ಧರಿಸುವ ಹರಳುಗಳಲ್ಲಿ ವಿಪತ್ತುಗಳೂ ಇರುತ್ತವೆ…


Team Udayavani, Apr 8, 2017, 11:05 AM IST

3336.jpg

ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತಿದೆ. ಹಾಗೆಯೇ ನಮ್ಮ ವ್ಯಕ್ತಿತ್ವದ ಆಳ ಅಗಲ, ಸೂಕ್ಷ್ಮತೆ ಹಾಗೂ ಸಾರ್ಥಕತೆಗಳನ್ನು ನಿಯಂತ್ರಿಸುವ ಗ್ರಹದ ಆಧಾರದ ಮೇಲೆ ಯಾವ ಹರಳು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ನಿರಂತರವಾದ ಧ್ಯಾನ, ತಪಸ್ಸು ಯೋಗ ಸ್ತುತಿ ಆರಾಧನೆಗಳ ಮೂಲಕ ಪರಿವ್ರಾಜಕರೋ, ಅವಧೂತರುಗಳೊ ನವರತ್ನದ ಹರಳುಗಳನ್ನು ಧರಿಸಬಹುದು. ಸಾಮಾನ್ಯರಿಗೆ ನಿರಂತರವಾದ ಅನುಷ್ಠಾನಗಳನ್ನು ರೂಡಿಸಿಕೊಳ್ಳುವುದು ಕಷ್ಟ.

ಭಾರತೀಯ ಜೋತಿಷ್ಯ ಶಾಸ್ತ್ರ ನವರತ್ನಗಳ ಧಾರಣೆಯ ಬಗೆಗೆ ವಿಶೇಷವಾದ ವಿವರಗಳನ್ನು, ವಿಧಾನಗಳನ್ನು ಅಗತ್ಯಗಳ ಬಗೆಗಿನ ವಿಶ್ಲೇಷಣೆಗಳನ್ನು ಮಾಡಿದೆ. 
ಯಾರೆ ಯಾವುದೇ ರೀತಿಯಾಗಲಿ ಮನಬಂದಂತೆ ಹರಳು ಧರಿಸುವುದನ್ನು ಜೋತಿಷ್ಯ ಶಾಸ್ತ್ರ ಪುರಸ್ಕರಿಸುವುದಿಲ್ಲ. ಕೆಲವರು ಅದು ಯಾವ ಪ್ರೇರಣೆಯಿಂದಲೋ ಅವರವರಿಗೆ ಅನಿಸಿದ ರೀತಿಯಲ್ಲಿ ಹರಳು ಧರಿಸುತ್ತಾರೆ. ಇದು ಗ್ರಹಗಳ ವಿಚಾರದಲ್ಲಿ ಗ್ರಹಚಾರಗಳ ವಿಷಯದಲ್ಲಿ ಸೂಕ್ತವಾಗಿರುವುದಿಲ್ಲ. ಯಾವ ರೋಗಕ್ಕೆ ಮದ್ದು, ಯಾವುದು ಸೂಕ್ತವೋ ಆ ಮದ್ದನ್ನು ಮಾತ್ರ ಸೇವಿಸಬೇಕು. ಬಿಟ್ಟು ರಕ್ತದೊತ್ತಡಕ್ಕೆ ಜ್ವರದ ಮದ್ದು ಸೇವಿಸಿದರೆ ಏನು ಪ್ರಯೋಜನ? ಪ್ರಯೋಜನ ಒತ್ತಟ್ಟಿಗಿರಲಿ, ಇರುವ ತೊಂದರೆ ಬಿಟ್ಟು ಮಗದೊಂದು ತೊಂದರೆಗೂ ಇದರಿಂದ ಆಹ್ವಾನ ನೀಡಿದಂತಾಗುತ್ತದೆ. ನವರತ್ನಗಳು ಎಂದರೆ ವಜ್ರ, ನೀಲ, ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಹವಳ, ಮುತ್ತು , ವೈಢೂರ್ಯ ಹಾಗೂ ಗೋಮೇಧಕ. ಇವು ಹಲವು ರೀತಿಯ ರಕ್ಷೆಯನ್ನು ಯುಕ್ತವಾಗಿ ಧರಿಸಿದಾಗ ನೀಡುತ್ತದೆ. ಈ ಹರಳುಗಳನ್ನು ಬಿಟ್ಟು ಅನ್ಯವಾದವುಗಳು ನವರತ್ನಗಳೊಳಗೆ ಸಮಾವೇಷವಾಗುವುದಿಲ್ಲ. ಅನ್ಯ ಹರಳುಗಳು ನಮ್ಮ ಜೋತಿಷ್ಯಶಾಸ್ತ್ರ ನಿರೂಪಿಸಿದ ವಿಚಾರದಲ್ಲಿ ನಿರ್ದೇಶನಗೊಂಡ ಪರಿಣಾಮಗಳನ್ನು ಕೊಡಲಾರವು. ಜನರು ಯಾವಯಾವುದೋ ನಿರ್ಣಯಗಳಿಂದ ಸಲಹೆಗಳನ್ನು ಪಡೆಯುವ ಕಾರಣವಾಗಿ ಧರಿಸುತ್ತಾರೆ. ಇದು ಸೂಕ್ತಭಾವವಲ್ಲ.

ಸಕಲ ಗ್ರಹಗಳೂ ಭಾವ ಮಧ್ಯದಲ್ಲಿ ಪೂರ್ಣ ಬಲಿಷ್ಠರಾಗಿರುತ್ತಾರೆ. ಸಂಧಿಯಲ್ಲಿ ಸಾಫ‌ಲ್ಯತೆ ಕೊಡಲಾರರು. ನಮ್ಮ ಸೂಕ್ತವಾದ ವಿಶ್ಲೇಷಣೆಗಳು ಲಗ್ನಭಾವದ ಅಧಿಪತಿಯ ಬಲವನ್ನು ಪರಿಗ್ರಹಿಸಿ ಸುಖ, ಭಾಗ್ಯ, ಲಾಭ, ಆಪತ್ತು, ಸಂಧಿ ಹಾಗೂ ಇತರ ಒಳಗೆ ಸಂಬಂಧವಾಗಿ ಅವನು ಒದಗುವ ರೀತಿ ಗ್ರಹಿಸಿ ಯಾವ ಹರಳು ಎಷ್ಟು ಕ್ಯಾರೆಟ್‌ ಎಂಬುದನ್ನು ತಿಳಿದು ಅನಿವಾರ್ಯತೆ ಇರುವ ರೀತಿಯಲ್ಲಿ ಸೂಕ್ತ ಲೋಹದಲ್ಲಿ ಸೂಕ್ತ ಸಮಯದಲ್ಲಿ ಧಾಋಣ ಮಾಡಬೇಕು. ಇನ್ನು ಪ್ರತಿದಿನವೂ ಮಾಡಬೇಕಾದ ಕಿಂಚತ್‌ ಅನುಷ್ಠಾನಗಳನ್ನು ಮುಖ್ಯವಾಗಿಸಿಕೊಳ್ಳಬೇಕು. ಇವನ್ನೆಲ್ಲಾ ಬಿಟ್ಟು ರತ್ನಗಳನ್ನು ಧರಿಸುವುದು ನಿಶ್ಚಿತ ಪರಿಣಾಮ ಒದಗಿಸದು. ಒಳ್ಳೆಯ ಪರಿಣಾಮ ಕೊಡುವ ಹರಳಾದರೂ ಚಂದ್ರ ಹಾಗೂ ಬುಧರ ವಿಷಮ ಸ್ಥಿತ ಕಾರಣದಿಂದಾಗಿ ಉದ್ರೇಕ ಚಡಪಡಿಕೆಗೊಳಗಾಗುವ ವಿಶಿಷ್ಟ ಸಾಲಿನ ಜನರು ಈ ರತ್ನಗಳನ್ನು ತೋರಿಸಿ ತೆಗೆದ ನೀರಲ್ಲಿ ಸ್ನಾನ ಪೂರೈಸಿ ದೈನಂದಿನ ದೈವಾರಾಧನೆಗಳನ್ನು ಮಾಡುವುದು ಸೂಕ್ತ.

ಚಂದ್ರ, ಬುಧರ ವಿಷಮ ಸ್ಥಿತ ಕಾರಣ
ಹೀಗಂದರೆ ಏನು ಎಂಬ ಪ್ರಶ್ನೆ ಓದುಗರಲ್ಲಿ ಬರುವುದು ಸಹಜ. ಚಂದ್ರನು ಮಾನಸಿಕ 
ಸ್ತರದಲ್ಲಿ ಡೋಲಾಯಮಾನ ಸ್ಥಿತಿಯನ್ನು ಒದಗಿಸುವ ಸಂಧಾನ ಪಡೆದಿದ್ದರೆ ಪ್ರತಿಯೊಂದಕ್ಕೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿಸಿ ಅತಂತ್ರವಾಗಿಸುತ್ತಿರುತ್ತಾರೆ. ಇಂಥ ಚಂದ್ರನೂ ಬುಧನೂ ತೀವ್ರತಮವಾಗಿ ಬೌದ್ಧಿಕ ಅಸ್ಥಿರತೆ ತರುವ ರೀತಿಯಲ್ಲಿದ್ದರೆ ಧರಿಸಿದ ಹರಳಿನ ಬಗ್ಗೆ ವ್ಯಕ್ತಿ ಸದಾ ಯೋಚಿಸುವ ಆತಂಕಗೊಳ್ಳುವ ಉದ್ರೇಕಗಳಿಗೆ ತಳ್ಳಿ ಧರಿಸಿದ ಹರಳಿನಿಂದಲೇ ಕಿರಿಕಿರಿಯಾಗುವಂತೆ ಮಾಡುತ್ತದೆ. ಹೀಗಾಗಿ ಏನೋ ಒಂದು ಚಡಪಡಿಕೆ ಸಾಮಾನ್ಯವಾಗಿಬಿಡುತ್ತದೆ. ಇಂಥ ಸಂದರ್ಭದಲ್ಲಿ ಈ ರತ್ನವನ್ನು ತೋರಿಸಿ ತೆಗೆದ ನೀರಿನಲ್ಲಿ ಸ್ನಾನ ಪೂರೈಸುವುದು ಒಂದು ರೀತಿಯ ಸಕಾರಾತ್ಮಕ ಪರಿಣಾಮವನ್ನು ಒದಗಿಸುತ್ತದೆ.

ಅನಾವಶ್ಯಕ ಹರಳುಗಳು
ಏಕಾಏಕಿ ನವರತ್ನಗಳನ್ನು ಧರಿಸುವುದು ಕಾರಣವಿರದೆ ಮನಸ್ಸಿಗೆ ಕಂಡ, ಹಿತವೆನಿಸಿದ ಕಾರಣದಿಂದ ಧರಿಸಲೇ ಬಾರದ ಹರಳುಗಳನ್ನು ಧರಿಸುವುದು ಸೂಕ್ತವಲ್ಲ. ಉದಾಹರಣೆಗೆ ಶನೈಶ್ಚರನ ಉತ್ತಮ ಪ್ರಭಾವಗಳಿಂದ ಸಂಭ್ರಮಿಸಲ್ಪಡಬೇಕಾದ ವ್ಯಕ್ತಿ ಹವಳ ಧರಿಸಿದರೆ ಪರಿಣಾಮ ಏರುಪೇರಾಗಿ ಲಾಭಗಳ ಬಗೆಗಿನ ದಾರಿ ಸ್ಥಗಿತಗೊಳ್ಳುತ್ತದೆ. ಶುಭಕ್ಕೆ ಧಕ್ಕೆ ಬರುತ್ತದೆ. ನವರತ್ನ ಧರಿಸಿ ಒದ್ದಾಡುವ ಮಂದಿ ಇದ್ದಾರೆ. ಜನಪ್ರಿಯ ನಟಿಯೊಬ್ಬಳು ಕಾರಣವಿಲ್ಲದೆ ನವರತ್ನ ಧರಿಸಿ ಯಶಸ್ಸಿನ ಹಂತದಲ್ಲಿ ಹಿನ್ನೆಡೆ ಅನುಭವಿಸಬೇಕಾಗಿ ಬಂತು. ಇತ್ತೀಚೆಗೆ ತನ್ನ ವೈಫ‌ಲ್ಯಕ್ಕೆ ಕುರಿತಾದ ತಿಳುವಳಿಕೆ ದೊರೆತ ಮೇಲೆ ಅಭೂತಪೂರ್ವ ಹಿಟ್‌ ಗಳನ್ನು ಕೊಡಲು ಸಾಧ್ಯವಾಯ್ತು. ಜನಪ್ರಿಯ ರಾಜಕಾರಣಿಯೊಬ್ಬರು ಅವಶ್ಯಕತೆಗೂ ಮುನ್ನವೇ ವೈಡೂರ್ಯ ಧರಿಸಿ ಕಾರಣವೇ ಇರದ ಸಮಸ್ಯೆಗೆ ಸಿಲುಕಿ ರಾಜೀನಾಮೆ ನೀಡಿದರು. ಅನಿವಾರ್ಯತೆಯು ರಾಹುಕೇತುಗಳ ವಿಚಾರದಲ್ಲಿ ಯಾವಾಗ, ಹೇಗೆ, ಎಷ್ಟು ಕಾಲ ಎಂಬುದನ್ನು ಗ್ರಹಿಸಿಕೊಂಡಾದ ಮೇಲೆಯೇ ಅವುಗಳಿಗೆ ಸೂಕ್ತವಾದ ಗೋಮೇಧಕವನ್ನೋ ವೈಢೂರ್ಯವನ್ನೋ ಧರಿಸಬೇಕು. ಇಲ್ಲದಿದ್ದರೆ ಅನಾವಶ್ಯಕವಾದ ಕಾಲದಲ್ಲಿ, ಅನಾವಶ್ಯಕ ಕಿರಿಕರಿ ತಂದು ತೊಂದರೆಗೆ ಗುರಿಮಾಡುತ್ತದೆ. 

ವ್ಯಕ್ತಿತ್ವದ ಆಧಾರದ ಮೇಲೆ ನಿಗಾ ಇರಿಸಿ ಹರಳಿನ ಆಯ್ಕೆ

ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತಿದೆ. ಹಾಗೆಯೇ ನಮ್ಮ ವ್ಯಕ್ತಿತ್ವದ ಆಳ ಅಗಳ ಸೂಕ್ಷ್ಮತೆ ಹಾಗೂ ಸಾರ್ಥಕತೆಗಳನ್ನು ನಿಯಂತ್ರಿಸುವ ಗ್ರಹದ ಆಧಾರದ ಮೇಲೆ ಯಾವ ಹರಳು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ನಿರಂತರವಾದ ಧ್ಯಾನ ತಪಸ್ಸು ಯೋಗ ಸ್ತುತಿ ಆರಾಧನೆಗಳ ಮೂಲಕ ಪರಿವ್ರಾಜಕರೋ, ಅವಧೂತರುಗಳೊ ನವರತ್ನದ ಹರಳುಗಳನ್ನುಧರಿಸಬಹುದು. ಸಾಮಾನ್ಯರಿಗೆ ನಿರಂತರವಾದ ಅನುಷ್ಠಾನಗಳನ್ನು ರೂಡಿಸಿಕೊಳ್ಳುವುದು ಕಷ್ಟ. ಇನ್ನು ಜನನ ಕಾಲದ ಹಾಗೂ ಜನ್ಮ ಕುಂಡಲಿಯನ್ನು ಅನ್ವಯಿಸಿ ಶುಭಪ್ರದವಾದ ರತ್ನವೊಂದನ್ನು ಧರಿಸುವುದರಿಂದ ವ್ಯಕ್ತಿತ್ವ ವಿಕಸನ ಆರೋಗ್ಯದಲ್ಲಿ ದಾಡ್ಯìತೆ ವರ್ಚಸ್ಸಿಗೊಂದು ಶೋಭೆ, ಇತ್ಯಾದಿ ಒದಗಿ ಬರಲು ಸಾಧ್ಯ. ಇದರಿಂದಾಗಿ ಕೆಲವು ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವ ವಿಚಾರದಲ್ಲಿ ಹರಳು ಸಹಕರಿಸುತ್ತದೆ. ಕೀಳರಿಮೆಯಿಂದ ಬಳಲುವವರಿಗೆ ಇದು ಸಹಾಯಕ. ಹರಳು ಹಾಗೂ ರಾಸಾಯನಿಕ ಗುಣಧರ್ಮ ವಿಶಿಷ್ಟವಾದ ಧಾತು ಸಂಯುಕ್ತಗಳ ಫ‌ಲವಾದ ಸಾಂದ್ರತೆಯಿಂದಾಗಿ  ಪಂಚಭೂತಾತ್ಮಕವಾದ ಶರೀರಕ್ಕೆ ಶರೀರದ ನಿಯಂತ್ರಕ ಗ್ರಹದ ಕಾರಣ ಒಗ್ಗೂಡಿಸಿಕೊಂಡು ಪರಿಣಾಮ ನೀಡುತ್ತಾರೆ.

ಹರಳುಗಳನ್ನು ಯಾವ ಧಾತುನಿಂದ ಪುಷ್ಠಿàಕರಿಸಬೇಕು. ಯಾವುದೊ ಹರಳನ್ನು, 
ಯಾವುದೋ ಲೋಹದಲ್ಲಿ ಕಟ್ಟಿಸಿ ಉಂಗುರ ಪದಕ ಮಾಡಿ ಧರಿಸಬಾರದು. ಬಂಗಾರ, ಬೆಳ್ಳಿ ,ಪ್ಲಾಟಿನಂ, ತಾಮ್ರ, ಕಬ್ಬಿಣ ಅಥವಾ ಪಂಚಲೋಹದ ಮಿಶ್ರಣಗಳಲ್ಲೇ ಯಾವ ಹರಳಿಗೆ 
ಯಾವುದು ಸೂಕ್ತ ಎಂದು ತಿಳಿದು ಉಪಯೋಗಿಸಬೇಕು. ನೀಲವನ್ನು ಬೆಳ್ಳಿಯಲ್ಲಿ,  ಹಾಕುವುದು ವೈಢೂರ್ಯವನ್ನು ಬಂಗಾರದಲ್ಲಿ ಕಟ್ಟಿಸುವುದು ಇತ್ಯಾದಿ ತಪ್ಪು. ತಪ್ಪು ಸಂಯೋಜನೆಗಲಾಗುತ್ತದೆ. ಹಾಕಬೇಕಾದ ಹರಳು ಯಾವ ಗ್ರಹಕ್ಕೆ ಸಂಬಂಧಿಸಿದ್ದು ಎಂಬುದನ್ನು ತಿಳಿದೇ ಲೋಹದ ಆಯ್ಕೆ ಮಾಡಬೇಕು. ವಿಷಮ ಆಯ್ಕೆಗಿಂತ ಹರಳು ಧರಿಸದಿರುವುದೇ ಸೂಕ್ತ. ಹಾಗೆಯೇ ರಾಶಿಯ ಮೇಲಿಂದ ಹರಳು ಧರಿಸುವ ವಿಧಾನ ಕೂಡಾ ವಿಧ್ಯುಕ್ತವಾದುದಲ್ಲಿ ರಾಶ್ಯಾಧಿಪತಿಯು ಜನನದ ಸಂದರ್ಭದ ಕಾಲಗಣನೆಗೆ ಹೊಂದಿ ಹುಟ್ಟಿದ ವ್ಯಕ್ತಿಗೆ, ಯಾವ ದಶಾ ಎಂದರಿಯಲು ನಮ್ಮ ರಾಶಿಯ ಚಂದ್ರನ ಉಪಸ್ಥಿತಿ ಉಪಯೋಗಕ್ಕೆ ಬರುತ್ತದೆ. ಚಂದ್ರನು ಇರುವ ರಾಶಿ, ನಮ್ಮ ಜನ್ಮರಾಶಿ. ಆದರೆ ಜನ್ಮರಾಶಿಯ ಅಧಿಪತಿಯನ್ನು ಲಕ್ಷಿಸಿಕೊಂಡು ಹರಳಿನ ನಿರ್ಧಾರ ಆಗಬಾರದು. ಜನ್ಮ ರಾಶಿಯ ಅಧಿಪತಿ ಒಬ್ಬ ವ್ಯಕ್ತಿಯ ಜಾತಕದಲ್ಲಿ ದುಷ್ಟನಾಗಿರುವ ಸಾಧ್ಯತೆಯೂ ಇದೆ. 

ಹರಳುಗಳ ಧಾರಣೆ ಮತ್ತು ಅನುಷ್ಠಾನ ಯುಕ್ತವಾದ ಮರಗಳ ಅಡಿಯಲ್ಲಿ ಧ್ಯಾನಾಸಕ್ತರಾಗುವುದು, ದೇವಾಲಯದಲ್ಲಿ ಧ್ಯಾನಾಸಕ್ತರಾಗುವುದು ಇಲ್ಲವೇ, ಮನೆಯ ದೈವ ಪೀಠದ ಎದುರೇ ಧ್ಯಾನಸ್ಥರಾಗುವುದು ಸೂಕ್ತ. ನಮ್ಮ ಸಂಸ್ಕೃತಿಯಲ್ಲಿ ಅರಳಿ, ಬೇವು ವಟವೃಕ್ಷ, ಇತ್ಯಾದಿಗಳು ಸರ್ವಶ್ರೇಷ್ಠ. 

ಯೋಗಾಭ್ಯಾಸಗಳಿಂದ ಅರಿಷ್ಟಗಳನ್ನು ತರುವ ಆಹಾರದ ಕಾರಣವಾದ ತಾಪತ್ರಯಗಳು ಹರಳಿನ ಕಾರಣದಿಂದ ನಡೆಸುವ ಅನುಷ್ಠಾನಗಳಿಂದಾಗಿ ಮಾಯವಾಗುತ್ತದೆ. ದೇವಸ್ಥಾನದಲ್ಲಿ ಧ್ಯಾನ ಅನುಷ್ಠಾನಾದಿಗಳನ್ನು ಮಾಡುವುದಾದರೆ ಮೂಲಸ್ಥಾನದಲ್ಲಿ ಪರಿಶೋಭಿತವಾದ ಆಗಮ ಶಾಸ್ತ್ರಗಳಿಂದ ಆಶ್ರಿತವಾದ ಅಷ್ಟವಲಂಬ ಸಂಸ್ಥಾಪಿತ ದೇವಾಲಯಗಳಲ್ಲಿ ನಡೆಸಬೇಕು. ಮನೆಯಲ್ಲಿ ತುಳಸಿ ಗಿಡದ ಎದುರಿಗೂ ಅನುಷ್ಠಾನ ಯುಕ್ತ. ತುಳಸಿ ತೀರ್ಥ ಸೇವನೆಯಿಂದ ಹರಳುಗಳ ಪ್ರಭಾವದಲ್ಲಿ ಸಂವರ್ಧನೆ ಅಧಿಕವಾಗುತ್ತದೆ.

ಅನುಷ್ಠಾನಗಳನ್ನು ನಿರ್ದಿಷ್ಟ ಲಯ ಹಾಗೂ ಏರಿಳಿತಗಳೊಂದಿಗೆ ಪಠಿಸುವುದರಿಂದಲೂ ಹರಳುಗಳ ಪ್ರಭಾವ ನಮ್ಮ ಪ್ರತಿ ಜೀವಕೋಶದ ಮೇಲೆ ಸೂಕ್ತವಾಗಿ ಚಿಕಿತ್ಸಕವಾದ ಪ್ರಭಾವ ಹೊಮ್ಮಿಸಲು ಸರಳವಾಗುತ್ತದೆ. ರಕ್ತದೊತ್ತಡ ಮಧುಮೇಹ, ಚರ್ಮವ್ಯಾದಿ ಶ್ವಾಸಕೋಶ ಬಾಧೆ ಇತ್ಯಾದಿಗಳು ದೂರವಾಗಲು ನಿಶ್ಚಿತವಾದ ಸೂಕ್ಷ್ಮ ಸಂವೇದನೆ ನೀಡಲು ಕಾರಣವಾಗುತ್ತದೆ. ಪ್ರಪುಂಡ್ರ ಭಸ್ಮಧಾರಣ ಗಂ, ಚಂದನ ಕುಂಕುಮ ಅರಿಶಿಣ ಲೇಪಗಳು ಕೂಡಾ ನೆರವಿಗೆ ಬರುತ್ತದೆ. ಹರಳುಗಳ ಕ್ರಿಯಾಶೀಲತೆಯ ಜೊತೆಜೊತೆಗೆ ಎನ್ನುವುದು ಗಮನಾರ್ಹ. ಹರಳು ಇರುವ ಉಂಗುರವನ್ನು ಊಟದ ಸಂದರ್ಭದಲ್ಲಿ ಎಡಗೈಗೆ ಹಸ್ತಾಂತರಿಸಿಕೊಳ್ಳುವುದು ಹೆಚ್ಚು ಸೂಕ್ತ. 

ಅನಂತಶಾಸ್ತ್ರಿ 

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.