ನಿಮ್ಮ ಪ್ರಾರಬ್ಧಗಳನ್ನು ನಿರಾಳವಾಗಿ ನಿವಾರಿಸಿಕೊಳ್ಳಬಹುದು


Team Udayavani, Feb 18, 2017, 12:46 PM IST

6.jpg

ಹಿಂದಿನ ಕಂತಿನಲ್ಲಿ ಒಂದು ಜನ್ಮ ಕುಂಡಲಿಯ ಒಂದರಿಂದ ಏಳರವರೆಗಿನ ಮನೆಯ ವಿಚಾರಗಳನ್ನು ತಿಳಿಸಿ ಬರೆಯಲಾಗಿತ್ತು. ಈಗ ಈ ವಾರದಲ್ಲಿ ಮರಣಸ್ಥಾನ ಭಾಗ್ಯ ಎಂಬಿತ್ಯಾದಿ ಇತರ ಉಳಿದ ಐದು ಮನೆಗಳ ವಿಚಾರವಾಗಿ ವಿವರಿಸಿ ಮಿತಿಗಳನ್ನು, ಶಕ್ತಿಯನ್ನು ಸಂಪಾದಿಸಿಕೊಳ್ಳುವ ಮಹಾಬಲವನ್ನಾಗಿಸಿಕೊಳ್ಳುವ ವಿಚಾರ ಪ್ರಸ್ತಾಪಿಸಲಾಗಿದೆ. ಮನುಷ್ಯನ ಜೀವನದಲ್ಲಿ ಪ್ರಧಾನವಾಗಿ ತಾಳ್ಮೆಯನ್ನೂ, ವಿನಯವನ್ನೂ, ಜಾnನವನ್ನೂ ವಿಸ್ತರಿಸಿಕೊಳ್ಳುವವನು ತನ್ನ ಸಂಕಟಗಳನ್ನು ಕಷ್ಟಕಾರ್ಪಣ್ಯಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ತನ್ನಲ್ಲಿ ತಾನು ವಿಶ್ವಾಸ ಇಟ್ಟುಕೊಳ್ಳುವುದು ಅವಶ್ಯ. ಕೆಲವು ಸಾಧಕರು ನಿಮ್ಮ ಶಕ್ತಿಯನ್ನು  ವೃದ್ಧಿಸುವ ಅಲೌಕಿಕ ಶಕ್ತಿಯನ್ನು ಒದಗಿಸಿಕೊಡಬಲ್ಲರು. ಮುಖ್ಯವಾಗಿ ಅವರ ಪಾಲಿಗೆ ಕೈವಶವಾದ ಸಾಧಕ ಶಕ್ತಿಯಿಂದ ಅಮೂರ್ತವನ್ನು ಮೂರ್ತಗೊಳಿಸುವ ವಿಚಾರಕ್ಕೆ ಮುಂಗಾಣದಾಗುತ್ತಾರೆ. ಮನುಷ್ಯನಲ್ಲಿ ಅಡಕವಾದ ಷಟ್ಚಕ್ರಗಳನ್ನು ಉದ್ದೀಪನಗೊಳಿಸಬೇಕಾಗುತ್ತದೆ. ಮೂಲಾಧಾರ, ಸ್ವಾದಿಷ್ಠಾನ ಮಣಿಪುರ, ಅನಾಹತ ಶುದ್ಧ, ಆಜ್ಞಾದಿ ಚಕ್ರಗಳು ಜಾಗೃತಗೊಂಡಾಗ ವಿಶಿಷ್ಟವಾದ ಶಕ್ತಿಯನ್ನು ಪ್ರಕೃತಿಯನ್ನು ಪುರುಷನನ್ನು ಸಮ್ಮಿಶ್ರಗೊಳಿಸುವ ಸಾಫ‌ಲ್ಯತೆ ಪೂರೈಸಬಹುದು.  ದೊಡ್ಡ ವಿಶಿಷ್ಠ ಸಾಧನೆಯನ್ನು ಮಾಡಬಹುದಾಗಿದೆ. ಯಾವ ರಾಜ್ಯ ಅನ್ನುವುದು ಬೇಡ, ಒಂದು ರಾಜ್ಯದ ಮುಖ್ಯಮಂತ್ರಿ ಬಹುದೊಡ್ಡ ಶಕ್ತಿಯನ್ನು ಸಂಪಾದಿಸಲು ಮುಂದಾಗಿ,  ಮುಂದೆ ಸೂಕ್ತವಾಗಿ ಶಕ್ತಿಯನ್ನು ಸಂಪಾದಿಸಲಾಗದೆ,  ಬಹಳಷ್ಟು ಕಷ್ಟದ ದಿನಗಳನ್ನು ಎದುರಿಸಬೇಕಾಯಿತು.  ನಂತರ ತೀವ್ರವಾದ ಅನಾರೋಗ್ಯದಿಂದ ಸಾವೂ ಸಂಭವಿಸಿತು. ಹಾಗಾದರೆ ಅಲೌಕಿಕ ಶಕ್ತಿ ಯಾಕೆ ಎಲ್ಲರಿಗೂ ವಶವಾಗುವುದಿಲ್ಲ. ಅದನ್ನು ಒಬ್ಬ ವ್ಯಕ್ತಿಯ ಮರಣದ ಮನೆಯ ಹೊಂದಾಣಿಕೆ ಪೂರ್ವಪುಣ್ಯಸ್ಥಾನ, ಧರ್ಮಸ್ಥಾನ ಹೇಗೆ ಒಗ್ಗೂಡಿದೆ ಎಂಬುದನ್ನು ತಿಳಿಯಲು ಸಮರ್ಪಕ ಹೊಳಹುಗಳು ಒದಗುತ್ತದೆ. ಛಿದ್ರಸ್ಥಾನ, ಮರಣ ಸ್ಥಾನಗಳು ಇವು ಸ್ವರ್ಗಕ್ಕಾಗಿನ ದಾರಿಯೂ ಹೌದು. ನಮ್ಮನ್ನು ನಾವೇ ನಾಶ ಮಾಡಿಕೊಳ್ಳುವ ದಾರಿಯೂ ಹೌದು. ಅಭೂತಪೂರ್ವವಾದುದನ್ನು ಸಂಪಾದಿಸಲು, ಸಂಪಾದಿಸಿದ್ದನ್ನು ಕಳಕೊಂಡು ಪರದಾಡಲು ಇವು ತಮ್ಮ ಪಾತ್ರ ವಹಿಸುತ್ತದೆ. ವ್ಯಕ್ತಿ ತನ್ನ ಸಂಪನ್ನತೆಯನ್ನು ಸೂಕ್ತವಾಗಿ ಪ್ರದರ್ಶಿಸಿ ಸಕಾರಾತ್ಮಕ ಶಕ್ತಿವಲಯ ಸಂಪಾದಿಸಿಕೊಂಡರೆ, ಶಿವನ ಅಥವಾ ಮಹಾವಿಷ್ಣುವಿನ ಆ ಮೂಲಕ ಜ್ಞಾನನಿಧಿಯಾದ ಶಾರದೆ, ಲಕ್ಷಿ$¾à, ದುರ್ಗಾಶಕ್ತಿಗಳು ನಮಗೆ ಲಭ್ಯ.

ಮರಣದ ಮನೆಯ ಸಾಧಕಬಾಧಕಗಳೇನು? 
ಮರಣದ ಮನೆಯು ಒಬ್ಬ ವ್ಯಕ್ತಿಯ ಜಾತಕದ ಅಷ್ಟಮ ಸ್ಥಾನವಾಗಿರುತ್ತದೆ. ಮದದಿಂದ ಕೊಬ್ಬಿದ್ದ ಕಂಸನನ್ನು ಅಶರೀರವಾಣಿಯೊಂದು ಎಚ್ಚರಿಸುವಾಗ, ನಿನ್ನ ತಂಗಿಯ ಅಷ್ಟಮ ಗರ್ಬ ನಿನ್ನ ಸಾವಿಗೆ ದಾರಿ ತೆರೆಯುತ್ತದೆ ಎಂದು ಹೇಳಿದ ವಿಚಾರ ನೆನಪಿಸಿಕೊಳ್ಳಿ. ದೇವಾನಂದ್‌ ಅವರ ಜಾತಕದಲ್ಲಿನ ಅಷ್ಠಮಸ್ಥಾನ, ನಮ್ಮ ದೇಶದ ಮಹಾನ್‌ ನ್ಯಾಯವಾದಿ ರಾಮ್‌ ಜೇಠ್ಮಲಾನಿ,  ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಪ್ರಧಾನಿ ದಿ. ಮುರಾರ್ಜಿ ದೇಸಾಯಿ ತೊಂಬತ್ತರ ನಂತರವೂ ಹಾಯಾಗಿಯೇ ಇದ್ದು ಬದುಕನ್ನು ಆನಂದಿಸಿದ್ದ ಖುಷವಂತ್‌ ಸಿಂಗ್‌ ಇವರೆಲ್ಲಾ ವೃದ್ಧಾಪ್ಯದಲ್ಲೂ ತಮ್ಮ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಪ್ರದರ್ಶಿಸಲು ಹೇಗೆ ಸಾಧ್ಯವಾಗುತ್ತಿದೆ? ಭಾರತದ ಮಾಜಿ ಉಪಪ್ರಧಾನಿ ಲಾಲಕೃಷ್ಣ ಆಡ್ವಾಣಿ ಈಗಲೂ ಪ್ರಧಾನಿ ಪಟ್ಟ ನಿರ್ವಹಿಸುವ ಕ್ರಿಯಾಶೀಲತೆ ಹೊಂದಿದ್ದಾರೆ. ವರ್ಷ ವೀಗ ಬರೋಬ್ಬರಿ ತೊಂಬತ್ತು. ಸಾಯುವಾಗ ತೊಂಬತ್ತರ ಹತ್ತಿರ ಬಂದಿದ್ದ ದೇವಾನಂದರಿಗೆ ಆಗಲೂ ಹೊಸ ಚಿತ್ರದಲ್ಲಿ ನಟಿಸುವ ಉಮೇದಿ ಇದ್ದೇ ಇತ್ತು. ಖುಷವಂತ್‌ ಸಿಂಗ್‌ ಗೆ 90+ ಆದರೂ  ವಿಸ್ಕಿಯ ಗುಟುಕುಗಳಲ್ಲಿ ದಣಿಯದೆ ತರುಣರಂತೆ ಇದ್ದರು.  ದಿವಂಗತ ಪ್ರಧಾನಿ ಮೊರಾರ್ಜಿ 80+ ಆದಾಗಲೂ ಪ್ರಧಾನಿಗಳಾಗಿ ಕೆಲಸ ನಿರ್ವಹಿಸಿದರು. ದೇವೇಗೌಡರು ಈ ವಯಸ್ಸಿನಲ್ಲೂ ಮಾನಸಿಕ ದಾಡ್ಯìತೆ ಪಡೆದೇ ಇದ್ದಾರೆ. ನೆನಪಿಡಿ ಇವರೆಲ್ಲರಿಗೂ ಚಂದ್ರನ ಸಿದ್ಧಿ ಇದೆ. ಚಂದ್ರ ಮಾತೃಕಾರಕ. ಈ ಕಾರಣದಿಂದಾಗಿ ಮಾತೆ ನೀಡುವ ಆರೈಕೆ ಆಯಸ್ಸಿನ ಸಂಜೀವಿನಿ ದಕ್ಕಲು ಅನುಕೂಲ ಒದಗುತ್ತದೆ. ಆದರೆ ಮರಣ ಸ್ಥಾನಕ್ಕೂ, ಚಂದ್ರನಿಗೂ ಉಪಯುಕ್ತ ಸಂಬಂಧಗಳು ಬೇಕು. ಕೇತು ಶುಕ್ರ ಕುಜ ಅಥವಾ ರಾಹುಗಳು ಅಧಿಕವಾಗಿ ಅಲ್ಪಾಯುಷ್ಯಕ್ಕೆ ಅಥವಾ ಮರಣಶಾಸನಕ್ಕೆ ಕಾರಣರಾಗುತ್ತಾರೆ. ಜನರಲ್‌ ಮುಶ್ರಫ್ ಆಡಳಿತಾವಧಿಯಲ್ಲಿ ಇಂದಿನ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್ ಹಾಗೂ ಜನರಲ್‌ ಜಿಯಾ ಉಲ್‌ ಹಕ್‌ ಆಡಳಿತದ ಸಂದರ್ಭದಲ್ಲಿ ಭುಟ್ಟೋ ಎದುರಿಸಿದ ರಾಜದ್ರೋಹದ ಆಪಾದನೆಗಳು ಒಂದೇ ರೀತಿಯದ್ದಾದರೂ ಭೂಟ್ಟೋ ಅವರ ರಾಹು ದೋಷ ಚಂದ್ರನ ಶಕ್ತಿಯನ್ನು ಕ್ಷೀಣಿಸಿದ್ದರಿಂದ ಗಲ್ಲಿಗೇರಲೇ ಬೇಕಾಗಿ ಬಂತು. ಕೆಲವು ನಿಗೂಢ ಕಾರಣಗಳು ಕುಜ ಹಾಗೂ ಶುಕ್ರರ ಕಾರಣದಿಂದಾಗಿ ಅಸಹಜ ಮರಣಕ್ಕೆ ಕಾರಣವಾಗಿಯೇತೀರಿತ್ತು. ಲಾಭದಾಯಕ ಚಂದ್ರ ಮರಣದ ನೆರಳಲ್ಲಿ ಇದ್ದರೂ ತನ್ನ ಬಲಾಡ್ಯತೆಯ ನೆರವಿನಿಂದ ಮರಣ ತಪ್ಪಿಸಿದ್ದ. 

ನಿಗೂಢ ಶಕ್ತಿಯೂ, ಅಲೌಕಿಕ ಬೆಂಬಲದ ದಿವ್ಯ ಪ್ರವಾಹವೂ 
 ಹಲವು ವ್ಯಕ್ತಿಗಳು ಅನೇಕ ರೀತಿಯ ಅಲೌಕಿಕ ಸಾಧನೆಗಳನ್ನು ಸಾಧಿಸಿ ಕೆಲವು ಶಕ್ತಿಗಳನ್ನು ಪಡೆದಿರುತ್ತಾರೆ. ಆರನೇ ಜಾಗೃತ ಇಂದ್ರಿಯ ತಂತಾನೆ ಹೊಸದೊದು ಅಲೌಕಿಕ ಶಕ್ತಿಯ ಮೂಲಕ ಗೋಚರಕ್ಕೆ ಬರುವುದು ಇವರಿಗೆ ಒಲಿದಿರುತ್ತದೆ. ಇವರು ಕುಜನ ದುಷ್ಟ ಪ್ರಭಾವ, ರಾಹುವಿನ ಘಾತಕ ಶಕ್ತಿ ಫ‌ಲವಾಗಿ ಅಲೌಕಿಕ ದಿವ್ಯಶಕ್ತಿಯನ್ನು ರಾಕ್ಷಸ ಶಕ್ತಿಯ ಸ್ವರೂಪದೊಂದಿಗೆ ಕೃತ ವ್ಯಕ್ತಿಗಳಾಗುವ ಸಾಧ್ಯತೆಯೂ ಇರುತ್ತದೆ. ಮರಣದ ಮನೆ, ನಿಗೂಢಗಳ ಕಗ್ಗಂಟಾದ ಛಿದ್ರಸ್ಥಾನ ಒಂದು ಹಂತದಲ್ಲಿ ಇವರಿಗೆ ಒದಗಿದಲ್ಲಿ ಪವಾಡ ಪುರುಷರಾಗುವ ಶಕ್ತಿ ಒದಗುತ್ತದೆ. ಎಲ್ಲಾ ತಿಳುವಳಿಕೆಯ ಶಕ್ತಿ ಸಂಪನ್ಮೂಲಗಳನ್ನು ಪಡೆದೂ,  ಶುಕ್ರನ ವಿಕೃತಿಯಿಂದ ಹಲವಾರು ರೀತಿ ಭ್ರಷ್ಟ ಜೀವನಕ್ಕೆ ಸಿಕ್ಕಿ ಬೀಳುತ್ತಾರೆ. ಕಾಮ, ಕ್ರೋಧ, ಲೋಭ, ಮೋಹಾದಿ ಅರಿಷಡ್ವರ್ಗಗಳಿಂದ ಕಳಂಕಿತರಾಗುತ್ತಾರೆ. ಅತ್ಯಾಚಾರ ಮಹಿಳೆಯರು ಕುತ್ಸಿತ ಕೆಲಸಗಳಿಗೆ ತೊಡಗುವುದೂ ಸೇರಿ, ಡ್ರಗ್ಸ್‌ ಪರಪೀಡೆ ಅನ್ಯರ ಚಾರಿತ್ರ್ಯವಧೆ ಕೊಲೆ ಸುಲಿಗೆ ವಶೀಕರಣದಂಥ ಝಾಲದಲ್ಲಿ ಸ್ಥಾನಮಾನದ ಪವಿತ್ರಸ್ಥಳದಲ್ಲಿದ್ದು ದಾರಿ ತಪ್ಪುವುದು  ನಡೆಸುತ್ತಾರೆ. ಈ ದೇಶದ ಪ್ರಧಾನಿಗಳನ್ನು ದಾರಿ ತಪ್ಪಿಸಿದ ನಿಗೂಢ ಶಕ್ತಿ ಜಾಗ್ರತವಾಗಿದ್ದೂ ತಪ್ಪು ಹೆಜ್ಜೆಗಳಲ್ಲಿ ಕಾಲಿರಿಸಿದ ವ್ಯಕ್ತಿಗಳ ಉದಾಹರಣೆ ಕೊಡಬಹುದು. ಇವರೆಲ್ಲ ಯಾರು ಎಂಬುದು ಸಧ್ಯಕ್ಕೆ ಬೇಡ. ತಮ್ಮ ದಿವ್ಯಸಾಧನೆಯನ್ನು ಕಿರಾತಕ ಶಕ್ತಿಯನ್ನಾಗಿ ರೂಪಿಸಿಕೊಂಡು ದುರ್ಮರಣ ಪಡೆದವರಿದ್ದಾರೆ.

ವಶೀಕರಣ ಗುಪ್ತನಿಧಿ, ಶೋಧನೆ ದುಷ್ಟಶಕ್ತಿಗಳ ಕ್ರೋಢೀಕರಣ
ಮರಣದ ಮನೆಯ ಶಕ್ತಿಯು ಪ್ರವಹಿಸುವ ಸಕಾರಾತ್ಮಕ ದಿಕ್ಕು ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೆಯೇ ಹಲವು ವೈಪರಿತ್ಯಗಳನ್ನು ನಂಟುಹಾಕುತ್ತದೆ. ಆಯಾ ವ್ಯಕ್ತಿ ಈ ನಿಗೂಢ ಶಕ್ತಿಗಳನ್ನು ಒಳಿತಿಗೆ ಉಪಯೋಗಿಸಿಕೊಳ್ಳುತ್ತಾನೋ, ಕೆಟ್ಟದ್ದಕ್ಕೆ ಉಪಯೋಗಿಸಿಕೊಳ್ಳುತಾನೋ ಅವನ ವ್ಯಕ್ತಿತ್ವವು ಹರಳುಗಟ್ಟಿದ ರೀತಿಯ ಮೇಲಿಂದ ನಿರ್ಧಾರವಾಗುತ್ತದೆ. ಹಲವು ರೀತಿಯ ಮಾನಸಿಕ ವ್ಯಾಧಿಗಳನ್ನು ರೋಗ ರುಜಿನಗಳನ್ನು ಪರಿಹಾರವಾಗದ, ವ್ಯಾಕುಲತೆಗಳನ್ನು ಶಿಷ್ಟ ವ್ಯಕ್ತಿಗಳು ಅತ್ಯದ್ಭುತವಾಗಿ ನಿವಾರಿಸಿಕೊಡಬಲ್ಲರು. ಯಾರು ಶಿಷ್ಟರು ಎಂಬುದನ್ನು ಸರಿಯಾಗಿ ಹುಡುಕಬೇಕು. ಜಾತಕ ಕುಂಡಲಿಯಲ್ಲಿ ಒಬ್ಬ ವ್ಯಕ್ತಿ ಉತ್ತಮನೋ, ಕುತಂತ್ರಿಯೋ ಎಂಬುದನ್ನು ತಿಳಿಯಬಹುದು. ಉತ್ತಮನ ಬಲಿಗೆ ದುಷ್ಟರೂ, ದುಷ್ಟರ ಬಲಿಗೆ ಶಿಷ್ಟರೂ ಸಂಧಿಸುವ ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ಆದರೆ ಒಳ್ಳೆಯವರು ದುಷ್ಟ ಶಕ್ತಿ ಸಂಪಾದಿಸಿಕೊಂಡು ಇರುವವರು ಇದ್ದೇ ಇರುತ್ತಾರೆ.  

 ಅನಂತಶಾಸ್ತ್ರಿ 

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.