬೇಕಾದ ಮಗನೋ, ಮಗಳ್ಳೋ ಅಡ್ಡದಾರಿ ಹಿಡಿದರೆ, ದುರಹಂಕಾರ, ಅಲ್ಪಮತಿಗಳಿಂದ ಬಳಲಿದರೆ, ಮನುಷ್ಯನ ನಡುವಯಸ್ಸು, ವೃದ್ಧಾಪ್ಯ ಕೇಳುವುದೇ ಬೇಡ, ನಿತ್ಯ ನರಕವಾಗಬಲ್ಲದು. ಸಂತಾನ ಸ್ಥಾನವಾದ ಪಂಚಮ ಭಾವಕ್ಕೆ ದೋಷದ ಅಬುìದ ಪೀಡೆ ಸಂತಾನಹೀನತೆಯನ್ನು ಮಾತ್ರ ಕೊಡುವ ರೀತಿಯಲ್ಲಿರುತ್ತದೆ ಎಂದು ಭಾವಿಸಬಾರದು. ಸಂತಾನದೋಷಕ್ಕೆ, ಪೀಡಕರಾದ ಮಕ್ಕಳೂ ತಂತಮ್ಮ ಪಾಲನ್ನು ಧಾರೆ ಎರೆಯಬಲ್ಲರು. ಹೀಗಾಗಿ ಬಂಜೆ ಎಂದು ಯಾರನ್ನೂ ಜರೆಯದಿರಿ. ನಿಮ್ಮನ್ನು ಬಂಜೆಯಲ್ಲಿ ಎಂದು ಸಾಬೀತು ಪಡಿಸಿದ ಮಕ್ಕಳೇ, ಮುಂದೆ ವ್ಯಾಘ್ರವಾಗಿ ತಲೆ ತಿನ್ನಬಲ್ಲರು.

ಅಶುಭ ಗ್ರಹಗಳ ದಶಾಕಾಲ ಮತ್ತು ಪುತ್ರನಾಶ
ಯಾವಾಗಲೂ ಅಶುಭ ಗ್ರಹಗಳಾದ ಸೂರ್ಯ, ಶನಿ, ಕುಜ, ರಾಹು, ಕೇತುಗಳು ಸಂತಾನ ಭಾವದಲ್ಲಿರುವುದು ಮಕ್ಕಳ ದೃಷ್ಟಿಯಿಂದ ಕ್ಷೇಮಕರವಲ್ಲ. ಯೋಗಕಾರಕನಾಗಿ, ಜಾತಕಕ್ಕೆ ಒಳ್ಳೆಯವನಾಗಿ ಅಶುಭಗ್ರಹಗಳು ಇದ್ದರೂ, ಶನಿಕಾಟದ ಸಂದರ್ಭದಲ್ಲಿ, ದುಷ್ಟ ದಶಾಕಾಲದಲ್ಲಿ ಈ ಅಶುಭಗ್ರಹಗಳೇನಾದರೂ ದುಷ್ಟ ದಶಾನಾಥನ ಕಕ್ಷೆಯಲ್ಲಿ ನರಳುವ ಸಂದರ್ಭಗಳು ಒದಗಿದಲ್ಲಿ ಮಕ್ಕಳಿಂದ ತೊಂದರೆ, ಸಂತಾನ ನಾಶ, ಸಂತಾನಹೀನತೆ ಇತ್ಯಾದಿ ಏನೋ ಒಂದು ನಿಸ್ಸಂಶಯವಾಗಿಯೂ ಸಂಭವಿಸಿಯೇ ತೀರುತ್ತದೆ. 

ಈ ಮೇಲಿನ ಅಂಶವನ್ನು ಭಾರತದ ಮಾಜಿ ಪ್ರಧಾನಿಯೋರ್ವರ ಜಾತಕದಲ್ಲಿ ಗಮನಿಸಬಹುದಾಗಿದೆ. ಇವರ ಜಾತಕದಲ್ಲಿ ಪಂಚಮ ಸ್ಥಾನ ಸ್ಥಿತ ಸೂರ್ಯ, ಅವನ ವೈರಿಯಾದ ಶನೈಶ್ಚರನ (ಅನುರಾಧಾ) ನಕ್ಷತ್ರದಲ್ಲಿದ್ದುದು ಪ್ರಮುಖವಾಗಿದೆ. ಜೊತೆಗೆ ಸೂರ್ಯನಿಗೆ ಪಂಚಮಾಧಿಪತಿ (ಯೋಗಕಾರಕನೂ ಕೂಡ) ಕುಜನೊಂದಿಗೆ ಪರಿವರ್ತನ ಯೋಗವೂ ಇತ್ತು. ಇದರಿಂದಾಗಿ ಮುಂದೆ ಬಹು ಮುಖ್ಯವಾದ ಅಧಿಕಾರ ಯೋಗವನ್ನೂ ಪಡೆಯುವ ಪ್ರತಿಭೆಯನ್ನು ಇವರ ಪುತ್ರನಿಗೆ ಈ ಪರಿವರ್ತನಯೋಗ ಒದಗಿಸಿ ಕೊಡುವಷ್ಟು ಬಲವಾಗಿತ್ತು. ಆದರೆ, ಶನೈಶ್ಚರನ ದಶಾಕಾಲದಲ್ಲಿ ಶನೈಶ್ಚರ ಸೂರ್ಯನ ನಕ್ಷತ್ರವಾದ ಉತ್ತರಾ ನಕ್ಷತ್ರದಲ್ಲಿ ಸಂಚರಿಸುವಾಗ ಪುತ್ರನನ್ನು ಕಳೆದುಕೊಳ್ಳುವ ಯೋಗವನ್ನು ಈ ಮಾಜಿ ಪ್ರಧಾನಿಗಳಿಗೆ ಒದಗಿಸಿಬಿಟ್ಟಿದ್ದ. ಕಳೆದುಕೊಂಡ ಪ್ರಧಾನಿ ಪಟ್ಟ ಹಿಂತಿರುಗಿ ಪಡೆದ ಸಂಭ್ರಮದಲ್ಲೂ ಅವರಿಗೆ ಈ ಶೋಕ ಶನಿ ಹಾಗೂ ಸೂರ್ಯರ ದೋಷ ಪೂರ್ಣ ಜಟಾಪಟಿಯಿಂದ ಆವರಿಸುವಂತಾಯ್ತು.

ಸರ್ಪ ದೋಷ ಹಾಗೂ ಸಂತಾನ ಪೀಡೆ
ಭಾಗ್ಯಸ್ಥಾನದಲ್ಲಿನ ಸರ್ಪ ನೆರಳು, ಸುಖ ಸ್ಥಾನದಲ್ಲಿನ ಸರ್ಪನೆರಳು, ಪಂಚಮ (ಸಂತಾನ) ಸ್ಥಾನದ ಸರ್ಪ ನೆರಳು ಮುಖ್ಯವಾಗಿ ರಾಹು ದೋಷದಿಂದ ಒದಗುವಂಥದ್ದು. ಹೀಗಾಗಿ ರಾಹುವೂ ವ್ಯಕ್ತಿಯೋರ್ವನ, ಓರ್ವಳ ಜಾತಕದಲ್ಲಿ ಸಂತಾನ ದೋಷಕ್ಕೆ ಬಹು ಪ್ರಮುಖವಾದ ಘಟಕವಾಗಿ ಬಿಡುತ್ತದೆ. 
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಾರಾಧನೆಗೆ ಮಹತ್ವದ ಪಾತ್ರವಿದೆ. ನಾಗಬನ, ನಾಗಪೂಜೆ, ನಾಗಾರಾಧನೆ, ನಾಗಪ್ರತಿಷ್ಠೆ, ನಾಗ ಸಂಸ್ಕಾರ ಇತ್ಯಾದಿಗಳನ್ನ ನಾಗರ ಪ್ರೀತ್ಯರ್ಥವಾಗಿ ನೆರವೇರಿಸಿ ಮುಖ್ಯವಾಗಿ ಸಂತಾನ ಫ‌ಲಕ್ಕಾಗಿ, ಸಂತಾನಫ‌ಲ ದೊರಕಿದರೂ ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳನ್ನು ಕಳೆದುಕೊಳ್ಳುವ ಪ್ರಾರಬ್ಧ ನಿವಾರಣೆಗಾಗಿ, ಮಕ್ಕಳಿಂದಲೇ ಪರಮ ಪೀಡೆಗಳನ್ನು ಅನುಭವಿಸುವ ಯಾತನೆಯ ಶಮನಕ್ಕಾಗಿ ಸರ್ಪದೋಷಗಳನ್ನು ಕಳೆದುಕೊಳ್ಳುತ್ತಾರೆ.

ಚಂದ್ರನ ಕ್ಷೀಣ ಸ್ಥಿತಿ ಸಂತಾನಕ್ಕೆ ಅಪಾಯಕಾರಿ
ಸಂತಾನ ಸ್ಥಾನವಾದ ಪೂರ್ವಪುಣ್ಯ ಅಥವಾ ಪಂಚಮಭಾವಕ್ಕೆ ದೋಷ ವಿದ್ದಾಗ ಜಾತಕದಲ್ಲಿ ಚಂದ್ರನೇ ಕ್ಷೀಣನಾಗಿ ಪಂಚಮಾಧಿಪತಿಯೂ ಆಗಿದ್ದರೆ ಪಂಚಮ ಭಾವದಲ್ಲೇ ಕ್ಷೀಣ ಚಂದ್ರನಿದ್ದರೆ ಸಂತಾನಹೀನತೆ ದೊಡ್ಡ ಸಮಸ್ಯೆಯಾಗಬಲ್ಲುದು. ಈ ಸಂದರ್ಭದಲ್ಲಿ ತಂದೆ-ತಾಯಿಗಳ, ಅತ್ತೆ- ಮಾವಂದಿರ ಸಾಂತ್ವನ ಬೆಂಬಲದ ಆಸರೆ, ಆರೈಕೆ, ಧೈರ್ಯದ ಮಾತು ಚಂದ್ರನ ದೋಷವನ್ನು ನಿವಾರಿಸಬಲ್ಲದು. ಚಂದ್ರನೊಟ್ಟಿಗೆ ಸಂಪನ್ನವಾದ ಯೋಗವನ್ನು ಒಡಮೂಡಿಸುವ ಗುರುಗ್ರಹದ ಶಕ್ತಿಯೂ ಕೂಡಾ ಚಂದ್ರನ ಕ್ಷೀಣತೆಯನ್ನು ಸಾಕಷ್ಟು ದೂರ ಮಾಡುತ್ತದೆ. ಗುರುಗ್ರಹವು ಸಹಜವಾಗೇ ಚಂದ್ರನ ಜೊತೆ ಅಪಾರವಾದ ಒಳಿತುಗಳನ್ನು ಒಬ್ಬ ವ್ಯಕ್ತಿಗೆ ಕೊಡ ಮಾಡುವಲ್ಲಿ ನಿರಂತರವಾಗಿ ಹೆಣಗುತ್ತಿರುತ್ತದೆ.

ಅನಂತ ಶಾಸ್ತ್ರಿ 

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

KARADI (2)

Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.